CRECT Education

Class 7 Kannada Lesson 8: Confluence of Vachana Emotions – Learn the Poem

Description

Walk through four powerful vachanas by Jedara Dasimayya, Madivala Machayya, Muktayakka, and Satyakka from the KTBS Kannada First Language textbook. Learn key vocabulary (wavering mind, false argument, vow), answer comprehension questions, and reflect on the touchstone of experience.

ಪದ್ಯ (poem) · ಜೇಡರ ದಾಸಿಮಯ್ಯ, ಮಡಿವಾಳ ಮಾಚಯ್ಯ, ಮುಕ್ತಾಯಕ್ಕ ಮತ್ತು ಸತ್ಯಕ್ಕ - ವಚನಕಾರರು

ಪಠ್ಯFull text

ಹರಿದ ಗೋಣಿಯಲೊಬ್ಬ ಕಳವೆಯ ತುಂಬಿದ ಇರುಳೆಲ್ಲಾ ನಡೆದನಾ ಸುಂಕಕಂಜಿ ಕಳವೆಯೆಲ್ಲಾ ಹೋಗಿ ಬರಿಗೋಣಿ ಉಳಿಯಿತು ಅಳಿಮನದವನ ಭಕ್ತಿ ಇಂತಾಯಿತ್ತು ರಾಮನಾಥ – ಜೇಡರ ದಾಸಿಮಯ್ಯ ಅಂಧಕಾರದ ದೆಸೆಯಿಂದ ಚಂದ್ರನ ಪ್ರಭೆಯಾಯಿತು ನಿಂದಕರ ನುಡಿಯಿಂದ ಏಡಿಸಲ್ಕೆ ಶಿವಭಕ್ತಿಯ ಪ್ರಭೆಯಾಯಿತು ಅಹುದೆಂದಡೆ ಅಲ್ಲವೆಂದತಿಗಳೆವರು ಕುತರ್ಕಶಾಸ್ತ್ರದಿಂದ ಯಮಗತಿಗರ ಕೂಡೆ ನಾನಾ ಜನ್ಮಕ್ಕೇರದೆ, ಶಿವಾಚಾರದ ಪಥವ ತೋರಯ್ಯಾ ಕಲಿದೇವರ ದೇವ – ಮಡಿವಾಳ ಮಾಚಯ್ಯ ನುಡಿಯಲುಬಾರದು ಕೆಟ್ಟ ನುಡಿಗಳ ನಡೆಯಲುಬಾರದು ಕೆಟ್ಟ ನಡೆಗಳ ನುಡಿದದೇನು, ನಡೆಯದಿದರ್ದೇನು ಹಿಡಿದ ವ್ರತವ ಬಿಡದಿರಲು ಅದೇ ಮಹಾಜ್ಞಾನದಾಚರಣೆ ಎಂಬೆನು ಅಜಗಣ್ಣ ತಂದೆ – ಮುಕ್ತಾಯಕ್ಕ ಲಂಚವಂಚನಕ್ಕೆ ಕೈಯಾನದ ಭಾಷೆ ಬಟ್ಟೆಯಲ್ಲಿ ಹೊನ್ನುವಸ್ತ್ರ ಬಿದ್ದಿದ್ದರೆ ನಾನು ಕೈಮುಟ್ಟಿ ಎತ್ತಿದೆನಾದರೆ ನಿಮ್ಮಾಣೆ ನಿಮ್ಮ ಪ್ರಮಥರಾಣೆ ಅದೇನು ಕಾರಣವೆಂದರೆ ನೀವಿಕ್ಕಿದ ಭಿಕ್ಷದಲ್ಲಿಪ್ಪೆನಾಗಿ ಇಂತಲ್ಲದೆ ನಾನು ಅಳಿಮನವ ಮಾಡಿ ಪರದ್ರವ್ಯಕ್ಕೆ ಆಸೆ ಮಾಡಿದೆನಾದರೆ ನೀನಾಗಲೆ ಎನ್ನ ನರಕದಲ್ಲಿ ಅದ್ದಿ ನೀನೆದ್ದು ಹೋಗಾ ಶಂಭುಜಕೇಶ್ವರಾ. – ಸತ್ಯಕ್ಕ **ಕೌಶಲ :** ಓದುವುದು. **ಸಾಮರ್ಥ್ಯ :** ಓದಿದ ವಿಷಯಗಳ ಬಗ್ಗೆ ಆಲೋಚಿಸಿ ತಾರ್ಕಿಕವಾಗಿ ತೀರ್ಮಾನಿಸುವುದು. **ಕೃತಿಕಾರರ ಪರಿಚಯ** **ಜೇಡರ ದಾಸಿಮಯ್ಯ :** (Portrait of Jedara Dasimayya) ಹನ್ನೊಂದನೆಯ ಶತಮಾನದಲ್ಲಿದ್ದ ಹಿರಿಯ ಶಿವಶರಣ. ಯಾದಗಿರಿ ಸನಿಹದ ಮುದೇನೂರಿನವರು. ದಾಸಿಮಯ್ಯ ಪ್ರಥಮ ವಚನಕಾರರೆಂದೇ ಮಾನ್ಯರಾಗಿದ್ದಾರೆ. ‘ರಾಮನಾಥ’ ಎಂಬ ಅಂಕಿತದಿಂದ ರಚಿಸಿರುವ ಇವರ ೧೫೦ ವಚನಗಳು ದೊರೆತಿವೆ. ಸರಳ ಮತ್ತು ನೇರ ನಿರೂಪಣೆಯಿಂದ ಕೂಡಿದ ದಾಸಿಮಯ್ಯನವರ ವಚನಗಳು ಸಾಮಾಜಿಕ ಮೌಲ್ಯದಿಂದ ಜನಮಾನ್ಯವಾಗಿದೆ. ಜೇಡರದಾಸಿಮಯ್ಯನವರು ಈ ವಚನದಲ್ಲಿ ದೃಢವಿಲ್ಲದ ಭಕ್ತಿ ಹೇಗೆ ಇರುತ್ತದೆ ಎಂಬುದನ್ನು ಎಂಬುದನ್ನು ತಿಳಿಸಿದ್ದಾರೆ. ಮನದಲ್ಲಿ ಕೆಟ್ಟ ಉದ್ದೇಶವನ್ನು ಹೊಂದಿ, ಹೊರನೋಟಕ್ಕೆ ದೇವರಲ್ಲಿ ಒಲವುಳ್ಳವನಂತೆ ನಟಿಸುತ್ತಾ, ಜನರನ್ನು ಮತ್ತು ಸಮಾಜವನ್ನು ವಂಚಿಸುವ ವ್ಯಕ್ತಿಯು ಕಟ್ಟ ಕಡೆಗೆ ಜೀವನದಲ್ಲಿ ಏನನ್ನೂ ಗಳಿಸಲಾಗದೆ, ತನ್ನಲ್ಲಿರುವುದನ್ನೂ ಕಳೆದು ಕೊಳ್ಳುತ್ತಾನೆ. **ಮಡಿವಾಳ ಮಾಚಯ್ಯ :** (Portrait of Madivala Machayya) ಮಡಿವಾಳ ಮಾಚಯ್ಯ ೧೨ನೇ ಶತಮಾನದ ಪ್ರಮುಖ ವಚನಕಾರರಲ್ಲಿ ಒಬ್ಬರು. ಇವರ ಜನ್ಮಸ್ಥಳ ವಿಜಯಪುರ ಜಿಲ್ಲೆಯ ಹಿಪ್ಪರಗಿ. ಬಸವಣ್ಣನವರ ಕೀರ್ತಿ ಕೇಳಿ ಹೊಸ ಧರ್ಮಕ್ಕೆ ಆಕರ್ಷಣೆಗೊಂಡು ಕಲ್ಯಾಣಕ್ಕೆ ಹೋದವರಲ್ಲಿ ಮೊದಲಿಗರು. ಮಾಚಯ್ಯ ಕಲ್ಯಾಣದಲ್ಲಿ ಶಿವಶರಣರ ಬಟ್ಟೆಗಳನ್ನು ಮಾತ್ರ ಮಡಿಮಾಡಿಕೊಂಡಿದ್ದವರು. ಇವರ ೩೫೩ ವಚನಗಳು ಉಪಲಬ್ಧವಾಗಿವೆ. ಇವರ ವಚನಾಂಕಿತನಾಮ ‘ಕಲಿದೇವರ ದೇವ’ ಎಂಬುದು. ಶಿವಭಕ್ತರು ಅನೇಕ ಸತ್ವಪರೀಕ್ಷೆಗಳಿಂದ ಪರಿಶುದ್ಧರಾಗಿದ್ದಾರೆ. ಅನ್ಯಾಯ ಮಾರ್ಗವನ್ನಿಡಿದು ನಡೆಯುವ ಸಾಮಾನ್ಯ ಮನುಷ್ಯರು ತಮ್ಮ ಹೀನ ಕೃತ್ಯಗಳಿಂದ ಅನೇಕ ಜನ್ಮಾಂತರಗಳಲ್ಲಿ ಬಳಲುತ್ತಾರೆ. ಶಿವಭಕ್ತರನ್ನು ಈ ಜನ್ಮಾಂತರಗಳಿಂದ ಬಳಲಿಸದೆ ಅವರಿಗೆ ಶಿವಾಚಾರದ ಸನ್ಮಾರ್ಗ ತೋರಿಸು ಎಂಬುದು ಈ ವಚನದಲ್ಲಿದೆ. **ಮುಕ್ತಾಯಕ್ಕ :** (Portrait of Muktayakka) ೧೨ನೆಯ ಶತಮಾನದಲ್ಲಿದ್ದ ಅನುಭಾವಿ ಶಿವಶರಣೆ. ಮುಕ್ತಾಯಕ್ಕನ ಜನ್ಮಸ್ಥಳ ಲಕ್ಕುಂಡಿ. ಅಜಗಣ್ಣ ಅಂಕಿತವಿರುವ ಇವರ ೩೭ ವಚನಗಳು ದೊರೆತಿವೆ. ಆಧ್ಯಾತ್ಮ ಸಾಧನೆಯ ಗುಪ್ತಭಕ್ತ ಅಜಗಣ್ಣನವರು ಮುಕ್ತಾಯಕ್ಕನವರ ಸಹೋದರ ಮತ್ತು ಗುರು. ಇವರಿಬ್ಬರ ಅನುಭಾವಿ ನಿಲುವಿಗೆ ಸಂಬಂಧಿಸಿದಂತೆ ಸೂಕ್ಷ್ಮ ಪದರಗಳನ್ನು ಬಿಡಿಸಿ ತೋರುವ ವಚನಗಳಿವು. ಶಿವಭಕ್ತನಿಗೆ ನಡೆ-ನುಡಿಗಳು ಬಹಳ ಮುಖ್ಯ. ನಡೆನುಡಿಗಳ ಪರಿಶುದ್ಧತೆಯೇ ನಿಜವಾದ ವ್ರತ. ಇದು ಮಹಾಜ್ಞಾನ ಸಂಪಾದನೆಯ ಮಾರ್ಗವೆಂಬುದು ಈ ವಚನದಲ್ಲಿ ವ್ಯಕ್ತವಾಗಿದೆ. **ಸತ್ಯಕ್ಕ :** (Portrait of Satyakka) ೧೨ನೆಯ ಶತಮಾನದಲ್ಲಿದ್ದ ಶಿವಶರಣೆಯರಲ್ಲಿ ಒಬ್ಬರು. ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪ ಸಮೀಪದ ಹಿರೇಜಂಬೂರು ಸತ್ಯಕ್ಕನವರ ಜನ್ಮಸ್ಥಳ. ಶಿವಭಕ್ತರ ಮನೆಯಂಗಳ ಕಸಗುಡಿಸುತ್ತ ಶಿವಭಕ್ತಿಯನ್ನು ಆಚರಿಸುವುದು ಇವರ ಕಾಯಕವಾಗಿತ್ತು. ‘ಶಿವನಲ್ಲದೆ ಅನ್ಯ ದೈವವ ಪೂಜಿಸೆ; ಶಿವ ಶಬ್ದವಲ್ಲದೆ ಅನ್ಯ ದೈವದ ಶಬ್ದವ ಕೇಳೆ’ ಎಂಬ ಪ್ರತಿಜ್ಞೆ ಅವರದಾಗಿತ್ತು. “ಶಂಭುಜಕೇಶ್ವರ” ಎಂಬುದು ಸತ್ಯಕ್ಕನವರ ವಚನಗಳ ಅಂಕಿತನಾಮ. ಇವರ ೨೭ ವಚನಗಳು ದೊರಕಿವೆ. ಪರರಧನ, ಪರಿಶ್ರಮವಿಲ್ಲದೆ ದೊರಕುವ ಯಾವುದೇ ಆಸೆ-ಆಮಿಷಗಳಿಗೆ ಶಿವಶರಣರು ಒಳಗಾಗಬಾರದು, ಹಾಗೇನಾದರೂ ಒಳಗಾದ ಪಕ್ಷದಲ್ಲಿ ಅಂಥವರಿಗೆ ನರಕ ತಪ್ಪಿದ್ದಲ್ಲ. ಅಂಥವರು ಶಿವಶರಣರೇ ಅಲ್ಲವೆಂಬ ಭಾವ ಪ್ರಕೃತ ವಚನದ್ದಾಗಿದೆ.

**ಚಿನ್ನುಡಿ** “ಲೋಕದಲ್ಲಿ ಎಷ್ಟು ಜನರಿದ್ದಾರೋ ಅಷ್ಟು ಅನುಭವಗಳಿವೆ. ಅವುಗಳಲ್ಲಿ ಕೆಲವು ಗ್ರಾಹ್ಯವಾದವು, ಕೆಲವು ತ್ಯಾಜ್ಯವಾದವು. ಯಾವುದು ತ್ಯಾಜ್ಯ ಎಂದು ನಿರ್ಧಾರ ಮಾಡುವ ಒರೆಗಲ್ಲು ಯಾವುದು? ಅವರವರ ಸ್ವಂತ ಅನುಭವವೇ!” –ಜಿ.ಪಿ. ರಾಜರತ್ನಂ (ಕವಿ ಹಾಗೂ ಚಿಂತಕರು) (There are as many experiences in the world as there are people. Some are to be accepted, some to be discarded. What is the touchstone to decide what to discard? One's own experience!)

ಪದಗಳ ಅರ್ಥword meanings

KannadaPronunciationMeaning
ಹರಿದಕಿತ್ತುಹೋಗಿರುವ, ಗೋಣಿ-ಸೇಣಬಿನ ಚೀಲ, ಕಳವೆ-ಭತ್ತ, ಇರುಳು-ರಾತ್ರಿ, ಸುಂಕ-ತೆರಿಗೆ, ಅಂಧಕಾರ-ಕತ್ತಲೆ, ತಿಮಿರ; ಪ್ರಭೆ-ಕಾಂತಿ, ಪ್ರಕಾಶ; ನಿಂದಕರು-ನಿಂದಿಸುವವ, ಬಯ್ಯುವವ; ಏಡಿಸಲು-ಛೇಡಿಸು, ಚೇಷ್ಟೆಮಾಡು; ಕುತರ್ಕ-ನ್ಯಾಯವಿಲ್ಲದ ಮಾತು; ಪಥ-ಮಾರ್ಗ, ದಾರಿ; ವ್ರತ-ನಿಯಮ, ಪೂಜೆ, ಧಾರ್ಮಿಕ ಅನುಷ್ಠಾನ; ಬಟ್ಟೆ-ಮಾರ್ಗ, ದಾರಿ; ಪ್ರಮಥರು-ಶಿವನ ಭಕ್ತರು; ಅಳಿಮನ-ದೃಢವಲ್ಲದ ಮನಸ್ಸು, ಅಸ್ಥಿರವಾದ ಮನಸ್ಸು; ಅದ್ದಿ-ಮುಳುಗಿಸಿ, ತೋಯಿಸಿ;

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಅ. ಕೆಳಗಿನ ವಾಕ್ಯಗಳಲ್ಲಿ ಕರ್ಮಪದ, ಕರ್ತೃಪದ ಮತ್ತು ಕ್ರಿಯಾಪದಗಳನ್ನು ಗುರುತಿಸಿ.

  1. (A table with columns for ಕ್ರ.ಸಂ., ವಾಕ್ಯಗಳು, ಕರ್ತೃಪದ, ಕರ್ಮಪದ, ಕ್ರಿಯಾಪದ)

  2. ೧. ಉಮಾ ಹಾಡನ್ನು ಹಾಡಿದಳು.

    Answer

    ಕರ್ತೃಪದ: ಉಮಾ ಕರ್ಮಪದ: ಹಾಡನ್ನು ಕ್ರಿಯಾಪದ: ಹಾಡಿದಳು

  3. ೨. ಕೇಶವನು ಕುಂಬಳಕಾಯಿಯನ್ನು ಕೊಯ್ದನು.

    Answer

    ಕರ್ತೃಪದ: ಕೇಶವನು ಕರ್ಮಪದ: ಕುಂಬಳಕಾಯಿಯನ್ನು ಕ್ರಿಯಾಪದ: ಕೊಯ್ದನು

  4. ೩. ಗಣೇಶನು ಗಡಿಗೆಯನ್ನು ಒಡೆದನು.

    Answer

    ಕರ್ತೃಪದ: ಗಣೇಶನು ಕರ್ಮಪದ: ಗಡಿಗೆಯನ್ನು ಕ್ರಿಯಾಪದ: ಒಡೆದನು

  5. ೪. ಹಸೀನ ಕೊಡೆಯನ್ನು ಬಿಡಿಸಿದಳು.

    Answer

    ಕರ್ತೃಪದ: ಹಸೀನ ಕರ್ಮಪದ: ಕೊಡೆಯನ್ನು ಕ್ರಿಯಾಪದ: ಬಿಡಿಸಿದಳು

  6. ೫. ರಜನಿಯು ಸಿನಿಮಾವನ್ನು ನೋಡಿದಳು.

    Answer

    ಕರ್ತೃಪದ: ರಜನಿಯು ಕರ್ಮಪದ: ಸಿನಿಮಾವನ್ನು ಕ್ರಿಯಾಪದ: ನೋಡಿದಳು

  7. ೬. ಅಧ್ಯಾಪಕರು ಪಾಠವನ್ನು ಬೋಧಿಸಿದರು.

    Answer

    ಕರ್ತೃಪದ: ಅಧ್ಯಾಪಕರು ಕರ್ಮಪದ: ಪಾಠವನ್ನು ಕ್ರಿಯಾಪದ: ಬೋಧಿಸಿದರು

ಆ. ಕೆಳಗಿನ ವಾಕ್ಯಗಳಲ್ಲಿ ಕ್ರಿಯಾಪದಗಳನ್ನೂ ಕ್ರಿಯಾಪದದ ವಿಧಗಳನ್ನೂ ಸೂಚಿಸಿ.

  1. (A table with columns for ಕ್ರ.ಸಂ., ವಾಕ್ಯಗಳು, ಕ್ರಿಯಾಪದ, ಕ್ರಿಯಾಪದದ ವಿಧ (ಕಾಲಕ್ಕನುಗುಣವಾಗಿ))

    Answer

    ಕ್ರ.ಸಂ. | ವಾಕ್ಯಗಳು | ಕ್ರಿಯಾಪದ | ಕ್ರಿಯಾಪದದ ವಿಧ

  2. ೧. ರೈತರು ಕಾಳುಗಳನ್ನು ಬಿತ್ತಿದರು.

    Answer

    ಕ್ರಿಯಾಪದ: ಬಿತ್ತಿದರು ಕ್ರಿಯಾಪದದ ವಿಧ: ಭೂತಕಾಲ

  3. ೨. ಅಧ್ಯಾಪಕರು ಸಿನಿಮಾ ತೋರಿಸುತ್ತಾರೆ.

    Answer

    ಕ್ರಿಯಾಪದ: ತೋರಿಸುತ್ತಾರೆ ಕ್ರಿಯಾಪದದ ವಿಧ: ವರ್ತಮಾನಕಾಲ

  4. ೩. ನನ್ನ ಅಕ್ಕ ಭಾವ ಮುಂದಿನ ತಿಂಗಳು ಬರುವರು.

    Answer

    ಕ್ರಿಯಾಪದ: ಬರುವರು ಕ್ರಿಯಾಪದದ ವಿಧ: ಭವಿಷ್ಯತ್ಕಾಲ

  5. ೪. ಬೆಳಗ್ಗೆ ಕೋಳಿ ಕೂಗುತ್ತದೆ.

    Answer

    ಕ್ರಿಯಾಪದ: ಕೂಗುತ್ತದೆ ಕ್ರಿಯಾಪದದ ವಿಧ: ವರ್ತಮಾನಕಾಲ

Interactive Lab

ಹರಿದಕಿತ್ತುಹೋಗಿರುವ, ಗೋಣಿ-ಸೇಣಬಿನ ಚೀಲ, ಕಳವೆ-ಭತ್ತ, ಇರುಳು-ರಾತ್ರಿ, ಸುಂಕ-ತೆರಿಗೆ, ಅಂಧಕಾರ-ಕತ್ತಲೆ, ತಿಮಿರ; ಪ್ರಭೆ-ಕಾಂತಿ, ಪ್ರಕಾಶ; ನಿಂದಕರು-ನಿಂದಿಸುವವ, ಬಯ್ಯುವವ; ಏಡಿಸಲು-ಛೇಡಿಸು, ಚೇಷ್ಟೆಮಾಡು; ಕುತರ್ಕ-ನ್ಯಾಯವಿಲ್ಲದ ಮಾತು; ಪಥ-ಮಾರ್ಗ, ದಾರಿ; ವ್ರತ-ನಿಯಮ, ಪೂಜೆ, ಧಾರ್ಮಿಕ ಅನುಷ್ಠಾನ; ಬಟ್ಟೆ-ಮಾರ್ಗ, ದಾರಿ; ಪ್ರಮಥರು-ಶಿವನ ಭಕ್ತರು; ಅಳಿಮನ-ದೃಢವಲ್ಲದ ಮನಸ್ಸು, ಅಸ್ಥಿರವಾದ ಮನಸ್ಸು; ಅದ್ದಿ-ಮುಳುಗಿಸಿ, ತೋಯಿಸಿ;