ಗದ್ಯ (prose) · ಸಮಿತಿ ರಚನೆ (Committee-authored)
ಪಠ್ಯFull text
"ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು." — Even if you see something with your own eyes, verify it. (A reminder for critical thinking and not rushing to conclusions.)
ಪದಗಳ ಅರ್ಥword meanings
| Kannada | Pronunciation | Meaning |
|---|---|---|
| ಒಡ್ಡೋಲಗ | — | ರಾಜಸಭೆ, ದರ್ಬಾರು |
| ರೋದನ | — | ಅಳುವಿಕೆ, ಪ್ರಲಾಪ |
| ಚುಂಬನ | — | ಮುತ್ತು |
| ಉದ್ಗರಿಸು | — | ಹೇಳು, ಹೊರಗೆಡಹು |
| ಪರಿಸಮಾಪ್ತಿ | — | ಮುಕ್ತಾಯ, ಕೊನೆ |
| ಶೋಕ | — | ಅಳಲು, ದುಃಖ |
| ಗದ್ಗದ ಕಂಠ | — | ನಿಂತು ನಿಂತು ಬರುವ ಅಸ್ಪಷ್ಟವಾದ ಮಾತು, ಬಿಗಿದ ಕಂಠ |
| ಅಂತಃಪುರ | — | ರಾಣಿವಾಸ |
| ನಿಟ್ಟುಸಿರು | — | ದೀರ್ಘವಾಗಿ ಬಿಡುವ ಉಸಿರು, ನಿಡಿದಾದ ಶ್ವಾಸ |
| ಬಡಪಾಯಿ | — | ಅಶಕ್ತ, ದುರ್ಬಲ, ತೀರಿಕೊಳ್ಳು-ಗತಿಸು, ಮರಣ ಹೊಂದು |
| ಮಾರ್ನುಡಿ | — | ಪ್ರತಿಯಾಗಿ ಮಾತನಾಡು, ಮುತ್ತರ ಕೊಡು |
| ಪತ್ತೆ | — | ಗುರುತು, ಸುಳಿವು, ವಿಳಾಸ |
| ಬೊಬ್ಬಿಡು | — | ಕೂಗು, ಅರಚು, ಗಟ್ಟಿಯಾಗಿ ಹೇಳು |
| ನಿಜಾಂಶ | — | ಸತ್ಯ, ದಿಟ |
| ಪಕ್ಕೆಲುಬು | — | ಇಬ್ಬದಿಯ ಎಲುಬುಗಳು |
ಅಭ್ಯಾಸexercises from the textbook
Model answers — a guide, not the only correct wording. Check with your teacher.
ಅ. ಸರಿಯಾದ ಪದಗಳನ್ನು ಆಯ್ಕೆ ಮಾಡಿ ಬಿಟ್ಟ ಸ್ಥಳ ತುಂಬಿರಿ.
೧. ರಾಜನು ______________ವನ್ನು ಅಲ್ಲಿಗೇ ಪರಿಸಮಾಪ್ತಿಗೊಳಿಸಿದ.
Answerರಾಜನು ಒಡ್ಡೋಲಗವನ್ನು ಅಲ್ಲಿಗೇ ಪರಿಸಮಾಪ್ತಿಗೊಳಿಸಿದ.
(ಒಡ್ಡೋಲಗ, ಬಡ್ಡೋಲಗ, ಓಡ್ಡೋಲಗ)
೨. ಸೇವಕಿ ______________ಬುದ್ಧಿಯವಳು. (ಮುರುಕು, ತಳುಕು, ಚುರುಕು)
Answerಸೇವಕಿ ಚುರುಕು ಬುದ್ಧಿಯವಳು.
೩. ಮಂತ್ರಿ ಅರಮನೆಗೆ ಬಂದು ರಾಜನ ಕಾಲಿಗೆ ಬಿದ್ದು ______________ಹೇಳಿದ.
Answerಮಂತ್ರಿ ಅರಮನೆಗೆ ಬಂದು ರಾಜನ ಕಾಲಿಗೆ ಬಿದ್ದು ನಿಜಾಂಶವನ್ನು ಹೇಳಿದ.
(ನಿಜಾಂಶ, ಸಾರಾಂಶ, ಮಿಥ್ಯಾಂಶ)
೪. ರಾಜನಿಗೆ ಗಂಧರ್ವಸೇನ ತೀರಿದ ವಿಷಯ ತಿಳಿಸಿದ್ದು ______________
Answerರಾಜನಿಗೆ ಗಂಧರ್ವಸೇನ ತೀರಿದ ವಿಷಯ ತಿಳಿಸಿದ್ದು ಮಂತ್ರಿ.
(ಮಂತ್ರಿ, ರಾಣಿ, ಸೇವಕಿ)
೫. ಅಂತಃಪುರ ಇದರ ಅರ್ಥ______________ (ರಾಣಿವಾಸ, ಸೇವಕಿಯರ ವಾಸ, ರಾಜಗೃಹ)
Answerಅಂತಃಪುರ ಇದರ ಅರ್ಥ ರಾಣಿವಾಸ.
ಆ. ಈ ಪದಗಳ ಅರ್ಥ ಬರೆಯಿರಿ.
೧. ನಿಟ್ಟುಸಿರು ೨. ಪರಿಸಮಾಪ್ತಿ ೩. ಮಾರ್ನುಡಿ ೪. ಉದ್ಗರಿಸು
ಇ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ.
೧. ಮಂತ್ರಿ ಅಳುತ್ತಾ ರಾಜನ ಬಳಿ ಏನೆಂದು ಹೇಳಿದ?
Answerಮಂತ್ರಿ ಅಳುತ್ತಾ ರಾಜನ ಬಳಿ ‘ಮಹಾರಾಜರೇ ಗಂಧರ್ವಸೇನರು ತೀರಿಕೊಂಡರಂತೆ’ ಎಂದು ಹೇಳಿದ.
೨. ಗಂಧರ್ವಸೇನ ಯಾರು?
Answerಗಂಧರ್ವಸೇನ ಮಡಿವಾಳ್ತಿಯ ಪ್ರೀತಿಯ ಕತ್ತೆ.
೩. ಗಂಧರ್ವಸೇನ ತೀರಿಕೊಂಡ ವಿಷಯವನ್ನು ರಾಜ ಯಾರಿಗೆ ಹೇಳಿದ?
Answerರಾಜ ಗಂಧರ್ವಸೇನ ತೀರಿಕೊಂಡ ವಿಷಯವನ್ನು ರಾಣಿಯರಿಗೆ ಹೇಳಿದ.
೪. ರಾಣಿಯ ಸೇವಕಿ ಏನೆಂದು ಆಲೋಚನೆ ಮಾಡಿದಳು?
Answerನಮ್ಮ ಮಹಾರಾಜರಿಗೂ ಆ ಗಂಧರ್ವಸೇನರಿಗೂ ಏನು ಸಂಬಂಧ ಎಂದು ರಾಣಿಯ ಸೇವಕಿ ಆಲೋಚನೆ ಮಾಡಿದಳು.
೫. ರಾಣಿಯರು ನಗಲು ಕಾರಣವೇನು?
Answerರಾಜ ಮತ್ತು ಅವನ ಆಸ್ಥಾನಿಕರ ಮೂರ್ಖತನಕ್ಕಾಗಿ ರಾಣಿಯರು ನಕ್ಕರು.
ಈ. ಕೆಳಗಿನ ಪ್ರಶ್ನೆಗಳಿಗೆ ಐದು-ಆರು ವಾಕ್ಯಗಳಲ್ಲಿ ಉತ್ತರಿಸಿರಿ.
೧. ರಾಜನ ಒಡ್ಡೋಲಗದಲ್ಲಿ ನಡೆದ ಪ್ರಸಂಗವನ್ನು ವಿವರಿಸಿರಿ.
Answerಒಂದು ದಿನ ರಾಜ ಒಡ್ಡೋಲಗದಲ್ಲಿದ್ದಾಗ ಮಂತ್ರಿ ಗಟ್ಟಿಯಾಗಿ ಅಳುತ್ತಾ ಬಂದನು. ರಾಜ ಅವನ ರೋದನಕ್ಕೆ ಕಾರಣ ಕೇಳಿದಾಗ, ಮಂತ್ರಿ ‘ಮಹಾರಾಜರೇ ಗಂಧರ್ವಸೇನರು ತೀರಿಕೊಂಡರಂತೆ’ ಎಂದು ಹೇಳಿ ಮೂರ್ಛೆ ಹೋದನು. ರಾಜ ಒಡ್ಡೋಲಗವನ್ನು ಪರಿಸಮಾಪ್ತಿಗೊಳಿಸಿ, ಗಂಧರ್ವಸೇನರ ಆತ್ಮಶಾಂತಿಗಾಗಿ ನಾಲ್ಕು ದಿನ ಶೋಕಾಚರಣೆ ಮಾಡಬೇಕೆಂದು ಆಜ್ಞಾಪಿಸಿದನು. ಮಂತ್ರಿಯ ಆರೈಕೆಗೆ ವೈದ್ಯರನ್ನು ಕರೆಸಿ ರಾಜಭಟರಿಗೆ ಉಪಚರಿಸುವಂತೆ ತಿಳಿಸಿದನು. ಅನಂತರ ರಾಜ ಅಂತಃಪುರಕ್ಕೆ ಬಂದು ಅಲ್ಲಿಯೂ ಅಳತೊಡಗಿದನು.
೨. ಗಂಧರ್ವಸೇನ ಯಾರು ಎಂಬುದನ್ನು ತಿಳಿಯಲು ಮಂತ್ರಿಯು ಮಾಡಿದ ಪ್ರಯತ್ನಗಳೇನು?
Answerಗಂಧರ್ವಸೇನ ಯಾರೆಂದು ತಿಳಿಯಲು ಮಂತ್ರಿ ಪಡೆಯ ಮುಖ್ಯಸ್ಥನನ್ನು ಕೇಳಿದನು. ಮುಖ್ಯಸ್ಥನಿಗೆ ತಿಳಿಯದೆ, ತನ್ನ ಹೆಂಡತಿ ಅತ್ತುದನ್ನು ನೋಡಿ ತಾನು ಅತ್ತೆ ಎಂದನು. ಆಗ ಮಂತ್ರಿ ಮುಖ್ಯಸ್ಥನ ಜೊತೆ ಆತನ ಹೆಂಡತಿಯನ್ನು ವಿಚಾರಿಸಲು ಅವರ ಮನೆಗೆ ಹೋದನು. ಆಕೆ ಗಂಧರ್ವಸೇನರ ಪರಿಚಯ ತನಗಿಲ್ಲವೆಂದು ಹೇಳಿ, ಮಡಿವಾಳ್ತಿ ಅತ್ತುದನ್ನು ನೋಡಿ ತಾನು ಅತ್ತೆ ಎಂದಳು. ನಂತರ ಅವರೆಲ್ಲರೂ ಮಡಿವಾಳ್ತಿಯ ಮನೆಗೆ ಹೋಗಿ ಗಂಧರ್ವಸೇನ ಯಾರೆಂದು ಕೇಳಿದರು. ಮಡಿವಾಳ್ತಿ ಗಂಧರ್ವಸೇನ ತನ್ನ ಪ್ರೀತಿಯ ಕತ್ತೆ ಎಂದು ಹೇಳಿದಳು.
ಉ. ಸಂದರ್ಭ ಸಹಿತ ವಿವರಿಸಿರಿ.
೧. “ಮಹಾರಾಜರೇ ಗಂಧರ್ವ ಸೇನರು ತೀರಿಕೊಂಡರಂತೆ.”
Answerರಾಜ ಒಡ್ಡೋಲಗದಲ್ಲಿದ್ದಾಗ ಅಳುತ್ತಾ ಬಂದ ಮಂತ್ರಿಯು ಗಂಧರ್ವಸೇನರು ತೀರಿಕೊಂಡರೆಂಬ ಸುದ್ದಿಯನ್ನು ಈ ಮಾತಿನಲ್ಲಿ ರಾಜನಿಗೆ ತಿಳಿಸಿ ಮೂರ್ಛೆ ಹೋದನು.
೨. “ಸ್ವಾಮಿ, ಅವರು ಯಾರು? ಏನಾಗಿದ್ದರು? ಎಂದು ನನಗೆ ತಿಳಿಯದು.”
Answerಗಂಧರ್ವಸೇನ ಯಾರೆಂದು ಪತ್ತೆ ಮಾಡಲು ಮಂತ್ರಿ ಪಡೆಯ ಮುಖ್ಯಸ್ಥನನ್ನು ಕೇಳಿದಾಗ, ಆತ ತನಗೆ ಏನೂ ತಿಳಿಯದೆಂದು ಈ ರೀತಿ ಉತ್ತರಿಸಿದನು.
೩. “ನಿನ್ನೆ ರಾತ್ರಿ ಕಣ್ಣು ಮುಚ್ಕೊಂಡ್ಬಿಟ್ಟ.”
Answerಯಾರೆಂದು ವಿಚಾರಿಸಲು ಹೋದಾಗ ಮಡಿವಾಳ್ತಿ ತನ್ನ ಪ್ರೀತಿಯ ಕತ್ತೆ ಗಂಧರ್ವಸೇನ ನಿನ್ನೆ ರಾತ್ರಿ ಸತ್ತುಹೋಯಿತೆಂದು ದುಃಖದಿಂದ ಈ ಮಾತನ್ನು ಹೇಳಿದಳು.
೪. “ಒಂದು ಕುರಿ ಹಳ್ಳಕ್ಕೆ ಬಿದ್ದರೆ ಎಲ್ಲಾ ಬಿದ್ದವು.”
Answerಗಂಧರ್ವಸೇನ ಒಂದು ಕತ್ತೆ ಎಂಬ ಸತ್ಯ ತಿಳಿದಾಗ, ಯೋಚಿಸದೆ ಎಲ್ಲರೂ ಒಬ್ಬರನ್ನು ನೋಡಿ ಇನ್ನೊಬ್ಬರು ಅತ್ತಿದ್ದ ಮೂರ್ಖತನವನ್ನು ಈ ಗಾದೆಯಿಂದ ವಿವರಿಸಲಾಗಿದೆ.
ಊ. ಕೆಳಗಿನವುಗಳನ್ನು ನುಡಿಗಟ್ಟು, ಗಾದೆ, ಒಗಟುಗಳಾಗಿ ವಿಂಗಡಿಸಿ ಬರೆಯಿರಿ.
೧. ಮೂಗು ತೂರಿಸು, ೨. ಕೇಳಿದ ಕಿವಿ ಊರಿಗೆ ಮಾರಿ ತಂದಿತು, ೩. ಕಾಲಿಗೆ ಬುದ್ಧಿಹೇಳು,
Answer೧. ಮೂಗು ತೂರಿಸು - ನುಡಿಗಟ್ಟು ೨. ಕೇಳಿದ ಕಿವಿ ಊರಿಗೆ ಮಾರಿ ತಂದಿತು - ಗಾದೆ ೩. ಕಾಲಿಗೆ ಬುದ್ಧಿಹೇಳು - ನುಡಿಗಟ್ಟು
೪. ದಾಸ್ ಬುರುಡೆ ದೌಲತ್ ಬುರುಡೆ ಲೋಕಕ್ಕೆಲ್ಲ ಎರಡೇ ಬುರುಡೆ, ೫. ಬೆನ್ನಿಗೆ ಚೂರಿ ಹಾಕು,
Answer೪. ದಾಸ್ ಬುರುಡೆ ದೌಲತ್ ಬುರುಡೆ ಲೋಕಕ್ಕೆಲ್ಲ ಎರಡೇ ಬುರುಡೆ - ಒಗಟು ೫. ಬೆನ್ನಿಗೆ ಚೂರಿ ಹಾಕು - ನುಡಿಗಟ್ಟು
೬. ಒಂದು ಕುರಿ ಹಳ್ಳಕ್ಕೆ ಬಿದ್ದರೆ ಎಲ್ಲಾ ಬಿದ್ದವು, ೭. ಚಿನ್ನದ ಪೆಟ್ಟಿಗೆಯಲ್ಲಿ ಬೆಳ್ಳಿ ಲಿಂಗ,
Answer೬. ಒಂದು ಕುರಿ ಹಳ್ಳಕ್ಕೆ ಬಿದ್ದರೆ ಎಲ್ಲಾ ಬಿದ್ದವು - ಗಾದೆ ೭. ಚಿನ್ನದ ಪೆಟ್ಟಿಗೆಯಲ್ಲಿ ಬೆಳ್ಳಿ ಲಿಂಗ - ಒಗಟು
೮. ತಲೆ ಹಾಕು, ೯. ಮುಚ್ಚಿಟ್ಟದ್ದು ಮಣ್ಣಿನ ಪಾಲು, ೧೦. ಕರುಳು ಹಿಂಡು, ೧೧. ಮಂಕು
Answer೮. ತಲೆ ಹಾಕು - ನುಡಿಗಟ್ಟು ೯. ಮುಚ್ಚಿಟ್ಟದ್ದು ಮಣ್ಣಿನ ಪಾಲು - ಗಾದೆ ೧೦. ಕರುಳು ಹಿಂಡು - ನುಡಿಗಟ್ಟು ೧೧. ಮಂಕು ಬೂದಿ - ನುಡಿಗಟ್ಟು
ಬೂದಿ, ೧೨. ಚಿಕ್ಕ ತೋಟ ಚೂರು ಕಸ ಬಿದ್ದರೆ ಹಾಳು.
Answerಬೂದಿ - ನುಡಿಗಟ್ಟು ೧೨. ಚಿಕ್ಕ ತೋಟ ಚೂರು ಕಸ ಬಿದ್ದರೆ ಹಾಳು - ಗಾದೆ