CRECT Education

Class 5 Kannada Lesson 3: Kannada Language | KTBS Kannada Second Language

Description

Line-by-line poem, vocabulary, and practice for ಕನ್ನಡ ನುಡಿ

ಪದ್ಯ (poem) · ಎ. ಕೆ. ರಾಮೇಶ್ವರ

ಪಠ್ಯFull text

ಮಕ್ಕಳೆ ಬನ್ನಿರಿ ಮಾತೊಂದು ಹೇಳುವೆ ಚಿತ್ತವನಿಟ್ಟು ಆಲಿಸಿರಿ || ಪ || ಕನ್ನಡ ನುಡಿಯಲಿ ಕನ್ನಡ ಗುಡಿಯಲಿ ಹೃದಯದ ಒಲುಮೆಯು ತುಂಬಿಹುದು ಹಾಲಿನ ತೊರೆಯು ಸಕ್ಕರೆ ಮಳಲು ಜೇನಿನ ಹನಿಯು ಅಲ್ಲಿಹುದು ಪುಣ್ಯಕೋಟಿಯ ಬದುಕಿನ ಚರಿತೆಯು ಜನಪದದಲ್ಲಿ ಮೂಡಿಹುದು ಸಂಚಿಹೊನ್ನಮ್ಮನ ಹದಿಬದೆಧರ್ಮವು ಥಳಥಳ ಅದರಲಿ ಹೊಳೆಯುವುದು ಶರಣರು ರಚಿಸಿದ ವಚನಗಳೆಲ್ಲವು ಬದುಕಿನ ಅಮೃತ ಕಣಜಗಳು ದಾಸರ ನುಡಿಯಲಿ ಅರಳಿದ ಚೆಲುವು ಕನ್ನಡದೊಲುಮೆಯ ಹವಳಗಳು ಬನ್ನಿರಿ ಮಕ್ಕಳೆ ಕನ್ನಡ ಕಲಿಯಿರಿ ಬದುಕಿನ ತಿರುಳನು ಅರಿಯುತ್ತ ನಮ್ಮಯ ನಾಡಿನ ಪುಣ್ಯದ ಬೀಡಿನ ನನ್ನಿಯ ಕಥೆಯನು ಬರೆಯುತ್ತ. – ಎ. ಕೆ. ರಾಮೇಶ್ವರ

ಅಭ್ಯಾಸexercises from the textbook

Model answers — a guide, not the only correct wording. Check with your teacher.

I. ಪದಗಳ ಅರ್ಥ :

  1. ಅರಿ - ತಿಳಿ; ಗ್ರಹಿಸು.

  2. ಆಲಿಸು - ಮನಸ್ಸಿಟ್ಟು ಕೇಳು

  3. ಕಣಜ - ಧಾನ್ಯ ಸಂಗ್ರಹಣ ಸ್ಥಳ.

  4. ಚಿತ್ತ - ಮನಸ್ಸು.

  5. ತಿರುಳು - ಸತ್ತ್ವ; ಸಾರ.

  6. ನನ್ನಿ - ಪ್ರೀತಿ; ಸತ್ಯ.

  7. ಮಳಲು - ಮರಳು

  8. ಅಮೃತ - ಪವಿತ್ರವಾದುದು.

  9. ಒಲುಮೆ - ಪ್ರೀತಿ

  10. ಗುಡಿ - ಪವಿತ್ರ ಸ್ಥಳ; ದೇವಾಲಯ.

  11. ತಾಯಿನುಡಿ - ಮಾತೃಭಾಷೆ

  12. ತೊರೆ - ಚಿಕ್ಕಹೊಳೆ

  13. ನುಡಿ - ಭಾಷೆ

II. ಪ್ರಶ್ನೆಗಳು :

ಅ) 'ಅ' ಪಟ್ಟಿಗೆ 'ಬ' ಪಟ್ಟಿಯನ್ನು ಹೊಂದಿಸಿ ಬರೆಯಿರಿ.

  1. 'ಅ' ಪಟ್ಟಿ | 'ಬ' ಪಟ್ಟಿ | (ಉತ್ತರ)

    Answer

    ಅ) ಪುಣ್ಯಕೋಟಿ - ಆ) ಗೋವು

  2. --- | --- | ---

    Answer

    ಅ) ಹದಿಬದೆಯಧರ್ಮ - ಈ) ಸಂಚಿಯಹೊನ್ನಮ್ಮ

  3. ೧. ಪುಣ್ಯಕೋಟಿ | ಅ) ಕೀರ್ತನೆಗಳು | ........................

    Answer

    ಅ) ದಾಸರು - ಅ) ಕೀರ್ತನೆಗಳು

  4. ೨. ಹದಿಬದೆಯಧರ್ಮ | ಆ) ಗೋವು | ........................

    Answer

    ಅ) ಶರಣರು - ಇ) ವಚನಗಳು

  5. ೩. ದಾಸರು | ಇ) ವಚನಗಳು | ........................

    Answer

    ಹೊಂದಿಕೆಯಿಲ್ಲ

  6. ೪. ಶರಣರು | ಈ) ಸಂಚಿಯಹೊನ್ನಮ್ಮ | ........................

  7. | ಉ) ಹೃದಯದ ಒಲುಮೆ | ........................

ಆ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

  1. ೧. ಕವಿ ತನ್ನ ಮಾತುಗಳನ್ನು ಹೇಗೆ ಆಲಿಸಬೇಕೆಂದು ಮಕ್ಕಳಿಗೆ ಕರೆ ನೀಡಿದ್ದಾರೆ?

    Answer

    ಕವಿ ಮಕ್ಕಳಿಗೆ ಚಿತ್ತವನಿಟ್ಟು ಆಲಿಸಬೇಕೆಂದು ಕರೆ ನೀಡಿದ್ದಾರೆ.

  2. ೨. ಕನ್ನಡದ ನುಡಿಯಲ್ಲಿ ಏನು ತುಂಬಿದೆ?

    Answer

    ಕನ್ನಡದ ನುಡಿಯಲ್ಲಿ ಹೃದಯದ ಒಲುಮೆಯು ತುಂಬಿದೆ.

  3. ೩. ಜಾನಪದದಲ್ಲಿ ಮೂಡಿದ ಸತ್ಯದ ಬದುಕಿನ ಚರಿತ್ರೆ ಯಾವುದು?

    Answer

    ಜಾನಪದದಲ್ಲಿ ಮೂಡಿದ ಸತ್ಯದ ಬದುಕಿನ ಚರಿತ್ರೆ ಪುಣ್ಯಕೋಟಿಯದು.

  4. ೪. ಹದಿಬದೆಧರ್ಮ ಗ್ರಂಥವನ್ನು ಬರೆದವರು ಯಾರು?

    Answer

    ಹದಿಬದೆಧರ್ಮ ಗ್ರಂಥವನ್ನು ಸಂಚಿಯಹೊನ್ನಮ್ಮನವರು ಬರೆದರು.

  5. ೫. ಕನ್ನಡದೊಲುಮೆಯ ಹವಳಗಳು ಯಾವುವು?

    Answer

    ಕನ್ನಡದೊಲುಮೆಯ ಹವಳಗಳು ದಾಸರ ನುಡಿಯಲ್ಲಿ ಅರಳಿದ ಚೆಲುವು.

  6. ೬. 'ಕನ್ನಡ ನುಡಿ' ಕವಿತೆಯನ್ನು ಬರೆದ ಕವಿಯ ಹೆಸರು ಏನು?

    Answer

    ‘ಕನ್ನಡ ನುಡಿ’ ಕವಿತೆಯನ್ನು ಬರೆದ ಕವಿಯ ಹೆಸರು ಎ. ಕೆ. ರಾಮೇಶ್ವರ.

ಇ) ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.

  1. ೧. ಕನ್ನಡದ ನುಡಿಯಲ್ಲಿ ಏನೇನು ಅಡಗಿದೆ?

    Answer

    ಕನ್ನಡದ ನುಡಿಯಲ್ಲಿ ಹೃದಯದ ಒಲುಮೆ ತುಂಬಿದೆ. ಅದರಲ್ಲಿ ಹಾಲಿನ ತೊರೆ, ಸಕ್ಕರೆಯ ಮರಳು, ಜೇನಿನ ಹನಿ ಅಡಗಿವೆ.

  2. ೨. ಪುಣ್ಯಕೋಟಿ ಕಥೆಯು ಏನನ್ನು ತಿಳಿಸುತ್ತದೆ?

    Answer

    ಪುಣ್ಯಕೋಟಿ ಕಥೆಯು ಜನಪದದಲ್ಲಿ ಮೂಡಿದ ಒಂದು ಸತ್ಯದ ಕಥೆಯಾಗಿದೆ. ಇದು ಸತ್ಯದ ಮಹತ್ವವನ್ನು ತಿಳಿಸುತ್ತದೆ.

  3. ೩. ಕವಿಯು ಶರಣರ ವಚನಗಳನ್ನು ಏನೆಂದು ಬಣ್ಣಿಸಿದ್ದಾರೆ?

    Answer

    ಕವಿಯು ಶರಣರ ವಚನಗಳನ್ನು ಬದುಕಿನ ಅಮೃತ ಕಣಜಗಳೆಂದು ಬಣ್ಣಿಸಿದ್ದಾರೆ.

  4. ೪. ದಾಸಸಾಹಿತ್ಯವನ್ನು ಕವಿ ಯಾವ ರೀತಿ ಬಣ್ಣಿಸಿದ್ದಾರೆ?

    Answer

    ದಾಸಸಾಹಿತ್ಯವನ್ನು ಕವಿ ಕನ್ನಡದೊಲುಮೆಯ ಹವಳಗಳೆಂದು ಬಣ್ಣಿಸಿದ್ದಾರೆ.

  5. ೫. 'ಮಕ್ಕಳೆ ಕನ್ನಡ ಕಲಿಯಿರಿ' ಎಂದು ಕವಿ ಏಕೆ ಒತ್ತಾಯಿಸುತ್ತಾರೆ?

    Answer

    ಕನ್ನಡ ಕಲಿಯುವುದರಿಂದ ಬದುಕಿನ ತಿರುಳನ್ನು ಅರಿಯಬಹುದು. ಜೊತೆಗೆ ನಮ್ಮ ನಾಡಿನ ಪುಣ್ಯದ ಬೀಡಿನ ನನ್ನಿಯ ಕಥೆಯನ್ನು ಬರೆಯಬಹುದು.

III. ಭಾಷಾಭ್ಯಾಸ :

ಅ) ಈ ಪದಗಳನ್ನು ನಿಮ್ಮ ಸ್ವಂತ ವಾಕ್ಯಗಳಲ್ಲಿ ಉಪಯೋಗಿಸಿರಿ.

  1. ೧. ಚಿತ್ತ : ........................................................................

    Model sentence

    ಚಿತ್ತ: ನಾನು ಚಿತ್ತವಿಟ್ಟು ಪಾಠ ಕೇಳುತ್ತೇನೆ.

  2. ೨. ಒಲುಮೆ : ........................................................................

    Model sentence

    ಒಲುಮೆ: ಅಮ್ಮ ನನ್ನ ಮೇಲೆ ತುಂಬಾ ಒಲುಮೆ ತೋರಿಸುತ್ತಾಳೆ.

  3. ೩. ಜನಪದ : ........................................................................

    Model sentence

    ಜನಪದ: ನಮ್ಮ ಅಜ್ಜಿ ಜನಪದ ಕಥೆಗಳನ್ನು ಹೇಳುತ್ತಾರೆ.

  4. ೪. ಕಣಜ : ........................................................................

    Model sentence

    ಕಣಜ: ನಮ್ಮ ಶಾಲೆಯ ಗ್ರಂಥಾಲಯವು ಪುಸ್ತಕಗಳ ಕಣಜ.

  5. ೫. ತಿರುಳು : ........................................................................

    Model sentence

    ತಿರುಳು: ಮಾವಿನ ಹಣ್ಣಿನ ತಿರುಳು ತುಂಬಾ ಸಿಹಿ.

ಆ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ.

  1. ಮಾದರಿ : ಪುಣ್ಯ X ಪಾಪ

  2. ೧. ಮೂಡು X ........................

    Answer

    ಮೂಡು X ಮುಳುಗು

  3. ೨. ಧರ್ಮ X ........................

    Answer

    ಧರ್ಮ X ಅಧರ್ಮ

  4. ೩. ಅರಳು X ........................

    Answer

    ಅರಳು X ಬಾಡು

ಇ) ಈ ಕೆಳಗೆ ಗೆರೆ ಹಾಕಿದ ಪ್ರಾಸ ಪದಗಳನ್ನು ಆಯ್ದು ಜೋಡಿಸಿ ಬರೆಯಿರಿ.

  1. ಕನ್ನಡ <u>ನುಡಿಯಲಿ</u> ಕನ್ನಡ <u>ಗುಡಿಯಲಿ</u>

    Answer

    ನುಡಿಯಲಿ - ಗುಡಿಯಲಿ

  2. ಹೃದಯದ ಒಲುಮೆಯು ತುಂಬಿಹುದು

    Answer

    ತುಂಬಿಹುದು - ಅಲ್ಲಿಹುದು

  3. ಹಾಲಿನ <u>ತೊರೆಯು</u> ಸಕ್ಕರೆ ಮರಳು

  4. ಜೇನಿನ ಹನಿಯು ಅಲ್ಲಿಹುದು

  5. ಮಾದರಿ :- ನುಡಿಯಲಿ ಗುಡಿಯಲಿ

  6. ........................ ........................

  7. ........................ ........................

ಈ) ಕೆಳಗಿನ ವಾಕ್ಯಗಳಲ್ಲಿನ ದೋಷಯುಕ್ತ ಪದಗಳನ್ನು ಸರಿಪಡಿಸಿ ಬರೆಯಿರಿ.

  1. ೧. ಕನ್ನಡ ಎಡೆಯಲ್ಲಿ ಕನ್ನಡ ಗಡಿಯಲ್ಲಿ ಹೃದಯದ ಒಲುಮೆ.

    Answer

    ಕನ್ನಡ ನುಡಿಯಲಿ ಕನ್ನಡ ಗುಡಿಯಲಿ ಹೃದಯದ ಒಲುಮೆ.

  2. .......................................................................................

    Answer

    ಪುಣ್ಯಕೋಟಿಯ ಬದುಕಿನ ಚರಿತೆಯು ಜನಪದದಲ್ಲಿ ಮೂಡಿಹುದು.

  3. ೨. ಪಾಪಕೋಟಿಯ ಬದುಕಿನ ಚರಿತೆಯು ಜನಪದದಲ್ಲಿ ಮೂಡಿಹುದು.

    Answer

    ಬನ್ನಿರಿ ಮಕ್ಕಳೆ ಕನ್ನಡ ಕಲಿಯಿರಿ ಬದುಕಿನ ತಿರುಳನು ಅರಿಯುತ್ತ.

  4. .......................................................................................

    Answer

    ನಮ್ಮಯ ನಾಡಿನ ಪುಣ್ಯದ ಬೀಡಿನ ನನ್ನಿಯ ಕಥೆಯನು ಬರೆಯುತ್ತ.

  5. ೩. ಬನ್ನಿರಿ ಮಕ್ಕಳೆ ಕನ್ನಡ ಕುಡಿಯಿರಿ ಬದುಕಿನ ತಿರುಳನು ಅರಿಯುತ್ತ.

  6. .......................................................................................

  7. ೪. ನಮ್ಮಯ ನಾಡಿನ ಪುಣ್ಯದ ಬೀಡಿನ ನಿನ್ನಯ ಕಥೆಯನು ಬರೆಯುತ್ತ.

  8. .......................................................................................

ಉ) ಈ ಪದಗಳನ್ನು ನಕಲು ಮಾಡಿ ಬರೆಯಿರಿ.

  1. (A grid of words to be copied three times each into blanks below them: ಚಿತ್ತ, ಸಕ್ಕರೆ, ಪುಣ್ಯ, ಅಮೃತ, ನನ್ನಿ, ಹೃದಯ, ಒಲುಮೆ)

ಊ) ಈ ಪದಗಳಿಗೆ ಏಕವಚನದ ರೂಪ ಬರೆಯಿರಿ.

  1. ಮಾದರಿ : ಮಕ್ಕಳು - ಮಗು

  2. ಬಹುವಚನ | ಏಕವಚನ

    Answer

    ಗುಡಿಗಳು - ಗುಡಿ

  3. --- | ---

    Answer

    ತೊರೆಗಳು - ತೊರೆ

  4. ೧. ಗುಡಿಗಳು | ........................

    Answer

    ಶರಣರು - ಶರಣ

  5. ೨. ತೊರೆಗಳು | ........................

    Answer

    ಹವಳಗಳು - ಹವಳ

  6. ೩. ಶರಣರು | ........................

  7. ೪. ಹವಳಗಳು | ........................

IV. ಚಟುವಟಿಕೆಗಳು :

  1. ೧. ಸುಳಿವು ಪದ ಉಪಯೋಗಿಸಿ ಕವಿತೆ ಕಟ್ಟಿರಿ.

  2. ಮಾದರಿ : ನಮ್ಮ ನಾಡು ಕನ್ನಡ

  3. ನಮ್ಮ ........................ ಕನ್ನಡ

  4. ನಮ್ಮ ........................ ಕನ್ನಡ

  5. ನಮ್ಮ ........................ ಕನ್ನಡ

  6. ನಮ್ಮ ........................ ಕನ್ನಡ

  7. (ಸುಳಿವು ಪದಗಳು : ಭಾಷೆ, ಉಸಿರು, ದೈವ, ಬೀಡು)

  8. ೨. ಪುಣ್ಯಕೋಟಿ ಹಾಡಿನ ಕಥೆಯನ್ನು ಕೇಳಿ ತಿಳಿದುಕೊಳ್ಳಿರಿ.

  9. ೩. ಶರಣರ ವಚನ ಹಾಗೂ ದಾಸರ ಕೀರ್ತನೆಗಳನ್ನು ಹಾಡಿರಿ.

  10. ೪. ಕನ್ನಡ ನಾಡು ನುಡಿಯನ್ನು ಕುರಿತ ನಿಮ್ಮ ಭಾವನೆಗಳನ್ನು ಟಿಪ್ಪಣಿ ರೂಪದಲ್ಲಿ ಬರೆಯಿರಿ.

  11. ೫. ಈ ಕೆಳಗಿನ ಪದ್ಯಗಳನ್ನು ಓದಿ ಇವುಗಳ ಭಾವಾರ್ಥ ತಿಳಿದುಕೊಳ್ಳಿರಿ.

  12. ಸುಲಿದ ಬಾಳೆಯ ಹಣ್ಣಿನಂದದಿ

  13. ಕಳೆದ ಸಿಗುರಿನ ಕಬ್ಬಿನಂದದಿ

  14. ಅಳಿದ ಉಷ್ಣದ ಹಾಲಿನಂದದಿ

  15. ಲಲಿತವಾಗಿಹುದು ಕನ್ನಡದ ನುಡಿಯು

  16. – ಮಹಲಿಂಗರಂಗ

  17. ಕನ್ನಡಮ್ಮನ ಮಕ್ಕಳು ನಾವು

  18. ಪ್ರೀತಿಯ ಗಂಧವ ಸೂಸುವೆವು

  19. ಸಮರಸದಲ್ಲಿ ಹೃದಯವ ಬೆಸೆದು

  20. ನಾಡಿನ ಸಿರಿಯನು ಬೆಳಗುವೆವು

  21. – ದೊಡ್ಡಣ್ಣ ಗದ್ದನಕೇರಿ

Interactive Lab