ಗದ್ಯ (prose) · ಡಾ. ನಿಂಗು ಸೋಲಗಿ
ಪಠ್ಯFull text
ಅಭ್ಯಾಸexercises from the textbook
Model answers — a guide, not the only correct wording. Check with your teacher.
I. ಪದಗಳ ಅರ್ಥ ತಿಳಿಯಿರಿ :
ಅನಾಹುತ - ಆಕಸ್ಮಿಕ ಕೇಡು
ಅಶ್ವದಳ - ಕುದುರೆ ಸೇನೆ
ಗೊಡ್ಡು ಬೆದರಿಕೆ - ವ್ಯರ್ಥಗದರಿಕೆ
ತಂತ್ರ - ಉಪಾಯ
ದೇಹಿ - ದಯಪಾಲಿಸು; ಕೊಡು.
ಪರಿಣತ - ನುರಿತ; ತಿಳಿದವ; ಪಂಡಿತ.
ಬಗ್ಗುಬಡಿ - ಹತ್ತಿಕ್ಕು; ದಮನಮಾಡು.
ಶರಣಾಗು - ಮೊರೆಹೋಗು; ರಕ್ಷಣೆ.
ಹಿಮ್ಮುಖಿ - ಹಿಂದೆ ಸರಿಯುವುದು
ಅಟ್ಟೋದು - ಹೊರದೂಡುವುದು
ಕೆಚ್ಚೆಡೆ - ಧೈರ್ಯಶಾಲಿ; ಸಾಹಸಿ.
ಛಲ - ಹಟ
ದಾಸ್ಯ - ಗುಲಾಮಗಿರಿ; ಚಾಕರಿ.
ಪರಂಗಿ - ವಿದೇಶಿ; ಪಾಶ್ಚಾತ್ಯ ದೇಶದವನು.
ಬಂಡಾಯ - ದಂಗೆ; ಕ್ರಾಂತಿ.
ವಿಶ್ವಾಸಘಾತ - ನಂಬಿಕೆ ದ್ರೋಹ
ಸಜ್ಜಾಗು - ಸಿದ್ಧನಾಗು
ಹೊಂಚುಹಾಕು - ಸಂಚುಹೂಡು
ಟಿಪ್ಪಣಿ :
೧. ಗೆರಿಲ್ಲಾ ಯುದ್ಧ - ಯಾವುದೇ ಮುನ್ಸೂಚನೆ ನೀಡದೆ ಮರೆಯಲ್ಲಿ ನಿಂತು ಶತ್ರುಗಳ ಮೇಲೆ ದಾಳಿ ಮಾಡುವುದು.
೨. ಕಣ್ಣಲ್ಲಿ ಎಣ್ಣೆ ಹಾಕಿಕೊಂಡು - ಜಾಗರೂಕತೆಯಿಂದ ಎಚ್ಚರವಾಗಿರುವುದು.
೩. ಕಣ್ಣುಮುಚ್ಚಿ ಕುಳಿತಿರು - ಮೈಮರೆತು ಇರುವುದು.
೪. ಕಲೆಕ್ಟರುಗಳು - ಬ್ರಿಟೀಷರ ಕಾಲದಲ್ಲಿದ್ದ ತೆರಿಗೆ ಅಧಿಕಾರಿಗಳು.
II. ಪ್ರಶ್ನೆಗಳು :
ಅ) ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.
೧. ಬ್ರಿಟೀಷ್ ಅಧಿಕಾರಿಗೆ ಯಾವ ಕೋಟೆಯನ್ನು ವಶಪಡಿಸಿಕೊಳ್ಳುವ ಉದ್ದೇಶವಿತ್ತು?
Answerಬ್ರಿಟೀಷ್ ಅಧಿಕಾರಿಗೆ ಕೊಪ್ಪಳ ಕೋಟೆಯನ್ನು ವಶಪಡಿಸಿಕೊಳ್ಳುವ ಉದ್ದೇಶವಿತ್ತು.
೨. ಭೀಮರಾಯ ಎಂತಹ ಯುದ್ಧದಲ್ಲಿ ಪರಿಣಿತನಾಗಿದ್ದನು?
Answerಭೀಮರಾಯ ಗೆರಿಲ್ಲಾ ಯುದ್ಧದಲ್ಲಿ ಪರಿಣಿತನಾಗಿದ್ದನು.
೩. ಕೊಪ್ಪಳದ ಕೋಟೆಯಲ್ಲಿ ಬ್ರಿಟೀಷರಿಗೆ ವಿಶ್ವಾಸಘಾತ ಮಾಡಿದವರು ಯಾರು?
Answerಕೊಪ್ಪಳದ ಕೋಟೆಯಲ್ಲಿ ಬ್ರಿಟೀಷರಿಗೆ ಮಕ್ಕುಂ ಸಾಬ್ ಮತ್ತು ಅವನ ಸಂಗಡಿಗರು ವಿಶ್ವಾಸಘಾತ ಮಾಡಿದರು.
೪. ಭೀಮರಾಯನ ಹೋರಾಟದ ಗುರಿ ಏನಾಗಿತ್ತು?
Answerಭೀಮರಾಯನ ಹೋರಾಟದ ಗುರಿ ಬ್ರಿಟೀಷರನ್ನು ನಾಡಿನಿಂದ ಓಡಿಸಿ ಸ್ವಾತಂತ್ರ್ಯ ಪಡೆಯುವುದಾಗಿತ್ತು.
೫. ಬ್ರಿಟೀಷ್ ಅಧಿಕಾರಿ ಭೀಮರಾಯನಿಗೆ ಶರಣಾಗಲು ಯಾವ ಆಮಿಷ ಒಡ್ಡಿದನು?
Answerಬ್ರಿಟೀಷ್ ಅಧಿಕಾರಿ ಭೀಮರಾಯನಿಗೆ ಶರಣಾದರೆ ಕಂಪನಿ ಸರಕಾರ ಉತ್ತಮ ಸ್ಥಾನ ನೀಡಿ ಚೆನ್ನಾಗಿ ನಡೆಸಿಕೊಳ್ಳುವುದಾಗಿ ಆಮಿಷ ಒಡ್ಡಿದನು.
ಆ) ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.
೧. ಬ್ರಿಟೀಷ್ ಅಧಿಕಾರಿ ಭೀಮರಾಯನ ಶಕ್ತಿ ಸಾಮರ್ಥ್ಯಗಳ ಬಗ್ಗೆ ಏನೆಂದು ಹೇಳಿದನು?
Answerಬ್ರಿಟೀಷ್ ಅಧಿಕಾರಿಯು ಭೀಮರಾಯನನ್ನು ಸಿಡಿಲು ಮರಿ ಎಂದು ಬಣ್ಣಿಸಿದನು. ಅವನು ಗೆರಿಲ್ಲಾ ಯುದ್ಧದಲ್ಲಿ ಪರಿಣಿತನಾಗಿದ್ದು, ಹಿಡಿಯಲು ಹೋದರೆ ಸಿಡಿಯುತ್ತಾನೆ ಮತ್ತು ತನ್ನವರನ್ನು ಬಾಂಬುಗಳಂತೆ ಸ್ಫೋಟಿಸುತ್ತಾನೆ ಎಂದನು. ಅಲ್ಲದೆ ಅವನು ಗುಂಡೇಟಿನ ಗುರಿಕಾರನೆಂದೂ ಹೇಳಿದನು.
೨. ಭೀಮರಾಯನು ತನ್ನ ಸೇನಾನಿಗಳಿಗೆ ಮೆಚ್ಚುಗೆಯಿಂದ ಹೇಳಿದ ಮಾತುಗಳಾವುವು?
Answerಭೀಮರಾಯನು ತನ್ನ ಸೇನಾನಿಗಳ ಸಾಹಸವನ್ನು ಮೆಚ್ಚಿ, ಅವರು ಬ್ರಿಟೀಷರನ್ನು ಸೋಲಿಸಿ ಕೊಪ್ಪಳ ಕೋಟೆಯನ್ನು ವಶಪಡಿಸಿಕೊಂಡು ಗೆಲುವಿನ ಬಾವುಟ ಹಾರಿಸಿದ್ದಾರೆ ಎಂದು ಹೊಗಳಿದನು.
೩. ಭೀಮರಾಯನು ತನ್ನ ಸೇನಾನಿಗಳಿಗೆ ಏನೆಂದು ಹುರಿದುಂಬಿಸಿದನು?
Answerಭೀಮರಾಯನು ಸೇನಾನಿಗಳಿಗೆ ಇದು ಹೋರಾಟದ ಪ್ರಾರಂಭವಷ್ಟೇ ಎಂದು ಹೇಳಿ, ಬ್ರಿಟೀಷರು ನಾಡು ಬಿಡುವವರೆಗೂ ಕೆಚ್ಚೆದೆಯಿಂದ ಹೋರಾಡಬೇಕೆಂದು ಹುರಿದುಂಬಿಸಿದನು. ಸ್ವಾತಂತ್ರ್ಯವು ಬೇಡಿದರೆ ಸಿಗುವುದಿಲ್ಲ, ಛಲ ಬಿಡದೆ ಹೋರಾಡಿ ಸ್ವಾತಂತ್ರ್ಯ ಪಡೆಯಬೇಕೆಂದು ಪ್ರೇರೇಪಿಸಿದನು.
೪. ಬ್ರಿಟೀಷ್ ಅಧಿಕಾರಿ ಕೋಟೆಯನ್ನು ಮುತ್ತಿಗೆ ಹಾಕಿ ಭೀಮರಾಯನಿಗೆ ಏನೆಂದು ಎಚ್ಚರಿಕೆ ಕೊಟ್ಟನು?
Answerಬ್ರಿಟೀಷ್ ಅಧಿಕಾರಿಯು ಭೀಮರಾಯನಿಗೆ ಮೂರು ಗಂಟೆಗಳ ಒಳಗೆ ಕೋಟೆಯನ್ನು ಖಾಲಿ ಮಾಡಿ ಶರಣಾಗದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುವುದೆಂದು ಎಚ್ಚರಿಕೆ ನೀಡಿದನು.
೫. ಬ್ರಿಟೀಷ್ ಅಧಿಕಾರಿಯು ಶರಣಾಗು ಎಂದು ಹೇಳಿದ ಮಾತಿಗೆ ಭೀಮರಾಯನು ಏನೆಂದು ಪ್ರತಿಕ್ರಿಯಿಸಿದನು?
Answerಭೀಮರಾಯನು ಶರಣಾಗುವ ಮಾತಿಗೆ ಕೋಪಗೊಂಡು, ತನ್ನ ಸಂಗಾತಿಗಳನ್ನು ಕೊಂದ ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಪ್ರತಿಕ್ರಿಯಿಸಿದನು.
೬. ಭೀಮರಾಯನು ಸಾವಿನ ಸಂದರ್ಭದಲ್ಲಿ ಬ್ರಿಟೀಷರ ವಿರುದ್ಧ ಏನೆಂದು ಬಂಡಾಯ ಸಾರಿದನು?
Answerಭೀಮರಾಯನು ತಾನು ಸತ್ತರೂ ತಾವು ಹುಟ್ಟುಹಾಕಿದ ಬಂಡಾಯ ಸಾಯುವುದಿಲ್ಲವೆಂದೂ, ಜನರು ದಾಸ್ಯದಿಂದ ಮುಕ್ತರಾಗುವವರೆಗೂ ಹೋರಾಟ ನಡೆಸಿ ಬ್ರಿಟೀಷರನ್ನು ಓಡಿಸಿ ಭಾರತಮಾತೆಯನ್ನು ಸ್ವತಂತ್ರಗೊಳಿಸುವರೆಂದು ಬಂಡಾಯ ಸಾರಿದನು.
ಇ) ಕೆಳಗಿನ ಹೇಳಿಕೆಗಳನ್ನು ಯಾರು ಯಾರಿಗೆ ಹೇಳಿದ್ದಾರೆ? ತಿಳಿಸಿರಿ.
೧. “ಅವನು ಗುಂಡೇಟಿನ ಗುರಿಕಾರ.”
Answerಈ ಮಾತನ್ನು ಬ್ರಿಟೀಷ್ ಅಧಿಕಾರಿಯು ಹ್ಯೂಜಿಸ್ಗೆ ಹೇಳಿದನು.
೨. “ದಾಸ್ಯದ ಅರಮನೆಗಿಂತ ಸ್ವಾತಂತ್ರ್ಯದ ಸೆರೆಮನೆಯೇ ಲೇಸು.”
Answerಈ ಮಾತನ್ನು ಭೀಮರಾಯನು ಬ್ರಿಟೀಷ್ ಅಧಿಕಾರಿಗೆ ಹೇಳಿದನು.
೩. “ಬ್ರಿಟೀಷರು ನಮ್ಮ ನಾಡು ಬಿಟ್ಟು ತೊಲಗುವವರೆಗೂ ಹೋರಾಡೋಣ.”
Answerಈ ಮಾತನ್ನು ಭೀಮರಾಯನು ತನ್ನ ಸೇನಾನಿಗಳಿಗೆ ಹೇಳಿದನು.
೪. “ನಮ್ಮ ಸಂಗಾತಿಗಳ್ನ ಕೊಂದ ನಿಮ್ಮನ್ನ ಸುಮ್ಮ ಬಿಡೊದಿಲ್ಲ!”
Answerಈ ಮಾತನ್ನು ಭೀಮರಾಯನು ಬ್ರಿಟೀಷ್ ಅಧಿಕಾರಿಗೆ ಹೇಳಿದನು.
ಈ) ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ.
೧. ಸ್ವಾತಂತ್ರ್ಯ ಅನ್ನೋದು _______________ ಅಂತ ಬೇಡಿದರೆ ಸಿಗುವ ವಸ್ತು ಅಲ್ಲ.
Answerಸ್ವಾತಂತ್ರ್ಯ ಅನ್ನೋದು ದೇಹಿ ಅಂತ ಬೇಡಿದರೆ ಸಿಗುವ ವಸ್ತು ಅಲ್ಲ.
೨. ದೀಪ ಬೆಳಗೋದು ಇತರರಿಗೆ _______________ ಎಂದು.
Answerದೀಪ ಬೆಳಗೋದು ಇತರರಿಗೆ ಬೆಳಕಾಗಲಿ ಎಂದು.
೩. ಗೆದ್ದರೆ ಸ್ವಾತಂತ್ರ್ಯ, ಸತ್ತರೆ _______________
Answerಗೆದ್ದರೆ ಸ್ವಾತಂತ್ರ್ಯ, ಸತ್ತರೆ ವೀರಸ್ವರ್ಗ.
೪. ದಾಸ್ಯದ ಅರಮನೆಗಿಂತ _______________ ಸೆರೆಮನೆಯೇ ಲೇಸು.
Answerದಾಸ್ಯದ ಅರಮನೆಗಿಂತ ಸ್ವಾತಂತ್ರ್ಯದ ಸೆರೆಮನೆಯೇ ಲೇಸು.
III. ಭಾಷಾಭ್ಯಾಸ :
ಅ) ಕೆಳಗಿನವುಗಳಿಗೆ ವಿರುದ್ಧ ಪದಗಳನ್ನು ಬರೆಯಿರಿ.
೧. ಸುಲಭ X _______________ ೨. ಗೆಲುವು X _______________
Answerಸುಲಭ X ಕಠಿಣ ಗೆಲುವು X ಸೋಲು
೩. ಪ್ರಾರಂಭ X _______________ ೪. ಸ್ವಾತಂತ್ರ್ಯ X _______________
Answerಪ್ರಾರಂಭ X ಅಂತ್ಯ ಸ್ವಾತಂತ್ರ್ಯ X ದಾಸ್ಯ
೫. ಪರ X _______________ ೬. ಹಿಂದಕ್ಕೆ X _______________
Answerಪರ X ಸ್ವ ಹಿಂದಕ್ಕೆ X ಮುಂದಕ್ಕೆ
ಆ) ಇಲ್ಲಿ ನೀಡಿರುವ ಪದಗಳನ್ನು ಗ್ರಾಂಥಿಕ ರೂಪದಲ್ಲಿ ಬರೆಯಿರಿ.
ಉದಾಹರಣೆ : ಕ್ವಾಟೆ - ಕೋಟೆ
೧. ಐತಿ - _______________ ೨. ಆದ್ವು - _______________
Answerಐತಿ - ಇದೆ ಆದ್ವು - ಆದವು
೩. ಆಗೈತಿ - _______________ ೪. ಬರದಂಗ - _______________
Answerಆಗೈತಿ - ಆಗಿದೆ ಬರದಂಗ - ಬರದಂತೆ
೫. ಬ್ಯಾಡ - _______________ ೬. ತಗೊಂಡೇ - _______________
Answerಬ್ಯಾಡ - ಬೇಡ ತಗೊಂಡೇ - ತೆಗೆದುಕೊಂಡೇ
IV. ಚಟುವಟಿಕೆಗಳು :
೧. ಐತಿಹಾಸಿಕ ಹಾಗೂ ಸ್ವಾತಂತ್ರ್ಯ ಸಂಗ್ರಾಮದ ನಾಟಕಗಳನ್ನು ಸಂಗ್ರಹಿಸಿ ಓದಿರಿ.
೨. ಪ್ರಸ್ತುತ ನಾಟಕವನ್ನು ಶಿಕ್ಷಕರ ಮಾರ್ಗದರ್ಶನದಲ್ಲಿ ಪಾತ್ರಗಳನ್ನು ಹಂಚಿಕೊಂಡು ಅಭಿನಯಿಸಿರಿ.
V. ಸೈದ್ಧಾಂತಿಕ ವ್ಯಾಕರಣ :
**ಕ್ರಿಯಾಪದ :** ಕ್ರಿಯೆಯನ್ನು ಸೂಚಿಸುವ ಪದವೇ “ಕ್ರಿಯಾಪದ”. ಕ್ರಿಯಾಪದದ ಮೂಲ ರೂಪವೇ ‘ಧಾತು’. ಈ ಕೆಳಗಿನ ಉದಾಹರಣೆಗಳಲ್ಲಿ ಗೆರೆ ಎಳೆದಿರುವ ಪದಗಳನ್ನು ಗಮನಿಸಿ.
೧. ಕಾವಲುಗಾರ ಕೋಟೆಯನ್ನು **ಕಾಯುತ್ತಿದ್ದಾನೆ**.
೨. ಅಮ್ಮ ಅಡುಗೆ **ಮಾಡುವಳು**.
೩. ಬಂಡಾಯದ ಕಹಳೆ **ಮೊಳಗಿತ್ತು**.
ಮೇಲಿನ ಉದಾಹರಣೆಗಳಲ್ಲಿ ಕಾಯುತ್ತಿದ್ದಾನೆ, ಮಾಡುವಳು, ಮೊಳಗಿತ್ತು ಇವುಗಳು ಕ್ರಿಯಾಪದಗಳು. ಕಾಯುತ್ತಿದ್ದಾನೆ ಎನ್ನುವ ಕ್ರಿಯಾಪದದ ಮೂಲರೂಪ ‘ಕಾಯು’. ಅದೇ ರೀತಿ ಮಾಡುವಳು ಎನ್ನುವ ಕ್ರಿಯಾಪದದ ಮೂಲರೂಪ ‘ಮಾಡು’. ಮೊಳಗಿತ್ತು ಎನ್ನುವುದರ ಮೂಲರೂಪ ‘ಮೊಳಗು’ ಇವುಗಳನ್ನು ಧಾತು ಎನ್ನುತ್ತೇವೆ.
ಕೆಳಗಿನ ಕ್ರಿಯಾಪದಗಳಿಗೆ ಧಾತು ಪದ ಬರೆಯಿರಿ.
ಕ್ರಿಯಾಪದ ಧಾತು
೧. ಮಾಡುತ್ತಾನೆ _______________
Answerಮಾಡುತ್ತಾನೆ - ಮಾಡು
೨. ಓಡುತ್ತದೆ _______________
Answerಓಡುತ್ತದೆ - ಓಡು
೩. ಹೋದಳು _______________
Answerಹೋದಳು - ಹೋಗು
೪. ತಿಂದನು _______________
Answerತಿಂದನು - ತಿನ್ನು
* * * * *