ಗದ್ಯ (prose) · ಚಂದ್ರಶೇಖರ ಕಂಬಾರ
ಪಠ್ಯFull text
ಅಭ್ಯಾಸexercises from the textbook
Model answers — a guide, not the only correct wording. Check with your teacher.
I. ಪದಗಳ ಅರ್ಥ ತಿಳಿಯಿರಿ :
ಅಡವಿ – ಕಾಡು; ಅರಣ್ಯ.
ದಣಿವು – ಆಯಾಸ
ದಾನ – ಕೊಡುಗೆ
ಬೇಡ – ಬೇಟೆಗಾರ
ಮಂದಿ – ಜನ
ಸರ್ಪ – ಹಾವು; ಉರಗ.
ಹಡೆ – ಹೆರಿಗೆಯಾಗು; ಜನ್ಮನೀಡು.
ಹುತ್ತ – ಹಾವಿನ ವಾಸಸ್ಥಾನ; ಗೆದ್ದಲು ಕಟ್ಟಿದ ಮಣ್ಣಿನ ಗೂಡು.
ಕೈಲಾಸ – ಶಿವನ ವಾಸಸ್ಥಳ
ದರ್ಬಾರು – ಅಧಿಕಾರ ನಡೆಸುವಿಕೆ
ಧಾರೆ – ಒಂದೇ ಸಮನೆ ನೀರುಸುರಿಸುವಿಕೆ
ಭಿಕ್ಷೆ – ಬೇಡುವುದು.
ವರ – ಮದುವೆಯಾಗುವ ಗಂಡು
ಸೀದಾ – ನೇರವಾಗಿ
ಹಳಹಳಿಸು – ಉಮ್ಮಳಿಸು; ದುಃಖಿತನಾಗು.
II. ಪ್ರಶ್ನೆಗಳು :
ಅ) ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.
೧. ತಾಯಿಯ ಅನ್ನದಾನವನ್ನು ಕಂಡು ಮಗನಿಗೆ ಯಾವ ಯೋಚನೆ ಬಂದಿತು?
Answerತಾಯಿಯು ಏಕೆ ಅನ್ನದಾನ ಮಾಡುತ್ತಾಳೆ ಮತ್ತು ಅನ್ನದಾನದ ಮಹತ್ತ್ವವೇನು ಎಂಬ ಯೋಚನೆ ಮಗನಿಗೆ ಬಂದಿತು.
೨. ತಾಯಿಯು ಅನ್ನದಾನದ ಬಗ್ಗೆ ಮಗನಿಗೆ ಏನೆಂದು ಹೇಳಿದಳು?
Answerದಾನಗಳಲ್ಲಿ ಅನ್ನದಾನವೇ ಹೆಚ್ಚಿನದು, ಅನ್ನದಾನದ ಪುಣ್ಯ ಕೊನೆತನಕ ಇರುವಂಥಾದ್ದು ಎಂದು ತಾಯಿಯು ಮಗನಿಗೆ ಹೇಳಿದಳು.
೩. ತಾಯಿ ಮಗನನ್ನು ಶಿವನ ಬಳಿ ಏಕೆ ಕಳುಹಿಸಿದಳು?
Answerಅನ್ನದಾನದ ಪುಣ್ಯ ಯಾವುದು ಎಂಬುದು ನರಮನುಷ್ಯರಿಂದ ಹೇಳಲಾಗದು, ಅದು ಶಿವನಿಗೆ ಗೊತ್ತು ಎಂದು ತಾಯಿ ಮಗನನ್ನು ಶಿವನ ಬಳಿ ಕಳುಹಿಸಿದಳು.
೪. ಹುಡುಗನು ನೇಪಾಳ ದೇಶಕ್ಕೆ ಏಕೆ ಹೋದನು?
Answerಶಿವನ ಆಜ್ಞೆಯಂತೆ, ಅನ್ನದಾನದ ಪುಣ್ಯವನ್ನು ತಿಳಿಯಲು ನೇಪಾಳ ದೇಶದ ರಾಜನ ಹೆಂಡತಿಗೆ ಪ್ರಸಾದ ಕೊಟ್ಟು ಹುಟ್ಟುವ ಕೂಸನ್ನು ಕೇಳಲು ಹುಡುಗನು ನೇಪಾಳಕ್ಕೆ ಹೋದನು.
೫. ಬೇಡನ ಹೆಂಡತಿ ಹಂದಿಯಾಗಿ ಹುಟ್ಟಿದ್ದು ಏಕೆ?
Answerಅನ್ನದಾನ ಮಾಡಲು ಒಪ್ಪದ ಕಾರಣ ಬೇಡನ ಹೆಂಡತಿ ಹಂದಿಯಾಗಿ ಹುಟ್ಟಿದಳು.
ಆ) ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.
೧. ತಾಯಿಯೊಬ್ಬಳು ಅನ್ನದಾನ ಮಾಡುತ್ತ ಮಗನೊಂದಿಗೆ ಹೇಗೆ ಜೀವಿಸುತ್ತಿದ್ದಳು?
Answerತಾಯಿ ಮನೆಗಳಲ್ಲಿ ಕಸಮುಸುರೆ ತೊಳೆದು ತಂದ ಆಹಾರವನ್ನು ಮನೆಗೆ ಬಂದವರಿಗೆ ದಾನ ಮಾಡುತ್ತಿದ್ದಳು. ಉಳಿದುದನ್ನು ಇಬ್ಬರೂ ತಿನ್ನುತ್ತಿದ್ದರು. ಭಿಕ್ಷೆಗೆ ಬಹಳ ಮಂದಿ ಬಂದಾಗ ತನ್ನ ಪಾಲಿನ ಅನ್ನವನ್ನೂ ದಾನ ಮಾಡುತ್ತಿದ್ದಳು.
೨. ಮಗನು ತಾಯಿಯ ಅನ್ನದಾನವನ್ನು ಕಂಡು ಏನೆಂದು ಕೇಳಿದನು?
Answerತಾಯೀ, ನೀನು ಏಕೆ ಹೀಗೆ ಅನ್ನದಾನ ಮಾಡುತ್ತೀ? ನೀನೇ ಉಪವಾಸವಿದ್ದು ಬೇರೆಯವರಿಗೆ ದಾನ ಮಾಡುತ್ತೀ. ಅನ್ನದಾನವನ್ನು ಬಿಟ್ಟಿದ್ದರೆ ನಾವು ಶ್ರೀಮಂತರಾಗುತ್ತಿದ್ದೆವು. ಅನ್ನದಾನದ ಮಹತ್ತ್ವವೇನು? ಎಂದು ಮಗನು ಕೇಳಿದನು.
೩. ಬೇಡನು ಹುಡುಗನಿಗೆ ಏನೆಂದು ಹೇಳಿ ತನ್ನ ಗುಡಿಸಲಿಗೆ ಕರೆದುಕೊಂಡು ಹೋದನು?
Answerಸಂಜೆ ಸಮಯದಲ್ಲಿ ಕಾಡಿನಲ್ಲಿ ಅಡ್ಡಾಡಿದರೆ ಹುಲಿ-ಸಿಂಹಗಳಿಗೆ ಬಲಿಯಾಗುವೆ. ಇಂದು ರಾತ್ರಿ ನಮ್ಮ ಗುಡಿಸಲಲ್ಲಿ ಇದ್ದು ನಾಳೆ ಹೋಗು ಎಂದು ಬೇಡನು ಹುಡುಗನನ್ನು ಕರೆದುಕೊಂಡು ಹೋದನು.
೪. ಬೇಡನು ಹುಡುಗನನ್ನು ಯಾವ ರೀತಿ ಉಪಚರಿಸಿದನು?
Answerಬೇಡನು ತನ್ನ ಪಾಲಿನ ಹಣ್ಣು ಹಾಲು ಕೊಟ್ಟು, ಹಾಸಿಗೆ ಹಾಸಿ ಮಲಗಿಸಿ, ಕರುಣೆಯಿಂದ ಹುಡುಗನನ್ನು ಉಪಚರಿಸಿದನು.
೫. ಸರ್ಪ ಯಾವ ಕಷ್ಟದಲ್ಲಿ ಸಿಲುಕಿತ್ತು? ಆ ಕಷ್ಟದಿಂದ ಅದು ಹೇಗೆ ಪಾರಾಯಿತು?
Answerಸರ್ಪವು ಹುತ್ತದಲ್ಲಿ ಅರ್ಧ ಒಳಗೂ ಅರ್ಧ ಹೊರಗೂ ಸಿಕ್ಕಿಕೊಂಡು ಚಲಿಸಲಾರದ ಸ್ಥಿತಿಯಲ್ಲಿತ್ತು. ಶಿವನ ಸಲಹೆಯಂತೆ ತನ್ನ ನೆತ್ತಿಯ ರತ್ನವನ್ನು ಯೋಗ್ಯನಿಗೆ ದಾನ ಮಾಡಿದಾಗ ಸರ್ಪವು ಸರಿದಾಡುವ ಶಕ್ತಿ ಪಡೆದು ಪಾರಾಯಿತು.
೬. ಶಿವನು ಹುಡುಗನಿಗೆ ಏನೆಂದು ಹೇಳಿ ಕಳುಹಿಸಿದನು?
Answerನೇಪಾಳ ದೇಶದ ರಾಜನ ಹೆಂಡತಿಗೆ ಪ್ರಸಾದ ಕೊಟ್ಟರೆ ಹಡೆಯುತ್ತಾಳೆ, ಹುಟ್ಟಿದ ಕೂಸು ಅನ್ನದಾನದ ಪುಣ್ಯವನ್ನು ಹೇಳುತ್ತದೆ ಎಂದು ಶಿವನು ಹುಡುಗನಿಗೆ ಹೇಳಿ ಕಳುಹಿಸಿದನು.
ಇ) ಈ ಕೆಳಗಿನ ಪ್ರಶ್ನೆಗಳಿಗೆ ಆರು-ಏಳು ವಾಕ್ಯಗಳಲ್ಲಿ ಉತ್ತರಿಸಿರಿ.
೧. ಬೇಡ ಮತ್ತು ಆತನ ಹೆಂಡತಿ ಹುಲಿಯ ಬಾಯಿಗೆ ಹೇಗೆ ತುತ್ತಾದರು?
Answerಬೇಡನು ಹುಡುಗನಿಗೆ ತನ್ನ ಪಾಲಿನ ಹಣ್ಣು ಹಾಲು ಕೊಟ್ಟು ಉಪಚರಿಸಿದನು. ಅವನ ಹೆಂಡತಿ ಮಾತ್ರ ಕೊಡಲು ಒಪ್ಪಲಿಲ್ಲ. ಬೇಡನು ಹುಡುಗನಿಗೆ ಹಾಸಿಗೆ ಹಾಸಿ ಮಲಗಿಸಿದನು. ತನಗೆ ಸ್ಥಳವಿಲ್ಲದೆ ಬಾಗಿಲಲ್ಲಿ ಅರ್ಧ ಹೊರಗೆ ಮಲಗಿದ್ದನು. ರಾತ್ರಿ ಹುಲಿ ಬಂದು ಬೇಡನನ್ನು ಕೊಂದು ತಿಂದುಹಾಕಿತು. ನಂತರ ರಕ್ತದ ರುಚಿಗೆ ಹೆಂಡತಿಯನ್ನೂ ತಿಂದುಹಾಕಿತು. ಹುಲಿಯು ಹುಡುಗನನ್ನು ಮಾತ್ರ ನೋಡದೆ ಹೋಯಿತು.
೨. ಹುಡುಗನು ಶಿವನ ಬಳಿ ಕೇಳಿದ ಪ್ರಶ್ನೆಗಳಾವುವು? ಅದಕ್ಕೆ ಶಿವನು ನೀಡಿದ ಉತ್ತರಗಳೇನು?
Answerಹುಡುಗನು ಶಿವನಲ್ಲಿ ಅನ್ನದಾನದ ಪುಣ್ಯ, ರಾಜನ ಕೆರೆಯಲ್ಲಿ ನೀರು ಬೀಳದಿರಲು ಕಾರಣ, ಕುಂಟನ ಕಾಲು ಹೋಗಲು ಕಾರಣ, ಮತ್ತು ಸರ್ಪವು ಹುತ್ತದಲ್ಲಿ ಸಿಕ್ಕಿಕೊಂಡಿರಲು ಕಾರಣ ಎಂಬ ಪ್ರಶ್ನೆಗಳನ್ನು ಕೇಳಿದನು. ಅನ್ನದಾನದ ಪುಣ್ಯ ತಿಳಿಯಲು ನೇಪಾಳದ ರಾಜನ ಹೆಂಡತಿಗೆ ಪ್ರಸಾದ ಕೊಟ್ಟು ಹುಟ್ಟಿದ ಕೂಸನ್ನು ಕೇಳಬೇಕೆಂದು ಶಿವನು ಹೇಳಿದನು. ರಾಜನ ಮಗಳನ್ನು ಯೋಗ್ಯ ವರನಿಗೆ ಮದುವೆ ಮಾಡಿದರೆ ಕೆರೆ ತುಂಬುತ್ತದೆ, ಕುಂಟನು ತನ್ನ ವಿದ್ಯೆಯನ್ನು ಯೋಗ್ಯನಿಗೆ ದಾನ ಮಾಡಿದರೆ ಕಾಲು ಬರುತ್ತದೆ, ಸರ್ಪವು ತನ್ನ ನೆತ್ತಿಯ ರತ್ನವನ್ನು ಯೋಗ್ಯನಿಗೆ ದಾನ ಮಾಡಿದರೆ ಸರಿದಾಡುತ್ತದೆ ಎಂದು ಶಿವನು ಉತ್ತರಿಸಿದನು.
೩. ಮಗು ಹುಡುಗನಿಗೆ ಅನ್ನದಾನದ ಮಹತ್ತ್ವವನ್ನು ಹೇಗೆ ತಿಳಿಸಿಕೊಟ್ಟಿತು?
Answerಮಗು ಹುಡುಗನಿಗೆ, ತಾನೇ ಹಿಂದಿನ ಜನ್ಮದಲ್ಲಿ ಬೇಡನಾಗಿದ್ದು, ಅನ್ನದಾನ ಮಾಡಿದ ಕಾರಣ ರಾಜಕುಮಾರನಾಗಿ ಹುಟ್ಟಿದ್ದನ್ನು ತಿಳಿಸಿತು. ಅನ್ನದಾನ ಮಾಡಲು ಒಪ್ಪದ ಅವನ ಹೆಂಡತಿ ಹಂದಿಯಾಗಿ ಹುಟ್ಟಿದ್ದಳೆಂದು ಹೇಳಿ, ಅನ್ನದಾನದ ಮಹತ್ತ್ವವನ್ನು ತಿಳಿಸಿಕೊಟ್ಟಿತು.
ಈ) ಇಲ್ಲಿರುವ ಮಾತುಗಳನ್ನು ಯಾರು ಯಾರಿಗೆ ಹೇಳಿದರು? ತಿಳಿಸಿರಿ.
೧. ಬಡತನ ಶ್ರೀಮಂತಿಕೆ ಕೊನೆತನಕ ಇರುವುದಿಲ್ಲ.
Answerತಾಯಿ ಮಗನಿಗೆ ಹೇಳಿದಳು.
೨. ಬೇಕಿದ್ದರೆ ನಿನ್ನ ಪಾಲಿನ ಹಣ್ಣು ಹಾಲು ಕೊಡು.
Answerಬೇಡನ ಹೆಂಡತಿ ಬೇಡನಿಗೆ ಹೇಳಿದಳು.
೩. ನಿನಗಿಂತ ಯೋಗ್ಯ ವರ ಇನ್ನಾರಿದ್ದಾರೆ! ಬಾ.
Answerರಾಜನು ಹುಡುಗನಿಗೆ ಹೇಳಿದನು.
III. ಭಾಷಾಭ್ಯಾಸ :
ಅ) ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ.
೧. ಅಲ್ಲಿಗೊಬ್ಬ = _________ + _________
Answerಅಲ್ಲಿ + ಒಬ್ಬ
೨. ಆಗಲೆಂದು = _________ + _________
Answerಆಗಲಿ + ಎಂದು
೩. ಸರ್ಪವಿತ್ತು = _________ + _________
Answerಸರ್ಪ + ಇತ್ತು
೪. ಕೆರೆಯಲ್ಲಿ = _________ + _________
Answerಕೆರೆ + ಅಲ್ಲಿ
ಆ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ.
೧. ಶ್ರೀಮಂತ X _________
Answerಬಡವ
೨. ಕರುಣೆ X _________
Answerಕ್ರೌರ್ಯ
೩. ಹೊರಗೆ X _________
Answerಒಳಗೆ
೪. ವಿದ್ಯೆ X _________
Answerಅವಿದ್ಯೆ
೫. ಬೆಳಕು X _________
Answerಕತ್ತಲೆ
೬. ಅನ್ಯಾಯ X _________
೭. ಯೋಗ್ಯ X _________
Answerಅಯೋಗ್ಯ
೮. ಸುಖ X _________
Answerದುಃಖ
ಇ) ಕೆಳಗಿನ ಪದಗಳನ್ನು ಸ್ವಂತ ವಾಕ್ಯಗಳಲ್ಲಿ ಬಳಸಿ ಬರೆಯಿರಿ.
೧. ಅನ್ನದಾನ : __________________________________________________
Model sentenceಅನ್ನದಾನ: ನಮ್ಮ ಶಾಲೆಯಲ್ಲಿ ಪ್ರತಿ ವರ್ಷ ಅನ್ನದಾನ ಮಾಡುತ್ತೇವೆ.
೨. ಪುಣ್ಯ : __________________________________________________
Model sentenceಪುಣ್ಯ: ದಾನ ಮಾಡುವುದರಿಂದ ಪುಣ್ಯ ಬರುತ್ತದೆ.
೩. ಪ್ರಸಾದ : __________________________________________________
Model sentenceಪ್ರಸಾದ: ದೇವಸ್ಥಾನದಲ್ಲಿ ನಮಗೆ ಪ್ರಸಾದ ಕೊಟ್ಟರು.
೪. ಕೈಲಾಸ : __________________________________________________
Model sentenceಕೈಲಾಸ: ನಾನು ಕೈಲಾಸ ಪರ್ವತವನ್ನು ನೋಡಬೇಕೆಂದಿದ್ದೇನೆ.
೫. ದಣಿವು : __________________________________________________
Model sentenceದಣಿವು: ಆಟವಾಡಿ ನನಗೆ ತುಂಬಾ ದಣಿವಾಯಿತು.
ಈ) ಸೂಚನೆಗಳಿಗನುಸಾರ ವಾಕ್ಯಗಳನ್ನು ಪುನಃ ರಚಿಸಿರಿ.
೧. ತನಗೆ ತಿಳಿದ ವಿದ್ಯೆಯನ್ನು ಯೋಗ್ಯನಿಗೆ ದಾನ ಮಾಡಿದರೆ ಹೋದಕಾಲು ಬರುತ್ತವೆ.
Answerತನಗೆ ತಿಳಿದ ವಿದ್ಯೆಯನ್ನು ಯೋಗ್ಯನಿಗೆ ದಾನ ಮಾಡಿದರೆ ಹೋದ ಕಾಲು ಬಂದಿತು.
(ಭೂತಕಾಲದಲ್ಲಿ ಬರೆಯಿರಿ)
__________________________________________________
Answerತನಗೆ ತಿಳಿದ ವಿದ್ಯೆಯನ್ನು ಯೋಗ್ಯನಿಗೆ ದಾನ ಮಾಡಿದರೆ ಹೋದ ಕಾಲು ಬಂದಿತು.
೨. ಹುಡುಗನನ್ನು ನೋಡಿ ಬೇಡನಿಗೆ ಕರುಣೆ ಬಂತು. (ಬಹು ವಚನದಲ್ಲಿ ಬರೆಯಿರಿ)
Answerಹುಡುಗರನ್ನು ನೋಡಿ ಬೇಡರಿಗೆ ಕರುಣೆ ಬಂತು.
__________________________________________________
Answerಹುಡುಗರನ್ನು ನೋಡಿ ಬೇಡರಿಗೆ ಕರುಣೆ ಬಂತು.
೩. ಖರ್ಚುಮಾಡಿ ಕೋಟಿ ಒಂದು ಹಣ ಕೆರೆ ಕಟ್ಟಿಸಿದೆ. (ವಾಕ್ಯವನ್ನು ಸರಿಪಡಿಸಿ ಬರೆಯಿರಿ)
Answerಕೋಟಿ ಹಣ ಖರ್ಚು ಮಾಡಿ ಒಂದು ಕೆರೆ ಕಟ್ಟಿಸಿದೆ.
__________________________________________________
Answerಕೋಟಿ ಹಣ ಖರ್ಚು ಮಾಡಿ ಒಂದು ಕೆರೆ ಕಟ್ಟಿಸಿದೆ.
೪. ಹುಡುಗಾ ಎಲ್ಲಿ ಹೊರಟಿರುವೆ (ಸೂಕ್ತ ಲೇಖನ ಚಿಹ್ನೆಗಳನ್ನು ಬಳಸಿ ಬರೆಯಿರಿ)
Answerಹುಡುಗಾ, ಎಲ್ಲಿ ಹೊರಟಿರುವೆ?
__________________________________________________
Answerಹುಡುಗಾ, ಎಲ್ಲಿ ಹೊರಟಿರುವೆ?
IV. ಚಟುವಟಿಕೆಗಳು :
೧. ಈ ಕಥೆಯನ್ನು ತರಗತಿಯಲ್ಲಿ ನಿಮ್ಮದೇ ಧಾಟಿಯಲ್ಲಿ ಹಾವಭಾವಗಳೊಂದಿಗೆ ಗಟ್ಟಿಯಾಗಿ ಹೇಳಿರಿ.
೨. ಅನ್ನದಾನದ ಮಹತ್ತ್ವ ಕುರಿತು ಗೆಳೆಯರೊಂದಿಗೆ ಚರ್ಚಿಸಿರಿ.
೩. ‘ಅನ್ನದಾನ’ ಕಥೆಯಲ್ಲಿ ಬರುವ ಪಾತ್ರಗಳನ್ನು ಹಂಚಿಕೊಂಡು ತರಗತಿಯಲ್ಲಿ ಅಭಿನಯಿಸಿರಿ.
೪. ಜಾನಪದ ಕಥೆಗಳನ್ನು ಓದಿ, “ಕೇಳಿ ತಿಳಿಯಿರಿ”.
* * * * *