ಪದ್ಯ · ಬುದ್ದಣ್ಣ ಹಿಂಗಮಿರೆ
ಪಠ್ಯFull text
ನನಗೆ ಹಂಬಲವೊಂದೆ
ದುಡಿದೆ ದುಡಿವುದೆ ಸತತ
ಲೆಕ್ಕಿಸದೆ ದುಃಖವನು
ಎಲುಬು, ಕಬ್ಬಿಣದಂತೆ ಗಟ್ಟಿಗೊಳಲಿ
ಈ ಹಗಲು ಇನ್ನಷ್ಟು ಉದ್ದವಾಗಲಿ,
ಮಣ್ಣಿನಲಿ, ಕಣ್ಣಿನಲಿ
ಗದ್ದೆಯಲಿ, ಗೆಡ್ಡೆಯಲಿ
ಸುರಿಸುವೆನು ಬೆವರು ಹೊಳೆ
ನಾ ದುಡಿವ ನಾಡ ನೆಲ ಹಿರಿದಾಗಲಿ!
ನನ್ನ ಹೆಮ್ಮೆಗೆ ಸದಾ ಗರಿಯೊಡೆಯುತಿರಲಿ,
ನೆಲಕೆ ಗೆಯ್ಯುವ ಕರ್ಮ
ನನ್ನ ಜೀವನ ಧರ್ಮ
ಅಖಂಡ ಕಾಯಕ ತಪಸು
ಮಣ್ಣ ಕಣ ಕಣ ನನ್ನ ಸಿರಿಯಾಗಲಿ
ದುಡಿವುದೊಂದೇ ನಿರಂತರ ಫಲವಾಗಲಿ
ನನ್ನ ಪ್ರಾಮಾಣಿಕತೆಗೆ
ಈ ನೆಲ-ಜಲ-ಬಾನು
ತಕ್ಕಂತೆ ಫಲ ನೀಡಲಿ
ನನ್ನ ರಟ್ಟೆಯ ಬಲವು ಹಿಗ್ಗುತಿರಲಿ!
ಅಭ್ಯಾಸexercises from the textbook
Model answers — a guide, not the only correct wording. Check with your teacher.
ಅ. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.
೧. ರೈತನ ಹಂಬಲ ಯಾವುದು?
Answerರೈತನ ಹಂಬಲವು ದುಡಿದು ದುಡಿಯುವುದೇ ಸತತವಾಗಿದೆ.
೨. ರೈತನ ನಿರಂತರ ಫಲ ಯಾವುದು?
Answerರೈತನ ನಿರಂತರ ಫಲವು ದುಡಿಯುವುದೇ ಆಗಿದೆ.
೩. ರೈತನು ಯಾವುದಕ್ಕೆ ತಕ್ಕಫಲ ನೀಡಲೆಂದು ಆಶಿಸುತ್ತಾನೆ?
Answerರೈತನು ತನ್ನ ಪ್ರಾಮಾಣಿಕತೆಗೆ ತಕ್ಕಂತೆ ಫಲ ನೀಡಲೆಂದು ನೆಲ-ಜಲ-ಬಾನುಗಳಿಗೆ ಆಶಿಸುತ್ತಾನೆ.
೪. ನಾಡನೆಲ ಏನಾಗಲೆಂದು ರೈತ ಹಂಬಲಿಸುತ್ತಾನೆ?
Answerರೈತನು ತಾನು ದುಡಿಯುವ ನಾಡ ನೆಲವು ಹಿರಿದಾಗಲೆಂದು ಹಂಬಲಿಸುತ್ತಾನೆ.
೫. ರೈತನು ಯಾವುದು ಸಿರಿಯಾಗಲಿ ಎನ್ನುತ್ತಾನೆ?
Answerರೈತನು ಮಣ್ಣಿನ ಕಣ ಕಣವು ತನ್ನ ಸಿರಿಯಾಗಲಿ ಎನ್ನುತ್ತಾನೆ.