CRECT Education

Class 6 Kannada Second Language Lesson 8: Mother Kannada | KTBS

Description

Learn the poem 'Mother Kannada' (ಕನ್ನಡಮ್ಮ) by Bhagirathi Hegde, line by line, with vocabulary and comprehension practice.

ಪದ್ಯ (poem) · ಭಾಗೀರಥಿ ಹೆಗಡೆ

ಪಠ್ಯFull text

ಹೊತ್ತು ಹೆತ್ತು ಸಲಹಿದವಳು ತುತ್ತನಿತ್ತು ಬೆಳೆಸಿದವಳು ಎತ್ತಿ ಮುದ್ದಾಡಿದವಳು ತಾಯಿಯಲ್ಲವೆ? ನಮ್ಮ ತಾಯಿಯಲ್ಲವೆ? ನುಡಿಗೆ ನಾದ ತುಂಬಿದವಳು ಎದೆಗೆ ಹಾಡನೂಡಿದವಳು ಒಡಲಿಗನ್ನವುಣಿಸಿದವಳು ಅಮ್ಮನಲ್ಲವೆ? ಕನ್ನಡಮ್ಮನಲ್ಲವೆ? ಮಣ್ಣಿನಲ್ಲಿ ಚಿನ್ನವಿರಿಸಿ ಕಣ್ಣಿನಲ್ಲಿ ಬೆಳಕು ಬರಿಸಿ ನಮ್ಮ ನಿಮ್ಮ ಕಾಯುವವಳು ಅಮ್ಮನಲ್ಲವೆ? ಕನ್ನಡಮ್ಮನಲ್ಲವೆ? ಮೊರೆವ ಕಡಲ ತೆರೆಗಳಾಗಿ ಸುರಿವ ಮಳೆಯ ಹನಿಗಳಾಗಿ ನಿರತ ಲಾಲಿ ಹಾಡುವವಳು ಅಮ್ಮನಲ್ಲವೆ? ಕನ್ನಡಮ್ಮನಲ್ಲವೆ? ಅಮ್ಮ ನಿನಗೆ ನೂರು ನಮನ ಕಣ್ಣಬಿಟ್ಟು ನೋಡು ನಮ್ಮ ನಿನ್ನ ಕೈಯನೆತ್ತಿ ಹರಸು, ತಾಯಿಯಲ್ಲವೆ? ನಾಡದೇವಿಯಲ್ಲವೆ? * * * * **ಕೃತಿಕಾರರ ಪರಿಚಯ :** ಭಾಗೀರಥಿ ಹೆಗಡೆ ಅವರು ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ತಟ್ಟಿಕಾಯ ಗ್ರಾಮದಲ್ಲಿ ಜನ್ಮವೆತ್ತಿದ್ದಾರೆ. ಇವರು ೧೨ ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. 'ಗುಬ್ಬಿಯ ಸ್ವರ್ಗ', 'ಕನ್ನಡಮ್ಮ' ಇವು ಮಕ್ಕಳಿಗಾಗಿಯೇ ರಚಿಸಿದ ಕೃತಿಗಳು. ಮಕ್ಕಳು ಹಾಡಿ ನಲಿದು ಕುಣಿವ ಪದ್ಯವಿದು. (Portrait photo of Bhagirathi Hegde)

ಅಭ್ಯಾಸexercises from the textbook

Model answers — a guide, not the only correct wording. Check with your teacher.

I. ಪದಗಳ ಅರ್ಥ :

  1. | | |

  2. |---|---|

  3. | ಊಡು – ಕುಡಿಸು | ಒಡಲು – ಹೊಟ್ಟೆ |

  4. | ಕಡಲು – ಸಮುದ್ರ | ಚಿನ್ನ – ಬಂಗಾರ; ಹೊನ್ನು. |

  5. | ಧರೆ – ಭೂಮಿ | ಧಾರೆ – ಒಂದೇ ಸಮನೆ ನೀರು ಸುರಿಯುವಿಕೆ |

  6. | ನಮನ – ವಂದನೆ | ನಾದ – ಮಧುರ ಧ್ವನಿ |

  7. | ನಾಡದೇವಿ – ರಾಜ್ಯದ ದೇವತೆ; ಭುವನೇಶ್ವರಿ. | ಪೊರೆ – ರಕ್ಷಣೆ; ಸಲಹು. |

  8. | ಬಿಂಬ – ಪ್ರತಿರೂಪ | ಮೊರೆ – ಧ್ವನಿಮಾಡು; ಝೇಂಕರಿಸು. |

  9. | ಲಾಲಿ – ಜೋಗುಳ ಹಾಡು | ಸಲಹು – ಕಾಪಾಡು; ರಕ್ಷಿಸು. |

  10. | ಹರಸು – ಆಶೀರ್ವಾದ ಮಾಡು; ಹಾರೈಸು. | ಹೆತ್ತು – ಜನುಮ ನೀಡಿ |

II. ಪ್ರಶ್ನೆಗಳು :

ಅ) ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

  1. ೧. ನಮ್ಮನ್ನು ಹೊತ್ತು ಹೆತ್ತು ಸಲಹಿದವರನ್ನು ಏನೆಂದು ಕರೆಯುತ್ತೇವೆ?

    Answer

    ನಮ್ಮನ್ನು ಹೊತ್ತು ಹೆತ್ತು ಸಲಹಿದವರನ್ನು ತಾಯಿ ಎಂದು ಕರೆಯುತ್ತೇವೆ.

  2. ೨. ಕವಯಿತ್ರಿ ಕನ್ನಡ ನಾಡನ್ನು ಯಾರಿಗೆ ಹೋಲಿಸಿದ್ದಾರೆ?

    Answer

    ಕವಯಿತ್ರಿ ಕನ್ನಡ ನಾಡನ್ನು ತಾಯಿಗೆ ಹೋಲಿಸಿದ್ದಾರೆ.

  3. ೩. ಕನ್ನಡ ನುಡಿಯ ಸೊಬಗು ಯಾವ ರೀತಿಯದು?

    Answer

    ಕನ್ನಡ ನುಡಿಯ ಸೊಬಗು ನಾದ ತುಂಬಿದ ರೀತಿಯದು.

  4. ೪. ಕನ್ನಡಮ್ಮ ಈ ನಾಡ ಮಣ್ಣಿನಲ್ಲಿ ಏನನ್ನು ಇರಿಸಿದ್ದಾಳೆ?

    Answer

    ಕನ್ನಡಮ್ಮ ಈ ನಾಡ ಮಣ್ಣಿನಲ್ಲಿ ಚಿನ್ನವನ್ನು ಇರಿಸಿದ್ದಾಳೆ.

  5. ೫. ಕವಯಿತ್ರಿ ಕಡಲ ತೆರೆಗಳ ಮೊರೆಯನ್ನು ಯಾವುದಕ್ಕೆ ಹೋಲಿಸಿದ್ದಾರೆ?

    Answer

    ಕವಯಿತ್ರಿ ಕಡಲ ತೆರೆಗಳ ಮೊರೆಯನ್ನು ಲಾಲಿ ಹಾಡಿಗೆ ಹೋಲಿಸಿದ್ದಾರೆ.

ಆ) ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.

  1. ೧. ನಮ್ಮ ತಾಯಿ ನಮ್ಮಮ್ಮ ಯಾವ ರೀತಿ ಸಾಕಿ ಸಲಹುತ್ತಾಳೆ?

    Answer

    ನಮ್ಮ ತಾಯಿ ನಮ್ಮನ್ನು ಹೊತ್ತು ಹೆತ್ತು ಸಲಹುತ್ತಾಳೆ. ನಮಗೆ ತುತ್ತು ಅನ್ನವನ್ನು ನೀಡಿ ಬೆಳೆಸುತ್ತಾಳೆ. ನಮ್ಮನ್ನು ಎತ್ತಿ ಮುದ್ದಾಡುತ್ತಾಳೆ.

  2. ೨. ಕನ್ನಡಮ್ಮ ತನ್ನ ಕಂದಮ್ಮಗಳನ್ನು ಹೇಗೆ ಸಲಹಿದ್ದಾಳೆ?

    Answer

    ಕನ್ನಡಮ್ಮ ತನ್ನ ಕಂದಮ್ಮಗಳಿಗೆ ನುಡಿಯಲ್ಲಿ ನಾದವನ್ನು ತುಂಬಿ, ಎದೆಗೆ ಹಾಡನ್ನು ಊಡಿ, ಒಡಲಿಗೆ ಅನ್ನವನ್ನು ಉಣಿಸಿ ಸಲಹಿದ್ದಾಳೆ. ಮಣ್ಣಿನಲ್ಲಿ ಚಿನ್ನವಿರಿಸಿ, ಕಣ್ಣಿಗೆ ಬೆಳಕು ನೀಡಿ, ಕಡಲ ತೆರೆಗಳ ಮೊರೆತ ಮತ್ತು ಮಳೆಯ ಹನಿಗಳ ಮೂಲಕ ಲಾಲಿ ಹಾಡಿ ಕಾಪಾಡುತ್ತಾಳೆ.

  3. ೩. ಕನ್ನಡಮ್ಮ ನಮ್ಮನ್ನು ಯಾವ ರೀತಿ ಕಾಯುತ್ತಿದ್ದಾಳೆ?

    Answer

    ಕನ್ನಡಮ್ಮ ನಮ್ಮನ್ನು ಮಣ್ಣಿನಲ್ಲಿ ಚಿನ್ನವಿರಿಸಿ, ಕಣ್ಣಿನಲ್ಲಿ ಬೆಳಕು ತುಂಬಿ ಕಾಯುತ್ತಿದ್ದಾಳೆ. ಕಡಲ ತೆರೆಗಳ ಮೊರೆತ ಮತ್ತು ಮಳೆಯ ಹನಿಗಳ ಮೂಲಕ ನಿರಂತರ ಲಾಲಿ ಹಾಡಿ ನಮ್ಮನ್ನು ರಕ್ಷಿಸುತ್ತಾಳೆ.

  4. ೪. ಕನ್ನಡಮ್ಮನ ಲಾಲಿ ಹಾಡು ಯಾವ ರೀತಿಯಲ್ಲಿದೆ?

    Answer

    ಕನ್ನಡಮ್ಮನ ಲಾಲಿ ಹಾಡು ಮೊರೆಯುವ ಕಡಲ ತೆರೆಗಳಂತೆ ಮತ್ತು ಸುರಿಯುವ ಮಳೆಯ ಹನಿಗಳಂತೆ ನಿರಂತರವಾಗಿದೆ.

  5. ೫. ಕವಯಿತ್ರಿ ಕನ್ನಡಮ್ಮನನ್ನು ಏನೆಂದು ಪ್ರಾರ್ಥಿಸುತ್ತಾರೆ?

    Answer

    ಕವಯಿತ್ರಿ ಕನ್ನಡಮ್ಮನಿಗೆ ನೂರು ನಮನಗಳನ್ನು ಸಲ್ಲಿಸಿ, ಕಣ್ಣು ತೆರೆದು ನೋಡಿ ಕೈಯೆತ್ತಿ ಹರಸುವಂತೆ ಪ್ರಾರ್ಥಿಸುತ್ತಾರೆ.

  6. ೬. ಕವಯಿತ್ರಿ ಕನ್ನಡ ನಾಡನ್ನು ಹೆತ್ತ ತಾಯಿಗೆ ಏಕೆ ಹೋಲಿಸಿದ್ದಾರೆ?

    Answer

    ಕನ್ನಡ ನಾಡು ತಾಯಿಯಂತೆ ನಮ್ಮನ್ನು ಸಾಕಿ ಸಲಹುತ್ತದೆ. ಅದು ನಮಗೆ ನಾದಮಯ ನುಡಿ, ಅನ್ನ, ಬೆಳಕು, ರಕ್ಷಣೆ ನೀಡುತ್ತದೆ. ಆದ್ದರಿಂದ ಕವಯಿತ್ರಿ ಕನ್ನಡ ನಾಡನ್ನು ಹೆತ್ತ ತಾಯಿಗೆ ಹೋಲಿಸಿದ್ದಾರೆ.

ಇ) ಈ ಕೆಳಗಿನ ಪ್ರಶ್ನೆಗಳಿಗೆ ನಾಲ್ಕು-ಐದು ವಾಕ್ಯಗಳಲ್ಲಿ ಉತ್ತರಿಸಿರಿ.

  1. ೧. ಕನ್ನಡ ನಾಡು ನಮ್ಮ ಬದುಕಿಗೆ ಯಾವ ರೀತಿ ಆಸರೆಯಾಗಿದೆ?

    Answer

    ಕನ್ನಡ ನಾಡು ನಮ್ಮ ಬದುಕಿಗೆ ತಾಯಿಯಂತೆ ಆಸರೆಯಾಗಿದೆ. ಅದು ನಮಗೆ ನಾದ ತುಂಬಿದ ನುಡಿಯನ್ನು ನೀಡಿದೆ. ನಮ್ಮ ಹೊಟ್ಟೆಗೆ ಅನ್ನವನ್ನು ಉಣಿಸುತ್ತದೆ. ಮಣ್ಣಿನಲ್ಲಿ ಚಿನ್ನವಿರಿಸಿ, ಕಣ್ಣಿಗೆ ಬೆಳಕು ನೀಡಿ ನಮ್ಮನ್ನು ಕಾಯುತ್ತದೆ. ಕಡಲ ತೆರೆಗಳ ಮೊರೆತ ಮತ್ತು ಮಳೆಯ ಹನಿಗಳ ಮೂಲಕ ಲಾಲಿ ಹಾಡಿ ನಮ್ಮನ್ನು ಸಲಹುತ್ತದೆ.

  2. ೨. ಕನ್ನಡ ನಾಡಿನ ಬಗ್ಗೆ ನಮಗೆ ಪ್ರೀತಿ ಇರಬೇಕು. ಏಕೆ?

    Answer

    ಕನ್ನಡ ನಾಡು ನಮ್ಮನ್ನು ಹೆತ್ತ ತಾಯಿಯಂತೆ ಸಲಹುತ್ತದೆ. ಅದು ನಮಗೆ ಸಿಹಿಯಾದ ಕನ್ನಡ ನುಡಿಯನ್ನು ಕೊಟ್ಟಿದೆ. ನಮ್ಮ ಹಸಿವನ್ನು ತಣಿಸಲು ಅನ್ನವನ್ನು ನೀಡುತ್ತದೆ. ಮಣ್ಣಿನಲ್ಲಿ ಚಿನ್ನದಂತಹ ಸಂಪತ್ತನ್ನು ಇರಿಸಿ, ಕಣ್ಣಿಗೆ ಬೆಳಕಾಗಿ ನಮ್ಮನ್ನು ಕಾಪಾಡುತ್ತದೆ. ಕಡಲು ಮತ್ತು ಮಳೆಯ ರೂಪದಲ್ಲಿ ನಿರಂತರ ಲಾಲಿ ಹಾಡುತ್ತದೆ. ಆದ್ದರಿಂದ ಕನ್ನಡ ನಾಡಿನ ಬಗ್ಗೆ ನಮಗೆ ಪ್ರೀತಿ ಇರಬೇಕು.

ಈ) ಇಲ್ಲಿರುವ ಪದ್ಯದ ಭಾವಾರ್ಥವನ್ನು ಬರೆಯಿರಿ.

  1. ಮಣ್ಣಿನಲಿ ಚಿನ್ನವಿರಿಸಿ

    Answer

    ನಮ್ಮ ನಾಡಿನ ಮಣ್ಣಿನಲ್ಲಿ ಚಿನ್ನದಂತಹ ಅಮೂಲ್ಯ ಸಂಪತ್ತನ್ನು ಇರಿಸಿ.

  2. ಕಣ್ಣಿನಲ್ಲಿ ಬೆಳಕು ಬರಿಸಿ

    Answer

    ನಮ್ಮ ಕಣ್ಣುಗಳಲ್ಲಿ ಬೆಳಕನ್ನು ತುಂಬಿ.

  3. ನಮ್ಮ ನಿಮ್ಮ ಕಾಯುವವಳು ಅಮ್ಮನಲ್ಲವೆ?

    Answer

    ನಮ್ಮೆಲ್ಲರನ್ನೂ ಕಾಯುವವಳು ತಾಯಿಯಲ್ಲವೇ?

  4. ಕನ್ನಡಮ್ಮನಲ್ಲವೇ?

    Answer

    ಆಕೆಯೇ ಕನ್ನಡಮ್ಮನಲ್ಲವೇ?

ಉ) ಕನ್ನಡ ನಾಡು ನುಡಿಗೆ ಸಂಬಂಧಿಸಿದಂತೆ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರವನ್ನು ಕೇಳಿ ತಿಳಿದುಕೊಳ್ಳಿರಿ.

  1. ೧. ಕನ್ನಡ ನಾಡಿನ ಕರಾವಳಿ ಪ್ರದೇಶಗಳಾವುವು?

  2. ೨. ಕರ್ನಾಟಕದಲ್ಲಿ ಚಿನ್ನದ ಗಣಿಗಳು ಯಾವ ಸ್ಥಳಗಳಲ್ಲಿವೆ?

  3. ೩. ಕರ್ನಾಟಕದಲ್ಲಿ ಹೆಚ್ಚು ಮಳೆ ಬೀಳುವ ಪ್ರದೇಶಗಳಾವುವು?

  4. ೪. ಕರ್ನಾಟಕದಲ್ಲಿ ಶಿಲ್ಪಕಲೆಗೆ ಹೆಸರಾದ ಊರುಗಳಾವುವು?

  5. ೫. ಕರ್ನಾಟಕದಲ್ಲಿ ಹರಿಯುವ ಪ್ರಮುಖ ನದಿಗಳಾವುವು?

  6. ೬. ಕರ್ನಾಟಕವನ್ನು ಆಳಿದ ಪ್ರಮುಖ ರಾಜ ಮನೆತನಗಳು ಯಾವುವು?

  7. ೭. ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡದ ಕವಿಗಳು ಯಾರು ಯಾರು?

  8. ೮. ಕರ್ನಾಟಕದಲ್ಲಿರುವ ಪ್ರಮುಖ ಜನಪದ ಕಲೆಗಳಾವುವು?

  9. ೯. ಕರ್ನಾಟಕದ ಖ್ಯಾತರಾದ ಸಂಗೀತ ವಿದ್ವಾಂಸರು ಯಾರು ಯಾರು?

  10. ೧೦. ಕರ್ನಾಟಕದಲ್ಲಿರುವ ಪ್ರಮುಖ ಅರಣ್ಯ ಪ್ರದೇಶಗಳಾವುವು?

III. ಭಾಷಾಭ್ಯಾಸ :

ಅ) ಪ್ರಸ್ತುತ ಪದ್ಯದಲ್ಲಿ ಬಳಕೆ ಆಗಿರುವ ಪ್ರಾಸ ಪದಗಳನ್ನು ಹುಡುಕಿ ಬರೆಯಿರಿ.

  1. ಉದಾ : ಸಲಹಿದವಳು - ಬೆಳೆಸಿದವಳು

    Answer

    ತುಂಬಿದವಳು - ಊಡಿದವಳು ಇರಿಸಿ - ಬರಿಸಿ ತೆರೆಗಳಾಗಿ - ಹನಿಗಳಾಗಿ

ಆ) ಇಲ್ಲಿರುವ ಪದಗಳನ್ನು ನಿಮ್ಮ ಸ್ವಂತ ವಾಕ್ಯಗಳಲ್ಲಿ ಬಳಸಿ ಬರೆಯಿರಿ.

  1. ೧. ಕನ್ನಡಮ್ಮ : ........................................................................................

    Model sentence

    ಕನ್ನಡಮ್ಮ: ನಮ್ಮ ಶಾಲೆಯಲ್ಲಿ ಕನ್ನಡಮ್ಮನ ಭಾವಚಿತ್ರವನ್ನು ಇಟ್ಟಿದ್ದೇವೆ.

  2. ೨. ಲಾಲಿಹಾಡು : ........................................................................................

    Model sentence

    ಲಾಲಿಹಾಡು: ಅಮ್ಮ ನನಗೆ ರಾತ್ರಿ ಮಲಗುವಾಗ ಲಾಲಿಹಾಡು ಹಾಡುತ್ತಾಳೆ.

  3. ೩. ಹರಸು : ........................................................................................

    Model sentence

    ಹರಸು: ಅಜ್ಜಿ ನನಗೆ ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಬರಲಿ ಎಂದು ಹರಸಿದಳು.

  4. ೪. ನಾಡದೇವಿ : ........................................................................................

    Model sentence

    ನಾಡದೇವಿ: ನಮ್ಮ ಊರಿನ ನಾಡದೇವಿಯ ಜಾತ್ರೆಗೆ ಎಲ್ಲರೂ ಸೇರುತ್ತೇವೆ.

  5. ೫. ಸಲಹು : ........................................................................................

    Model sentence

    ಸಲಹು: ನಮ್ಮ ಅಮ್ಮ ನಮ್ಮನ್ನು ತುಂಬಾ ಪ್ರೀತಿಯಿಂದ ಸಲಹುತ್ತಾಳೆ.

ಇ) ಇಲ್ಲಿರುವ ಪದಗಳನ್ನು ಮಾದರಿಯಂತೆ ಬಿಡಿಸಿ ಬರೆಯಿರಿ.

  1. ಮಾದರಿ : ಹಾಡನೂಡಿದವಳು = ಹಾಡನು + ಊಡಿದವಳು

  2. ೧. ಚಿನ್ನವಿರಿಸಿ = ....................... + .......................

    Answer

    ಚಿನ್ನವಿರಿಸಿ = ಚಿನ್ನ + ಇರಿಸಿ

  3. ೨. ಮುದ್ದಾಡಿದವಳು = ....................... + .......................

    Answer

    ಮುದ್ದಾಡಿದವಳು = ಮುದ್ದು + ಆಡಿದವಳು

  4. ೩. ತುತ್ತನಿತ್ತು = ....................... + .......................

    Answer

    ತುತ್ತನಿತ್ತು = ತುತ್ತ + ಇತ್ತು

  5. ೪. ಒಡಲಿಗನ್ನವುಣಿಸಿದವಳು = ........... + ........... + ...........

    Answer

    ಒಡಲಿಗನ್ನವುಣಿಸಿದವಳು = ಒಡಲಿಗೆ + ಅನ್ನ + ಉಣಿಸಿದವಳು

IV. ಚಟುವಟಿಕೆಗಳು :

  1. ಅ) ಕನ್ನಡ ನಾಡು ನುಡಿಗಾಗಿ ದುಡಿದವರ ಚಿತ್ರ ಸಂಗ್ರಹಿಸಿರಿ.

  2. ಆ) ಕನ್ನಡ ಅಭಿಮಾನ ಮೂಡಿಸುವ ಕವಿತೆಗಳನ್ನು ಸಂಗ್ರಹಿಸಿರಿ.

  3. ಇ) ಕನ್ನಡಮ್ಮ ಕವಿತೆಯನ್ನು ಭಾವಾಭಿನಯದೊಂದಿಗೆ ಹಾಡಿರಿ.

  4. * * * * *

Interactive Lab