ಗದ್ಯ (prose) · ಸಮಿತಿ ರಚನೆ (Committee-authored)
ಪಠ್ಯFull text
"ಸ್ವಾತಂತ್ರ್ಯ ಜೀವನ ಬದುಕಿಗೆ ಸಾಧನ" — "Freedom is the instrument for a life well-lived." (A powerful boxed quote printed at the end of the lesson's main text, reflecting the core theme of the boy's sacrifice).
ಪದಗಳ ಅರ್ಥword meanings
| Kannada | Pronunciation | Meaning |
|---|---|---|
| ತ್ಯಾಗ | tyaa-ga | sacrifice, giving up (ತೊರೆಯುವಿಕೆ, ಬಿಡುವುದು) |
| ತೊಲಗು | to-la-gu | go away, leave (ಬಿಟ್ಟುಹೋಗು) |
| ಘೋಷಣೆ | gho-sha-ne | slogan, loud shout (ಗಟ್ಟಿಯಾಗಿ ಕೂಗು) |
| ಬಯಲು | ba-ya-lu | open field, wide space (ವಿಶಾಲವಾದ ಜಾಗ) |
| ಪ್ರತಿಭಟನೆ | pra-ti-bha-ta-ne | protest, opposition (ವಿರೋಧ) |
| ಕಾಂತಿ | kaan-ti | glow, light (ಬೆಳಕು) |
| ಹರಸು | ha-ra-su | bless (ಆಶೀರ್ವದಿಸು) |
| ಚತುರ | cha-tu-ra | clever, smart (ಜಾಣ) |
| ಆಗಮನ | aa-ga-ma-na | arrival (ಬರುವುದು) |
| ಸುಳಿವು | su-li-vu | clue, hint (ಕುರುಹು, ಗುರುತು) |
| ತೊಯ್ದ | toy-da | drenched, wet (ಒದ್ದೆಯಾದ) |
| ಮೃತ್ಯು | mru-tyu | death (ಸಾವು) |
| ಅಹಿಂಸೆ | a-him-se | non-violence (ಹಿಂಸೆ ಮಾಡದಿರುವುದು) |
| ಹೇಡಿ | hay-di | coward (ಅಂಜುಬುರುಕ, ಕೈಲಾಗದವ) |
| ನಿರಂಕುಶ | ni-ram-ku-sha | absolute, uncontrolled (ಯಾರ ಅಂಕೇಗೂ ಒಳಪಡದ) |
| ತಾರಕ ಸ್ವರ | taa-ra-ka sva-ra | high pitch, loud voice (ಏರುಧ್ವನಿ, ಗಟ್ಟಿಯಾಗಿ, ಜೋರಾಗಿ) |
ಟಿಪ್ಪಣಿnotes
- ಪ್ರಾಣಾರ್ಪಣೆ – ಒಳ್ಳೆಯ ಕಾರ್ಯಕ್ಕಾಗಿ ಪ್ರಾಣ ತ್ಯಾಗ ಮಾಡುವುದು.
- ಹುತಾತ್ಮ – ದೇಶದ ಹಿತ, ಜನತೆಯ ಹಿತ ಇತ್ಯಾದಿ ಧ್ಯೇಯ ಸಾಧನೆಗಾಗಿ ಪ್ರಾಣವನ್ನು ಅರ್ಪಿಸುವವ.
- ಚಿರಸ್ಥಾಯಿ – ಹೆಚ್ಚು ಕಾಲ ಇರುವುದು.
- ಸ್ವರಾಜ್ಯ – ಸ್ವತಂತ್ರವಾದ ರಾಜ್ಯ, ಯಾರ ಅಧೀನಕ್ಕೂ ಒಳಪಡದ ರಾಜ್ಯ.
ಅಭ್ಯಾಸexercises from the textbook
Model answers — a guide, not the only correct wording. Check with your teacher.
ಅ. ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ
೧. ಬ್ರಿಟಿಷರಿಗೆ ಭಾರತವನ್ನು ಬಿಟ್ಟು ತೊಲಗಿ ಎಂದು ಎಚ್ಚರಿಕೆ ಕೊಟ್ಟವರು ಯಾರು?
Answerಬ್ರಿಟಿಷರಿಗೆ ಭಾರತವನ್ನು ಬಿಟ್ಟು ತೊಲಗಿ ಎಂದು ಎಚ್ಚರಿಕೆ ಕೊಟ್ಟವರು ಗಾಂಧೀಜಿಯವರು.
೨. ಹುಬ್ಬಳ್ಳಿಯ ಜನತೆಗೆ ಪ್ರಮುಖವಾಗಿದ್ದ ದಿನ ಯಾವುದು?
Answerಹುಬ್ಬಳ್ಳಿಯ ಜನತೆಗೆ ಪ್ರಮುಖವಾಗಿದ್ದ ದಿನ ೧೯೪೨ರ ಆಗಸ್ಟ್ ೧೫.
೩. ನಾರಾಯಣನ ತಾಯಿ ಏನೆಂದು ಮಗನನ್ನು ಹರಸಿದಳು?
Answerನಾರಾಯಣನ ತಾಯಿ ‘ದೇವರು ನಿನಗೆ ಒಳ್ಳೆಯದನ್ನು ಮಾಡಲಿ’ ಎಂದು ಹರಸಿದಳು.
೪. ನಾರಾಯಣನು ಕೂಗಿದ ಘೋಷಣೆ ಯಾವುದು?
Answerನಾರಾಯಣನು ಕೂಗಿದ ಘೋಷಣೆ ‘ಬ್ರಿಟಿಷರೇ, ಭಾರತ ಬಿಟ್ಟು ತೊಲಗಿ’.
೫. ಸಾವಿನ ಅಂಚಿನಲ್ಲಿದ್ದ ಬಾಲಕ ಏನನ್ನು ಕೇಳಿದ?
Answerಸಾವಿನ ಅಂಚಿನಲ್ಲಿದ್ದ ಬಾಲಕ ‘ಸ್ವರಾಜ್ಯ’ವನ್ನು ಕೇಳಿದನು.
ಆ. ಎರಡು-ಮೂರು ವಾಕ್ಯಗಳಲ್ಲಿ ಉತ್ತರ ಬರೆಯಿರಿ
೧. ಬಾಲಕ ನಾರಾಯಣ ಮುಂಜಾನೆ ಎದ್ದು ಹೇಗೆ ಸಿದ್ಧನಾದನು?
Answerಬಾಲಕ ನಾರಾಯಣ ಮುಂಜಾನೆ ಬೇಗನೇ ಎದ್ದು ಸ್ನಾನ ಮಾಡಿ, ಕೈಯಲ್ಲೇ ನೇಯ್ದ ಖಾದಿಚಡ್ಡಿ, ಅಂಗಿ ಮತ್ತು ಗಾಂಧಿ ಟೋಪಿಯನ್ನು ಧರಿಸಿದನು. ನಂತರ ಮನೆಯ ಬೀರುವಿನಲ್ಲಿದ್ದ ತ್ರಿವರ್ಣಧ್ವಜವನ್ನು ತೆಗೆದು, ಅದನ್ನು ಬೊಂಬಿಗೆ ಕಟ್ಟಿ ‘ಅಮ್ಮಾ’ ಎಂದು ಕೂಗಿದನು.
೨. ನಾರಾಯಣನ ತಾಯಿ ಏಕೆ ಅಚ್ಚರಿಗೊಂಡಳು?
Answerಚಿಕ್ಕ ವಯಸ್ಸಿನ ನಾರಾಯಣನು ದೊಡ್ಡವರ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಲು ಸಿದ್ಧನಾಗಿದ್ದುದನ್ನು ಕಂಡು ತಾಯಿ ಅಚ್ಚರಿಗೊಂಡಳು. ಅಲ್ಲದೆ, ‘ಹಿರಿಯರು-ಕಿರಿಯರು ಮುಖ್ಯವಲ್ಲ, ಭಾರತ ಮಾತೆಯ ಸೇವೆಯೇ ಮುಖ್ಯ’ ಎಂಬ ಅವನ ಮಾತುಗಳನ್ನು ಕೇಳಿ ಆಕೆಗೆ ಇನ್ನಷ್ಟು ಆಶ್ಚರ್ಯವಾಯಿತು.
೩. ಪೊಲೀಸರು ಸಿಟ್ಟಿನಿಂದ ಏಕೆ ಕುದಿಯುತ್ತಿದ್ದರು?
Answerಬ್ರಿಟಿಷರ ವಿರುದ್ಧ ಜನರು ‘ಬ್ರಿಟಿಷರೇ, ಭಾರತ ಬಿಟ್ಟು ತೊಲಗಿ’ ಎಂಬ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ನಡೆಸುತ್ತಿದ್ದರು. ಈ ಪ್ರತಿಭಟನೆಯನ್ನು ಕಂಡು ಪೊಲೀಸರು ಸಿಟ್ಟಿನಿಂದ ಕುದಿಯುತ್ತಿದ್ದರು.
ಇ. ಈ ಮಾತನ್ನು ಯಾರು? ಯಾರಿಗೆ ಹೇಳಿದರು?
೧. “ಎಲ್ಲಿಗೆ ಹೋಗುತ್ತಿರುವೆ ಮಗು?”
Answerತಾಯಿಯು ನಾರಾಯಣನಿಗೆ ‘ಎಲ್ಲಿಗೆ ಹೋಗುತ್ತಿರುವೆ ಮಗು?’ ಎಂದು ಕೇಳಿದಳು.
ಯಾರು? .......................................................................................................
Answerತಾಯಿ
ಯಾರಿಗೆ? .......................................................................................................
Answerನಾರಾಯಣನಿಗೆ
೨. “ಅಮ್ಮ ಹಿರಿಯರು ಮತ್ತು ಕಿರಿಯರು ಎನ್ನುವುದು ಮುಖ್ಯವಲ್ಲ”
Answerನಾರಾಯಣನು ತಾಯಿಗೆ ‘ಅಮ್ಮ ಹಿರಿಯರು ಮತ್ತು ಕಿರಿಯರು ಎನ್ನುವುದು ಮುಖ್ಯವಲ್ಲ’ ಎಂದು ಹೇಳಿದನು.
ಯಾರು? .......................................................................................................
Answerನಾರಾಯಣ
ಯಾರಿಗೆ? .......................................................................................................
Answerತಾಯಿಗೆ
೩. “ನಿನಗೆ ಏನು ಬೇಕು?”
Answerಆಂಗ್ಲ ಅಧಿಕಾರಿಯು ನಾರಾಯಣನಿಗೆ ‘ನಿನಗೆ ಏನು ಬೇಕು?’ ಎಂದು ಕೇಳಿದನು.
ಯಾರು? .......................................................................................................
Answerಆಂಗ್ಲ ಅಧಿಕಾರಿ
ಯಾರಿಗೆ? .......................................................................................................
Answerನಾರಾಯಣನಿಗೆ
ಭಾಷಾ ಚಟುವಟಿಕೆ (Language activity)
ಅ. ಕೊಟ್ಟಿರುವ ಪದ ಗಮನಿಸಿ ವಿರುದ್ಧಾರ್ಥಕ ಪದ ಬರೆಯಿರಿ.
೧. ಅಹಿಂಸೆ × ........................................
೨. ಕಿರಿಯ × ........................................
Answerಹಿರಿಯ
೩. ಸಾಧ್ಯ × ........................................
Answerಅಸಾಧ್ಯ
೪. ಬೇಕು × ........................................
Answerಬೇಡ
ಆ. ಮಾದರಿಯಲ್ಲಿ ಸೂಚಿಸಿರುವಂತೆ ಪದ ಬಿಡಿಸಿ ಬರೆಯಿರಿ.
ಮಾದರಿ : ಧೈರ್ಯವಂತ = ಧೈರ್ಯ + ವಂತ
೧. ಗುಣವಂತ = ................................ + ................................
Answerಗುಣ + ವಂತ
೨. ಶೌರ್ಯವಂತ = ................................ + ................................
Answerಶೌರ್ಯ + ವಂತ
೩. ಶಕ್ತಿವಂತ = ................................ + ................................
Answerಶಕ್ತಿ + ವಂತ
೪. ಬುದ್ಧಿವಂತ = ................................ + ................................
Answerಬುದ್ಧಿ + ವಂತ
೫. ಹಣವಂತ = ................................ + ................................
Answerಹಣ + ವಂತ
ಇ. ಕೊಟ್ಟಿರುವ ಪದಗಳನ್ನು ಬಳಸಿ ಸ್ವಂತ ವಾಕ್ಯ ರಚಿಸಿ.
೧. ಘೋಷಣೆ = .......................................................................................................
Model sentenceಘೋಷಣೆ: ನಮ್ಮ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವದಂದು ದೇಶಭಕ್ತಿಯ ಘೋಷಣೆಗಳನ್ನು ಕೂಗಿದೆವು.
೨. ಅಹಿಂಸೆ = .......................................................................................................
Model sentenceಅಹಿಂಸೆ: ನಮ್ಮ ತಂದೆ ಸಣ್ಣ ಪುಟ್ಟ ಹುಳುಗಳನ್ನು ಸಹ ಕೊಲ್ಲದೆ ಅಹಿಂಸೆ ಪಾಲಿಸುತ್ತಾರೆ.
೩. ಜೋರಾಗಿ = .......................................................................................................
Model sentenceಜೋರಾಗಿ: ನಮ್ಮ ಶಿಕ್ಷಕರು ಪಾಠವನ್ನು ಜೋರಾಗಿ ಓದಲು ಹೇಳಿದರು.
೪. ಆಶ್ಚರ್ಯ = .......................................................................................................
Model sentenceಆಶ್ಚರ್ಯ: ನಮ್ಮ ತೋಟದಲ್ಲಿ ಒಂದೇ ದಿನದಲ್ಲಿ ಗುಲಾಬಿ ಹೂವು ಅರಳಿದ್ದನ್ನು ನೋಡಿ ನನಗೆ ಆಶ್ಚರ್ಯವಾಯಿತು.
೫. ಮೆರವಣಿಗೆ = .......................................................................................................
Model sentenceಮೆರವಣಿಗೆ: ಗಣೇಶ ಚತುರ್ಥಿಯಂದು ನಮ್ಮೂರಲ್ಲಿ ವಿಗ್ರಹದ ಮೆರವಣಿಗೆ ಭವ್ಯವಾಗಿ ನಡೆಯಿತು.
ಈ. ಈ ಕೆಳಗಿನ ಪದಗಳಿಗೆ ಶಬ್ದಕೋಶದಿಂದ ಅರ್ಥ ಹುಡುಕಿ ಬರೆಯಿರಿ
೧. ನೆರವು = .......................................................
೨. ಹರಸು = .......................................................
Answerಹರಸು = ಆಶೀರ್ವದಿಸು
೩. ಅದ್ಭುತ = .......................................................
೪. ಕಸುಬು = .......................................................
ಬಳಕೆ ಚಟುವಟಿಕೆ (Application activity)
ಅ. ವೃತ್ತದೊಳಗಿನ ಪದವನ್ನು ಅದರ ಸಮಾನಾರ್ಥಕ ಪದಗಳೊಂದಿಗೆ ಗೆರೆ ಎಳೆದು ಜೋಡಿಸಿ
(A matching activity with three sets. Students must draw lines connecting the word in the center circle to its synonyms in the surrounding boxes:
Set 1: Center circle: **ಆಶ್ಚರ್ಯ**. Surrounding boxes: ಉಬ್ಬಸ, ಆನಂದ, ವಿಸ್ಮಯ / ಬೆರಗು, ಅಚ್ಚರಿ, ಸಂತೋಷ.
Answerಆಶ್ಚರ್ಯ : ವಿಸ್ಮಯ, ಬೆರಗು, ಅಚ್ಚರಿ
Set 2: Center circle: **ಕಾಡು**. Surrounding boxes: ಬಯಲು, ಪಟ್ಟಣ, ಅಡವಿ / ಅರಣ್ಯ, ಪೀಡಿಸು, ಕಾನನ.
Answerಕಾಡು : ಅಡವಿ, ಅರಣ್ಯ, ಕಾನನ
Set 3: Center circle: **ಸುಳಿವು**. Surrounding boxes: ಚತುರ, ಗುರುತು / ಕುರುಹು, ನೆನಪು.)
Answerಸುಳಿವು : ಗುರುತು, ಕುರುಹು
ಆ. ಕೊಟ್ಟಿರುವ ಅಕ್ಷರ ಬಳಸಿ ಪದ ರಚಿಸಿ, ಅಕ್ಷರ ಬಂಧ ಪೂರ್ಣಗೊಳಿಸು. ರಚನೆಯಾದ ಪದಗಳನ್ನು ಖಾಲಿ ಜಾಗದಲ್ಲಿ ಬರೆಯಿರಿ (ಡೆ, ಣ, ರ, ನೆ, ವು)
(A crossword-style letter grid puzzle with empty blue boxes and pre-filled red letters: ನೆ, ಸಾ, ರ, ಹ, ಸು, ಪ, ಯ, ತೆ. Students must complete the grid using the letters provided in brackets — ಡೆ, ಣ, ರ, ನೆ, ವು — and write the resulting formed words on the five blank lines provided below the grid.)
(At the very bottom, a box held by a cartoon student character contains the following text):
ನೀನೀಗ ಪಠ್ಯವನ್ನು ಓದಿದ ಅನಂತರ ಹೇಗೆ? ಏಕೆ? ಎಂಬ ಪ್ರಶ್ನೆಗಳಿಗೆ ಉತ್ತರಿಸುವ ಸಾಮರ್ಥ್ಯವನ್ನು ನಿನ್ನದಾಗಿಸಿಕೊಂಡಿರುವೆ ಅಲ್ಲವೆ?