ಗದ್ಯ (prose) · ಸಂಪಾದಿತ
ಪಠ್ಯFull text
ಅಭ್ಯಾಸexercises from the textbook
Model answers — a guide, not the only correct wording. Check with your teacher.
ಅ) ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಹೇಳಿ, ಬರೆಯಿರಿ.
೧. ವಸಂತ ಋತು ಕಣ್ಮನಗಳಿಗೆ ಸೊಬಗನ್ನು ತರುತ್ತಿತ್ತು ಏಕೆ?
Answerವಸಂತ ಋತುವಿನಲ್ಲಿ ಮರಗಿಡಗಳಲ್ಲಿ ಹೊಸ ಚಿಗುರು ಹೊಮ್ಮಿ, ಬಣ್ಣ ಬಣ್ಣದ ಹೂವುಗಳು ಅರಳಿ ವನಗಳ ಸೊಬಗು ಕಣ್ಮನಗಳನ್ನು ಸೆಳೆಯುತ್ತಿದ್ದುದರಿಂದ ವಸಂತ ಋತು ಕಣ್ಮನಗಳಿಗೆ ಸೊಬಗನ್ನು ತರುತ್ತಿತ್ತು.
೨. ವಸಂತ ಕಾಲದಲ್ಲಿ ಮಿಡತೆ ಯಾವ ರೀತಿ ಕಾಲ ಕಳೆಯುತ್ತಿತ್ತು?
Answerವಸಂತ ಕಾಲದಲ್ಲಿ ಮಿಡತೆ ಅತ್ತಿತ್ತ ಸುತ್ತಾಡುತ್ತಾ ಕಾಲ ಕಳೆಯುತ್ತಿತ್ತು.
೩. ವಸಂತ ಕಾಲದಲ್ಲಿ ಇರುವೆ ಯಾವ ಕೆಲಸದಲ್ಲಿ ನಿರತವಾಗಿತ್ತು?
Answerವಸಂತ ಕಾಲದಲ್ಲಿ ಇರುವೆ ಆಹಾರ ಸಂಗ್ರಹಿಸುವ ಕೆಲಸದಲ್ಲಿ ನಿರತವಾಗಿತ್ತು.
೪. ಮಳೆಗಾಲದಲ್ಲಿ ಮಿಡತೆಗೆ ಯಾವ ತೊಂದರೆ ಉಂಟಾಯಿತು?
Answerಮಳೆಗಾಲದಲ್ಲಿ ಮಿಡತೆಗೆ ಆಹಾರ ಸಿಗದೇ ಹೋಯಿತು, ಹಸಿವನ್ನು ತಾಳಲಾರದಂತಹ ತೊಂದರೆ ಉಂಟಾಯಿತು.
೫. ಇರುವೆ ಮಿಡತೆಗೆ ಏನೆಂದು ಬುದ್ದಿ ಹೇಳಿತು?
Answerಇರುವೆ ಮಿಡತೆಗೆ, 'ವಸಂತ ಋತುವಿನಲ್ಲಿ ನಾನು ಕಷ್ಟಪಟ್ಟು ಆಹಾರ ಸಂಗ್ರಹ ಮಾಡಿದ್ದೇನೆ, ನೀನು ಆಗ ಸುತ್ತಾಡುತ್ತಾ ಕಾಲಹರಣ ಮಾಡಿದೆ' ಎಂದು ಬುದ್ಧಿ ಹೇಳಿತು.
೬. ಮಿಡತೆ ಮತ್ತು ಇರುವೆ ಇವುಗಳಲ್ಲಿ ನೀವು ಯಾವುದನ್ನು ಮೆಚ್ಚುವಿರಿ? ಏಕೆ?
Answerನಾನು ಇರುವೆಯನ್ನು ಮೆಚ್ಚುವೆ. ಏಕೆಂದರೆ ಅದು ವಸಂತ ಕಾಲದಲ್ಲಿ ಕಷ್ಟಪಟ್ಟು ಆಹಾರ ಸಂಗ್ರಹಿಸಿ, ನಂತರ ತನ್ನ ತಪ್ಪಿನ ಅರಿವಾದ ಮಿಡತೆಯೊಂದಿಗೆ ಆಹಾರವನ್ನು ಹಂಚಿಕೊಂಡಿತು.
* * * * *