CRECT Education

Class 6 Kannada Lesson 15: The Wrestling Pole | KTBS Kannada Second Language – Learn the Story

Description

Three friends discover mallakamb, India's ancient wrestling-pole sport, and hear the legendary tale of Balambhatta who learned by watching a monkey.

ಗದ್ಯ (prose) · ಸಂಪಾದಿತ

ಪಠ್ಯFull text

**ಪಾಠ ಪ್ರವೇಶ :** ಆಟವೆಂದರೆ ಮಕ್ಕಳಿಂದ ಮುದುಕರವರೆಗೂ ಬಹಳ ಇಷ್ಟ. ನಮ್ಮ ದೇಶದಲ್ಲಿ ಅನೇಕ ಆಟಗಳಿವೆ. ಕೆಲವು ಆಟಗಳು ಬಹಳ ಪ್ರಸಿದ್ಧಿ ಪಡೆದು ಜಗತ್ತಿನ ಎಲ್ಲ ಕಡೆಗೂ ಹಬ್ಬಿವೆ. ಕೆಲವು ದೈಹಿಕ ಕಸರತ್ತಿನ ಆಟಗಳು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಜನಪ್ರಿಯವಾಗಿವೆ. ಅವುಗಳಲ್ಲಿ ಕುಸ್ತಿ ಪಂದ್ಯವೂ ಒಂದು. ಕುಸ್ತಿಗೆ ಪೂರಕವಾದ ಪಂದ್ಯವೇ ಮಲ್ಲ ಕಂಬ ಅಥವಾ ಮಲ್ಲಗಂಬ. ಕುಸ್ತಿ ಆಡುವವನು ತಾನು ಹಾಕುವ ಪಟ್ಟುಗಳನ್ನು ಮಲ್ಲಗಂಬಕ್ಕೆ ಹಾಕಿ ಕಲಿಯುತ್ತಾನೆ. ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಮಲ್ಲ ಕಂಬ ಬಹಳ ಪ್ರಸಿದ್ಧವಾಗಿದೆ. ಬೆಳಗಾವಿ, ಬಳ್ಳಾರಿ, ಕೊಪ್ಪಳ, ಬಿಜಾಪುರ, ಮೈಸೂರು ಜಿಲ್ಲೆಗಳ ಗರಡಿಮನೆಗಳಲ್ಲಿ ಮಲ್ಲಗಂಬದ ಆಟಗಳು ಏರ್ಪಟ್ಟಿರುತ್ತವೆ. ಇಲ್ಲಿ ಮಲ್ಲಗಂಬದ ವಿಶೇಷತೆಗಳನ್ನು ಪರಿಚಯಿಸಲಾಗಿದೆ. (ರಾಜ್ಯೋತ್ಸವ ಸಂದರ್ಭದ ಮೆರವಣಿಗೆಯಲ್ಲಿ ಮಲ್ಲ ಕಂಬದ ಮೇಲೆ ಕಸರತ್ತು ನಡೆಯುತ್ತಾ ಇದೆ. ಸಾವಿರಾರು ಜನ ನೋಡುತ್ತಿದ್ದಾರೆ. ಒಂದು ಎತ್ತಿನಗಾಡಿ. ಅದರ ಮೇಲೆ ಮಣೆಮೇಲಿಟ್ಟ ಮಲ್ಲ ಕಂಬ. ಅದರ ಮೇಲೆ ಜಟ್ಟಿಯಾಳುಗಳು. ಹುಡುಗರು ವಿವಿಧ ಕಸರತ್ತು, ಸಾಹಸ ಮೆರೆಸುತ್ತಿದ್ದಾರೆ. ಸಾವಿರಾರು ಜನ ಅಚ್ಚರಿಯಿಂದ ನೋಡುತ್ತಿದ್ದಾರೆ.) ಇಬ್ರಾಹಿಂ : ದೇಖೋ ಭೈಯ್ಯಾ ಅವಾ ಹ್ಯಾಂಗ ಹತ್ಯಾನ ನೋಡು. ಅಬ್ಬಬ್ಬ! ಕಂಬದ ತುದಿ ಮುಟ್ಟತಾನಂದ್ರ ಪಸಕ್ಕನೆ ಜಾರಿಬಿಟ್ಟ, ಬಿದ್ದ.. ಬಿದ್ದ.. ನೋಡು. ಪೀಟರ್ : ಏ.. ಇಬ್ರಾಹಿಂ ಆ ತೇಗಿನ ಕಂಬ ಏಕದಂ ಸಾಪ ಐತಿ. ಅದರ ಮ್ಯಾಲ ಔಡಲೆಣ್ಣಿ ತೆಳ್ಳಗ ಸವರ‍್ಯಾರ. ಕೈಯಿಟ್ರ ಜಾರತ್ಯೈತಿ. ಅದಕ ಹಂಗ ಜಾರತಾರ. ಹತ್ತಾರ... ಬೀಳ್ತಾರ. ಅಲ್ಲೋಡು, ಮತ್ತೆ ಹತ್ತಿದ, ಭಾರಿ ಆಟಪಾ ಇದು. ಅಲಲಾ ಏನ ಕಸರತ್ತಿದು. ಈ ಆಟಕ್ಕ ಏನಂತಾರ ಶಂಕರ. ಶಂಕರ : ಇದಕ್ಕ ಮಲ್ಲ ಕಂಬದ ಆಟ ಅಂತಾರ. ಇದು ಒಂದು ಕಸರತ್ತು. ಕುಸ್ತಿ ಆಡೋರು ಇದರ ಮ್ಯಾಲೆ ತಯಾರಿ ಮಾಡ್ತಾರ. ಇಬ್ರಾಹಿಂ : ಹಂಗಂದರೇನು? ಈ ಮಲ್ಲ ಕಂಬದ ಮೇಲಿನ ಕಸರತ್ತು ಎದಕ ಉಪಯೋಗ? ಶಂಕರ : ಕುಸ್ತಿ ಆಡೋರ್ಗೆ, ಕುಸ್ತಿ ಆಡುವಾಗ ಬೇಕಾದ ಪಟ್ಟುಗಳನ್ನು ಇಂತಹ ಕಂಬದ ಮ್ಯಾಲ ಅಭ್ಯಾಸ ಮಾಡ್ತಾರ. ಎದುರಾಳಿನ ಸೋಲಸಾಕ ತಂತ್ರ ಇಲ್ಲೇ ಕಲಿತಾರ. ಕುಸ್ತಿ ಆಡೋದು ನೀನು.... ನೋಡಿರಬೇಕಲ್ಲ? ಪೀಟರ್. ಮೈಸೂರು ದಸರಾದಾಗ, ಬೆಳಗಾವ್ಯಾಗ, ಕೊಪ್ಪಳದಾಗ, ಹೊಸಪೇಟ್ಯಾಗ, ಧಾರವಾಡದಾಗ, ಗದಗಿನ್ಯಾಗ ಭಾಳ ಆಡ್ತಾರ. ಪೀಟರ್ : ಇದು ಭಾಳ ಹಿಂದಿನ ಆಟ ಕಾಣ್ತದ. ಗೊತ್ತಿದ್ರ ಹೇಳಲ್ಲ. ಶಂಕರ : ಹಿಂದಕ ಭೀಮ, ಜರಾಸಂಧ, ಹನುಮಂತ, ವಾಲಿ, ಸುಗ್ರೀವರು ಆಡ್ತಿದ್ರಂತ. ಇದು ಪುರಾಣ ಕಾಲದಿಂದ ನಡೆದು ಬಂದೈತಿ. ಇಬ್ರಾಹಿಂ : ಇತಿಹಾಸ ಕಾಲದ್ದು ಹೇಳಲ್ಲ? ಶಂಕರ : ಹೈದರಾಬಾದ್ ನಿಜಾಮನ ಆಸ್ಥಾನದಾಗ ಅಲಿ ಮತ್ತು ಗುಲ್ ಎಂಬ ಕುಸ್ತಿಪಟುಗಳು ಇದ್ರಂತ. ಅವರು ಪುಣೆಯ ಬಾಳಾಜಿ ಪೇಶ್ವೆ ದರ್ಬಾರಿಗೆ ಬಂದರಂತ. “ನಿಮ್ಮ ರಾಜ್ಯದ ಮಲ್ಲರು ನಮ್ಮನ್ನ ಕುಸ್ತಿಯಲ್ಲಿ ಸೋಲಿಸಬೇಕು. ಇಲ್ಲದೇ ಹೋದರೆ ನಮ್ಮನ್ನು ಕುಸ್ತಿಯಲ್ಲಿ ಸೋಲಿಸುವಂತಹ ಮಲ್ಲರು ಇಲ್ಲವೆಂದು ಪ್ರಶಸ್ತಿ ಪತ್ರ ನೀಡಬೇಕು” ಎಂದು ಸವಾಲು ಹಾಕಿದರಂತೆ. ಪೀಟರ್ : ಭಾಳ ಭಂದೈತಿ. ಮುಂದೇನಾತು? ಶಂಕರ : ಕೇಳ್ರಿ, ಆಗ ಅಲ್ಲಿದ್ದ ಹದಿನೆಂಟು ವರುಷದ ಹುಡುಗ ಬಾಳಂಭಟ್ಟ ಎದ್ದು ನಿಂತು, ಅವರ ಸವಾಲು ಒಪ್ಪಿಕೊಂಡನಂತ. ಕುಸ್ತಿ ತಯಾರಿಗಾಗಿ ಒಂದು ತಿಂಗಳು ಅವಧಿ ಪಡದ್ದಂತ. ಪೀಟರ್ : ಹಂಗಾ.. ಶಂಕರ : ಆ ಹುಡುಗ ನಾಸಿಕ ಜಿಲ್ಲೆಯ ದಟ್ಟ ಅರಣ್ಯದಲ್ಲಿದ್ದ ಸಪ್ತಗಿರಿ ದೇವಿಯ ಗುಡಿಗೆ ಹೋದ. ಗುಡಿಯ ಮುಂದಿನ ದೀಪದ ಕಂಬದ ಮೇಲೆ ಕೋತಿ ಕಸರತ್ತು ಮಾಡುತ್ತಿತ್ತು ಅದನ್ನು ನೋಡಿದ. ಅದೇರೀತಿ ಶಕ್ತಿ ನೀಡು ಎಂದು ದೇವಿಗೆ ಪ್ರಾರ್ಥಿಸಿದ. ದಿನವೂ ಮಂಗನಂತೆ ಆ ದೀಪದ ಕಂಬದ ಮೇಲೆ ಕಸರತ್ತು ಮಾಡುತ್ತಿದ್ದನು. ಕುಸ್ತಿ ಪಟ್ಟುಗಳನ್ನು ಕಲಿಯುತ್ತಿದ್ದನು. ಅದರ ಜೊತೆಗೆ ಯೋಗವನ್ನೂ ಮಾಡಿದ. ಈ ಅಭ್ಯಾಸವು ಫಲ ನೀಡಿತು. ದೇವರ ಆಶೀರ್ವಾದ ಪಡೆದು ಆಸ್ಥಾನಕ್ಕೆ ಹೋದನು. ನಿಜಾಮ ರಾಜ್ಯದ ಜಟ್ಟಿಗಳನ್ನು ಸೋಲಿಸಿದ. ಇಬ್ರಾಹಿಂ : ಈ ಕಥಿ ಭಯಂಕರ ಭಂದೈತಿ ಬಿಡು. ಪೀಟರ್ : ಈ ಮಲ್ಲ ಕಂಬ ವ್ಯಾಯಾಮವನ್ನು ನಮ್ಮ ಶಾಲೆಯಲ್ಲಿ ಯಾಕ ಕಲಿಸಬಾರದು? ಇಬ್ರಾಹಿಂ : ಹೆಡ್ಮಾಸ್ತರರಿಗೆ ಹೇಳೋಣ. ನಾವು ಕಲಿಯೋಣ ಬಾ. * * * * *

ಅಭ್ಯಾಸexercises from the textbook

Model answers — a guide, not the only correct wording. Check with your teacher.

I. ಪದಗಳ ಅರ್ಥ :

  1. | | |

  2. |---|---|

  3. | ಅಚ್ಚರಿ – ಆಶ್ಚರ್ಯ; ಬೆರಗು. | ಅಬ್ಬಬ್ಬ – ಅಚ್ಚರಿ ಪದ |

  4. | ಆಸ್ಥಾನ – ರಾಜಸಭೆ; ದರ್ಬಾರು. | ಔಡಲೆಣ್ಣೆ – ಹರಳೆಣ್ಣೆ |

  5. | ಭಂದೈತಿ – ಬಹಳಷ್ಟು ಚಂದವಿದೆ | ಜಟ್ಟಿ – ಕುಸ್ತಿಪಟು |

  6. | ಪ್ರಾರ್ಥಿಸು – ಬೇಡು | ಪಟ್ಟು – ಕುಸ್ತಿಯಲ್ಲಿ ಉಪಯೋಗಿಸುವ ತಂತ್ರ. |

  7. | ದೇಖೋ – ನೋಡು | ಭೈಯ್ಯಾ – ಅಣ್ಣ |

  8. | ಹಂಗಾ – ಹಾಗಾಯ್ತೇನು? | ಹೆಡ್ಮಾಸ್ತರ – ಮುಖ್ಯೋಪಾಧ್ಯಾಯ |

  9. | ಕಸರತ್ತು – ವ್ಯಾಯಾಮ; ಶಕ್ತಿ, ಚಮತ್ಕಾರಗಳ ಪ್ರದರ್ಶನ. | |

ಟಿಪ್ಪಣಿಗಳು :

  1. ಮಲ್ಲ ಕಂಬ - ಕೆಲವು ಕಡೆ ಇದನ್ನು ಮಲ್ಲಗಂಬ ಎಂದು ಹೇಳುತ್ತಾರೆ. ಈ ಕಂಬವನ್ನು ತೇಗದ ಕಟ್ಟಿಗೆಯಿಂದ ಮಾಡುತ್ತಾರೆ. ಇದರ ಎತ್ತರ ಅಜಮಾಸು ೩ ೧/೨ ಮೀಟರ್ ಅಥವಾ ೧೦-೧೧ ಮೊಳ. ತಳಭಾಗದಲ್ಲಿ ಕಂಬದ ಸುತ್ತಳತೆ ಅಂದಾಜು ೫೦ ರಿಂದ ೬೦ ಸೆಂಟಿಮೀಟರ್, ಕಂಬ ಮೇಲೆ ಬಂದಂತೆಲ್ಲಾ ಸಣ್ಣಗಾಗುತ್ತದೆ. ಇದರ ಮೇಲ್ಮೈ ಬಹಳ ನುಣುಪು ಇರುತ್ತದೆ. ಮೇಲೆ ಔಡಲೆಣ್ಣೆ ಸವರಿರುತ್ತಾರೆ. ಮಲ್ಲಗಂಬದಲ್ಲಿ 'ಸ್ಥಿರ ಮಲ್ಲ ಕಂಬ', 'ಮಣೆಯ ಮೇಲಿನ ಮಲ್ಲ ಕಂಬ', 'ಹಗ್ಗದ ಮಲ್ಲ ಕಂಬ' ಹೀಗೆ ಹಲವಾರು ವಿಧಗಳು ಇರುತ್ತವೆ. ಮಲ್ಲಗಂಬ ಮಾನವ ಜನಾಂಗಕ್ಕೆ ಹನುಮಂತನ ಕೊಡುಗೆ ಎನ್ನುತ್ತಾರೆ.

  2. ಭೀಮ - ಮಹಾಭಾರತದಲ್ಲಿ ಬರುವ ಪಾಂಡುರಾಜನ ಮಗ, ಧರ್ಮರಾಜನ ತಮ್ಮ.

  3. ಜರಾಸಂಧ - ಮಗಧ ರಾಜ್ಯದ ರಾಜ, ಮಹಾಭಾರತ ಕಾಲದಲ್ಲಿದ್ದ ಶಕ್ತಿಮಾನ ವ್ಯಕ್ತಿ.

  4. ಹನುಮಂತ - ಶಕ್ತಿಪುರುಷ, ರಾಮನ ಭಕ್ತ, ವಾಯುಪುತ್ರ.

  5. ವಾಲಿ ಸುಗ್ರೀವ - ರಾಮಾಯಣ ಕಾಲದಲ್ಲಿ ಕಿಷ್ಕಿಂಧೆ ರಾಜ್ಯದಲ್ಲಿದ್ದ ಅಣ್ಣತಮ್ಮಂದಿರು, ಇವರು ಬಹಳ ಶೂರರು.

II. ಪ್ರಶ್ನೆಗಳು :

ಅ) ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

  1. ೧. ರಾಜ್ಯೋತ್ಸವದ ಮೆರವಣಿಗೆಯಲ್ಲಿ ಇಬ್ರಾಹಿಂ ಕಂಡ ಕಸರತ್ತು ಯಾವುದು?

    Answer

    ರಾಜ್ಯೋತ್ಸವದ ಮೆರವಣಿಗೆಯಲ್ಲಿ ಇಬ್ರಾಹಿಂ ಮಲ್ಲ ಕಂಬದ ಕಸರತ್ತನ್ನು ಕಂಡನು.

  2. ೨. ಮಲ್ಲ ಕಂಬದ ಮೇಲೆ ಹತ್ತಿದವರು ಏಕೆ ಜಾರುತ್ತಿದ್ದರು?

    Answer

    ಮಲ್ಲ ಕಂಬದ ಮೇಲೆ ಔಡಲೆಣ್ಣೆಯನ್ನು ತೆಳ್ಳಗೆ ಸವರಿದ್ದರಿಂದ ಹತ್ತಿದವರು ಜಾರುತ್ತಿದ್ದರು.

  3. ೩. ಮಲ್ಲ ಕಂಬವನ್ನು ಕುಸ್ತಿ ಆಡುವವರು ಏಕೆ ಅಭ್ಯಾಸ ಮಾಡುತ್ತಾರೆ?

    Answer

    ಕುಸ್ತಿ ಆಡುವವರು ಕುಸ್ತಿಯ ಪಟ್ಟುಗಳನ್ನು ಕಲಿಯಲು ಮಲ್ಲ ಕಂಬದ ಮೇಲೆ ಅಭ್ಯಾಸ ಮಾಡುತ್ತಾರೆ.

  4. ೪. ಪುರಾಣ ಕಾಲದಲ್ಲಿ ಮಲ್ಲ ಕಂಬವನ್ನು ಯಾರು ಅಭ್ಯಾಸ ಮಾಡಿದ್ದರು?

    Answer

    ಪುರಾಣ ಕಾಲದಲ್ಲಿ ಭೀಮ, ಜರಾಸಂಧ, ಹನುಮಂತ, ವಾಲಿ ಮತ್ತು ಸುಗ್ರೀವರು ಮಲ್ಲ ಕಂಬವನ್ನು ಅಭ್ಯಾಸ ಮಾಡಿದ್ದರು.

  5. ೫. ಹೈದರಾಬಾದ್ ನಿಜಾಮನ ಆಸ್ಥಾನದಲ್ಲಿದ್ದ ಕುಸ್ತಿಪಟುಗಳು ಯಾರು ಯಾರು?

    Answer

    ಹೈದರಾಬಾದ್ ನಿಜಾಮನ ಆಸ್ಥಾನದಲ್ಲಿದ್ದ ಕುಸ್ತಿಪಟುಗಳು ಅಲಿ ಮತ್ತು ಗುಲ್.

  6. ೬. ಅಲಿ ಮತ್ತು ಗುಲ್ ಕುಸ್ತಿಪಟುಗಳು ಹಾಕಿದ ಸವಾಲನ್ನು ಯಾರು ಒಪ್ಪಿಕೊಂಡರು?

    Answer

    ಅಲಿ ಮತ್ತು ಗುಲ್ ಕುಸ್ತಿಪಟುಗಳು ಹಾಕಿದ ಸವಾಲನ್ನು ಬಾಳಂಭಟ್ಟನು ಒಪ್ಪಿಕೊಂಡನು.

  7. ೭. ಬಾಳಂಭಟ್ಟನು ಕುಸ್ತಿಪಟ್ಟುಗಳನ್ನು ಕಲಿಯಲು ಎಲ್ಲಿಗೆ ಹೋದನು?

    Answer

    ಬಾಳಂಭಟ್ಟನು ಕುಸ್ತಿಪಟ್ಟುಗಳನ್ನು ಕಲಿಯಲು ನಾಸಿಕ ಜಿಲ್ಲೆಯ ದಟ್ಟ ಅರಣ್ಯದಲ್ಲಿರುವ ಸಪ್ತಗಿರಿ ದೇವಿಯ ಗುಡಿಗೆ ಹೋದನು.

ಆ) ಈ ಕೆಳಗಿನ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.

  1. ೧. ಇಬ್ರಾಹಿಂ ಮಲ್ಲ ಕಂಬದ ಕಸರತ್ತನ್ನು ನೋಡಿ ಯಾವ ರೀತಿ ಆಶ್ಚರ್ಯ ವ್ಯಕ್ತಪಡಿಸಿದನು?

    Answer

    ಇಬ್ರಾಹಿಂ ಮಲ್ಲ ಕಂಬದ ಕಸರತ್ತನ್ನು ನೋಡಿ ‘ಅಬ್ಬಬ್ಬ! ಕಂಬದ ತುದಿ ಮುಟ್ಟತಾನಂದ್ರ ಪಸಕ್ಕನೆ ಜಾರಿಬಿಟ್ಟ, ಬಿದ್ದ.. ಬಿದ್ದ..’ ಎಂದು ಆಶ್ಚರ್ಯದಿಂದ ಕೂಗಿದನು. ಅವನು ತನ್ನ ಗೆಳೆಯರಿಗೆ ‘ದೇಖೋ ಭೈಯ್ಯಾ ಅವಾ ಹ್ಯಾಂಗ ಹತ್ಯಾನ ನೋಡು’ ಎಂದು ಕುತೂಹಲದಿಂದ ತೋರಿಸಿದನು.

  2. ೨. ಅಲಿ ಮತ್ತು ಗುಲ್ ಕುಸ್ತಿ ಪಟುಗಳು ಪೇಶ್ವೆಗೆ ಏನೆಂದು ಸವಾಲು ಹಾಕಿದರು?

    Answer

    ಅಲಿ ಮತ್ತು ಗುಲ್ ಕುಸ್ತಿಪಟುಗಳು ಪೇಶ್ವೆಗೆ ‘ನಿಮ್ಮ ರಾಜ್ಯದ ಮಲ್ಲರು ನಮ್ಮನ್ನ ಕುಸ್ತಿಯಲ್ಲಿ ಸೋಲಿಸಬೇಕು. ಇಲ್ಲದೇ ಹೋದರೆ ನಮ್ಮನ್ನು ಕುಸ್ತಿಯಲ್ಲಿ ಸೋಲಿಸುವಂತಹ ಮಲ್ಲರು ಇಲ್ಲವೆಂದು ಪ್ರಶಸ್ತಿ ಪತ್ರ ನೀಡಬೇಕು’ ಎಂದು ಸವಾಲು ಹಾಕಿದರು.

  3. ೩. ಬಾಳಂಭಟ್ಟನು ಕುಸ್ತಿ ಪಟ್ಟುಗಳನ್ನು ಹೇಗೆ ಕಲಿತನು?

    Answer

    ಬಾಳಂಭಟ್ಟನು ಸಪ್ತಗಿರಿ ದೇವಿಯ ಗುಡಿಗೆ ಹೋಗಿ ದೀಪದ ಕಂಬದ ಮೇಲೆ ಕಸರತ್ತು ಮಾಡುತ್ತಿದ್ದ ಕೋತಿಯನ್ನು ನೋಡಿದನು. ಅದೇ ರೀತಿ ಶಕ್ತಿ ನೀಡೆಂದು ದೇವಿಯನ್ನು ಪ್ರಾರ್ಥಿಸಿ, ಪ್ರತಿದಿನ ಮಂಗನಂತೆ ಕಂಬದ ಮೇಲೆ ಕಸರತ್ತು ಮಾಡುತ್ತಾ ಕುಸ್ತಿ ಪಟ್ಟುಗಳನ್ನು ಕಲಿತನು. ಅದರ ಜೊತೆಗೆ ಯೋಗವನ್ನೂ ಮಾಡಿದನು.

ಇ) ಈ ಕೆಳಗಿನ ಮಾತುಗಳನ್ನು ಯಾರು ಯಾರಿಗೆ ಹೇಳಿದರು? ಬರೆಯಿರಿ.

  1. ೧. 'ಕಂಬದ ತುದಿ ಮುಟ್ಟತಾನಂದ್ರ ಪಸಕ್ಕನೆ ಜಾರಿಬಿಟ್ಟ.'

    Answer

    ಇಬ್ರಾಹಿಂ, ಪೀಟರ್ ಮತ್ತು ಶಂಕರನಿಗೆ ಹೇಳಿದನು.

  2. ೨. 'ಔಡಲೆಣ್ಣಿ ತೆಳ್ಳಗ ಸವರ‍್ಯಾರ ಕೈಯಿಟ್ರ ಜಾರತ್ಯೈತಿ.'

    Answer

    ಪೀಟರ್, ಇಬ್ರಾಹಿಂ ಮತ್ತು ಶಂಕರನಿಗೆ ಹೇಳಿದನು.

  3. ೩. 'ನಿಮ್ಮ ರಾಜ್ಯದ ಮಲ್ಲರು ನಮ್ಮನ್ನು ಕುಸ್ತಿಯಲ್ಲಿ ಸೋಲಿಸಬೇಕು.'

    Answer

    ಅಲಿ ಮತ್ತು ಗುಲ್, ಪೇಶ್ವೆಗೆ ಹೇಳಿದರು.

ಈ) ಬಿಟ್ಟ ಸ್ಥಳಗಳನ್ನು ನೀಡಿರುವ ನಾಲ್ಕು ಆಯ್ಕೆಯ ಉತ್ತರಗಳಿಂದ ಸರಿಯಾದುದನ್ನು ಆರಿಸಿ ಬರೆಯಿರಿ.

  1. ೧. ಮಲ್ಲ ಕಂಬಕ್ಕೆ ....................................... ಎಣ್ಣೆ ಸವರಿರುತ್ತಾರೆ.

    Answer

    ಮಲ್ಲ ಕಂಬಕ್ಕೆ ಔಡಲ ಎಣ್ಣೆ ಸವರಿರುತ್ತಾರೆ.

  2. ಅ) ಎಳ್ಳಿನ ಆ) ಔಡಲ ಇ) ಶೇಂಗಾ ಈ) ಬೇವಿನ

  3. ೨. ಮಲ್ಲ ಕಂಬವನ್ನು ....................................... ಪಟ್ಟುಗಳನ್ನು ಕಲಿಯಲು ಅಭ್ಯಾಸ ಮಾಡುತ್ತಾರೆ.

    Answer

    ಮಲ್ಲ ಕಂಬವನ್ನು ಕುಸ್ತಿ ಪಟ್ಟುಗಳನ್ನು ಕಲಿಯಲು ಅಭ್ಯಾಸ ಮಾಡುತ್ತಾರೆ.

  4. ಅ) ಕುಸ್ತಿ ಆ) ಕರಾಟೆ ಇ) ಜೂಡೋ ಈ) ಕಬಡ್ಡಿ

  5. ೩. ಬಾಳಾಜಿ ಪೇಶ್ವೆಯ ಸ್ಥಳ .......................................

    Answer

    ಬಾಳಾಜಿ ಪೇಶ್ವೆಯ ಸ್ಥಳ ಪುಣೆ.

  6. ಅ) ಹೈದರಾಬಾದ್ ಆ) ಪುಣೆ ಇ) ಮೈಸೂರು ಈ) ಕೊಪ್ಪಳ

  7. ೪. ಬಾಳಂಭಟ್ಟ ಕುಸ್ತಿ ಪಟ್ಟುಗಳನ್ನು ....................................... ನೋಡಿ ಕಲಿತುಕೊಂಡನು.

    Answer

    ಬಾಳಂಭಟ್ಟ ಕುಸ್ತಿ ಪಟ್ಟುಗಳನ್ನು ಕೋತಿ ನೋಡಿ ಕಲಿತುಕೊಂಡನು.

  8. ಅ) ಅಳಿಲು ಆ) ಜೇಡ ಇ) ಕೋತಿ ಈ) ಹಕ್ಕಿ

III. ಭಾಷಾಭ್ಯಾಸ :

ಅ) ಈ ಕೆಳಗಿನ ಪದಗಳನ್ನು ನಿಮ್ಮ ಸ್ವಂತ ವಾಕ್ಯದಲ್ಲಿ ಬಳಸಿರಿ.

  1. ೧. ಮೆರವಣಿಗೆ : ........................................................................................

    Model sentence

    ಗಣೇಶ ಉತ್ಸವದ ಮೆರವಣಿಗೆ ತುಂಬಾ ಸುಂದರವಾಗಿತ್ತು.

  2. ೨. ಆಸ್ಥಾನ : ........................................................................................

    Model sentence

    ನಮ್ಮ ಶಾಲೆಯ ಆಸ್ಥಾನದಲ್ಲಿ ಪ್ರಾರ್ಥನೆ ನಡೆಯುತ್ತದೆ.

  3. ೩. ಫಲನೀಡು : ........................................................................................

    Model sentence

    ನನ್ನ ಕಷ್ಟಪಟ್ಟು ಓದಿದ ಅಭ್ಯಾಸ ಫಲ ನೀಡಿತು.

  4. ೪. ಪ್ರಶಸ್ತಿಪತ್ರ : ........................................................................................

    Model sentence

    ನನಗೆ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಶಸ್ತಿಪತ್ರ ಸಿಕ್ಕಿತು.

  5. ೫. ಕಸರತ್ತು : ........................................................................................

    Model sentence

    ನಾನು ಪ್ರತಿದಿನ ಬೆಳಿಗ್ಗೆ ಕಸರತ್ತು ಮಾಡುತ್ತೇನೆ.

  6. ೬. ಸವಾಲು : ........................................................................................

    Model sentence

    ನನ್ನ ಗೆಳೆಯ ನನಗೆ ಓಡುವ ಸವಾಲು ಹಾಕಿದ.

ಆ) ಪ್ರಸ್ತುತ ಪಾಠದಲ್ಲಿ ಉತ್ತರ ಕರ್ನಾಟಕದ ಆಡುಮಾತುಗಳಿವೆ. ಅವುಗಳನ್ನು ಗ್ರಾಂಥಿಕ ರೂಪದಲ್ಲಿ ಬರೆದಿದೆ ಗಮನಿಸಿರಿ.

  1. ೧. ಹ್ಯಾಂಗ - ಹೇಗೆ

  2. ೨. ಮ್ಯಾಲ - ಮೇಲೆ

  3. ೩. ಜಾರತ್ಯೈತಿ - ಜಾರುತ್ತದೆ

  4. ೪. ಅಲ್ಲೋಡು - ಅಲ್ಲಿ ನೋಡು

  5. ೫. ಕಲಿತಾರ - ಕಲಿಯುತ್ತಾರೆ

  6. ೬. ಇದ್ರಂತ - ಇದ್ದರಂತೆ

  7. ಇದೇ ರೀತಿಯಲ್ಲಿ ಇನ್ನು ಹಲವು ಆಡು ಮಾತಿನ ಪದಗಳು ಈ ಪಾಠದಲ್ಲಿವೆ. ನೀವು ಅವುಗಳನ್ನು ಪಟ್ಟಿಮಾಡಿ, ಅವುಗಳಿಗೆ ಗ್ರಾಂಥಿಕ ರೂಪ ಬರೆಯಿರಿ.

    Answer

    ಹತ್ಯಾನ - ಹತ್ತಿದ್ದಾನೆ ಅವಾ - ಅವನು ಭೈಯ್ಯಾ - ಗೆಳೆಯ ಪಸಕ್ಕನೆ - ಪಟಕ್ಕನೆ ಜಾರಿಬಿಟ್ಟ - ಜಾರಿ ಬಿಟ್ಟನು ಬಿದ್ದ - ಬಿದ್ದನು ಏಕದಂ - ಏಕೆ ಸಾಪ - ಸಾಫ ಔಡಲೆಣ್ಣಿ - ಔಡಲ ಎಣ್ಣೆ ತೆಳ್ಳಗ - ತೆಳುವಾಗಿ ಸವರ್ಯಾರ - ಸವರಿದ್ದಾರೆ ಕೈಯಿಟ್ರ - ಕೈ ಇಟ್ಟರೆ ಹತ್ತಾರ - ಹತ್ತುತ್ತಾರೆ ಬೀಳ್ತಾರ - ಬೀಳುತ್ತಾರೆ ಭಾರಿ - ದೊಡ್ಡ ಅಲಲಾ - ಅಲ್ಲಿ ಏನ - ಏನು ಕಸರತ್ತಿದು - ಕಸರತ್ತು ಇದು ಅಂತಾರ - ಅನ್ನುತ್ತಾರೆ ಕೇಳ್ರಿ - ಕೇಳಿರಿ ಭಂದೈತಿ - ಬಂದಿದೆ

ಇ) ಕೆಳಗೆ ನೀಡಿರುವ ಪದಗಳನ್ನು ಬಿಡಿಸಿ ಬರೆಯಿರಿ.

  1. ೧. ರಾಜ್ಯೋತ್ಸವ = ........................ + ........................

    Answer

    ರಾಜ್ಯ + ಉತ್ಸವ

  2. ೨. ಮಲ್ಲಗಂಬ = ........................ + ........................

    Answer

    ಮಲ್ಲ + ಕಂಬ

  3. ೩. ಜಟ್ಟಿಯಾಳು = ........................ + ........................

    Answer

    ಜಟ್ಟಿ + ಆಳು

  4. ೪. ಅಲ್ಲೋಡು = ........................ + ........................

    Answer

    ಅಲ್ಲಿ + ನೋಡು

ಈ) ಕೆಳಗಿನವುಗಳಿಗೆ ಲಘು ಟಿಪ್ಪಣಿ ಬರೆಯಿರಿ.

  1. ೧. ಮಲ್ಲ ಕಂಬ

    Answer

    ಮಲ್ಲ ಕಂಬವು ಒಂದು ಕಸರತ್ತಿನ ಆಟ. ಇದು ಕುಸ್ತಿ ಪಟುಗಳಿಗೆ ಪೂರಕವಾದ ಅಭ್ಯಾಸ. ಇದನ್ನು ತೇಗದ ಕಟ್ಟಿಗೆಯಿಂದ ಮಾಡಿದ ಕಂಬದ ಮೇಲೆ ನಡೆಸುತ್ತಾರೆ. ಕಂಬದ ಮೇಲೆ ಔಡಲೆಣ್ಣೆ ಸವರಿರುವುದರಿಂದ ಇದು ಜಾರುತ್ತದೆ. ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಇದು ಪ್ರಸಿದ್ಧವಾಗಿದೆ.

  2. ೨. ರಾಜ್ಯೋತ್ಸವ

    Answer

    ರಾಜ್ಯೋತ್ಸವವು ಕರ್ನಾಟಕ ರಾಜ್ಯದ ಸ್ಥಾಪನೆಯ ಸಂದರ್ಭದಲ್ಲಿ ಆಚರಿಸುವ ಹಬ್ಬ. ಈ ಸಂದರ್ಭದಲ್ಲಿ ಮೆರವಣಿಗೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಮೆರವಣಿಗೆಯಲ್ಲಿ ಮಲ್ಲ ಕಂಬದಂತಹ ಸಾಹಸ ಪ್ರದರ್ಶನಗಳು ನಡೆಯುತ್ತವೆ.

  3. ೩. ದಸರಾ ಉತ್ಸವ

    Answer

    ದಸರಾ ಉತ್ಸವವು ಮೈಸೂರಿನಲ್ಲಿ ಪ್ರಸಿದ್ಧವಾಗಿ ನಡೆಯುವ ಹಬ್ಬ. ಇದು ನವರಾತ್ರಿಯ ಸಮಯದಲ್ಲಿ ಆಚರಿಸಲ್ಪಡುತ್ತದೆ. ಈ ಸಮಯದಲ್ಲಿ ಕುಸ್ತಿ ಪಂದ್ಯಗಳು ನಡೆಯುತ್ತವೆ. ಮೈಸೂರು ದಸರಾದಲ್ಲಿ ಮಲ್ಲ ಕಂಬದ ಪ್ರದರ್ಶನವೂ ಇರುತ್ತದೆ.

IV. ಚಟುವಟಿಕೆಗಳು :

  1. ೧. ಕುಸ್ತಿಯ ಚಿತ್ರ, ಮಲ್ಲ ಕಂಬ ಏರುವ ಚಿತ್ರ ಮತ್ತು ಗರಡಿ ಮನೆಗಳ ಚಿತ್ರಗಳನ್ನು ಸಂಗ್ರಹಿಸಿರಿ.

  2. ೨. ಬೇರೆ ಬೇರೆ ಗ್ರಾಮೀಣ ಆಟಗಳ ಹೆಸರು ಬರೆಯಿರಿ.

Interactive Lab