ಪದ್ಯ · ಎಚ್. ಎಸ್. ಶಿವಪ್ರಕಾಶ್
ಪಠ್ಯFull text
ಪದಗಳ ಅರ್ಥword meanings
| Kannada | Pronunciation | Meaning |
|---|---|---|
| ಗಿರವಿಯಂಗಡಿ | — | ವಸ್ತುಗಳನ್ನು ಅಡವಿಟ್ಟುಕೊಂಡು ಹಣ ನೀಡುವ ಅಂಗಡಿ; ಗುಜರಿ - ಹಳೆಯ ವಸ್ತುಗಳನ್ನು ಮಾರುವ ಸ್ಥಳ; ಪಕ್ವತನ - ಮಾಗಿದ; ಕೊಬ್ಬು - ದಪ್ಪನಾಗು; ಕಮರು - ಕಂದು; ಖನಿ - ಗಣಿ, ಆಕರ; ದಕ್ಕು - ದೊರಕು |
ಅಭ್ಯಾಸexercises from the textbook
Model answers — a guide, not the only correct wording. Check with your teacher.
ಅ. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.
೧. ಕವಿಯ ಪ್ರಕಾರ ಮಗು ಏನಾಗಬೇಕು?
Answerಕವಿಯ ಪ್ರಕಾರ ಮಗು ಹಣ್ಣಾಗಬೇಕು.
೨. ಮಗು ಯಾವ ಹಣ್ಣಿನ ಹಾಗೆ ಬಾಗಬೇಕು?
Answerಮಗು ಪಕ್ವತನ ಬಿರಿದ ಬಾಳೆಹಣ್ಣಿನ ಹಾಗೆ ಬಾಗಬೇಕು.
೩. ಯಾವ ಹಣ್ಣಿನಂತೆ ಕುಗ್ಗಬೇಕು ಎಂದು ಕವಿಗಳು ಹೇಳುತ್ತಾರೆ?
Answerನಿಂಬೆ ಹಣ್ಣಿನಂತೆ ಕುಗ್ಗಬೇಕು ಎಂದು ಕವಿಗಳು ಹೇಳುತ್ತಾರೆ.
೪. ಅಪರೂಪವಾದ ಹಣ್ಣು ಯಾವುದು?
Answerಅಪರೂಪವಾದ ಹಣ್ಣು ಅಂಜೂರ.
೫. ಕಮರಿರುವ ಕಣ್ಣುಗಳಿಗೆ ಹೇಗೆ ಕಾಣಬೇಕು?
Answerಕಮರಿರುವ ಕಣ್ಣುಗಳಿಗೆ ದಳದಳಕೊಯ್ದು ಅರಳಿಸಿದ ದಾಳಿಂಬೆಯೊಳಗಿನ ಥಳಥಳ ಕೆಂಡ ಬಣ್ಣದ ಮಣಿಮಣಿ ಹನಿಹನಿ ತನಿರಸದ ಖನಿಯಾಗಿ ಕಾಣಬೇಕು.
ಆ. ಬಿಟ್ಟಸ್ಥಳ ತುಂಬಿರಿ.
೧. ಥಳ ಥಳ ಕೆಂಡ _________ ಮಣಿ ಮಣಿ.
Answerಥಳ ಥಳ ಕೆಂಡ ಬಣ್ಣ ಮಣಿ ಮಣಿ.
೨. ಹಬ್ಬಿಕೋ _________ ಬಳ್ಳಿಯ ಹಾಗೆ.
Answerಹಬ್ಬಿಕೋ ದ್ರಾಕ್ಷೆ ಬಳ್ಳಿಯ ಹಾಗೆ.
೩. ಎಲ್ಲರಿಗೂ _________ ಎಲಚಿಯಾಗು.
Answerಎಲ್ಲರಿಗೂ ದಕ್ಕುವ ಎಲಚಿಯಾಗು.
೪. ಬೆಲೆಯ _________ ಯಾನ ಹೊರದದಿರು.
Answerಬೆಲೆಯ ರಾಕೆಟ್ಟು ಯಾನ ಹೊರದದಿರು.
೫. ಸರಿಗಾತ್ರವಾಗಿ ಸಮನಿಸಲಿ _________
Answerಸರಿಗಾತ್ರವಾಗಿ ಸಮನಿಸಲಿ ನಿನ್ನತನ
ಇ. ಈ ಪದಗಳನ್ನು ಬಿಡಿಸಿ ಬರೆಯಿರಿ.
೧. ಹಣ್ಣಿನಂಗಡಿ
Answerಹಣ್ಣಿನ + ಅಂಗಡಿ
೨. ಕಣ್ಣರಳಿಸು
Answerಕಣ್ಣು + ಅರಳಿಸು
೩. ತುಂಟರೆಸೆಯುವ
Answerತುಂಟ + ಎಸೆಯುವ
೪. ಹುಳಿಗಟ್ಟುವುದು
Answerಹುಳಿ + ಕಟ್ಟುವುದು
೫. ನಿನ್ನೊಳಗೆ
Answerನಿನ್ನ + ಒಳಗೆ
೬. ಅಪರೂಪವಾಗು
Answerಅಪರೂಪ + ಆಗು
ಈ. ಕೆಳಗಿನ ಪದ್ಯಭಾಗವನ್ನು ಪೂರ್ಣಗೊಳಿಸಿ.
ಕೊಬ್ಬಿದರೆ ___________________________
Answerಕೊಬ್ಬಿದರೆ ಚಕೋತನೆಯ ಹಾಗೆ
__________________________________
Answerಕುಗ್ಗಿದರೆ ನಿಂಬೆ ಹಣ್ಣಿನ ಹಾಗೆ
__________________________________
Answerಹುಳಿಗಟ್ಟುವುದು ನಿನ್ನೊಳಗೆ
_________________________ನಿನ್ನತನ
Answerಸರಿಗಾತ್ರವಾಗಿ ಸಮನಿಸಲಿ ನಿನ್ನತನ
ವ್ಯಾಕರಣ ಮಾಹಿತಿ
ನಾವು ಹಿಂದಿನ ಪಾಠದಲ್ಲಿ ಕೆಲವು ಲೇಖನ ಚಿಹ್ನೆಗಳನ್ನು ಪರಿಚಯ ಮಾಡಿಕೊಂಡಿದ್ದೇವೆ. ಈಗ ಇನ್ನೂ ಕೆಲವು ಲೇಖನ ಚಿಹ್ನೆಗಳನ್ನು ತಿಳಿಯೋಣ.
ಕೆಳಗಿನ ವಾಕ್ಯಗಳನ್ನು ಗಮನಿಸಿರಿ :
೧. ನೌಕಾಸೇನೆ :- ಭಾರತೀಯ ನೌಕಾಸೇನೆ ಭೂಸೇನೆಯಷ್ಟೇ ಹಳೆಯದು. ಜಲಮಾರ್ಗದಲ್ಲಿ ವೈರಿಗಳನ್ನು ತಡೆಯಲು ನೌಕಾಸೇನೆ ಬಳಕೆಯಾಗುತ್ತದೆ.
ಇಲ್ಲಿ ವಾಕ್ಯದ ಶಿರೋನಾಮೆಯ ಅನಂತರ ವಿವರಣಾತ್ಮಕ ಚಿಹ್ನೆ (:-) ಬಳಕೆಯಾಗಿದೆ. ಅಭಿಪ್ರಾಯದ ವಿವರಣೆ ಇಂತಿದೆ ಎನ್ನುವುದನ್ನು ತಿಳಿಸುವ ಸಂದರ್ಭದಲ್ಲಿ ಈ ಚಿಹ್ನೆ ಬಳಕೆಯಾಗುತ್ತದೆ.
೨. ಒಂದು ಬಿಲದೊಳಗೆ 'ಹಿರಣ್ಯರೋಮ' ಎಂಬ ಮೂಷಿಕವು ಮನೆಮಾಡಿಕೊಂಡಿತ್ತು. ಮೇಲಿನ ವಾಕ್ಯದಲ್ಲಿ 'ಹಿರಣ್ಯರೋಮ' ಈ ಪದಕ್ಕೆ ವಾಕ್ಯವೇಷ್ಟನ ಚಿಹ್ನೆ (' ') ಬಳಕೆಯಾಗಿದೆ. ಇದು ಪಾರಿಭಾಷಿಕ/ಪ್ರಧಾನ/ವಿಶಿಷ್ಟ ಪದಗಳನ್ನು ಬರೆಯುವಾಗ ಬಳಕೆಯಾಗುತ್ತದೆ.
೩. “ಸ್ವಾಮಿ, ನನಗೆ ಅದೃಷ್ಟವಿಲ್ಲ. ಈಗಲೂ ನನ್ನ ಹೃದಯ ಅವನಿಗಾಗಿ ಮಿಡಿಯುತ್ತಿದೆ. ಗಂಧರ್ವಸೇನ ನನ್ನ ಪ್ರೀತಿಯ ಕತ್ತೆ” ಎಂದು ಮಡಿವಾಳ್ತಿ ಬೊಬ್ಬಿಟ್ಟು ಅತ್ತಳು.
ಮೇಲಿನ ವಾಕ್ಯದಲ್ಲಿ ಉದ್ಧರಣ ಚಿಹ್ನೆ (“ ”) ಬಳಕೆಯಾಗಿದೆ. ಇದು ಬರವಣಿಗೆಯಲ್ಲಿ ಇನ್ನೊಬ್ಬರ ಹೇಳಿಕೆಯನ್ನು ಯಥಾವತ್ತಾಗಿ ಹೇಳುವಾಗ ಬಳಕೆ- ಯಾಗುತ್ತದೆ.
೪. ನರಿಯು ಕೊಕ್ಕರೆ(ನೀರುಹಕ್ಕಿ)ಯನ್ನು ಹಿಡಿಯಲು ಹೊಂಚು ಹಾಕಿತು.
ಮೇಲಿನ ವಾಕ್ಯದಲ್ಲಿ ಆವರಣ ಚಿಹ್ನೆ ( ) ಬಳಕೆಯಾಗಿದೆ. ಇದು ಹೆಚ್ಚಿನ ವಿವರಣೆಗಳನ್ನು, ಅರ್ಥಗಳನ್ನು ನೀಡುವ ಸಂದರ್ಭದಲ್ಲಿ ಬಳಕೆಯಾಗುತ್ತದೆ.