CRECT Education

Practice & Play: Budhdhivantha Ramakrishna (Lesson 2 Part 2)

Description

Comprehension questions and language games from the Kannada Class 4 story 'Budhdhivantha Ramakrishna'.

ಗದ್ಯ (prose) · Committee-authored

ಪಠ್ಯFull text

ಒಂದು ಸಲ ವಿದ್ಯಾಸಾಗರನೆಂಬ ಮಹಾನ್ ಪಂಡಿತ ಕೃಷ್ಣದೇವರಾಯನ ಆಸ್ಥಾನಕ್ಕೆ ಬಂದನು. ಅವನ ಖ್ಯಾತಿ ಎಲ್ಲ ಕಡೆ ಹಬ್ಬಿತ್ತು. ಸಂಸ್ಕೃತದಲ್ಲಿ ಅವನು ಮಹಾಮೇಧಾವಿಯಾಗಿದ್ದನು. ವಿದ್ಯಾಭಿಮಾನಿಯಾದ ಕೃಷ್ಣದೇವರಾಯ ಅವನನ್ನು ಸ್ವಾಗತಿಸಿ ಸತ್ಕರಿಸಿದನು. "ಮಹಾಪ್ರಭು ನಾನು ನಿಮ್ಮ ಆಸ್ಥಾನದ ಪಂಡಿತರೊಡನೆ ವಾದ ಮಾಡಲು ಬಂದಿದ್ದೇನೆ" ಎಂದನು ವಿದ್ಯಾಸಾಗರ. ಕೃಷ್ಣದೇವರಾಯ ಅದಕ್ಕೊಪ್ಪಿ ತನ್ನ ಆಸ್ಥಾನದ ಪಂಡಿತರ ಕಡೆ ನೋಡಿದ. ಅವರಾರೂ ವಾದ ಮಾಡಲು ಆಸಕ್ತಿ ತೋರಿಸಲಿಲ್ಲ. ಎಲ್ಲರೂ ಮೌನವಾಗಿರುವುದನ್ನು ಕಂಡ ವಿದ್ಯಾಸಾಗರ "ಇಂಥ ದೊಡ್ಡ ರಾಜನ ಆಸ್ಥಾನದಲ್ಲಿ ನನ್ನನ್ನು ಸೋಲಿಸುವ ಒಬ್ಬ ಪಂಡಿತನೂ ಇಲ್ಲವೆನ್ನುವುದು ಬೇಸರದ ಸಂಗತಿ. ಈ ವಿಷಯ ಮೊದಲೇ ತಿಳಿದಿದ್ದರೆ ನಾನು ಇಲ್ಲಿಗೆ ಬರುತ್ತಲೇ ಇರಲಿಲ್ಲ" ಎಂದನು. ಆಗ ತೆನಾಲಿರಾಮಕೃಷ್ಣ ಎದ್ದು ನಿಂತು "ಇಷ್ಟು ಬೇಗನೆ ನೀವು ಈ ತೀರ್ಮಾನಕ್ಕೆ ಬರಬೇಡಿ" ಎಂದನು. ವಿದ್ಯಾಸಾಗರ ಅವನತ್ತ ನೋಡಿ, "ನೀವು ಯಾರು?" ಎಂದು ಕೇಳಿದನು. "ನಾನು ಒಂದೆರಡು ಗ್ರಂಥಗಳನ್ನು ಬರೆದಿದ್ದೇನೆ. ನನ್ನನ್ನು ತೆನಾಲಿ ರಾಮಕೃಷ್ಣ ಎನ್ನುತ್ತಾರೆ" ಎಂದನು. ವಿದ್ಯಾಸಾಗರನ ಮುಖ ಅರಳಿತು. "ಹೌದೇನು? ನಾನು ನಿಮ್ಮ ಬುದ್ಧಿವಂತಿಕೆ ಬಗ್ಗೆ ಕೇಳಿದ್ದೇನೆ. ಆದರೆ ಬುದ್ಧಿಚಾತುರ್ಯಕ್ಕಿಂತ ಮುಖ್ಯವಾಗಿ ಆಳವಾಗಿ ಅಧ್ಯಯನ ಮಾಡಿದವರು ಮಾತ್ರ ನನ್ನೊಂದಿಗೆ ವಾದ ಮಾಡಲು ಸಾಧ್ಯ" ಎಂದನು. "ಅದು ನನಗೂ ತಿಳಿದಿದೆ. ನೀವು ಯಾವ ಗ್ರಂಥದ ಮೇಲೆ ವಾದ ಮಾಡುತ್ತೀರಿ?" ಪ್ರಶ್ನಿಸಿದ ರಾಮಕೃಷ್ಣ. ಇದಕ್ಕೆ ವಿದ್ಯಾಸಾಗರ "ನಿಮಗೆ ಇಷ್ಟವಾದ ಯಾವುದೇ ಸಂಸ್ಕೃತ ಗ್ರಂಥವಾಗಬಹುದು" ಎಂದನು. "ಹಾಗಾದರೆ ನಾಳೆ ಸಂಜೆ ಇದೇ ಹೊತ್ತಿಗೆ ನಿಮ್ಮೊಂದಿಗೆ ವಾದ ಮಾಡಲು ಸಿದ್ಧನಾಗಿ ಬರುತ್ತೇನೆ" ಎಂದನು ರಾಮಕೃಷ್ಣ. ಮಾರನೆಯ ದಿನ ವಿದ್ಯಾಸಾಗರ ಹಮ್ಮಿನಿಂದ ಆಸ್ಥಾನವನ್ನು ಪ್ರವೇಶಿಸಿ ತನ್ನ ಪೀಠದಲ್ಲಿ ಕುಳಿತನು. ಇವನೇಂಥ ವಾದ ಮಾಡುತ್ತಾನೆಂದು ಎಲ್ಲರೂ ಆಶ್ಚರ್ಯದಿಂದ ಕಾದು ಕುಳಿತಿದ್ದರು. ರಾಮಕೃಷ್ಣ ಸ್ವಲ್ಪ ಹೊತ್ತಿನ ಅನಂತರ ಬಟ್ಟೆಯಲ್ಲಿ ಸುತ್ತಿದ ಕಟ್ಟನ್ನು ಸೇವಕನ ಕೈಯಲ್ಲಿ ಹಿಡಿಸಿಕೊಂಡು ಸಭೆಗೆ ಬಂದನು. ಆ ಕಟ್ಟಿನಲ್ಲಿ ಏನಿದೆಯೆಂದು ಯಾರಿಗೂ ಗೊತ್ತಾಗಲಿಲ್ಲ. ರಾಮಕೃಷ್ಣ ತನ್ನ ಪೀಠದಲ್ಲಿ ಕುಳಿತು ವಿದ್ಯಾಸಾಗರನಿಗೆ ಹೇಳಿದನು. "ನಾನು ಸಿದ್ಧನಾಗಿದ್ದೇನೆ ಸ್ವಾಮಿ." "ನಾನೂ ಸಿದ್ಧ, ಪ್ರಾರಂಭಿಸೋಣ" ಎಂದನು ವಿದ್ಯಾಸಾಗರ. "ವಾದಕ್ಕೆ ಯಾವುದೇ ಗ್ರಂಥವನ್ನು ನಾನು ಆರಿಸಿಕೊಳ್ಳಬಹುದೆಂದು ತಾವು ಹೇಳಿದ್ದಿರಿ" ಎಂದನು ರಾಮಕೃಷ್ಣ. ಇದಕ್ಕೆ ವಿದ್ಯಾಸಾಗರ "ಹೌದೆ! ಯಾವುದನ್ನು ಬೇಕಾದರೂ ಆರಿಸಿಕೊಳ್ಳಿ" ಎಂದನು. ತನ್ನ ಎದುರಿಗಿದ್ದ ಕಟ್ಟನ್ನು ತೋರಿಸಿ "ನಾನು ಈಗ ಈ 'ತಿಲಕಾಷ್ಟಮಹಿಷಬಂಧನ'ದ ಮೇಲೆ ವಾದ ಮಾಡುತ್ತೇನೆ. ಆರಂಭಿಸಲೇ?" ಎಂದನು. 'ತಿಲಕಾಷ್ಟಮಹಿಷಬಂಧನ!' ವಿದ್ಯಾಸಾಗರ ಕಣ್ಣರಳಿಸಿ "ಅದು...! ಅದು...!" ಎಂದು ತೊದಲಿದನು. "ಏಕೆ? ನಿಮಗೆ 'ತಿಲಕಾಷ್ಟಮಹಿಷಬಂಧನ' ತಿಳಿದಿಲ್ಲವೆ? ಇದು ನಮ್ಮೂರಿನಲ್ಲಿ ದನ ಕಾಯುವ ಹುಡುಗರಿಗೂ ಗೊತ್ತು" ಎಂದು ಹೆಮ್ಮೆಯಿಂದ ಹೇಳಿದನು ರಾಮಕೃಷ್ಣ. ವಿದ್ಯಾಸಾಗರ ತಲೆ ಕೆರೆದುಕೊಂಡನು. ಮುಖ ಮಂಕಾಯಿತು. ಎಷ್ಟು ಯೋಚಿಸಿದರೂ 'ತಿಲಕಾಷ್ಟಮಹಿಷಬಂಧನ' ಗ್ರಂಥ ಅವನ ನೆನಪಿಗೆ ಬರಲಿಲ್ಲ. 'ಇದೊಂದು ಹೇಗೆ ನನ್ನ ಕಣ್ಣ ತಪ್ಪಿಸಿಕೊಂಡಿತು' ಎಂದು ಅವನು ಪೇಚಾಡಿಕೊಂಡನು. "ಮಹಾಪ್ರಭು, ಏಕೋ ನನ್ನ ದೇಹಾರೋಗ್ಯ ಸರಿಯಿಲ್ಲ. ವಾದವನ್ನು ನಾಳೆ ಆರಂಭಿಸಲು ಅಪ್ಪಣೆ ಕೊಡಿ" ಎಂದು ವಿದ್ಯಾಸಾಗರನು ಮಹಾರಾಜನನ್ನು ಬೇಡಿಕೊಂಡನು. "ಆಗಬಹುದು" ರಾಜ ಅಪ್ಪಣೆ ಕೊಟ್ಟನು. ತಕ್ಷಣ ವಿದ್ಯಾಸಾಗರ ಜಾಗ ಖಾಲಿ ಮಾಡಿದನು. ರಾಮಕೃಷ್ಣನೂ ಏನೂ ಮಾತನಾಡದೆ ಮನೆಗೆ ಹೋದನು. ಮರುದಿನ ಅದೇ ಸಮಯಕ್ಕೆ ಅದೇ ಕಟ್ಟನ್ನು ತೆಗೆದುಕೊಂಡು ರಾಮಕೃಷ್ಣ ಗಂಭೀರವಾಗಿ ಸಭೆಗೆ ಬಂದನು. ಆದರೆ ಬಹಳ ಹೊತ್ತಾದರೂ ವಿದ್ಯಾಸಾಗರ ಬರಲೇ ಇಲ್ಲ. ಅವನನ್ನು ಕರೆತರಲು ಆಳುಗಳು ಹೋದರು. ಆದರೆ ವಿದ್ಯಾಸಾಗರ ರಾತ್ರೋರಾತ್ರಿ ಅಲ್ಲಿಂದ ಪಲಾಯನ ಮಾಡಿರುವ ವಿಷಯ ತಿಳಿಯಿತು. ಇದೀ ಸಭೆ ರಾಮಕೃಷ್ಣನಿಗೆ ಜಯಕಾರ ಹಾಕಿತು. "ನಿನ್ನಿಂದ ನನ್ನ ಆಸ್ಥಾನದ ಮರ್ಯಾದೆ ಉಳಿಯಿತು. ನಾನು 'ತಿಲಕಾಷ್ಟಮಹಿಷಬಂಧನ' ಎಂಬ ಗ್ರಂಥವನ್ನು ಕೇಳಿಯೇ ಇಲ್ಲ. ಎಲ್ಲಿ ಅದನ್ನು ಕೊಡು ನೋಡೋಣ" ಎಂದು ಕೃಷ್ಣದೇವರಾಯನು ಮೆಚ್ಚುಗೆಯಿಂದ ನುಡಿದನು. ರಾಮಕೃಷ್ಣನು ಕಟ್ಟನ್ನು ಬಿಚ್ಚಿದನು. ಅದರಲ್ಲಿ ಒಂದಷ್ಟು ಕಟ್ಟಿಗೆಗಳನ್ನು ಒಂದು ಹಗ್ಗದಿಂದ ಕಟ್ಟಲಾಗಿತ್ತು. ರಾಜ ಆಶ್ಚರ್ಯದಿಂದ "ಇದೇನಿದು?" ಎಂದನು. ಆಗ ರಾಮಕೃಷ್ಣನು "ಇದು ಎಳ್ಳಿನ ಕಡ್ಡಿಗಳು, ಅಂದರೆ ತಿಲಕಾಷ್ಟ. ಇದು ಎಮ್ಮೆ ಕಟ್ಟುವ ಹಗ್ಗ, ಅಂದರೆ ಮಹಿಷಬಂಧನ. ಆದೇ 'ತಿಲಕಾಷ್ಟಮಹಿಷಬಂಧನ'. ಇದಾವುದೋ ಮಹಾಗ್ರಂಥವಿರಬೇಕೆಂದು ಹೆದರಿ ಪಾಪ ವಿದ್ಯಾಸಾಗರ ಓಡಿಹೋದನು" ಎಂದನು. ಎಲ್ಲರೂ ಬಹಳ ಹೊತ್ತು ಸಭಾಸ್ಥಾನವನ್ನು ತುಂಬಿತು. ರಾಮಕೃಷ್ಣನ ಬುದ್ಧಿವಂತಿಕೆಯನ್ನು ಮೆಚ್ಚಿದ ಕೃಷ್ಣದೇವರಾಯ ಅವನನ್ನು ಸನ್ಮಾನಿಸಿದನು.

"ವಿದ್ಯೆ ವಿನಯವನ್ನು ಕಲಿಸುತ್ತದೆ. ಬುದ್ಧಿ ವಿವೇಕವನ್ನು ಕಲಿಸುತ್ತದೆ." — "Education teaches humility. Intelligence teaches wisdom." (printed as the lesson's closing moral in the book)

ಪದಗಳ ಅರ್ಥword meanings

KannadaPronunciationMeaning
ಸತ್ಕರಿಸುsat-kari-suhonor, welcome
ವಾದvaa-dadebate
ಪೇಚಾಡುpay-chaa-dube troubled, flustered
ಅಪ್ಪಣೆap-pa-nepermission, order
ಪಂಡಿತpan-di-tascholar
ಪೀಠpee-thaseat, throne

ಟಿಪ್ಪಣಿnotes

  • ಪಲಾಯನ — fleeing without anyone noticing
  • ಪಕ್ಷಪಾತಿ — one who takes sides / is biased
  • ಮುಖ ಅರಳಿಸು — a face lighting up with joy

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಅ. ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ

  1. 1. ಕೃಷ್ಣದೇವರಾಯನ ಆಸ್ಥಾನಕ್ಕೆ ಬಂದವರು ಯಾರು?

    Answer

    ಕೃಷ್ಣದೇವರಾಯನ ಆಸ್ಥಾನಕ್ಕೆ ವಿದ್ಯಾಸಾಗರನೆಂಬ ಮಹಾನ್ ಪಂಡಿತ ಬಂದನು.

  2. 2. ವಿದ್ಯಾಸಾಗರನು ಕೃಷ್ಣದೇವರಾಯನಿಗೆ ಹಾಕಿದ ಸವಾಲು ಯಾವುದು?

    Answer

    ವಿದ್ಯಾಸಾಗರನು ಕೃಷ್ಣದೇವರಾಯನ ಆಸ್ಥಾನದ ಪಂಡಿತರೊಡನೆ ವಾದ ಮಾಡಲು ಸವಾಲು ಹಾಕಿದನು.

  3. 3. ವಿದ್ಯಾಸಾಗರನೊಂದಿಗೆ ವಾದ ಮಾಡಲು ಒಪ್ಪಿಕೊಂಡವರು ಯಾರು?

    Answer

    ವಿದ್ಯಾಸಾಗರನೊಂದಿಗೆ ವಾದ ಮಾಡಲು ತೆನಾಲಿರಾಮಕೃಷ್ಣನು ಒಪ್ಪಿಕೊಂಡನು.

  4. 4. ತೆನಾಲಿ ರಾಮಕೃಷ್ಣನು ವಾದಕ್ಕೆ ಯಾವ ಗ್ರಂಥವನ್ನು ಆರಿಸಿಕೊಂಡನು?

    Answer

    ತೆನಾಲಿ ರಾಮಕೃಷ್ಣನು ವಾದಕ್ಕೆ 'ತಿಲಕಾಷ್ಟಮಹಿಷಬಂಧನ' ಎಂಬ ಗ್ರಂಥವನ್ನು ಆರಿಸಿಕೊಂಡನು.

ಆ. ಎರಡು/ಮೂರು ವಾಕ್ಯಗಳಲ್ಲಿ ಉತ್ತರ ಬರೆಯಿರಿ

  1. 1. ವಿದ್ಯಾಸಾಗರನು ಕೃಷ್ಣದೇವರಾಯನ ಆಸ್ಥಾನಕ್ಕೆ ಏಕೆ ಬಂದನು?

    Answer

    ವಿದ್ಯಾಸಾಗರನು ಸಂಸ್ಕೃತದಲ್ಲಿ ಮಹಾಮೇಧಾವಿಯಾಗಿದ್ದನು. ಅವನು ಕೃಷ್ಣದೇವರಾಯನ ಆಸ್ಥಾನದ ಪಂಡಿತರೊಡನೆ ವಾದ ಮಾಡಲು ಬಂದನು.

  2. 2. ವಿದ್ಯಾಸಾಗರನ ಮುಖ ಏಕೆ ಅರಳಿತು?

    Answer

    ತೆನಾಲಿ ರಾಮಕೃಷ್ಣನು ತನ್ನನ್ನು ಪರಿಚಯಿಸಿಕೊಂಡಾಗ, ಅವನ ಬುದ್ಧಿವಂತಿಕೆಯ ಬಗ್ಗೆ ಕೇಳಿದ್ದ ವಿದ್ಯಾಸಾಗರನಿಗೆ ಸಂತೋಷವಾಯಿತು. ಆದ್ದರಿಂದ ಅವನ ಮುಖ ಅರಳಿತು.

  3. 3. ತಿಲಕಾಷ್ಟಮಹಿಷಬಂಧನ ಎಂದರೇನು?

    Answer

    ತಿಲಕಾಷ್ಟ ಎಂದರೆ ಎಳ್ಳಿನ ಕಡ್ಡಿಗಳು. ಮಹಿಷಬಂಧನ ಎಂದರೆ ಎಮ್ಮೆ ಕಟ್ಟುವ ಹಗ್ಗ. ಇವೆರಡನ್ನೂ ಒಟ್ಟಿಗೆ ಕಟ್ಟಿದ್ದು 'ತಿಲಕಾಷ್ಟಮಹಿಷಬಂಧನ'.

ಇ. ಕೊಟ್ಟಿರುವ ಮಾತನ್ನು ಯಾರು? ಯಾರಿಗೆ ಹೇಳಿದರು?

  1. 1. 'ಈ ವಿಷಯ ಮೊದಲೇ ತಿಳಿದಿದ್ದರೆ ನಾನು ಇಲ್ಲಿಗೆ ಬರುತ್ತಲೇ ಇರಲಿಲ್ಲ.' — ಯಾರು? / ಯಾರಿಗೆ?

    Answer

    ವಿದ್ಯಾಸಾಗರನು ಕೃಷ್ಣದೇವರಾಯನಿಗೆ ಹೇಳಿದನು.

  2. 2. 'ಯಾವುದನ್ನು ಬೇಕಾದರೂ ಆರಿಸಿಕೊಳ್ಳಿ.' — ಯಾರು? / ಯಾರಿಗೆ?

    Answer

    ವಿದ್ಯಾಸಾಗರನು ತೆನಾಲಿ ರಾಮಕೃಷ್ಣನಿಗೆ ಹೇಳಿದನು.

  3. 3. 'ಇದು ನಮ್ಮೂರಿನ ದನಕಾಯುವ ಹುಡುಗರಿಗೂ ಗೊತ್ತು.' — ಯಾರು? / ಯಾರಿಗೆ?

    Answer

    ತೆನಾಲಿ ರಾಮಕೃಷ್ಣನು ವಿದ್ಯಾಸಾಗರನಿಗೆ ಹೇಳಿದನು.

  4. 4. 'ಮಹಾಪ್ರಭು ಏಕೋ ನನ್ನ ದೇಹಾರೋಗ್ಯ ಸರಿಯಿಲ್ಲ.' — ಯಾರು? / ಯಾರಿಗೆ?

    Answer

    ವಿದ್ಯಾಸಾಗರನು ಕೃಷ್ಣದೇವರಾಯನಿಗೆ ಹೇಳಿದನು.

ಭಾಷಾ ಚಟುವಟಿಕೆ

  1. ಅ. ಮಾದರಿಯಂತೆ ಕೂಡಿಸಿ ರಚಿಸಿ ಬರೆಯಿರಿ — ಮಾದರಿ: ಎಮ್ಮೆ + ಗಳು = ಎಮ್ಮೆಗಳು.

  2. 1. ಕಟ್ಟಿಗೆ + ಗಳು 2. ಮುಖ + ಗಳು 3. ಗ್ರಂಥ + ಗಳು 4. ಕಣ್ಣು + ಗಳು

    Answer

    ಕಟ್ಟಿಗೆಗಳು ಮುಖಗಳು ಗ್ರಂಥಗಳು ಕಣ್ಣುಗಳು

  3. ಆ. ಈ ಕೆಳಗಿನ ವಾಕ್ಯಗಳನ್ನು ಸರಿಪಡಿಸಿ ಬರೆಯಿರಿ:

  4. 1. ನಾವು ಶಾಲೆಗೆ ಹೋಗುತ್ತೇನೆ.

    Answer

    ನಾವು ಶಾಲೆಗೆ ಹೋಗುತ್ತೇವೆ.

  5. 2. ಶೀಲಾ ಕಥೆ ಬರೆಯುತ್ತಾನೆ.

    Answer

    ಶೀಲಾ ಕಥೆ ಬರೆಯುತ್ತಾಳೆ.

  6. 3. ಇಂದು ಮಳೆ ಬರುವ ಸಾಧ್ಯತೆ ಇವೆ.

    Answer

    ಇಂದು ಮಳೆ ಬರುವ ಸಾಧ್ಯತೆ ಇದೆ.

  7. 4. ನಮ್ಮ ತರಗತಿಯಲ್ಲಿ ಹುಡುಗ ಇದ್ದಾರೆ.

    Answer

    ನಮ್ಮ ತರಗತಿಯಲ್ಲಿ ಹುಡುಗ ಇದ್ದಾನೆ.

  8. 5. ಕಾಡಿನಲ್ಲಿ ಮರಗಳು ಇದೆ.

    Answer

    ಕಾಡಿನಲ್ಲಿ ಮರಗಳು ಇವೆ.

ಬಳಕೆ ಚಟುವಟಿಕೆ

  1. ಅ. ಕವನ ಓದಿ, ಇದಕ್ಕೊಂದು ಹೆಸರು ಸೂಚಿಸಿ — a short poem about a monkey stealing a pot, taking

  2. it to a shop, being given jaggery and butter, spilling the payasa it made, and crying when

  3. it got burned ("ಕೋತಿಯೊಂದು ಬಂದಿತು ಮಡಕೆಯನು ತಂದಿತು...").

  4. ಆ. ಸಂಭಾಷಣೆ ಓದಿ, ಇದನ್ನು ಕಥೆಯ ರೂಪದಲ್ಲಿ ಬರೆಯಿರಿ — a dialogue between a minister (ಮಂತ್ರಿ), a

  5. soldier (ಸೈನಿಕ), and a young man (ಯುವಕ) about a stolen bundle of gold found buried in a

  6. field, and the young man's honesty in returning/claiming it properly.

  7. ಇ. ಪತ್ರಿಕೆಗಳಲ್ಲಿ ಬರುವ ಮಕ್ಕಳ ವಿಭಾಗದಿಂದ ಕಥೆಗಳನ್ನು ಸಂಗ್ರಹಿಸಿ ತರಗತಿಯಲ್ಲಿ ಶಿಕ್ಷಕ ಸಹಾಯದಿಂದ ಓದಿ.

Interactive Lab

ಸತ್ಕರಿಸುsat-kari-suhonor, welcome
ವಾದvaa-dadebate
ಪೇಚಾಡುpay-chaa-dube troubled, flustered
ಅಪ್ಪಣೆap-pa-nepermission, order
ಪಂಡಿತpan-di-tascholar
ಪೀಠpee-thaseat, throne