CRECT Education

A Day in Grandmother's Garden | Learn the Story | Class 4 Kannada Lesson 5 Part 1

Description

Walk through the story of children visiting a farm and learning about crops, earthworms, and traditional farming.

ಗದ್ಯ (prose) · Committee-authored

ಪಠ್ಯFull text

ಮಲೆನಾಡ ತಪ್ಪಲಿನಲ್ಲಿರುವ ಒಂದು ಊರು ಕಣಬೂರು. ಅಲ್ಲೊಂದು ಹಿರಿಯ ಪ್ರಾಥಮಿಕ ಶಾಲೆ. ಆ ಶಾಲೆಯ ಮಕ್ಕಳು ಕಿಶೋರನ ಅಜ್ಜಿಯ ತೋಟಕ್ಕೆ ಗುರುಗಳೊಂದಿಗೆ ಹೊರ ಸಂಚಾರ ಹೊರಟರು. ಕಿಶೋರನ ಅಜ್ಜಿ ಮನೆ ಬೆಟ್ಟದ ತಪ್ಪಲಿನಲ್ಲಿದೆ. ಮನೆಯ ಹಿಂದಿನ ಗುಡ್ಡದಲ್ಲಿ ಗೇರು ಮರಗಳಿವೆ. ಅಡಿಕೆ ತೋಟ ದಾಟಿ ಮುಂದೆ ಹೋದರೆ ಭತ್ತದ ಗದ್ದೆಗಳಿವೆ. ಮಕ್ಕಳೆಲ್ಲರೂ ಗದ್ದೆಯ ಹತ್ತಿರ ಬಂದು ತಲುಪಿದರು. "ಇದು ಯಾವ ಬೆಳೆ?" ಎಂದು ಪೀಟರ್ ಪ್ರಶ್ನಿಸಿದ. "ಇದು ಭತ್ತದ ಬೆಳೆ" ಎಂದರು ಗುರುಗಳು. "ಓ ಇದೇನಾ! ಭತ್ತದ ಪೈರು?" ತೆನೆಗಳನ್ನು ಕೈಯಿಂದ ಮುಟ್ಟಿ ಪ್ರಶ್ನಿಸಿದ ಪೀಟರ್. ಒಂದು ಭತ್ತದ ತೆನೆಯನ್ನು ಕಿತ್ತುಕೊಂಡು "ತಗೋ ಇದನ್ನು ಬಿಡಿಸಿನೋಡು" ಎಂದರು ಗುರುಗಳು. ಶೀಲಾ ತಾನು ಒಂದು ತೆನೆ ಕೀಳಲು ಬಾಗಿದಾಗ ಒಂದು ಕಪ್ಪೆ ಚಂಗನೆ ಕುಪ್ಪಳಿಸಿತು. ಸರಸರ ಒಂದು ಹಾವು ಹತ್ತಿರದಲ್ಲಿ ಸರಿದು ಹೋಯಿತು. ಮಕ್ಕಳು ಭಯದಿಂದ ಹಿಂದೆ ನೆಗೆದರು. "ಹೆದರಬೇಡಿ, ಅವು ನಮಗೆ ಏನು ಮಾಡುವುದಿಲ್ಲ. ಹಾವು, ಕಪ್ಪೆ, ಕೀಟ, ಹಕ್ಕಿ, ಮೊಲ, ಹಂದಿ, ಮುಂಗುಸಿ ಮುಂತಾದ ಪ್ರಾಣಿಗಳು ಸಾಮಾನ್ಯವಾಗಿ ತೋಟದ ಸುತ್ತಮುತ್ತ ಇರುತ್ತವೆ" ಎಂದರು ಗುರುಗಳು. ಮಕ್ಕಳು ಮಾತನಾಡುತ್ತಾ ಗದ್ದೆಯ ಬದುವಿನಲ್ಲಿ ನಡೆದು ತೋಡು ದಾಟಿ ಅಡಿಕೆ ತೋಟಕ್ಕೆ ಬಂದರು. ತೋಟದ ನಡುವೆ ಬಿದ್ದಿದ್ದ ಒಂದು ಹಣ್ಣನ್ನು ಹೆಕ್ಕಿ ಶೀಲಾ "ಓ! ಇಲ್ಲಿ ನೋಡಿ ಸೌತೆ ಕಾಯಿ!" ಎಂದಳು. "ಅಲ್ಲಲ್ಲ! ಅದು ಹೀರೇಕಾಯಿ" ಎಂದನು ರಫಿಕ್. "ಎರಡೂ ಅಲ್ಲ. ಅದು ಕೊಕೋ ಹಣ್ಣು. ಇದನ್ನು ಚಾಕಲೇಟು ತಯಾರಿಸಲು ಬಳಸುತ್ತಾರೆ. ಯಾವುದೋ ಪ್ರಾಣಿ ಅದನ್ನು ಕಿತ್ತು ಹಾಕಿದೆ. ಬಹುಶಃ ಅಳಿಲೇ ಇರಬೇಕು" ಎಂದರು ಗುರುಗಳು. ಅಷ್ಟರಲ್ಲಿ ಅಜ್ಜಿ ತೋಟದಲ್ಲಿ ಏನೋ ಮಾಡುತ್ತಿರುವುದನ್ನು ಕಂಡ ಮಕ್ಕಳು ಅಲ್ಲಿಗೆ ಓಡಿದರು. "ನಿಧಾನವಾಗಿ ಬನ್ನಿ. ಮುಳ್ಳುಗಳು ಇರಬಹುದು" ಎಂದಳು ಅಜ್ಜಿ. "ಇದೇನು? ಇಷ್ಟೊಂದು ಗುಂಡಿ ತೋಡಿದ್ದೀರಿ?" ಎಂದು ಮಹೇಶ ಪ್ರಶ್ನಿಸಿದನು. "ನೀವೆಲ್ಲಾ ನಿಮ್ಮ ಕೈಯಾರೆ ಒಂದೊಂದು ಹಣ್ಣಿನ ಗಿಡ ಇದರಲ್ಲಿ ನೆಡಬೇಕು" ಎಂದು ಅಜ್ಜಿ ಉತ್ತರಿಸಿದಳು. "ಬೇಡಪ್ಪ, ನಮ್ಮ ಕೈ ಕೊಳೆಯಾಗುತ್ತದೆ. ನನ್ನ ಅಮ್ಮ ಬೈಯ್ಯುತ್ತಾಳೆ" ಎಂದಳು ಅಶ್ವಿನಿ. "ಚಿಕ್ಕದ ಚಿಕ್ಕಮ್ಮ ಬಾರೆ" ಎಂದು ತಮಾಷೆ ಮಾಡಿದ ಮಹಮ್ಮದ್, "ಕೈ ಕೆಸರಾದರೆ ಬಾಯಿ ಮೊಸರು" ಎಂದು ಹೇಳುತ್ತಾ ಒಂದು ಗಿಡ ತೆಗೆದುಕೊಂಡು ನೆಡಲು ಆರಂಭಿಸಿದನು. ಅಂತೆಯೇ ಎಲ್ಲಾ ಮಕ್ಕಳೂ ಒಂದೊಂದು ಗಿಡ ನೆಟ್ಟರು. ಕೈ ತೊಳೆದು ಅಜ್ಜಿ ಕೊಟ್ಟ ಹಣ್ಣನ್ನು ತಿಂದು ತೋಟದಲ್ಲೆಲ್ಲಾ ಸುತ್ತಾಡಿದರು. ತೋಟದಲ್ಲಿದ್ದ ಬಾಳೆ, ಅಡಿಕೆ, ತೆಂಗು, ಕಾಫುಮೇಣಸು, ಕಾಫಿ, ಏಲಕ್ಕಿ ಮೊದಲಾದ ಗಿಡಗಳನ್ನು ನೋಡಿದರು. "ಅಜ್ಜೀ! ಹಾವಿನಮರಿ" ಎಂದು ಕಿರುಚಿದಳು ಶೀಲಾ. "ಅದು ಹಾವಲ್ಲ, ಎರೆಹುಳು. ಇದನ್ನು 'ರೈತನ ಮಿತ್ರ' ಎಂದು ಕರೆಯುತ್ತಾರೆ. ಇದರ ಸಹಾಯದಿಂದ ಎರೆ ಗೊಬ್ಬರ ತಯಾರಿಸುತ್ತಾರೆ" ಎಂದರು ಗುರುಗಳು. "ನಾವು ರಾಸಾಯನಿಕ ಗೊಬ್ಬರ ಬಳಸುವುದಿಲ್ಲ. ಎರೆಗೊಬ್ಬರ, ಹಟ್ಟಿಗೊಬ್ಬರ, ಕೋಳಿಗೊಬ್ಬರ ಮೊದಲಾದ ಸಾವಯವ ಗೊಬ್ಬರ ಬಳಸಿ ಉತ್ತಮ ಬೆಳೆಗಳನ್ನು ಬೆಳೆಯುತ್ತೇವೆ" ಎಂದರು ಅಜ್ಜಿ. ಎಲ್ಲವನ್ನೂ ಗಮನಿಸುತ್ತಿದ್ದ ಶರಣಪ್ಪ "ಸರ್ ನಮ್ಮ ಊರು ಬಳ್ಳಾರಿ. ಅಲ್ಲಿ ಜೋಳ, ಮೆಣಸು, ಶೇಂಗಾ ಮತ್ತು ತೊಗರಿ ಬೆಳೆಯುತ್ತಾರೆ" ಎಂದನು. "ಹೌದು ಮಣ್ಣಿನ ಗುಣ ಹಾಗೂ ಹವಾಮಾನಕ್ಕೆ ಅನುಗುಣವಾಗಿ ಬೇರೆ ಬೇರೆ ಬೆಳೆ ಬೆಳೆಯುತ್ತಾರೆ" ಎಂದರು ಶಿಕ್ಷಕರು. "ನಮ್ಮ ಊರು ಪಶ್ಚಿಮ ಘಟ್ಟದ ತಪ್ಪಲಿನಲ್ಲಿದೆ. ಬೆಟ್ಟಗುಡ್ಡ ಮರಗಳಿಂದ ಕೂಡಿರುವ ಪ್ರದೇಶವಾದುದರಿಂದ ಇಲ್ಲಿ ಹೇರಳವಾಗಿ ಮಳೆ ಬೀಳುತ್ತದೆ. ಆದುದರಿಂದ ಹೆಚ್ಚು ನೀರು ಬೇಕಾದ ಬೆಳೆಗಳನ್ನು ನಾವು ಬೆಳೆಯುತ್ತೇವೆ. ನಿಮ್ಮ ಊರಿನ ಕಡೆ ಮಳೆ ಕಡಿಮೆ ಬೀಳುವುದರಿಂದ ಆ ಬೆಳೆಗಳನ್ನು ಬೆಳೆಯುತ್ತಾರೆ" ಎಂದರು ಅಜ್ಜಿ. ಅಷ್ಟು ಹೊತ್ತಿಗೆ ಅಜ್ಜಿಯ ಮನೆಯಲ್ಲಿ ಮಕ್ಕಳಿಗಾಗಿ ರುಚಿಯಾದ ಅಡುಗೆ ಸಿದ್ಧವಾಗಿತ್ತು. "ಕೈ ಕಾಲು ತೊಳೆದು ಊಟಕ್ಕೆ ಬನ್ನಿ" ಎಂದು ಅಜ್ಜಿ ಕರೆದಳು. ಮಕ್ಕಳು ಅಜ್ಜಿಯ ಜೊತೆ ಊಟಕ್ಕೆ ಹೊರಟರು. ಅಜ್ಜಿಯ ಮನೆಯ ಅಂಗಳದಲ್ಲಿದ್ದ ಯಂತ್ರವನ್ನು ಕಂಡ ಶೀಲಾ "ಇದೇನು ಗುರುಗಳೇ?" ಎಂದಳು. "ಇದು ಗದ್ದೆ ಉಳುವ ಯಂತ್ರ. ಹಿಂದೆ ನೇಗಿಲು, ನೊಗ, ಎತ್ತು, ಕೋಣ ಬಳಸಿ ಹೊಲ ಉಳುತ್ತಿದ್ದರು. ಈಗ ಹೊಸ ಸಾಧನಗಳು ಬಂದಿವೆ" ಎಂದರು ಗುರುಗಳು. ಎಲ್ಲರೂ ರುಚಿ ರುಚಿಯಾದ ಊಟ ಮುಗಿಸಿದರು. ಕೈ ತೊಳೆಯಲು ಹೋದ ಅಶ್ವಿನಿ "ಇದೋ ನೋಡಿ. ಇಲ್ಲೂ ಸಣ್ಣ ಸಣ್ಣ ಗುಂಡಿಗಳು ಇವೆ" ಎಂದಳು. "ಇವು ಇಂಗು ಗುಂಡಿಗಳು. ಈ ಗುಂಡಿಗಳ ಮೂಲಕ ಮಳೆಯ ನೀರನ್ನು ಇಂಗಿಸುತ್ತೇವೆ. ಇದು ಅಂತರ್ಜಲ ಹೆಚ್ಚಿಸುತ್ತದೆ. ಇದರಿಂದ ನಮ್ಮ ಬಾವಿಯಲ್ಲಿ ನೀರು ಎಂದೂ ಕಡಿಮೆ ಆಗಿಲ್ಲ" ಎಂದರು ಅಜ್ಜಿ. "ಮಕ್ಕಳೇ, ನಾವು ಮಳೆ ಕೊಯ್ಲು ಮತ್ತು ಅಂತರ್ಜಲದ ಬಗ್ಗೆ ತರಗತಿಯಲ್ಲಿ ಚರ್ಚಿಸೋಣ. ಈಗ ಅಜ್ಜಿಗೆ ಧನ್ಯವಾದ ಹೇಳಿ ಹೊರಡೋಣ" ಎಂದರು ಗುರುಗಳು. ಆಗ ಅಜ್ಜಿ ಎಲ್ಲರಿಗೂ ಗೋಡಂಬಿ ಹಂಚಿದಳು. ಮಕ್ಕಳು ತಿನ್ನುತ್ತಾ ಶಾಲೆ ಕಡೆ ಹೆಜ್ಜೆ ಹಾಕಿದರು.

"ರೈತ ನಮ್ಮೆಲ್ಲರ ಅನ್ನದಾತ" — "The farmer is the food-giver for all of us." (a subheading in the book, right after the vocabulary section)

ಪದಗಳ ಅರ್ಥword meanings

KannadaPronunciationMeaning
ಧನ್ಯವಾದdhan-ya-vaa-dathanks
ಚರ್ಚಿಸುchar-chi-sudiscuss
ವಿಶಾಲvi-shaa-lavast
ಪ್ರಕೃತಿpra-kru-tinature
ಹಕ್ಕುhak-kuright
ಬಹುಶಃba-hu-shahperhaps

ಟಿಪ್ಪಣಿnotes

  • ಮಲೆನಾಡು — the Malnad, the Western-Ghats-adjacent region of Karnataka
  • ನೇಗಿಲು — plough
  • ಅಂತರ್ಜಲ — groundwater
  • ಹೊಂಡ — a pit/pond that fills with water

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಅ. ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ

  1. 1. ಮಕ್ಕಳು ಎಲ್ಲಿಗೆ ಹೊರ ಸಂಚಾರ ಹೊರಟರು?

    Answer

    ಮಕ್ಕಳು ಕಿಶೋರನ ಅಜ್ಜಿಯ ತೋಟಕ್ಕೆ ಹೊರ ಸಂಚಾರ ಹೊರಟರು.

  2. 2. ಸಾಮಾನ್ಯವಾಗಿ ಹೊಲವನ್ನು ಯಾವುದರಿಂದ ಉಳುತ್ತಾರೆ?

    Answer

    ಈಗ ಹೊಲವನ್ನು ಹೊಸ ಸಾಧನಗಳಿಂದ ಉಳುತ್ತಾರೆ.

  3. 3. ಎರೆಗೊಬ್ಬರವನ್ನು ಯಾವುದರಿಂದ ತಯಾರಿಸುತ್ತಾರೆ?

    Answer

    ಎರೆಹುಳುವಿನ ಸಹಾಯದಿಂದ ಎರೆಗೊಬ್ಬರವನ್ನು ತಯಾರಿಸುತ್ತಾರೆ.

  4. 4. ತೋಟದಲ್ಲಿ ಹೆಚ್ಚಾಗಿ ಯಾವ ಗೊಬ್ಬರವನ್ನು ಬಳಸುತ್ತಿದ್ದರು?

    Answer

    ಅಜ್ಜಿಯ ತೋಟದಲ್ಲಿ ಹೆಚ್ಚಾಗಿ ಸಾವಯವ ಗೊಬ್ಬರವನ್ನು ಬಳಸುತ್ತಿದ್ದರು.

  5. 5. ಶೀಲಾ ಅಜ್ಜಿಯ ಮನೆಯ ಅಂಗಳದಲ್ಲಿ ಯಾವ ಯಂತ್ರವನ್ನು ನೋಡಿದಳು?

    Answer

    ಶೀಲಾ ಅಜ್ಜಿಯ ಮನೆಯ ಅಂಗಳದಲ್ಲಿ ಗದ್ದೆ ಉಳುವ ಯಂತ್ರವನ್ನು ನೋಡಿದಳು.

ಆ. ಎರಡು–ಮೂರು ವಾಕ್ಯಗಳಲ್ಲಿ ಉತ್ತರ ಬರೆಯಿರಿ

  1. 1. ಅಜ್ಜಿಯ ತೋಟದಲ್ಲಿ ಯಾವ ಯಾವ ಗಿಡಗಳಿದ್ದವು?

    Answer

    ಅಜ್ಜಿಯ ತೋಟದಲ್ಲಿ ಬಾಳೆ, ಅಡಿಕೆ, ತೆಂಗು, ಕಾಫುಮೇಣಸು, ಕಾಫಿ, ಏಲಕ್ಕಿ ಮೊದಲಾದ ಗಿಡಗಳಿದ್ದವು. ಜೊತೆಗೆ ಗೇರು ಮರಗಳು ಮತ್ತು ಅಡಿಕೆ ತೋಟವೂ ಇತ್ತು.

  2. 2. ಉಳುಮೆಯ ಬಗ್ಗೆ ಗುರುಗಳು ನೀಡಿದ ವಿವರಣೆ ಏನು?

    Answer

    ಗುರುಗಳು ತಿಳಿಸಿದರು: ಹಿಂದೆ ರೈತರು ನೇಗಿಲು, ನೊಗ, ಎತ್ತು, ಕೋಣಗಳಿಂದ ಹೊಲ ಉಳುತ್ತಿದ್ದರು. ಆದರೆ ಈಗ ಹೊಸ ಸಾಧನಗಳು ಬಂದಿವೆ.

  3. 3. ಇಂಗು ಗುಂಡಿಯ ಪ್ರಯೋಜನಗಳೇನು?

    Answer

    ಇಂಗು ಗುಂಡಿಗಳ ಮೂಲಕ ಮಳೆಯ ನೀರನ್ನು ಇಂಗಿಸುತ್ತೇವೆ. ಇದು ಅಂತರ್ಜಲವನ್ನು ಹೆಚ್ಚಿಸುತ್ತದೆ ಮತ್ತು ಬಾವಿಯಲ್ಲಿ ನೀರು ಕಡಿಮೆಯಾಗದಂತೆ ನೋಡಿಕೊಳ್ಳುತ್ತದೆ.

ಇ. ವಾಕ್ಯದಲ್ಲಿ ಬಿಟ್ಟಿರುವ ಸ್ಥಳಕ್ಕೆ ಸರಿಯಾದ ಪದ ತುಂಬಿ

  1. 1. ಕಿಶೋರನ ಅಜ್ಜಿಯ ಮನೆ _____ ತಪ್ಪಲಿನಲ್ಲಿದೆ.

    Answer

    ಕಿಶೋರನ ಅಜ್ಜಿಯ ಮನೆ ಬೆಟ್ಟದ ತಪ್ಪಲಿನಲ್ಲಿದೆ.

  2. 2. ಮನೆಯ ಹಿಂದಿನ ಗುಡ್ಡದಲ್ಲಿ _____ ತೋಟಗಳಿವೆ.

    Answer

    ಮನೆಯ ಹಿಂದಿನ ಗುಡ್ಡದಲ್ಲಿ ಗೇರು ತೋಟಗಳಿವೆ.

  3. 3. ಮಳೆಯ ನೀರನ್ನು _____ ಮೂಲಕ ಇಂಗಿಸುತ್ತೇವೆ.

    Answer

    ಮಳೆಯ ನೀರನ್ನು ಇಂಗು ಗುಂಡಿಗಳ ಮೂಲಕ ಇಂಗಿಸುತ್ತೇವೆ.

  4. 4. ಅಜ್ಜಿ ಎಲ್ಲರಿಗೂ _____ ಹಂಚಿದರು.

    Answer

    ಅಜ್ಜಿ ಎಲ್ಲರಿಗೂ ಗೋಡಂಬಿ ಹಂಚಿದರು.

  5. **ಈ. ಹೊಂದಿಸಿ ಬರೆಯಿರಿ** (ಅ / ಆ)

  6. 1. ಎರೆಹುಳ — ಹೀರೇಕಾಯಿ

    Answer

    1. ಎರೆಹುಳ — ರೈತನಮಿತ್ರ

  7. 2. ಕೊಕೊ — ಭತ್ತ

    Answer

    2. ಕೊಕೊ — ಚಾಕಲೇಟು

  8. 3. ತೆನೆ — ಚಾಕಲೇಟು

    Answer

    3. ತೆನೆ — ಭತ್ತ

  9. 4. ಮಳೆಕೊಯ್ಲು — ರೈತನಮಿತ್ರ

    Answer

    4. ಮಳೆಕೊಯ್ಲು — ಅಂತರ್ಜಲ

  10. 5. ಹಟ್ಟಿಗೊಬ್ಬರ — ಅಂತರ್ಜಲ

    Answer

    5. ಹಟ್ಟಿಗೊಬ್ಬರ — ಸಾವಯವ ಗೊಬ್ಬರ

  11. — ಸಾವಯವ ಗೊಬ್ಬರ

ಭಾಷಾ ಚಟುವಟಿಕೆ

  1. ಅ. ಕೊಟ್ಟಿರುವ ಪದಗಳನ್ನು ಬಳಸಿ ಸ್ವಂತ ವಾಕ್ಯ ರಚಿಸಿ: ಕಿರುಚು, ಹೊರಸಂಚಾರ, ಆರ್ಯೆಕೆ, ಹುಲುಸಾಗಿ.

    Answer

    ಕಿರುಚು: ನಾನು ಆಟದಲ್ಲಿ ಕಿರುಚಿದೆ. ಹೊರಸಂಚಾರ: ನಮ್ಮ ಶಾಲೆಯ ಮಕ್ಕಳು ಹೊರಸಂಚಾರಕ್ಕೆ ಹೋದರು. ಆರ್ಯೆಕೆ: ಅಮ್ಮ ಮನೆಯ ಆರೈಕೆ ಮಾಡುತ್ತಾಳೆ. ಹುಲುಸಾಗಿ: ತೋಟದಲ್ಲಿ ಹೂವುಗಳು ಹುಲುಸಾಗಿ ಬೆಳೆದಿವೆ.

  2. ಆ. ಗುಂಪಿಗೆ ಸೇರದ ಪದ ಆರಿಸಿ ಬರೆಯಿರಿ:

  3. 1. ತೆಂಗು, ಅಡಿಕೆ, ಬಾಳೆ, ಭತ್ತ

    Answer

    ತೆಂಗು: ನಮ್ಮ ಮನೆ ಹಿಂದೆ ತೆಂಗಿನ ಮರವಿದೆ. ಅಡಿಕೆ: ಅಡಿಕೆ ತಿನ್ನುವುದು ಒಳ್ಳೆಯದಲ್ಲ. ಬಾಳೆ: ನಾನು ಬಾಳೆ ಹಣ್ಣು ತಿನ್ನುತ್ತೇನೆ. ಭತ್ತ: ರೈತರು ಭತ್ತ ಬೆಳೆಯುತ್ತಾರೆ.

  4. 2. ಮೊಲ, ಹಂದಿ, ಮುಂಗುಸಿ, ಚಿಟ್ಟೆ

    Answer

    ಮೊಲ: ಮೊಲವು ಚೆನ್ನಾಗಿ ಓಡುತ್ತದೆ. ಹಂದಿ: ಹಂದಿ ಮಣ್ಣಿನಲ್ಲಿ ಆಡುತ್ತದೆ. ಮುಂಗುಸಿ: ಮುಂಗುಸಿ ಹಾವನ್ನು ಹಿಡಿಯುತ್ತದೆ. ಚಿಟ್ಟೆ: ಚಿಟ್ಟೆ ಹೂವಿನ ಮೇಲೆ ಕುಳಿತಿತ್ತು.

  5. 3. ಸೀಬೇಕಾಯಿ, ಸಪೋಟ, ಅನಾನಸು, ಕೊಕೊ

    Answer

    ಸೀಬೇಕಾಯಿ: ಸೀಬೇಕಾಯಿ ತಿನ್ನಲು ರುಚಿಯಾಗಿದೆ. ಸಪೋಟ: ಸಪೋಟ ಹಣ್ಣು ಸಿಹಿಯಾಗಿದೆ. ಅನಾನಸು: ಅನಾನಸು ಹಣ್ಣು ಹುಳಿಯಾಗಿದೆ. ಕೊಕೊ: ನಮ್ಮೂರಲ್ಲಿ ಕೊಕೊ ಮರಗಳಿವೆ.

  6. ಇ. ಕೆಳಗಿನವುಗಳನ್ನು ಕೂಡಿಸಿ ಬರೆಯಿರಿ — ಉದಾ: ಒಂದು + ಆದ = ಒಂದಾದ.

  7. ಇಲ್ಲಿ + ಒಂದು; ಹೇರಳ + ಆಗಿ; ಹದ + ಆಗಿತ್ತು

    Answer

    ಇಲ್ಲಿ + ಒಂದು = ಇಲ್ಲೊಂದು ಹೇರಳ + ಆಗಿ = ಹೇರಳವಾಗಿ ಹದ + ಆಗಿತ್ತು = ಹದವಾಗಿತ್ತು

ಬಳಕೆ ಚಟುವಟಿಕೆ

  1. ಅ. ಕೆಳಗಿನ ಮನೆಗಳಿಂದ ಅಕ್ಷರಗಳನ್ನು ಆರಿಸಿ ನೀರಿನ ಮೂಲಗಳನ್ನು ಕಂಡುಹಿಡಿದು ಬರೆಯಿರಿ (letter-grid

  2. word-search puzzle for water sources).

  3. ಆ. ನಿಮ್ಮ ಶಾಲಾ ಕೈತೋಟದಲ್ಲಿ ಏನೇನು ಬೆಳೆಯಬೇಕು? ಹೇಗೆ ಬೆಳೆಸಬೇಕು? ಎಂದು ತರಗತಿಯಲ್ಲಿ ಚರ್ಚಿಸಿ.

  4. ನಿಮ್ಮ ತೀರ್ಮಾನವನ್ನು ಕೆಳಗೆ ಬರೆಯಿರಿ.

  5. ಇ. ನಿಮ್ಮ ಶಾಲೆಯಲ್ಲಿ ರೈತನೊಬ್ಬನ್ನು ಸನ್ಮಾನಿಸುವ ಸಮಾರಂಭದ ಮುಖ್ಯ ಅತಿಥಿಯಾಗಿ ನೀನು ಮಾಡುವ

  6. ಭಾಷಣವನ್ನು ಇಲ್ಲಿ ಬರೆ. ಅನಂತರ ತರಗತಿಯಲ್ಲಿ ಶಿಕ್ಷಕರೆದುರು ಭಾಷಣ ಮಾಡು.

  7. ಈ. ಗೆಳೆಯರೊಂದಿಗೆ ಚರ್ಚಿಸಿ ಉತ್ತರಿಸಿರಿ:

  8. 1. ನಿನ್ನ ಶಾಲೆಗೆ ಜಮೀನು ಕೊಟ್ಟರೆ ನೀನೇನು ಮಾಡುವಿ?

  9. 2. ರೈತರು ಕೈ ಕೆಸರಾಗುತ್ತದೆ ಎಂದು ಸುಮ್ಮನೆ ಕುಳಿತರೆ ಏನಾಗಬಹುದು?

  10. ಉ. ಆಟ ಆಡೋಣ ಬಾ (ಅನುಕರಣೆ ಆಟ) — a teacher-led animal-sound imitation game: crow ("ಕಾ! ಕಾ!"

  11. flapping and jumping like scared birds), frog croaking ("ಕರಕರ ವಟವಟ"), and an owl-call guessing

  12. round.

  13. ಊ. ಒಗಟು ಓದಿ ಆನಂದಿಸಿ (four riddles):

  14. 1. ಅಕ್ಕ ಅಕ್ಕ ಗಿಡ ನೋಡು, ಗಿಡದ ಮೇಲೆ ಕಾಯಿ ನೋಡು. ಕಾಯಿ ತಿಂದೋರ ಬಾಯಿ ನೋಡು.

  15. 2. ಅಡ್ಡ ಮರದಲ್ಲಿ ಬೂದ ಕುಳಿತಿದ್ದಾನೆ.

  16. 3. ಹಸಿರು ಗಿಡದಲ್ಲಿ ಮೊಸರು ಚಿಲ್ಲಿದೆ.

  17. 4. ಮಣ್ಣು ಕೊರೆದೆ ಕಲ್ಲು ಸಿಕ್ಕಿತು, ಕಲ್ಲು ಕೊರೆದೆ ಬೆಳ್ಳಿ ಸಿಕ್ಕಿತು, ಬೆಳ್ಳಿ ಕೊರೆದೆ ನೀರು ಸಿಕ್ಕಿತು.

  18. (ಉತ್ತರಗಳು: ಹಲಸಿನ ಹಣ್ಣು, ತೆಂಗಿನಕಾಯಿ, ಮಲ್ಲಿಗೆ, ಏಲಕ್ಕಿ)

  19. ಋ. ಈ ಹಾಡನ್ನು ರಾಗವಾಗಿ ಹಾಡಲು ಪ್ರಯತ್ನಿಸಿ (bonus poem, printed as an extension activity at

  20. the end of this lesson):

  21. ```

  22. ಬೀಜವನ್ನು ಬಿತ್ತುವ

  23. ಗಿಡಗಳನ್ನು ಬೆಳೆಸುವ ।

  24. ಸುಜಲಭರಿತ ದೇಶವನ್ನು

  25. ಸುಫಲವಾಗಿ ಮಾಡುವ ॥

  26. ತೆಂಗು ಕಂಗು ಸಸಿಗಳ

  27. ತಾಳೆ ಬಾಳೆ ಮರಗಳ ।

  28. ಭಂಗವಿಲ್ಲದಂತೆ ಬೆಳೆಸಿ

  29. ಅಧಿಕ ಫಲವ ಪಡೆಯುವ ॥

  30. ಮಾವು ಹಲಸು ನೇರಳೆ

  31. ಲಿಂಬೆ ದ್ರಾಕ್ಷಿ ಪೇರಳೆ ।

  32. ಸೇಬು ಚಿಕ್ಕು ಕಿತ್ತಳೆಗಳ

  33. ನಾವು ನಾವೇ ಬೆಳೆಸುವ ॥

  34. ಬದನೆ ಸೌತೆ ಕುಂಬಳ

  35. ಹೀರೆಕಾಯಿ ಪಡುವಲ ।

  36. ಮುದದಿ ನಾವು ಗೇಣಸು ಮೇಣಸು

  37. ಹರಿವೆಗಳನು ಬೆಳೆಸುವ ॥

  38. ವಿವಿಧ ಧಾನ್ಯ ಬೀಜಗಳ

  39. ಕಾಯಿ ಪಲ್ಲೆ ಸಸಿಗಳ ।

  40. ವಿವಿಧ ರೀತಿಯಲ್ಲಿ ಬೆಳೆಸಿ

  41. ಅಧಿಕ ಫಲವ ಪಡೆಯುವ ॥

  42. ಅಧಿಕವಾಗಿ ಬಿತ್ತುವ

  43. ಅಧಿಕವಾಗಿ ಬೆಳೆಸುವ ।

  44. ಅಧಿಕ ಫಲವ ಪಡೆಯುತೆಲ್ಲ

  45. ತೃಪ್ತಿಯಿಂದ ಬಾಳುವ ॥

  46. – ಅಮ್ಮೆಂಬಳ ಅನಂತಯ್ಯ ನಾವಡ

  47. ```

Interactive Lab

ಧನ್ಯವಾದdhan-ya-vaa-dathanks
ಚರ್ಚಿಸುchar-chi-sudiscuss
ವಿಶಾಲvi-shaa-lavast
ಪ್ರಕೃತಿpra-kru-tinature
ಹಕ್ಕುhak-kuright
ಬಹುಶಃba-hu-shahperhaps