ಪದ್ಯ · ಬಿ.ವಿ. ಸತ್ಯನಾರಾಯಣರಾವ್
ಪಠ್ಯFull text
"ಕನ್ನಡ ನಾಡಿನಲ್ಲಿ ಕನ್ನಡವೇ ರಾಜ-ರಾಣಿ ಎಲ್ಲವೂ." — "In the land of Kannada, Kannada itself is the king, queen, and everything." A strong affirmation of linguistic pride and cultural sovereignty.
ಅಭ್ಯಾಸexercises from the textbook
Model answers — a guide, not the only correct wording. Check with your teacher.
ಅ. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.
೧. ಪಲ್ಲವರನ್ನು ಗೆದ್ದು ಮೆರೆದವರು ಯಾರು?
Answerಪಲ್ಲವರನ್ನು ಗೆದ್ದು ಮೆರೆದವರು ಕದಂಬಮಯೂರ.
೨. ಬಾದಾಮಿಯಲ್ಲಿ ಆಳ್ವಿಕೆ ನಡೆಸಿದವರಾರು?
Answerಬಾದಾಮಿಯಲ್ಲಿ ಆಳ್ವಿಕೆ ನಡೆಸಿದವರು ಚಾಲುಕ್ಯರು.
೩. ಯಾರ ಪತನದ ನಂತರ ವಿಜಯನಗರ ಬೆಳೆಯಿತು?
Answerಹೊಯ್ಸಳರ ಪತನದ ನಂತರ ವಿಜಯನಗರ ಬೆಳೆಯಿತು.
೪. ಯುದ್ಧದಲ್ಲಿ ಆಂಗ್ಲರನ್ನು ಎದುರಿಸಿ ಗೆದ್ದವರು ಯಾರು?
Answerಯುದ್ಧದಲ್ಲಿ ಆಂಗ್ಲರನ್ನು ಎದುರಿಸಿ ಗೆದ್ದವರು ಕಿತ್ತೂರಿನ ಚನ್ನಮ್ಮನು.
೫. ಭಾರತ ಸ್ವಾತಂತ್ರ್ಯದ ಚಳವಳಿ ಯಾರ ತತ್ವದಲ್ಲಿ ಬೆಳೆಯಿತು?
Answerಭಾರತ ಸ್ವಾತಂತ್ರ್ಯದ ಚಳವಳಿ ಗಾಂಧೀ ತತ್ವದಲ್ಲಿ ಬೆಳೆಯಿತು.
೬. ವಿಶಾಲ ಮೈಸೂರಿನ ಉದಯವಾದುದು ಯಾವಾಗ?
Answerವಿಶಾಲ ಮೈಸೂರಿನ ಉದಯವಾದುದು ಐವತ್ತಾರರ ನವೆಂಬರ್ ಒಂದರಂದು.
೭. ನಮ್ಮ ನಾಡಿನಲ್ಲಿ ಯಾವುದು ಗೆಲ್ಲಬೇಕು? ಯಾವುದು ಬಾಳಬೇಕು?
Answerನಮ್ಮ ನಾಡಿನಲ್ಲಿ ಕನ್ನಡ ಗೆಲ್ಲಬೇಕು ಮತ್ತು ಕನ್ನಡ ಬಾಳಬೇಕು.
ಆ. ಕೆಳಗಿನ ಪದ್ಯಭಾಗವನ್ನು ಪೂರ್ಣಗೊಳಿಸಿ, ಕಂಠಪಾಠ ಮಾಡಿರಿ.
೧. ಹೊಯ್ಸಳ ಪತನದ ________________________________________
Answerಹೊಯ್ಸಳ ಪತನದ ನಂತರ ಬೆಳೆಯಿತು ವಿಜಯನಗರವತಿ ಶೀಘ್ರದಲಿ ।
________________________________________ ಸಾಮ್ರಾಜ್ಯದಲಿ
Answerಲೋಕವೆ ಬೆರಗಾಗುವ ಸಿರಿಸಂಪದ ಮೆರೆಯಿತು ಈ ಸಾಮ್ರಾಜ್ಯದಲಿ ।
೨. ಯುದ್ಧದಿ ________________________________________
Answerಯುದ್ಧದಿ ಆಂಗ್ಲರನೆದುರಿಸಿ ಗೆದ್ದಳು ಚನ್ನಮ್ಮನು ಕಿತ್ತೂರಿನಲಿ ।
________________________________________ ಜೈಲಿನಲ್ಲಿ
Answerದ್ರೋಹಕೆ ಸೆರೆಯಾಗುತ ದಿನವನು ದೂಡಿದಳವಳು ಜೈಲಿನಲಿ ।
೩. ಹಿಂದೂ ಮುಸ್ಲಿಂ ________________________________________
Answerಹಿಂದೂ ಮುಸ್ಲಿಂ ಕ್ರೈಸ್ತ ಜೈನ ಬಸವೇಶ್ವರರ ಸಿರಿಪಂಥವಿದೆ ।
________________________________________ ಚಿಮ್ಮುತಿದೆ
Answerಕೊಂಕಣಿ ಉರ್ದು ತುಳುವಿನ ಸಂಸ್ಕೃತಿ ಕನ್ನಡತನಜಲ ಚಿಮ್ಮುತಿದೆ ।
೪. "ಕನ್ನಡಗೆಲ್ಲಲಿ ________________________________________
Answer“ಕನ್ನಡಗೆಲ್ಲಲಿ ಕನ್ನಡಬಾಳಲಿ” ನಮ್ಮೀ ಕನ್ನಡ ನೆಲದಲ್ಲಿ ।
________________________________________ ನಮ್ಮಯ ಕನ್ನಡನಾಡಿನಲಿ
Answer“ಕನ್ನಡ ಕಲಿಯಿರಿ ಕನ್ನಡ ಪೋಷಿಸಿ” ನಮ್ಮಯ ಕನ್ನಡನಾಡಿನಲಿ ।