ಗದ್ಯ (prose) · ಸಂಪಾದಿತ (Edited)
ಪಠ್ಯFull text
"ಹಸಿರೇ ನಮ್ಮ ಉಸಿರು" — "Greenery is our breath."
ಅಭ್ಯಾಸexercises from the textbook
Model answers — a guide, not the only correct wording. Check with your teacher.
I. ಪದಗಳ ಅರ್ಥ :
| | |
|---|---|
| ಅಳಲು – ನೋವು; ದುಃಖ. | ಅಭಿಮಾನ – ಹೆಮ್ಮೆ |
| ಇಂಚರ – ಇಂಪಾದ ದನಿ; ಮಧುರ ದನಿ. | ಉಲ್ಲಾಸ – ಆನಂದ; ಲವಲವಿಕೆ. |
| ಋಣ – ಸಾಲ; ಹಂಗು; ರಿಣ. | ಕಂಗೊಳಿಸು – ಕಣ್ಣಿಗೆ ಅಂದವಾಗಿ ಕಾಣು |
| ಚೆಲ್ಲಾಟ – ವಿನೋದ; ವಿಲಾಸ. | ಜೀವತಳೆ – ಜೀವಪಡೆ; ಜೀವಹೊಂದು. |
| ತಂಪೆರೆ – ತೃಪ್ತಿ ನೀಡು | ತೂರಾಟ – ಮೇಲಕ್ಕೆ ಚಿಮ್ಮುವ ಆಟ. |
| ನಡುಗಡ್ಡೆ – ನೀರ ನಡುವಿರುವ ಚಿಕ್ಕ ಭೂಪ್ರದೇಶ. | ನಯನ – ಕಣ್ಣು; ನೇತ್ರ; ಅಕ್ಷಿ. |
| ನೀರುಣಿಸು – ನೀರುಹಾಕು | ನೊರೆ – ಬುರುಗು |
| ಪ್ರತೀತಿ – ಪ್ರಸಿದ್ಧಿ; ಜನಜನಿತ. | ಪ್ರವಾಸಿ ತಾಣ – ಪ್ರವಾಸಿಗರು ಬರುವ ಜಾಗ; ಪ್ರವಾಸಕ್ಕೆ ಯೋಗ್ಯವಾದ ಸ್ಥಳ. |
| ಬಣ್ಣಗೆಡು – ಕಳಾಹೀನವಾಗು; ಕಳೆಕುಂದು. | ಬೋಳುಮರ – ಎಲೆಗಳು ಸಂಪೂರ್ಣವಾಗಿ ಉದುರಿಹೋಗಿರುವ ಮರ. |
| ಮನೋಹರ – ಮನಸ್ಸಿಗೆ ಹಿತವಾದ | ಮಿನ ಮಿನ – ಫಳ ಫಳ |
| ಮಿರುಗು – ಹೊಳೆಯುವುದು | ಮೆಲುಗಾಳಿ – ಮೆಲ್ಲಗೆ ಬೀಸುವ ಗಾಳಿ |
| ಮೈದಳೆ – ಆಕಾರಹೊಂದು; ದೇಹ ಧರಿಸು. | ರಾರಾಜಿಸು – ಪ್ರಕಾಶಿಸು; ಶೋಭಿಸು; ಮಿರುಗು. |
| ಸೊರಗು – ಬಾಡು; ಕ್ಷೀಣವಾಗು. | ಹೊಂಬಣ್ಣ – ಚಿನ್ನದ ಬಣ್ಣ |
| ತಾಣ – ನೆಲೆ; ಜಾಗ. | ಸವರು- ಹಚ್ಚು; ಲೇಪಿಸು. |
| ಸತ್ಕಾರ್ಯ – ಒಳ್ಳೆಯ ಕೆಲಸ | ಸುಳಿ – ನದಿಯಲ್ಲಿ ನೀರು ವೃತ್ತಾಕಾರವಾಗಿ ಸುತ್ತುವ ರೀತಿ. |
ಹಸಿರೇ ಉಸಿರು – ನಾಣ್ಣುಡಿ, ಮರಗಿಡಗಳನ್ನು ಬೆಳೆಸಬೇಕು. ಅವು ಜೀವನಾಧಾರ, ಅವುಗಳಿಂದ ಜೀವ ಜಗತ್ತಿಗೆ ಆಮ್ಲಜನಕ ದೊರೆಯುತ್ತದೆ.
II. ಪ್ರಶ್ನೆಗಳು :
ಅ) ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.
೧. ನಾರದ ಗಡ್ಡೆ ಎಲ್ಲಿದೆ?
Answerನಾರದ ಗಡ್ಡೆಯು ರಾಯಚೂರು ಸಮೀಪದ ಕೃಷ್ಣಾ ನದಿಯಲ್ಲಿದೆ.
೨. ಪಕ್ಷಿ ಕೂಗುತ್ತಿದ್ದ ಬೋಳುಮರ ಯಾವ ರೀತಿ ಇತ್ತು?
Answerಪಕ್ಷಿ ಕೂಗುತ್ತಿದ್ದ ಬೋಳುಮರವು ಎಲೆಗಳಿಲ್ಲದ, ಹೂಗಳಿಲ್ಲದ, ಹಣ್ಣುಕಾಯಿಗಳಿಲ್ಲದ ಒಣಗುತ್ತಿರುವ ಮರವಾಗಿತ್ತು.
೩. ಮಕ್ಕಳು ಮಾಡಿದ ಸತ್ಕಾರ್ಯವನ್ನು ಪಕ್ಷಿಗಳು ಹೇಗೆ ಮೆಚ್ಚಿಕೊಂಡವು?
Answerಮಕ್ಕಳು ಮಾಡಿದ ಸತ್ಕಾರ್ಯವನ್ನು ಮೆಚ್ಚಿ ಪಕ್ಷಿಗಳು ಹಾಡಿದವು.
೪. ಮಕ್ಕಳ ಮನಸ್ಸಿಗೆ ಉಲ್ಲಾಸ ತಂದ ಸಂಗತಿ ಯಾವುದು?
Answerಮರದ ಸೊಬಗು ಮಕ್ಕಳ ಮನಸ್ಸಿಗೆ ಉಲ್ಲಾಸ ತಂದಿತು.
೫. ಪಕ್ಷಿಯ ಮಾತುಗಳಿಗೆ ಬಷೀರ್ ಏನೆಂದು ಪ್ರತಿಕ್ರಿಯಿಸಿದನು?
Answerಪಕ್ಷಿಯು ಮರದ ಬಗ್ಗೆ ಹೊಂದಿರುವ ಭಾವುಕತೆ ಮತ್ತು ಅಭಿಮಾನದ ಬಗ್ಗೆ ತನಗೆ ಅಚ್ಚರಿ ಉಂಟಾಗುತ್ತಿದೆ ಎಂದು ಬಷೀರ್ ಹೇಳಿದನು.
೬. ಪಕ್ಷಿಯ ಮಾತುಗಳನ್ನು ಕೇಳಿದ ದಿವ್ಯ ಯಾವ ತೀರ್ಮಾನಕ್ಕೆ ಬಂದಳು?
Answerಊರಿಗೆ ಹೋಗಿ ಸಸ್ಯ ವೈದ್ಯರನ್ನು ಕರೆತಂದು ಸೂಕ್ತ ಚಿಕಿತ್ಸೆ ಕೊಡಿಸಿ ಮರವನ್ನು ಉಳಿಸಬೇಕು ಮತ್ತು ಹಸಿರೇ ನಮ್ಮ ಉಸಿರು ಎಂಬ ನಾಣ್ಣುಡಿಯನ್ನು ಎಲ್ಲೆಡೆ ಸಾರಬೇಕು ಎಂದು ದಿವ್ಯಾ ತೀರ್ಮಾನಿಸಿದಳು.
೭. ಬೋಳುಮರ ಮೊದಲಿನಂತೆ ಹೇಗೆ ಜೀವ ತಳೆಯಿತು?
Answerಸಸ್ಯ ವೈದ್ಯರ ಚಿಕಿತ್ಸೆ ಮತ್ತು ಮಕ್ಕಳ ಆರೈಕೆಯಿಂದ ಮಳೆಗಾಲದಲ್ಲಿ ಮರವು ಚಿಗುರೊಡೆದು ಎಲೆ, ಹೂ, ಹಣ್ಣುಗಳನ್ನು ಪಡೆದು ಜೀವ ತಳೆಯಿತು.
೮. ಪಕ್ಷಿಗಳು ಯಾವುದನ್ನು ಮೆಚ್ಚಿ ಹಾಡು ಹಾಡಿದವು?
Answerಪಕ್ಷಿಗಳು ಮಕ್ಕಳು ಮಾಡಿದ ಸತ್ಕಾರ್ಯವನ್ನು ಮೆಚ್ಚಿ ಹಾಡು ಹಾಡಿದವು.
ಆ) ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.
೧. ಕೃಷ್ಣಾ ನದಿಯ ಓಟ ಯಾವ ರೀತಿ ನಯನ ಮನೋಹರವಾಗಿದೆ?
Answerಕೃಷ್ಣಾ ನದಿಯು ಮೈದುಂಬಿ ಹರಿಯುತ್ತಾಳೆ; ಅವಳ ಭೋರ್ಗರೆತ, ತೂರಾಟ, ಚೆಲ್ಲಾಟ ಮತ್ತು ಹರಿಯುವ ಓಟ ನಯನ ಮನೋಹರ. ಬೆಳ್ಳನೆಯ ನೊರೆ ಚೆಂದವಾಗಿದ್ದು, ಸುಳಿಗಳಲ್ಲಿ ಸುತ್ತುವ ನೀರು ಸೊಬಗಾಗಿದೆ; ಬೆಳಗಿನ ಎಳೆ ಬಿಸಿಲಿನ ಹೊಳಪಿಗೆ ನದಿ ಮಿನಮಿನ ಮಿರುಗುತ್ತದೆ.
೨. ನಾರದ ಗಡ್ಡೆಯ ವಿಶೇಷತೆಗಳೇನು?
Answerನಾರದ ಗಡ್ಡೆಯು ಕೃಷ್ಣಾ ನದಿಯಲ್ಲಿರುವ ಸುಂದರ ನಡುಗಡ್ಡೆಯಾಗಿದ್ದು ರಾಯಚೂರು ಸಮೀಪವಿದೆ. ಬಹಳ ಹಿಂದೆ ಇಲ್ಲಿ ನಾರದ ಮುನಿ ತಪಸ್ಸು ಮಾಡಿದ್ದರೆಂಬ ಪ್ರತೀತಿ ಇದೆ; ಇಲ್ಲಿ ಶಿವದೇವಾಲಯವೂ ಇದೆ. ಅದು ಸದಾ ಹಚ್ಚಹಸುರಿನಿಂದ ಕೂಡಿ ಗಿಡಮರಗಳಿಂದ ಕಂಗೊಳಿಸುತ್ತಿದ್ದು ಪ್ರವಾಸಿ ತಾಣವಾಗಿದೆ.
೩. ಗಣೇಶನು ಪಕ್ಷಿಯನ್ನು ಏನೆಂದು ಪ್ರಶ್ನಿಸಿದನು?
Answerಗಣೇಶನು ಪಕ್ಷಿಯನ್ನು, “ಏ! ಸುಂದರ ಪಕ್ಷಿಯೇ, ಎಲ್ಲರೂ ಸಂತೋಷದಿಂದ ಇದ್ದಾರೆ. ನೀನೇಕೆ ನೋವಿನಿಂದ ಕೂಗುತ್ತಿದ್ದೀಯಾ? ಏನದು ನಿನ್ನ ಅಳಲು?” ಎಂದು ಪ್ರಶ್ನಿಸಿದನು.
೪. ಬೋಳಾಗುವುದಕ್ಕೆ ಮೊದಲು ಮರದ ಸೊಬಗು ಹೇಗಿತ್ತೆಂದು ಪಕ್ಷಿ ವಿವರಿಸಿತು?
Answerಬೋಳಾಗುವುದಕ್ಕೆ ಮೊದಲು ಮರದ ತುಂಬಾ ಹಸಿರೆಲೆಗಳಿದ್ದವು; ಟೊಂಗೆ ಟೊಂಗೆಗೂ ಸಾವಿರಾರು ಹೂ ಮತ್ತು ಹಣ್ಣುಗಳಿದ್ದವು. ಅದು ತಂಪಾದ ನೆರಳು ನೀಡುತ್ತಿದ್ದು ನೂರಾರು ಪಕ್ಷಿಗಳಿಗೆ ಆಶ್ರಯತಾಣವಾಗಿತ್ತು.
೫. ಪಕ್ಷಿಗೆ ಮರದ ಮೇಲೆ ಪ್ರೀತಿ ಬೆಳೆಯಲು ಕಾರಣವೇನು?
Answerಪಕ್ಷಿಯ ಅಜ್ಜ-ಅಜ್ಜಿ, ಅಪ್ಪ-ಅಮ್ಮ, ಅಣ್ಣ-ತಮ್ಮ, ಅಕ್ಕ-ತಂಗಿ ಎಲ್ಲರೂ ಆ ಮರದಲ್ಲಿಯೇ ಹುಟ್ಟಿ ಬೆಳೆದಿದ್ದರು. ಪಕ್ಷಿಯೂ ಅಲ್ಲಿಯೇ ಜನ್ಮ ತಳೆದಿತ್ತು; ಆದ್ದರಿಂದ ಅದಕ್ಕೆ ಮರದ ಮೇಲೆ ಪ್ರೀತಿ ಬೆಳೆಯಿತು.
೬. ಸಸ್ಯ ವೈದ್ಯರು ಮರವನ್ನು ಹೇಗೆ ಉಪಚರಿಸಿದರು?
Answerಸಸ್ಯ ವೈದ್ಯರು ಮರವನ್ನು ಸಂಪೂರ್ಣವಾಗಿ ನೋಡಿ, ಟೊಂಗೆಯನ್ನು ಗಮನಿಸಿ, ಬೇರುಗಳಿಗೆ ಚುಚ್ಚುಮದ್ದು ನೀಡಿದರು. ಒಣಗಿದ ಭಾಗಕ್ಕೆ ಔಷಧಿ ಸವರಿದರು.
ಇ) ಈ ಕೆಳಗಿನ ಮಾತುಗಳನ್ನು ಯಾರು ಯಾರಿಗೆ ಹೇಳಿದರು? ತಿಳಿಸಿರಿ.
೧. “ನೀನೇಕೆ ನೋವಿನಿಂದ ಕೂಗುತ್ತಿದ್ದೀಯಾ?”
Answerಗಣೇಶನು ಪಕ್ಷಿಗೆ ಹೇಳಿದನು.
೨. “ಈ ಮರದ ಮೇಲೆ ಅಷ್ಟೊಂದು ಪ್ರೀತಿಯೇ?”
Answerಲತಾ ಪಕ್ಷಿಗೆ ಹೇಳಿದಳು.
೩. “ನಾನೂ ಇಲ್ಲಿಯೇ ಜನ್ಮ ತಳೆದೆ”.
Answerಪಕ್ಷಿಯು ಮಕ್ಕಳಿಗೆ ಹೇಳಿತು.
ಈ) ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ.
೧. ನಾರದ ಗಡ್ಡೆಯು ................................... ನದಿಯಲ್ಲಿದೆ.
Answerನಾರದ ಗಡ್ಡೆಯು ಕೃಷ್ಣಾ ನದಿಯಲ್ಲಿದೆ.
೨. ಹಕ್ಕಿಗಳ ................................... ಕಿವಿಗೆ ಇಂಪಾಗಿತ್ತು.
Answerಹಕ್ಕಿಗಳ ಕಲರವ ಕಿವಿಗೆ ಇಂಪಾಗಿತ್ತು.
೩. ಮರವು ನೂರಾರು ಪಕ್ಷಿಗಳಿಗೆ ................................... ಆಗಿತ್ತು.
Answerಮರವು ನೂರಾರು ಪಕ್ಷಿಗಳಿಗೆ ಆಶ್ರಯತಾಣವಾಗಿತ್ತು.
೪. ಹಸಿರೇ ................................... ಎಂದು ಎಲ್ಲೆಡೆ ಸಾರೋಣ.
Answerಹಸಿರೇ ನಮ್ಮ ಉಸಿರು ಎಂದು ಎಲ್ಲೆಡೆ ಸಾರೋಣ.
III. ಭಾಷಾಭ್ಯಾಸ :
ಅ) ಈ ಪದಗಳನ್ನು ನಿಮ್ಮ ಸ್ವಂತ ವಾಕ್ಯಗಳಲ್ಲಿ ಬಳಸಿ ಬರೆಯಿರಿ.
ಇಂಚರ : \_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_
Model sentenceಇಂಚರ: ಬೆಳಿಗ್ಗೆ ನಮ್ಮ ಮನೆಯ ಹಿಂದೆ ಹಕ್ಕಿಗಳ ಇಂಚರ ಕೇಳಿಸುತ್ತದೆ.
ಕಂಗೊಳಿಸು : \_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_
Model sentenceಕಂಗೊಳಿಸು: ಹಬ್ಬದ ದಿನ ನಮ್ಮ ಮನೆ ದೀಪಗಳಿಂದ ಕಂಗೊಳಿಸಿತು.
ಬಣ್ಣಗೆಡು : \_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_
Model sentenceಬಣ್ಣಗೆಡು: ಮಳೆಯಲ್ಲಿ ತೋಯ್ದ ನನ್ನ ಚಿತ್ರದ ಬಣ್ಣಗೆಟ್ಟಿತು.
ಪ್ರವಾಸ : \_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_
Model sentenceಪ್ರವಾಸ: ನಮ್ಮ ಶಾಲೆಯಿಂದ ಮೈಸೂರಿಗೆ ಪ್ರವಾಸ ಹೋದೆವು.
ಉಲ್ಲಾಸ : \_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_
Model sentenceಉಲ್ಲಾಸ: ಆಟದಲ್ಲಿ ಗೆದ್ದಾಗ ನನಗೆ ತುಂಬಾ ಉಲ್ಲಾಸವಾಯಿತು.
ಕನಿಕರ : \_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_
Model sentenceಕನಿಕರ: ಬಿದ್ದು ಅಳುತ್ತಿದ್ದ ಚಿಕ್ಕ ಮಗುವನ್ನು ನೋಡಿ ನನಗೆ ಕನಿಕರವಾಯಿತು.
ಸತ್ಕಾರ್ಯ : \_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_
Model sentenceಸತ್ಕಾರ್ಯ: ನಾವು ಹಳೆಯ ಪುಸ್ತಕಗಳನ್ನು ಬಡ ಮಕ್ಕಳಿಗೆ ಕೊಡುವ ಸತ್ಕಾರ್ಯ ಮಾಡಿದೆವು.
ಆ) ಗೆರೆ ಹಾಕಿದ ಪದಗಳ ಬದಲಾಗಿ ಬೇರೆ ಪದಗಳನ್ನು ಬಳಸಿ ಬರೆಯಿರಿ.
ಮಾದರಿ : ಆ ವನವು ಗಿಡ ಮರಗಳಿಂದ **ಕಂಗೊಳಿಸುತ್ತಿದೆ**.
Answerಆ ವನವು ಗಿಡ ಮರಗಳಿಂದ ಕಂಗೊಳಿಸುತ್ತಿದೆ.
ಆ ವನವು ಗಿಡಮರಗಳಿಂದ ಕಣ್ಣಿಗೆ ಹಬ್ಬವನ್ನು ಉಂಟುಮಾಡುತ್ತಿದೆ.
೧. ಎಲೆಗಳು ಉದುರಿ ಮರದ ಸೊಬಗು **ಬಣ್ಣಗೆಟ್ಟಿತ್ತು**.
Answerಎಲೆಗಳು ಉದುರಿ ಮರದ ಸೊಬಗು ಕಳೆಗುಂದಿತ್ತು.
\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_
೨. ಜುಳುಜುಳು ಹರಿಯುವ ನೀರಿನ **ಸೊಬಗೇ** ಸೊಬಗು.
Answerಜುಳುಜುಳು ಹರಿಯುವ ನೀರಿನ ಅಂದವೇ ಅಂದ.
\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_
೩. ಮರದ ಟೊಂಗೆಟೊಂಗೆಗಳಲ್ಲಿ ಹೂವು **ರಾರಾಜಿಸಿದವು**.
Answerಮರದ ಟೊಂಗೆಟೊಂಗೆಗಳಲ್ಲಿ ಹೂವು ಮೆರೆದವು.
\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_
೪. ನೀರು ಹಾಕಿದ್ದರಿಂದ ಮರದಲ್ಲಿನ ಹೀಚುಕಾಯಿ ಹಣ್ಣುಗಳು **ಜೀವತಳೆದವು**.
Answerನೀರು ಹಾಕಿದ್ದರಿಂದ ಮರದಲ್ಲಿನ ಹೀಚುಕಾಯಿ ಹಣ್ಣುಗಳು ಬೆಳೆದವು.
\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_\_
ಇ) ಈ ಪದಗಳಲ್ಲಿ ಸ್ವರಾಕ್ಷರಗಳನ್ನು ಗುರುತಿಸಿ ಬರೆಯಿರಿ.
ಅಬ್ದುಲ್
Answerಅ, ಉ
ಇಲಿ
Answerಇ, ಇ
ಊರು
Answerಊ, ಉ
ಓತಿಕ್ಯಾತ
Answerಓ, ಇ, ಆ, ಅ
ಐರಾವತ
Answerಐ, ಆ, ಅ
\_\_\_\_\_
\_\_\_\_\_
\_\_\_\_\_
\_\_\_\_\_
\_\_\_\_\_
ಈ) ಕೆಳಗಿನ ಪದಗಳಲ್ಲಿ ಅನುಸ್ವಾರ ಇರುವ ಪದಗಳಿಗೆ ⬜ ಈ ರೀತಿಯ ಚೌಕವನ್ನು ಹಾಗೂ ವಿಸರ್ಗ ಇರುವ ಪದಗಳಿಗೆ ◯ ಈ ರೀತಿಯ ವೃತ್ತವನ್ನು ಹಾಕಿರಿ.
(A list of words to mark with square or circle based on anusvara or visarga):
ಹೊಂಬಣ್ಣ
Answerಹೊಂಬಣ್ಣ – ⬜
ದುಃಖ
Answerದುಃಖ – ◯
ಕಂಗೊಳಿಸು
Answerಕಂಗೊಳಿಸು – ⬜
ಕಂಬನಿ
Answerಕಂಬನಿ – ⬜
ಒಂದು
Answerಒಂದು – ⬜
ಭಾಗಶಃ
Answerಭಾಗಶಃ – ◯
ಅಂತಃಪುರ
Answerಅಂತಃಪುರ – ⬜ ಮತ್ತು ◯
ಟೊಂಗೆ
Answerಟೊಂಗೆ – ⬜
ಉ) ಪದಗಳನ್ನು ಹೇಳುತ್ತ ನೋಡಿ ಬರೆಯಿರಿ.
(A table with 4 blank rows under each of these headings for the student to copy the words: ಕೃಷ್ಣೆ, ಭೋರ್ಗರೆತ, ತೂರಾಟ, ಚೆಲ್ಲಾಟ, ನಡುಗಡ್ಡೆ, ಪಕ್ಷಿಗಳು, ಭಾವುಕತೆ, ಅಭಿಮಾನ, ಸಂಪೂರ್ಣ, ಸಸ್ಯವೈದ್ಯ, ಸತ್ಕಾರ್ಯ, ಸನ್ನಿವೇಶ)
ಊ) ಈ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ.
ಸುಂದರ x ................................... ಅರ್ಥ x ...................................
Answerಸುಂದರ x ಅಸುಂದರ ಅರ್ಥ x ಅನರ್ಥ
ಮೆಲ್ಲಗೆ x ................................... ಅಭಿಮಾನ x ...................................
Answerಮೆಲ್ಲಗೆ x ಬೇಗ ಅಭಿಮಾನ x ಅವಮಾನ
ಬುಡ x ................................... ಸಂತೋಷ x ...................................
Answerಬುಡ x ತುದಿ ಸಂತೋಷ x ದುಃಖ
IV. ಸೈದ್ಧಾಂತಿಕ ವ್ಯಾಕರಣ :
ಅ) ನಾವು ಮಾತನಾಡುವ ಕನ್ನಡ ಭಾಷೆಯ ಅಕ್ಷರಗಳನ್ನು ತಿಳಿಯೋಣ.
ಅ. ಆ. ಇ. ಈ. ಉ. ಊ. ಋ. ಎ. ಏ. ಐ. ಒ. ಓ. ಔ. - ಇವು ಹದಿಮೂರು ಸ್ವರಾಕ್ಷರಗಳು
ಅ .ಇ. ಉ. ಋ. ಎ. ಒ. - ಇವು ಹ್ರಸ್ವ ಸ್ವರಗಳು.
ಆ. ಈ. ಊ. ಏ. ಐ. ಓ. ಔ - ಇವು ದೀರ್ಘ ಸ್ವರಗಳು.
ಅನುಸ್ವಾರ (೦), ವಿಸರ್ಗ (ಃ) – ಇವು ಎರಡು ಯೋಗವಾಹಗಳು.
ಕ್ ಖ್ ಗ್ ಘ್ ಙ್
ಚ್ ಛ್ ಜ್ ಝ್ ಞ್
ಟ್ ಠ್ ಡ್ ಢ್ ಣ್
ತ್ ಥ್ ದ್ ಧ್ ನ್
ಪ್ ಫ್ ಬ್ ಭ್ ಮ್ - ಇವು (ಇಪ್ಪತ್ತೈದು) ವರ್ಗೀಯ ವ್ಯಂಜನಗಳು.
ಯ್ ರ್ ಲ್ ವ್ ಶ್ ಷ್ ಸ್ ಹ್ ಳ್ - ಇವು (ಒಂಬತ್ತು) ಅವರ್ಗೀಯ ವ್ಯಂಜನಗಳು
ಕನ್ನಡ ವರ್ಣಮಾಲೆಯ ಮೂಲಾಕ್ಷರಗಳು ಒಟ್ಟು = ೪೯
ಆ) ವ್ಯಂಜನ ಮತ್ತು ಸ್ವರಾಕ್ಷರಗಳು ಸೇರುವುದನ್ನು ಓದಿ ತಿಳಿಯಿರಿ.
ಕ್ + ಅ = ಕ
ಕ್ + ಆ = ಕಾ
ಕ್ + ಇ = ಕಿ
ಕ್ + ಈ = ಕೀ
ಕ್ + ಉ = ಕು
ಕ್ + ಊ = ಕೂ
ಕ್ + ಋ = ಕೃ
ಕ್ + ಎ = ಕೆ
ಕ್ + ಏ = ಕೇ
ಕ್ + ಐ = ಕೈ
ಕ್ + ಒ = ಕೊ
ಕ್ + ಓ = ಕೋ
ಕ್ + ಔ = ಕೌ
ಕ್ + ಅಂ = ಕಂ
ಕ್ + ಅಃ = ಕಃ
ಈ ಮೇಲಿನಂತೆ ಉಳಿದ ವ್ಯಂಜನಾಕ್ಷರಗಳಿಗೆ ಸ್ವರಾಕ್ಷರಗಳನ್ನು ಸೇರಿಸಿ ಬರೆಯಿರಿ.
ಇ) ಒತ್ತಕ್ಷರ / ಸಂಯುಕ್ತಾಕ್ಷರಗಳು.
ವ್ಯಂಜನಕ್ಕೆ ವ್ಯಂಜನ ಸೇರಿಕೊಂಡು (ಸ್ವರದ ಸಹಾಯದಿಂದ) ಉಂಟಾಗುವ ಅಕ್ಷರಕ್ಕೆ ಸಂಯುಕ್ತಾಕ್ಷರ ಅಥವಾ ಒತ್ತಕ್ಷರ ಎಂದು ಕರೆಯುವರು.
ಉದಾ:
ಅ + ಪ್ + ಪ್ + ಅ = ಅಪ್ಪ
ಶ್ + ಅ + ಕ್ + ತ್ + ಇ = ಶಕ್ತಿ
ಅ + ಮ್ + ಮ್ + ಅ = ಅಮ್ಮ
ಪ್ + ಅ + ಕ್ + ಷ್ + ಇ = ಪಕ್ಷಿ
V. ಪೂರಕ ಓದು :
ಗಿಡ ಬೆಳೆಸಿ ಜೀವ ಉಳಿಸಿ
ಬಾ ಗೆಳತಿ ಹೋಗುವ
ಗಿಡ ತಂದು ನೆಡುವ
ಕಣ್ಣಲ್ಲಿ ಕಣ್ಣಿಟ್ಟು ಜೋಪಾನ ಮಾಡಿ
ನೀರು ಗೊಬ್ಬರ ಹಾಕಿ ಗಿಡ ಬೆಳೆಸಿ ಜೀವ ಉಳಿಸುವ
ಕಾಂಕ್ರೀಟು ಇಟ್ಟಿಗೆಯ ಮಹಲು ಬೇಡ
ಓಡಾಡಲು ಮೋಟಾರು ಕಾರು ಬೇಡ
ಗಿಡ ಮರವೆಲ್ಲಾ ಕಡಿದು ರಸ್ತೆ ಮಾಡುವುದು ಬೇಡ
ಬಾ ಗೆಳತಿ ಗಿಡ ಬೆಳೆಸಿ ಜೀವ ಉಳಿಸುವ
ಮಳೆಯಿಲ್ಲಾ ಬೆಳೆಯಿಲ್ಲಾ
ಊರ ತುಂಬೆಲ್ಲ ಬರಗಾಲ
ಹಸಿದ ಕಂದನ ತುಟಿಗೆ ಹಾಲಿಲ್ಲಾ
ತಾಯಿ ಹಾಲಿಗೂ ನಂಜೇರಿದೆ
ಬಾ ಗೆಳತಿ ಗಿಡ ಬೆಳೆಸಿ ಜೀವ ಉಳಿಸುವ
ತುತ್ತನರಸಿ ಎತ್ತಲೋ
ಗುಳೇ ಹೊರಟಿದ್ದಾರೆ ನನ್ನವರು
ಗುಳಿ ಬಿದ್ದ ಕಣ್ಣುಗಳಲ್ಲಿ ನಿರಾಸೆ ಜಿನುಗಿದೆ
ಹೊಸ ಭರವಸೆಯ ಚಿಗುರಿಸು
ಬಾ ಗೆಳತಿ ಗಿಡ ಬೆಳೆಸಿ ಜೀವ ಉಳಿಸುವ.
– ರೇಣುಕಾ ಎಚ್.
ಸೂಚನೆ : ಈ ಪದ್ಯದಲ್ಲಿರುವ ಭಾವ ಹಾಗೂ ಪಾಠದಲ್ಲಿರುವ ಭಾವವನ್ನು ಗಮನಿಸಿ, ಎಲ್ಲರೂ ಕೂಡಿ ಹಾಡಿರಿ.
VI. ಚಟುವಟಿಕೆಗಳು :
೧. ನೀವು ನೋಡಿದ ಮಳೆ, ಹಳ್ಳ, ಹೊಳೆ ಅಥವಾ ಸಮುದ್ರ ಯಾವುದಾದರೂ ಒಂದನ್ನು ಕುರಿತು ನಾಲ್ಕು ವಾಕ್ಯಗಳನ್ನು ವರ್ಣಿಸಿ ಬರೆಯಿರಿ.
೨. ‘ಹಸಿರೇ ಉಸಿರು’ - ವಿಷಯದ ಮೇಲೆ ತರಗತಿಯಲ್ಲಿ ಚರ್ಚೆ ನಡೆಸಿರಿ.
೩. ಮನೆ ಹಾಗೂ ಶಾಲೆಯ ಸುತ್ತಲು ಮರಗಿಡಗಳಿಗೆ ನೀರು ಹಾಕಿ ಬೆಳೆಸಿರಿ.
೪. ‘ಕೂಗುತಿದೆ ಪಕ್ಷಿ’ ಪಾಠದಲ್ಲಿ ಬರುವ ಪಾತ್ರಗಳನ್ನು ಹಂಚಿಕೊಂಡು ಸಂಭಾಷಣೆ ನಡೆಸಿರಿ.