CRECT Education

Class 4 Kannada Second Language Lesson 20: We Are All Equal | KTBS – Practice & Play

Description

Practice & Play for the lesson ನಾವು ಸಮಾನರು from KTBS Class 4 Kannada Second Language. Test your comprehension with story questions and fun word puzzles!

ಗದ್ಯ (prose) · ಸಮಿತಿ ರಚನೆ (Committee-authored)

ಪಠ್ಯFull text

ಒಂದು ಉದ್ಯಾನವನದಲ್ಲಿ ಅನೇಕ ರೀತಿಯ ಗಿಡ-ಮರಗಳಿದ್ದವು. ಅವು ಅಲ್ಲಿದ್ದುದರಿಂದ ಉದ್ಯಾನವನದ ಅಂದವು ಹೆಚ್ಚಿತ್ತು. ಅಲ್ಲಿರುವ ಪ್ರತಿಯೊಂದು ಗಿಡಮರವು ತಮ್ಮಿಂದಲೇ ಈ ಉದ್ಯಾನವನದ ಆಕರ್ಷಣೆ ಹೆಚ್ಚಿದೆ ಎಂದು ಬೀಗುತ್ತ ತಮ್ಮೊಳಗೆ ಹೀಗೆ ಮಾತನಾಡಿಕೊಂಡವು. **ಮಾವಿನ ಮರ:** 'ಎಲ್ಲರೂ ಕೇಳಿರಿ. ನಾನು ಮಾವು. ನಿಮ್ಮೆಲ್ಲರ ಹಿರಿಮಾವ. ನನ್ನ ಹಣ್ಣು ಎಷ್ಟು ಸಿಹಿಯಾಗಿದೆ ಎಂದರೆ ಹುಡುಗರು ಮುದುಕರು, ಎಲ್ಲರೂ ನನ್ನ ಹಣ್ಣಿಗಾಗಿ ಮುಗಿಬೀಳುತ್ತಾರೆ.' ಎಂದಿತು. (ಮಾವಿನ ಮರದ ಮಾತು ಕೇಳಿದ ಹಲಸಿನ ಮರವು–) **ಹಲಸಿನ ಮರ:** 'ನಿನ್ನ ಹಣ್ಣು ಸಿಹಿಯಾಗಿರಬಹುದು. ನಿನ್ನ ಉಪಯೋಗದಷ್ಟೇ ನನ್ನನ್ನೂ ಮನುಷ್ಯರು ಉಪಯೋಗಿಸುತ್ತಾರೆ ಎಂಬುದನ್ನು ಮರೆಯಬೇಡ. ಅಲ್ಲದೇ ನಾನು ಕೊಡುವ ಒಂದು ಹಣ್ಣು ನಾಲ್ಕಾರು ಜನರಿಗೆ ಸಾಕು. ಆದರೆ ನಿನ್ನ ಹಣ್ಣನ್ನು ತಿಂದರೆ ಒಬ್ಬರ ಹೊಟ್ಟೆಯೂ ತುಂಬೋದಿಲ್ಲ!' ಎಂದಿತು. (ಹಲಸಿನ ಮರದ ಮಾತು ಕೇಳಿದ ತೆಂಗಿನ ಮರವು–) **ತೆಂಗಿನ ಮರ:** 'ಛೀ, ಬಿಡು! ನಿನ್ನ ಹಣ್ಣೋ ಮುಟ್ಟಿದರೆ ಮುಳ್ಳು, ಅದನ್ನು ಬಿಡಿಸಲು ಹೊರಟರೆ ಕೈಯೆಲ್ಲಾ ಮೇಣ. ಆದರೆ ನನ್ನ ಕಾಯಿ ನೋಡು. ಎಳೆಯದಾಗಿದ್ದರೆ ಎಳನೀರಿಗೆ, ಬಲಿತರೆ ಸಾಂಬಾರಿಗೆ, ದೇವರ ಪೂಜಾವಿಧಿಗಳಿಗೆ, ಒಣಗಿದರೆ ಕೊಬ್ಬರಿಗೆ, ಗಾಣಕ್ಕೆ ಕೊಟ್ಟರೆ ಎಣ್ಣೆಗೆ, ಇನ್ನು ಚಪ್ಪರಕ್ಕೆ ನನ್ನ ಗರಿಗಳು, ಸ್ವಚ್ಛಗೊಳಿಸುವ ಪೊರಕೆಗೆ ನನ್ನ ಕಡ್ಡಿಗಳು, ಮನೆಯ ಪಕ್ಕಾಸಿಗೆ ನನ್ನ ಮರ– ಎಲ್ಲವೂ ಜನರ ಕೆಲಸಕ್ಕೆ ಬೇಕು. ಆದ್ದರಿಂದ ನಾನು ಅವರಿಗೆ ಕಲ್ಪವೃಕ್ಷವಾಗಿದ್ದೇನೆ' ಎಂದಿತು. (ತೆಂಗಿನ ಮರದ ಮಾತು ಕೇಳಿದ ಆಲದ ಮರವು–) **ಆಲದ ಮರ:** 'ನೀನು ಬೇಕಾದಷ್ಟು ಜಂಬ ಕೊಚ್ಚು. ಆದರೆ ನಾನು ಕೊಡುವಷ್ಟು ನೆರಳನ್ನು ನೀವ್ಯಾರು ಕೊಡಬಲ್ಲಿರಿ? ನಾನು ನನ್ನ ರೆಂಬೆ ಕೊಂಬೆಗಳನ್ನು ಅಗಲವಾಗಿ ಚಾಚಿ ಸೂರ್ಯನ ಬಿಸಿಲು ನನ್ನ ಬುಡಕ್ಕೆ ಬೀಳದಂತೆ ತಡೆದು ಎಲ್ಲರಿಗೂ ನೆರಳು ನೀಡುತ್ತೇನೆ. ಪ್ರಾಣಿಗಳ ಉಸಿರಾಟಕ್ಕೆ ಅಗತ್ಯವಾದ ಆಮ್ಲಜನಕವನ್ನು ಉತ್ಪಾದಿಸುತ್ತೇನೆ.' ಎಂದು ಹೇಳಿ ಬೀಗಿತು. (ಆಲದ ಮರದ ಮಾತು ಕೇಳಿದ ಬಾಳೆ ಗಿಡವು–) **ಬಾಳೆ ಗಿಡ:** 'ಎಲೇ ಆಲದ ಮರವೇ, ಇದೇನು ಈ ರೀತಿ ಬಡಾಯಿ ಕೊಚ್ಚಿಕೊಳ್ಳುತ್ತಿದ್ದೀಯಾ! ನೆರಳು, ಆಮ್ಲಜನಕ ಉತ್ಪಾದಿಸಿದರೆ ಸಾಕೆ? ನಿನ್ನ ಹಣ್ಣುಗಳನ್ನು ಹಕ್ಕಿಗಳು ಕೂಡ ತಿನ್ನುವುದಿಲ್ಲ. ನಿನ್ನ ಹೂವನ್ನು ನೋಡಿದವರೇ ಇಲ್ಲ. ನನ್ನ ಎಲೆಯಲ್ಲಿ ಊಟ ಮಾಡಿದ್ದೀಯಾ? ನನ್ನ ಮೋತೆಯ ಚಟ್ನಿ ತಿಂದಿದ್ದೀಯಾ? ನನ್ನ ಹಣ್ಣು ಎಲ್ಲರಿಗೂ ಅಗತ್ಯ. ಹಾಗಾಗಿ ವರ್ಷದ ಹನ್ನೆರಡು ತಿಂಗಳು ನಾನು ಹಣ್ಣು ನೀಡುತ್ತೇನೆ. ನನ್ನ ಎಲೆ, ದಿಂಡು ಎಲ್ಲವೂ ಜನರಿಗೆ ಅಗತ್ಯ. ಆದ್ದರಿಂದ ನಿಮ್ಮೆಲ್ಲರಿಗಿಂತ ನಾನೇ ಶ್ರೇಷ್ಠ' ಎಂದಿತು. (ಇದನ್ನೆಲ್ಲ ಕೇಳುತ್ತಿದ್ದ ದಾಸವಾಳ ಗಿಡವು–) **ದಾಸವಾಳದ ಗಿಡ:** ಅಣ್ಣಂದಿರೆ, ಅಕ್ಕಂದಿರೆ ನಮ್ಮ ನಮ್ಮಲ್ಲಿ ಜಗಳವೇಕೆ? ನಮ್ಮ ನಮ್ಮಲ್ಲಿ ಯಾರು ಹೆಚ್ಚೂ ಇಲ್ಲ, ಕಡಿಮೆಯೂ ಇಲ್ಲ. ನಮ್ಮ ನಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಜನರಿಗೆ ಉಪಯೋಗಕಾರಿಯಾಗಿದ್ದೇವೆ. ಆದ್ದರಿಂದಲೇ ಅವರು ನಮ್ಮನ್ನು ಇಲ್ಲಿ ತಂದು ಒಂದೇ ಕಡೆ ಸೇರುವಂತೆ ನೆಟ್ಟಿದ್ದಾರೆ. ಇದರಿಂದ ನಾವೆಲ್ಲ ಒಟ್ಟಿಗೆ ಇರುವ ಹಾಗಾಗಿದೆ. ಒಂದೊಮ್ಮೆ ಜನರ ಉಪಯೋಗಕ್ಕೆ ಬಾರದೇ ಇದ್ದಿದ್ದರೆ ಕಾಡಿನ ಯಾವುದೋ ಮೂಲೆಯಲ್ಲಿ ನಾವು ಇರಬೇಕಾಗುತ್ತಿತ್ತು. ಎಂದಾಗ ಎಲ್ಲ ಮರ ಗಿಡಗಳಿಗೂ ದಾಸವಾಳ ಗಿಡ ಹೇಳಿದ ಮಾತು ಸತ್ಯವೆನಿಸಿತು. ನಮ್ಮ ನಮ್ಮ ಉಪಯೋಗ ಅರಿತು ಮನುಷ್ಯ ಇಲ್ಲಿ ತಂದು ನಮ್ಮನ್ನು ಬೆಳೆಸಿದ್ದಾನೆ. ಮೊದಲು ನಾವು ಅವನಿಗೆ ಕೃತಜ್ಞರಾಗಿರೋಣ ಎಂದುಕೊಂಡವು. ದಾಸವಾಳದ ಬುದ್ಧಿಮಾತಿಗೆ ತಲೆದೂಗಿ ತನ್ನ ರೆಂಬೆ ಕೊಂಬೆಗಳನ್ನು ಅಲ್ಲಾಡಿಸಿ ಸಮ್ಮತಿ ಸೂಚಿಸಿದವು. **ಕೌಶಲ :-** ಓದುವುದು ಮತ್ತು ಬರೆಯುವುದು. **ಸಾಮರ್ಥ್ಯ:** ಕ್ರಮವಾಗಿ ಬಿಟ್ಟ ಪದಗಳನ್ನು ಮತ್ತು ವಾಕ್ಯಗಳನ್ನು ಬರೆಯುವುದು. ಅಂದವಾಗಿ, ಸರಿಯಾಗಿ ಹಾಗೂ ಸರಿಯಾದ ಗಾತ್ರ ಮತ್ತು ಪ್ರಮಾಣದಲ್ಲಿ ಬರೆಯುವುದು. ಲೇಖನ ಚಿಹ್ನೆಗಳನ್ನು ಬಳಸಿ ಬರೆಯುವುದು.

"ಐದು ಬೆರಳು ಬೇರೆಬೇರೆಯಾದರೆ ದುರ್ಬಲ; ಒಟ್ಟು ಸೇರಿದರೆ ಪ್ರಬಲ." — "Five fingers separated are weak; united, they are strong."

ಪದಗಳ ಅರ್ಥword meanings

KannadaPronunciationMeaning
ಉದ್ಯಾನವನud-yaa-na-va-naಕೈತೋಟ, ಉಪವನ (garden, park)
ಆಕರ್ಷಣೆaa-kar-sha-neಸೆಳೆಯುವಂತಹದು, ಗಮನವನ್ನು ತನ್ನತ್ತ ಎಳೆಯುವಿಕೆ (attraction)
ಬೀಗುbee-guಉಬ್ಬು, ಲೊಡಿಕೊಳ್ಳು, ಉತ್ಸಾಹಗೊಳ್ಳು (boast, swell with pride)
ಕೊಬ್ಬರಿkob-ba-riಒಣಗಿದ ಕಾಯಿ, ಗೋಟುಕಾಯಿ (dry coconut)
ಜಂಬjam-baಗರ್ವ, ಹೆಮ್ಮೆ (pride, arrogance)
ರೆಂಬೆಕೊಂಬೆrem-be-kom-beಮರದ ಶಾಖೆಗಳು, ಟಿಸಿಲುಗಳು (branches)
ಉತ್ಪಾದಿಸುut-paa-di-suತಯಾರಿಸು, ಸಿದ್ಧಗೊಳಿಸು (produce, manufacture)
ಬಡಾಯಿಕೊಚ್ಚುba-daa-yi-koch-chuಜಂಬಪಡು, ಜಂಬದ ಮಾತನಾಡು (boast)
ಶ್ರೇಷ್ಠshresh-thaಉತ್ತಮವಾದುದು, ಪ್ರಧಾನ, ಮುಖ್ಯವಾದುದು (superior, great)
ಸಾಮರ್ಥ್ಯsaa-mar-thyaದಕ್ಷತೆ, ಯೋಗ್ಯತೆ (capability, ability)
ಉಪಯೋಗu-pa-yo-gaಪ್ರಯೋಜನ, ಬಳಕೆ (use, benefit)
ಸಮ್ಮತಿsam-ma-tiಒಪ್ಪಿಗೆ (agreement)
ಕೃತಜ್ಞkru-tag-naಮಾಡಿದ ಉಪಕಾರವನ್ನು ನೆನೆಯುವವನು (grateful)

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಅ) ಆವರಣದಲ್ಲಿ ಕೊಟ್ಟಿರುವ ಪದಗಳಲ್ಲಿ ಸರಿಯಾದುದನ್ನು ಆರಿಸಿ ಬಿಟ್ಟ ಸ್ಥಳ ತುಂಬಿರಿ.

  1. ೧. ನಾನು ನಿಮ್ಮೆಲ್ಲರ ................................ (ಕಿರಿಮಾವ, ಅಳಿಯ, ಹಿರಿಮಾವ)

  2. ೨. ನಾನು ಮಾನವರಿಗೆ ................................ (ಕಾಮಧೇನು, ಕಲ್ಪವೃಕ್ಷ, ಐರಾವತ)

  3. ೩. ನಾನು ನನ್ನ ರೆಂಬೆಕೊಂಬೆಗಳನ್ನು ಚಾಚಿ ಹೆಚ್ಚು ................................ ಕೊಡುತ್ತೇನೆ. (ಬೆಳಕು, ಕತ್ತಲು, ನೆರಳು)

  4. ೪. ನಾನು ವರ್ಷದ ................................ ತಿಂಗಳೂ ಹಣ್ಣು ಬಿಡುತ್ತೇನೆ. (ಮೂರು, ಹನ್ನೆರಡು, ಆರು)

ಆ) ಈ ಕೆಳಗಿನ ಮಾತುಗಳನ್ನು ಯಾರು ಯಾರಿಗೆ ಹೇಳಿದರು?

  1. ೧. "ಎಲ್ಲರೂ ನನ್ನ ಹಣ್ಣಿಗಾಗಿ ಮುಗಿ ಬೀಳುತ್ತಾರೆ."

  2. ಯಾರು ಹೇಳಿದರು? ........................................................................

    Answer

    ಮಾವಿನ ಮರ

  3. ಯಾರಿಗೆ ಹೇಳಿದರು? ........................................................................

    Answer

    ಎಲ್ಲಾ ಗಿಡ-ಮರಗಳಿಗೆ

  4. ೨. "ನಾನು ಕೊಡುವ ಹಣ್ಣು ನಾಲ್ಕಾರು ಜನರಿಗೆ ಸಾಕು."

  5. ಯಾರು ಹೇಳಿದರು? ........................................................................

    Answer

    ಹಲಸಿನ ಮರ

  6. ಯಾರಿಗೆ ಹೇಳಿದರು? ........................................................................

    Answer

    ಮಾವಿನ ಮರಕ್ಕೆ

  7. ೩. "ಛೀ ಬಿಡು! ನಿನ್ನ ಹಣ್ಣೋ ಮುಟ್ಟಿದರೆ ಮುಳ್ಳು."

  8. ಯಾರು ಹೇಳಿದರು? ........................................................................

    Answer

    ತೆಂಗಿನ ಮರ

  9. ಯಾರಿಗೆ ಹೇಳಿದರು? ........................................................................

    Answer

    ಹಲಸಿನ ಮರಕ್ಕೆ

ಇ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ.

  1. ೧. ಉದ್ಯಾನವನದಲ್ಲಿನ ಗಿಡ-ಮರಗಳು ಏನೆಂದು ಮಾತಾಡಿಕೊಂಡವು?

    Answer

    ಉದ್ಯಾನವನದಲ್ಲಿನ ಗಿಡ-ಮರಗಳು ತಮ್ಮಿಂದಲೇ ಉದ್ಯಾನವನದ ಆಕರ್ಷಣೆ ಹೆಚ್ಚಿದೆ ಎಂದು ಮಾತಾಡಿಕೊಂಡವು.

  2. ೨. ಯಾವ ಹಣ್ಣನ್ನು ತಿಂದರೆ ಒಬ್ಬರ ಹೊಟ್ಟೆಯೂ ತುಂಬೊಲ್ಲ?

    Answer

    ಮಾವಿನ ಹಣ್ಣನ್ನು ತಿಂದರೆ ಒಬ್ಬರ ಹೊಟ್ಟೆಯೂ ತುಂಬೊಲ್ಲ.

  3. ೩. ಕೊಬ್ಬರಿ ಎಣ್ಣೆ ಯಾವುದರಿಂದ ಮಾಡುತ್ತಾರೆ?

    Answer

    ಕೊಬ್ಬರಿ ಎಣ್ಣೆಯನ್ನು ಕೊಬ್ಬರಿಯಿಂದ ಮಾಡುತ್ತಾರೆ.

  4. ೪. ಬಾಳೆಯ ಎಲೆ ಯಾವುದಕ್ಕೆ ಉಪಯೋಗ?

    Answer

    ಬಾಳೆಯ ಎಲೆಯನ್ನು ಊಟ ಮಾಡಲು ಉಪಯೋಗಿಸುತ್ತಾರೆ.

ಈ) ಕೆಳಗಿನ ಪ್ರಶ್ನೆಗಳಿಗೆ ಎರಡು ಅಥವಾ ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.

  1. ೧. ತೆಂಗಿನಮರ ಕಲ್ಪವೃಕ್ಷ ಹೇಗೆ?

    Answer

    ತೆಂಗಿನ ಮರವು ಎಳನೀರು, ಸಾಂಬಾರು, ಪೂಜೆ, ಕೊಬ್ಬರಿ, ಎಣ್ಣೆ, ಗರಿಗಳು, ಕಡ್ಡಿಗಳು, ಮರ ಮುಂತಾದವುಗಳನ್ನು ನೀಡುತ್ತದೆ. ಆದ್ದರಿಂದ ಅದು ಮಾನವರಿಗೆ ಕಲ್ಪವೃಕ್ಷವಾಗಿದೆ.

  2. ೨. ಬಾಳೆಯ ಉಪಯೋಗಗಳನ್ನು ಪಟ್ಟಿ ಮಾಡಿರಿ.

    Answer

    ಬಾಳೆಯ ಹಣ್ಣು ತಿನ್ನಲು, ಎಲೆಯಲ್ಲಿ ಊಟ ಮಾಡಲು, ಮೋತೆಯಿಂದ ಚಟ್ನಿ ಮಾಡಲು ಮತ್ತು ದಿಂಡನ್ನು ಉಪಯೋಗಿಸಲು ಬಳಸುತ್ತಾರೆ.

  3. ೩. ದಾಸವಾಳ, ಗಿಡ-ಮರಗಳಿಗೆ ಏನೆಂದು ಬುದ್ಧಿವಾದ ಹೇಳಿತು?

    Answer

    ದಾಸವಾಳವು, ನಮ್ಮಲ್ಲಿ ಯಾರೂ ಹೆಚ್ಚೂ ಇಲ್ಲ ಕಡಿಮೆಯೂ ಇಲ್ಲ, ಎಲ್ಲರೂ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಉಪಯೋಗಕಾರಿಗಳಾಗಿದ್ದೇವೆ ಎಂದು ಬುದ್ಧಿವಾದ ಹೇಳಿತು. ಜೊತೆಗೆ ಮನುಷ್ಯರಿಗೆ ಕೃತಜ್ಞರಾಗಿರಬೇಕೆಂದು ಹೇಳಿತು.

ಭಾಷಾಭ್ಯಾಸ

ಅ) ಕೊಟ್ಟಿರುವ ವಾಕ್ಯದಲ್ಲಿ ಗೆರೆ ಎಳೆದ ಪದದ ಸರಿಯಾದ ರೂಪ ಬರೆಯಿರಿ.

  1. ಮಾದರಿ: ನಾನು ನಿಮ್ಮೆಲ್ಲರ <u>ಇರಿಮಾವ</u>.

  2. ನಾನು ನಿಮ್ಮೆಲ್ಲರ ಹಿರಿಮಾವ.

  3. ೧. ಹಲಸಿನ ಹಣ್ಣು ತಿನ್ನಲು <u>ರುಛಿ</u>ಯಾಗಿರುತ್ತದೆ.

    Answer

    ರುಚಿ

  4. ೨. ನಾನು ಮನುಷ್ಯರಿಗೆ <u>ಕಲ್ಪವ್ರುಕ್ಷ</u>

    Answer

    ಕಲ್ಪವೃಕ್ಷ

  5. ೩. ಪ್ರಾಣಿಗಳ <u>ಹುಸಿರಾಟಕ್ಕೆ</u> <u>ಅಮ್ಲಜನಕ</u> ಬೇಕು.

    Answer

    ಉಸಿರಾಟಕ್ಕೆ, ಆಮ್ಲಜನಕ

  6. ೪. ನಾವು ಮನುಷ್ಯರಿಗೆ <u>ಕೃತಘ್ನ</u>ರಾಗಿರೋಣ.

    Answer

    ಕೃತಜ್ಞ

ಆ) ಕೊಟ್ಟಿರುವ ಸೂಚನೆಯನ್ನು ಅನುಸರಿಸಿ ಪದಗಳಲ್ಲಿರುವ ಮಧ್ಯದ ಅಕ್ಷರವನ್ನು ಬದಲಾಯಿಸಿ ಹೊಸ ಪದಗಳನ್ನು ಮಾಡಿರಿ.

  1. ಮಾದರಿ: ಕಪಿಲ (ನೀರಲ್ಲಿ ಬೆಳೆಯುವ ಒಂದು ಹೂವು) <u>ಕಮಲ</u>

  2. ೧. ಹವಳ (ತಿನ್ನಲು ಕರಂ.... ಕರಂ) ........................................

    Answer

    ಹಪ್ಪಳ

  3. ೨. ಸತ್ತರೆ (ಸಿಹಿಯನ್ನು ಕೊಡುವುದು) ........................................

    Answer

    ಸಕ್ಕರೆ

  4. ೩. ಕರಡಿ (ಮುಖವನ್ನು ನೋಡಿಕೊಳ್ಳುತ್ತೇವೆ) ........................................

    Answer

    ಕನ್ನಡಿ

  5. ೪. ಕಟ್ಟಡ (ಕರ್ನಾಟಕದ ಭಾಷೆ) ........................................

    Answer

    ಕನ್ನಡ

ಭಾಷಾ ಚಟುವಟಿಕೆ

  1. ೧) ಹೂವುಗಳೆಲ್ಲ ಕಳೆದು ಹೋಗಿವೆ. ಕಳೆದು ಹೋದ ಹೂವುಗಳನ್ನು ಹುಡುಕಿ ಕೆಳಗೆ ಕೊಟ್ಟಿರುವ ಆಯತಗಳಲ್ಲಿ ಅವುಗಳ ಹೆಸರುಗಳನ್ನು ಬರೆಯುವಿರಾ?

  2. (A letter grid to build flower names from:

  3. ಸು ಎ ಕ ಣಿ ಗ ಲೆ ನಂ ಗು

  4. ಗಂ ಕ್ಣ ಬಿ ಸೇ ಸ್ಟಿ ನಿ ದಿ ಲಾ

  5. ಧ ಶ್ರೀ ರಿ ವಂ ಟಿ ಮ ಬ ಬಿ

  6. ರಾ ತುಂ ಬೆ ತಿ ಕ ಲ್ಲಿ ಟ್ಟ ರಿ

  7. ಜ ಗೆ ಕಾಂ ಗೆ ಯಾ ಗೆ ಲು ಡಾ

  8. ವ ರ್ಯ ಪಿ ಪಾ ರಿ ಜಾ ತ ಸ

  9. ಸೂ ಸಂ ಹೂ ಮೊ ಗ್ಗೆ ವು ಮ

  10. ಕ ನಿ ಕಾಂ ಬ ರ ಷ್ಟೆ ಳ)

  11. ಹುಡುಕಿದ ಹೂವುಗಳ ಹೆಸರನ್ನು ಇಲ್ಲಿ ಬರೆಯಿರಿ.

    Answer

    ಕಣಿಗಲೆ ತುಂಬೆ ಪಾರಿಜಾತ ಸೇವಂತಿಗೆ ಸಂಪಿಗೆ ಗುಲಾಬಿ ನಿದಿಲಾ

  12. (A 6x2 grid with empty space to write the found words)

  13. ೧) ವಿವಿಧ ಮರಗಳ ಚಿತ್ರಗಳನ್ನು ಹೆಸರು ಸಹಿತ ಸಂಗ್ರಹಿಸಿ ಆಲ್ಬಂ ತಯಾರಿಸಿರಿ.

  14. ೨) ಈ ಪಾಠದ ಸಂಭಾಷಣೆಯನ್ನು ಶಿಕ್ಷಕರ ಸಹಾಯ ಪಡೆದು ಅಭಿನಯಿಸಿರಿ.

  15. ೩) ಕೆಳಗಿನ ಚಿತ್ರವನ್ನು ಗಮನಿಸಿ ಈ ಸಸ್ಯದಲ್ಲಿರುವ ಐದು ಎಲೆಗಳನ್ನು ಗುರುತಿಸಿ ಅವುಗಳ ಹೆಸರು ಬರೆಯಿರಿ.

  16. (An illustration of a tree trunk with different types of leaves attached to it, with five empty lines to write their names).

ಓದಿಗೆ ಮನ್ನಣೆ

  1. * ಒಗ್ಗಟ್ಟಿನಿಂದ ಸಾಧಿಸಿದ ಕೆಲಸಗಳ ಬಗ್ಗೆ ಕೇಳಿ ತಿಳಿಯಿರಿ.

  2. * ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯರ ಬಗ್ಗೆ ತಿಳಿಯಿರಿ.

  3. * ಮಕ್ಕಳ ಸಾಹಸದ ಕಥೆಗಳ ಬಗ್ಗೆ ನಿಮ್ಮ ಗ್ರಂಥಾಲಯದಲ್ಲಿರುವ ಪುಸ್ತಕಗಳನ್ನು ಓದಿರಿ.

ಶುಭನುಡಿ

  1. * ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ.

  2. * ಐದು ಬೆರಳು ಬೇರೆಬೇರೆಯಾದರೆ ದುರ್ಬಲ; ಒಟ್ಟು ಸೇರಿದರೆ ಪ್ರಬಲ.

  3. * ನಾನು ಎನ್ನುವ ಅಹಂಕಾರ ಅಪಾಯಕಾರಿ.

Interactive Lab

ಉದ್ಯಾನವನud-yaa-na-va-naಕೈತೋಟ, ಉಪವನ (garden, park)
ಆಕರ್ಷಣೆaa-kar-sha-neಸೆಳೆಯುವಂತಹದು, ಗಮನವನ್ನು ತನ್ನತ್ತ ಎಳೆಯುವಿಕೆ (attraction)
ಬೀಗುbee-guಉಬ್ಬು, ಲೊಡಿಕೊಳ್ಳು, ಉತ್ಸಾಹಗೊಳ್ಳು (boast, swell with pride)
ಕೊಬ್ಬರಿkob-ba-riಒಣಗಿದ ಕಾಯಿ, ಗೋಟುಕಾಯಿ (dry coconut)
ಜಂಬjam-baಗರ್ವ, ಹೆಮ್ಮೆ (pride, arrogance)
ರೆಂಬೆಕೊಂಬೆrem-be-kom-beಮರದ ಶಾಖೆಗಳು, ಟಿಸಿಲುಗಳು (branches)
ಉತ್ಪಾದಿಸುut-paa-di-suತಯಾರಿಸು, ಸಿದ್ಧಗೊಳಿಸು (produce, manufacture)
ಬಡಾಯಿಕೊಚ್ಚುba-daa-yi-koch-chuಜಂಬಪಡು, ಜಂಬದ ಮಾತನಾಡು (boast)
ಶ್ರೇಷ್ಠshresh-thaಉತ್ತಮವಾದುದು, ಪ್ರಧಾನ, ಮುಖ್ಯವಾದುದು (superior, great)
ಸಾಮರ್ಥ್ಯsaa-mar-thyaದಕ್ಷತೆ, ಯೋಗ್ಯತೆ (capability, ability)
ಉಪಯೋಗu-pa-yo-gaಪ್ರಯೋಜನ, ಬಳಕೆ (use, benefit)
ಸಮ್ಮತಿsam-ma-tiಒಪ್ಪಿಗೆ (agreement)
ಕೃತಜ್ಞkru-tag-naಮಾಡಿದ ಉಪಕಾರವನ್ನು ನೆನೆಯುವವನು (grateful)