ಪದ್ಯ (poem) · ಪಂಜೆ ಮಂಗೇಶರಾವ್ (Panje Mangesharao)
ಪಠ್ಯFull text
ಪದಗಳ ಅರ್ಥword meanings
| Kannada | Pronunciation | Meaning |
|---|---|---|
| ಒಡಲ್ | — | ಶರೀರ, ದೇಹ ಕಡುಗಲಿ - ಮಹಾಶೂರ ಕ್ಷಾತ್ರ - ಕ್ಷತ್ರಿಯ ಕುಲ, ಕ್ಷತ್ರಿಯನ ತೇಜಸ್ಸು ಗರಿಯರು - ಹಿರಿಮೆಯುಳ್ಳವರು ಜಮ್ಮದು - ಅರಸನು ಇನಾಮಾಗಿ ಕೊಟ್ಟ ಭೂಮಿ ದಟ್ಟಿಕುಪ್ಪಸ - ಸೊಂಟಕ್ಕೆ ಕಟ್ಟುವ ವಸ್ತ್ರ ಬಗ್ಗ - ಹುಲಿ, ವ್ಯಾಘ್ರ ಬಿಮ್ಮನೆ - ವೇಗವಾಗಿ, ಸುಮ್ಮನೆ ಭೂರಮೆ - ಭೂದೇವಿ ಹುತ್ತರಿ - ಕೊಡಗರು ಹೊಸ ಅಕ್ಕಿಯನ್ನು ಮನೆಗೆ ತರುವಾಗ ಆಚರಿಸುವ ಹಬ್ಬ, ಕೊಡಗಿನ ಸುಗ್ಗಿ ಹಬ್ಬ ಹೊಯ್ಲು - ಹೊಡೆತ |
ಅಭ್ಯಾಸexercises from the textbook
Model answers — a guide, not the only correct wording. Check with your teacher.
ಅ. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.
೧. ಕಾವೇರಿಯು ಹೇಗೆ ಹೊಳೆಯುತ್ತಾಳೆ?
Answerಕಾವೇರಿಯು ಮುಗಿಲಲ್ಲಿ ಮಿಂಚಿನಂತೆ ಹೊಳೆಯುತ್ತಾಳೆ.
೨. ಸೋಲು ಸಾವರಿಯದವರು ಯಾರು?
Answerಸೋಲು ಸಾವರಿಯದವರು ಕೊಡಗಿನ ಹಿರಿಯರು.
೩. ಕೊಡಗು ಯಾವ ಗಿರಿಯಿಂದ ಯಾವ ಗಿರಿಯ ಪರ್ಯಂತ ಬೆಳೆದಿದೆ?
Answerಕೊಡಗು ಬೊಮ್ಮಗಿರಿಯಿಂದ ಪುಷ್ಪಗಿರಿಯ ಪರ್ಯಂತ ಬೆಳೆದಿದೆ.
೪. ಕಾವೇರಿಯ ತವಮರ್ನೆ ಯಾವುದು?
Answerಕಾವೇರಿ ತಾಯಿಯ ತವಮರ್ನೆ ಕೊಡಗು.
೫. ಯಾವ ಹೊಯ್ಲಿಗೆ ಕುಣಿವ ಪದ ಹೊರ ಹೊಮ್ಮಬೇಕು?
Answerಚಿಮ್ಮಿ ಪಾತುರೆಕೋಲ ಹೊಯ್ಲಿಗೆ ಕುಣಿವ ಪದ ಹೊರ ಹೊಮ್ಮಬೇಕು.
ಆ. ಕೆಳಗಿನ ಪದ್ಯಭಾಗವನ್ನು ಪೂರ್ಣಗೊಳಿಸಿ, ಕಂಠಪಾಠ ಮಾಡಿರಿ.
೧. ಎಲ್ಲಿ ಭೂರಮೆ __________________________________________________
Answerಎಲ್ಲಿ ಭೂರಮೆ ದೇವ ಸನ್ನಿಧಿ ಬಯಸಿ ಬಿಮ್ಮನೆ ಬಂದಳೋ?
__________________________________________________________________
Answerಎಲ್ಲಿ ಮೋಹನ ಗಿರಿಯ ಬೆರಗಿನ ರೂಪಿನಿಂದಲಿ ನಿಂದಳೋ?
__________________________________________________________________
Answerಎಲ್ಲಿ ಮುಗಿಲಲಿ ಮಿಂಚಿನೋಲ್ ಕಾವೇರಿ ಹೊಳೆ ಹೊಳೆ ಹೊಳೆವಳೋ?
________________________________________________________ಕಳೆವಳೋ?
Answerಎಲ್ಲಿ ನೆಲವನು ತಣಿಸಿ ಜನಮನ ಹೊಲದ ಕಳೆಕಳೆ ಕಳೆವಳೋ?
೨. ಒಮ್ಮತವು ______________________________________________________
Answerಒಮ್ಮತವು ಒಗ್ಗಟ್ಟು ಒಂದೇ ಮನವು ಎಲ್ಲಿದೆ ಹೇಳಿರಿ?
__________________________________________________________________
Answerಸುಮ್ಮನಿತ್ತರೊ ದಟ್ಟಿಕುಪ್ಪಸ? ಹಾಡುಹುತ್ತರಿಗೇಳಿರಿ!
__________________________________________________________________
Answerಚಿಮ್ಮಿ ಪಾತುರೆಕೋಲ ಹೊಯ್ಲಿಗೆ ಕುಣಿವ ಪದ ಹೊರ ಹೊಮ್ಮಲಿ!
______________________________________________________ ನಮ್ಮಲಿ!
Answerಅಮ್ಮೆ ಹರಸಿದ ಸೀಮೆ ನಮಗಿದು ಇರಲಿ ನಮ್ಮದೆ ನಮ್ಮಲಿ!