CRECT Education

Class 4 Kannada Lesson 5: Let's Share and Eat | KTBS Kannada Second Language – Learn the Story

Description

Balu and Sethu fight over a mango — an elder shows them the joy of sharing. Learn the story and 5 important Kannada words from the play "ಹಂಚಿ ತಿನ್ನೋಣ".

ಗದ್ಯ (prose / short play) · ಸಮಿತಿ ರಚನೆ (Committee-authored)

ಪಠ್ಯFull text

(ಬಾಲು ಮತ್ತು ಸೇತು ಒಂದೇ ವಠಾರದಲ್ಲಿ ವಾಸ ಮಾಡುತ್ತಿದ್ದರು. ಬಾಲುವಿನ ಮನೆಯ ಮುಂದಿನ ರಸ್ತೆಗೆ ತಾಗಿದಂತೆ ಮಾವಿನ ಮರವಿತ್ತು. ಅದು ಮಾವಿನ ಹಣ್ಣಿನ ಕಾಲ. ಮರದಲ್ಲಿ ಕೆಂಪು ಹಳದಿ ಬಣ್ಣದ ಮಾವಿನ ಹಣ್ಣುಗಳಿದ್ದವು. ಸೇತುವಿಗೆ ಹಣ್ಣು ನೋಡಿ ಆಸೆಯಾಯಿತು. ಕಲ್ಲು ತೆಗೆದು ಒಗೆದ. ಒಂದು ಹಣ್ಣು ಪಕ್ಕದ ಹಿತ್ತಿಲಲ್ಲಿ ಬಿತ್ತು. ಬಾಲು ಓಡಿ ಬಂದು ಆ ಹಣ್ಣನ್ನು ತೆಗೆದುಕೊಂಡ. ಅಷ್ಟರಲ್ಲಿ ಸೇತು ಓಡಿ ಬಂದ.) ಸೇತು: ಏ! ಬಾಲು, ಕೊಡೋ, ಅದು ನನ್ನ ಹಣ್ಣು. ಬಾಲು: ಅಲ್ಲ, ನನ್ನದು. ಸೇತು: ನಾನು ಕಲ್ಲು ಒಗೆದಾಗ ಬಿದ್ದ ಹಣ್ಣು. ಬಾಲು: ಏಯ್, ಯಾವ ಮರದ ಹಣ್ಣೋ ಅದು? ಸೇತು: ಯಾವುದೇನು? ಮಾವಿನ ಮರದ್ದು. ಬಾಲು: ಮರ ಇರೋದು ಎಲ್ಲಿ ಹೇಳು? ಸೇತು: ದಾರಿ ಬದೀಲಿ. ಬಾಲು: ಹಣ್ಣು ಎಲ್ಲಿ ಬಿತ್ತು ಹೇಳು? ಸೇತು: ಅದು......... ಅದು ನಿಮ್ಮ ಹಿತ್ತಿಲಲ್ಲಿ. ಬಾಲು: ಹೌದು ತಾನೆ? ಅದಕ್ಕೆ ಇದು ನನ್ನ ಹಣ್ಣು. ಕೊಡೋದಿಲ್ಲ ಹೋಗೋ. ಸೇತು: ನಾನು ಬೀಳಿಸಿದ ಹಣ್ಣು. ಕೊಡ್ತೀಯೋ ಇಲ್ಲವೋ? ಬಾಲು: ಕೊಡೋದಿಲ್ಲ. ಏನೋ ಮಾಡ್ತಿಯಾ? (ಸೇತುವಿಗೆ ವಿಪರೀತ ಸಿಟ್ಟು ಬಂತು. ಬಾಲುವಿನ ಕೈಯಿಂದ ಹಣ್ಣನ್ನು ಕಸಿಯಲು ನೋಡಿದನು, ಆಗಲಿಲ್ಲ. ಇಬ್ಬರೂ ಜಗಳವಾಡಿದರು. ನೆಲದ ಮೇಲೆ ಬಿದ್ದು ಹೊರಳಾಡಿದರು. ಜಗಳವನ್ನು ನೋಡುತ್ತಿದ್ದ ಹಿರಿಯರೊಬ್ಬರು ಅಲ್ಲಿಗೆ ಬಂದರು.) ಹಿರಿಯರು: ಏಕೆ ಮಕ್ಕಳೇ ಜಗಳ? ಸೇತು: ನಾನು ಬೀಳಿಸಿದ ಹಣ್ಣು. ಬಾಲು: ನಮ್ಮ ಹಿತ್ತಿಲಿನಲ್ಲಿ ಬಿದ್ದ ಹಣ್ಣು. ಹಿರಿಯರು: ಹಣ್ಣು ಎಲ್ಲಿದೆ ನೋಡುವಾ? (ಅದು ದಾರಿಯಲ್ಲಿ ಬಿದ್ದು ನಜ್ಜುಗುಜ್ಜಾಗಿತ್ತು. ಒಳಗೆ ಮಣ್ಣು ತುಂಬಿತ್ತು.) ಹಿರಿಯರು: ನೋಡಿದಿರಾ ಮಕ್ಕಳೇ! ನೀವಿಬ್ಬರೂ ಶಾಲೆಗೆ ಹೋಗುವ ಹುಡುಗರು. ಜಗಳ ಮಾಡಿ ಏನು ಲಾಭವಾಯಿತು? ಆ ಹಣ್ಣನ್ನು ಹಂಚಿ ತಿಂದಿದ್ದರೆ ಇಬ್ಬರಿಗೂ ಸಂತೋಷವಾಗುತ್ತಿತ್ತು, ಅಲ್ಲವೆ? (ಮಕ್ಕಳು ತಲೆ ತಗ್ಗಿಸಿದರು. ಹಣ್ಣನ್ನೇ ನೋಡುತ್ತಾ ನಿಂತರು. ಅವರಿಗೆ ತಮ್ಮ ತಪ್ಪಿನ ಅರಿವಾಗಿತ್ತು.) ಹಿರಿಯರು: ಜಾಣ ಹುಡುಗರು ನೀವು. ನಿಮ್ಮಲ್ಲಿ ತಪ್ಪನ್ನು ತಿದ್ದಿಕೊಳ್ಳುವ ಮನಸ್ಸಿದೆ, ಅಲ್ಲವೇ? ಮಕ್ಕಳು: 'ಹೌದಜ್ಜ' (ಹಿರಿಯರು ತನ್ನ ಕೈಯಲ್ಲಿದ್ದ ಬೆತ್ತ ಬೀಸಿ ಇನ್ನೊಂದು ಹಣ್ಣು ಬೀಳಿಸಿದರು. ಅದನ್ನು ಇಬ್ಬರಿಗೂ ಹಂಚಿ ಕೊಟ್ಟರು. ಮಕ್ಕಳು ಹಣ್ಣು ತಿಂದರು. ಜಗಳ ಮರೆತರು.)

"ಕೂಡಿ ಬಾಳು ಹಂಚಿ ತಿನ್ನು." — Live together, share and eat. A simple reminder that cooperation and sharing lead to a happier life.

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಅ) ಆವರಣದಲ್ಲಿ ಕೊಟ್ಟ ಪದಗಳಲ್ಲಿ ಸರಿಯಾದ ಪದ ಆರಿಸಿ ಬಿಟ್ಟ ಸ್ಥಳ ತುಂಬಿರಿ.

  1. (ಲಾಭವಾಯಿತು?, ಮನಸ್ಸಿದೆ, ಶಾಲೆಗೆ, ಜಗಳ, ತಿಂದಿದ್ದರೆ)

  2. ೧. ನೀವು ಇಬ್ಬರೂ ............................................ ಹೋಗುವ ಹುಡುಗರು.

    Answer

    ಶಾಲೆಗೆ

  3. ೨. ಜಗಳ ಮಾಡಿ ಏನು ............................................

    Answer

    ಲಾಭವಾಯಿತು

  4. ೩. ನಿಮ್ಮಲ್ಲಿ ತಪ್ಪನ್ನು ತಿದ್ದಿಕೊಳ್ಳುವ ............................................ ಅಲ್ಲವೆ?

    Answer

    ಮನಸ್ಸಿದೆ

  5. ೪. ಆ ಹಣ್ಣನ್ನು ಹಂಚಿ ............................................ ಇಬ್ಬರಿಗೂ ಸಂತೋಷವಾಗುತ್ತಿತ್ತು.

    Answer

    ತಿಂದಿದ್ದರೆ

ಆ) ಈ ಕೆಳಗಿನ ವಾಕ್ಯಗಳಲ್ಲಿ ತಪ್ಪಾಗಿರುವುದನ್ನು ಸರಿಪಡಿಸಿ ಬರೆಯಿರಿ.

  1. ೧. ಬಾಲು ಮತ್ತು ಸೇತು ಒಂದೇ ಮನೆಯಲ್ಲಿ ವಾಸ ಮಾಡುತ್ತಿದ್ದರು.

    Answer

    ಬಾಲು ಮತ್ತು ಸೇತು ಒಂದೇ ವಠಾರದಲ್ಲಿ ವಾಸ ಮಾಡುತ್ತಿದ್ದರು.

  2. ೨. ನಮ್ಮ ಅಂಗಳದಲ್ಲಿ ಬಿದ್ದ ಹಣ್ಣು.

    Answer

    ನಮ್ಮ ಹಿತ್ತಿಲಿನಲ್ಲಿ ಬಿದ್ದ ಹಣ್ಣು.

  3. ೩. ಬಾಲುವಿನ ಕೈಯಿಂದ ಹಣ್ಣನ್ನು ಕದಿಯಲು ನೋಡಿದನು.

    Answer

    ಬಾಲುವಿನ ಕೈಯಿಂದ ಹಣ್ಣನ್ನು ಕಸಿಯಲು ನೋಡಿದನು.

  4. ೪. ಹಿರಿಯರು ಕೈಯಲ್ಲಿದ್ದ ಕಲ್ಲು ಬೀಸಿ ಇನ್ನೊಂದು ಹಣ್ಣು ಬೀಳಿಸಿದರು.

    Answer

    ಹಿರಿಯರು ಕೈಯಲ್ಲಿದ್ದ ಬೆತ್ತ ಬೀಸಿ ಇನ್ನೊಂದು ಹಣ್ಣು ಬೀಳಿಸಿದರು.

ಇ) ಒಂದು ವಾಕ್ಯದಲ್ಲಿ ಉತ್ತರಿಸಿರಿ.

  1. ೧. ಮಾವಿನ ಮರ ಎಲ್ಲಿತ್ತು?

    Answer

    ಮಾವಿನ ಮರ ಬಾಲುವಿನ ಮನೆಯ ಮುಂದಿನ ರಸ್ತೆಗೆ ತಾಗಿದಂತೆ ಇತ್ತು.

  2. ೨. ಹಣ್ಣು ನೋಡಿ ಯಾರಿಗೆ ಆಸೆಯಾಯಿತು?

    Answer

    ಹಣ್ಣು ನೋಡಿ ಸೇತುವಿಗೆ ಆಸೆಯಾಯಿತು.

  3. ೩. ಸೇತು ಮಾವಿನ ಹಣ್ಣು ನೋಡಿ ಏನು ಮಾಡಿದ?

    Answer

    ಸೇತು ಮಾವಿನ ಹಣ್ಣು ನೋಡಿ ಕಲ್ಲು ತೆಗೆದು ಒಗೆದನು.

  4. ೪. ಮಕ್ಕಳ ಜಗಳವನ್ನು ಯಾರು ನೋಡಿದರು?

    Answer

    ಮಕ್ಕಳ ಜಗಳವನ್ನು ಹಿರಿಯರೊಬ್ಬರು ನೋಡಿದರು.

ಈ) ಈ ಕೆಳಗಿನ ಮಾತುಗಳನ್ನು ಯಾರು ಯಾರಿಗೆ ಹೇಳಿದರು?

  1. ೧. "ಏ ಬಾಲು, ಕೊಡೋ, ಅದು ನನ್ನ ಹಣ್ಣು"

  2. ಯಾರು ಹೇಳಿದರು? .......................................................................................

    Answer

    ಸೇತು

  3. ಯಾರಿಗೆ ಹೇಳಿದರು ? .......................................................................................

    Answer

    ಬಾಲು

  4. ೨. "ಹಣ್ಣು ಎಲ್ಲಿ ಬಿತ್ತು, ಹೇಳು?"

  5. ಯಾರು ಹೇಳಿದರು? .......................................................................................

    Answer

    ಬಾಲು

  6. ಯಾರಿಗೆ ಹೇಳಿದರು? .......................................................................................

    Answer

    ಸೇತು

  7. ೩. "ಕೊಡೋದಿಲ್ಲ, ಏನೋ ಮಾಡ್ತಿಯಾ?"

  8. ಯಾರು ಹೇಳಿದರು? .......................................................................................

    Answer

    ಬಾಲು

  9. ಯಾರಿಗೆ ಹೇಳಿದರು? .......................................................................................

    Answer

    ಸೇತು

  10. ೪. "ಯಾಕೆ ಮಕ್ಕಳೇ ಜಗಳ?"

  11. ಯಾರು ಹೇಳಿದರು? .......................................................................................

    Answer

    ಹಿರಿಯರು

  12. ಯಾರಿಗೆ ಹೇಳಿದರು? .......................................................................................

    Answer

    ಮಕ್ಕಳಿಗೆ

ಉ) ಈ ಕೆಳಗಿನ ಪ್ರಶ್ನೆಗಳಿಗೆ ಎರಡು ಅಥವಾ ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.

  1. ೧. ಬಾಲು ಮತ್ತು ಸೇತು ನಡೆಸಿದ ಜಗಳವನ್ನು ವಿವರಿಸಿರಿ?

    Answer

    ಸೇತು ಕಲ್ಲಿನಿಂದ ಹಣ್ಣು ಬೀಳಿಸಿದನು. ಆ ಹಣ್ಣು ಬಾಲುವಿನ ಹಿತ್ತಿಲಲ್ಲಿ ಬಿದ್ದಾಗ ಇಬ್ಬರೂ ಅದು ತಮ್ಮದೆಂದು ಜಗಳವಾಡಿದರು. ಅವರು ಕೈಯಿಂದ ಕಸಿಯಲು ಪ್ರಯತ್ನಿಸಿ ನೆಲದ ಮೇಲೆ ಹೊರಳಾಡಿದರು.

  2. ೨. ಹಿರಿಯರು ಮಕ್ಕಳಿಗೆ ನೀಡಿದ ಹಿತವಚನವೇನು?

    Answer

    ಹಿರಿಯರು ಮಕ್ಕಳಿಗೆ, 'ನೀವು ಶಾಲೆಗೆ ಹೋಗುವ ಹುಡುಗರು. ಜಗಳ ಮಾಡಿ ಲಾಭವಿಲ್ಲ. ಹಣ್ಣನ್ನು ಹಂಚಿ ತಿಂದಿದ್ದರೆ ಸಂತೋಷವಾಗುತ್ತಿತ್ತು' ಎಂದು ಹಿತವಚನ ನೀಡಿದರು.

ಭಾಷಾಭ್ಯಾಸ

ಅ) ವಿರುದ್ಧಾರ್ಥಕ ಪದಗಳನ್ನು ಬರೆಯಿರಿ.

  1. ೧. ಆಸೆ x ................................

  2. ೨. ನಂಬಿಕೆ x ................................

  3. ೩. ಸಂದೇಹ x ................................

  4. ೪. ಅನುಕೂಲ x ................................

ಆ) ಈ ಪದಗಳನ್ನು ಬಳಸಿ ನಿಮ್ಮದೇ ಆದ ಸ್ವಂತ ವಾಕ್ಯ ರಚಿಸಿರಿ.

  1. ೧. ರಸ್ತೆ: ........................................................................................................................................

    Model sentence

    ರಸ್ತೆ: ನಮ್ಮ ಮನೆಯ ಮುಂದೆ ಅಗಲವಾದ ರಸ್ತೆ ಇದೆ.

  2. ೨. ಹಿತ್ತಿಲು: ........................................................................................................................................

    Model sentence

    ಹಿತ್ತಿಲು: ನಮ್ಮ ಹಿತ್ತಿಲಿನಲ್ಲಿ ಹೂವಿನ ಗಿಡಗಳಿವೆ.

  3. ೩. ವಿಪರೀತ: ........................................................................................................................................

    Model sentence

    ವಿಪರೀತ: ಇಂದು ವಿಪರೀತ ಮಳೆ ಬರುತ್ತಿದೆ.

  4. ೪. ಬೆತ್ತ: ........................................................................................................................................

    Model sentence

    ಬೆತ್ತ: ನಮ್ಮ ಶಾಲೆಯ ಶಿಕ್ಷಕರ ಕೈಯಲ್ಲಿ ಬೆತ್ತ ಇದೆ.

ಭಾಷಾ ಚಟುವಟಿಕೆ

ಅ) ಈ ಗಾದೆಗಳನ್ನು ಓದಿ ಅರ್ಥ ತಿಳಿಯಿರಿ.

  1. ೧. ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ.

  2. ೨. ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು.

  3. ೩. ತುಂಬಿದ ಕೊಡ ತುಳುಕುವುದಿಲ್ಲ.

  4. ೪. ಕೈಕೆಸರಾದರೆ ಬಾಯಿ ಮೊಸರು.

ಆ) ಈ ಗಾದೆಗಳನ್ನು ಪೂರ್ಣಗೊಳಿಸಿರಿ.

  1. ೧. ಹಾಸಿಗೆ ಇದ್ದಷ್ಟು ...................................................

  2. ೨. ಮೂರ್ತಿ ಚಿಕ್ಕದಾದರೂ ...................................................

  3. ೩. ಕೊಟ್ಟದ್ದು ತನಗೆ ...................................................

ಇ) ಈ ಒಗಟುಗಳನ್ನು ಗಮನಿಸಿರಿ.

  1. ೧. ಸುತ್ತೆಲ್ಲಾ ಬಿಳಿಗೋಡೆ, ಎತ್ತೆತ್ತ ನೋಡಿದರೂ ಬಾಗಿಲಿಲ್ಲ.

  2. ೨. ಅಪ್ಪನ ಹೊಳೆಯುವ ದುಡ್ಡು ಎಣಿಸೋಕಾಗಲ್ಲ, ಅಮ್ಮನ ನೀಲಿ ಸೀರೆ ಮಡಿಸೋಕಾಗಲ್ಲ.

  3. ೩. ಸುತ್ತ ಹಸಿರು ಕೋಟೆ, ಅದರೊಳಗೆ ಬಿಳಿ ಕೋಟೆ, ಅದರೊಳಗೆ ಕೆಂಪು ಕೋಟೆ, ಅದರೊಳಗೆ ಕಪ್ಪು ಸೈನಿಕರು.

  4. (ಉತ್ತರ: ಮೊಟ್ಟೆ, ನಕ್ಷತ್ರ ಮತ್ತು ಆಕಾಶ, ಕಲ್ಲಂಗಡಿ ಹಣ್ಣು — answers printed upside down in the book)

ಈ) 'ಹಂಚಿ ತಿನ್ನೋಣ' ನಾಟಕವನ್ನು ಅಭಿನಯಿಸಿರಿ.

ಓದಿಗೆ ಮನ್ನಣೆ

  1. * ನಿಮ್ಮ ಶಾಲಾ ಗ್ರಂಥಾಲಯದಲ್ಲಿರುವ ಮಕ್ಕಳ ನಾಟಕ ಪುಸ್ತಕ ಓದಿರಿ.

  2. * ಗಾದೆ, ನುಡಿಮುತ್ತು, ಚುಟುಕು ಸಂಗ್ರಹಗಳನ್ನು ಓದಿ ತಿಳಿಯಿರಿ.

ಶುಭನುಡಿ

  1. * ಸರಸವೇ ಜನನ ವಿರಸವೇ ಮರಣ ಸಮರಸವೇ ಜೀವನ.

  2. * ತಪ್ಪನ್ನು ತಿದ್ದಿಕೊಳ್ಳುವುದು ಬುದ್ಧಿವಂತರಲ್ಲಿ ಮಾತ್ರ ಇರುವ ದೊಡ್ಡಗುಣ.

  3. * ಕೂಡಿ ಬಾಳು ಹಂಚಿ ತಿನ್ನು.

Interactive Lab