ಪದ್ಯ (poem) · ಸರ್ವಜ್ಞ
ಪಠ್ಯFull text
ಅಭ್ಯಾಸexercises from the textbook
Model answers — a guide, not the only correct wording. Check with your teacher.
I. ಪದಗಳ ಅರ್ಥ ತಿಳಿಯಿರಿ :
ಅರಿ - ತಿಳಿ
ಅಗ್ನಿ - ಬೆಂಕಿ
ಇಹುದು - ಇದೆ
ಕಳೆ - ನಾಶಮಾಡು
ತನ್ನೊಳಗಿರ್ದು - ತನ್ನ ಒಳಗೆ ಇರುವ
ದೈವ - ದೇವರು
ಪುಣ್ಯ - ಪವಿತ್ರ
ಬಂಧುಗಳು - ನೆಂಟರು; ಸಂಬಂಧಿಕರು.
ಮುಕ್ತಿ - ಬಿಡುಗಡೆ; ಮೋಕ್ಷ.
ಸಿರಿ - ಸಂಪತ್ತು
ಹಿರಿಯರು - ದೊಡ್ಡವರು
ಅರಿಯರು - ತಿಳಿಯರು
ಆಮಲಕ - ನೆಲ್ಲಿಕಾಯಿ
ಎರಗು - ನಮಸ್ಕರಿಸು
ಜಗ - ಲೋಕ.
ತೋರದೆ - ಕಾಣದೆ
ನರ - ಮಾನವ
ಬಂಧನ - ಕಟ್ಟು; ಸೆರೆಮನೆ.
ಬಂಧನ - ಸೆರೆ
ಶಿರ - ತಲೆ
ಹರ - ಶಿವ; ಶ್ರೇಷ್ಠತೆ; ದೈವೀಗುಣ.
ಸುರ - ದೇವತೆ
ಟಿಪ್ಪಣಿ :
೧. ಮುಕ್ತಿ - ಹುಟ್ಟು ಸಾವುಗಳ ಚಕ್ರದಿಂದ ಬಿಡುಗಡೆ ಹೊಂದುವುದು.
೨. ಕೈಲಾಸ - ಶಿವ ಪಾರ್ವತಿಯರು ನೆಲೆಸಿರುವರೆಂದು ನಂಬಿರುವ ಪರ್ವತ.
೩. ಕರತಲಾಮಲಕ - ಅಂಗೈ ಮೇಲಿರುವ ನೆಲ್ಲಿಕಾಯಿಯಂತೆ ಸ್ಪಷ್ಟಗೋಚರ.
೪. ಸಿರಿ - ಸಿರಿ ಎಂಬುದು ಲಕ್ಷ್ಮೀಯ ಇನ್ನೊಂದು ಹೆಸರು.
೫. ಪುಣ್ಯ - ಒಳ್ಳೆಯ ಕೆಲಸದಿಂದ ದೊರೆಯುವ ಫಲ.
೬. ತ್ರಿಪದಿ - ಮೂರು ಸಾಲಿನ ಪದ್ಯ.
II. ಪ್ರಶ್ನೆಗಳು :
ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.
೧. ನಮ್ಮೊಳಗಿನ ಹರನನ್ನು ಯಾರು ತೋರುತ್ತಾರೆ?
Answerನಮ್ಮೊಳಗಿನ ಹರನನ್ನು ಗುರು ತೋರುತ್ತಾರೆ.
೨. ಹರನು ನಮ್ಮೊಳಗೆ ಇರುವುದನ್ನು ಸರ್ವಜ್ಞ ಕವಿ ಯಾವುದಕ್ಕೆ ಹೋಲಿಸಿದ್ದಾನೆ?
Answerಸರ್ವಜ್ಞ ಕವಿ ಹರನು ನಮ್ಮೊಳಗೆ ಇರುವುದನ್ನು ಮರದೊಳಗೆ ಅಗ್ನಿ ಇರುವುದಕ್ಕೆ ಹೋಲಿಸಿದ್ದಾನೆ.
೩. ತನ್ನನ್ನು ತಾನು ಅರಿಯುವುದು ಎಂದರೇನು?
೪. ಜಗಕೆ ಯಾರಿಂದ ಮುಕ್ತಿ ದೊರೆಯುವುದೆಂದು ಸರ್ವಜ್ಞ ಕವಿ ಹೇಳಿದ್ದಾನೆ?
Answerಜಗಕೆ ಗುರುವಿಂದ ಮುಕ್ತಿ ದೊರೆಯುವುದೆಂದು ಸರ್ವಜ್ಞ ಕವಿ ಹೇಳಿದ್ದಾನೆ.
೫. ಗುರುವಿಗಿಂತ ಬೇರೆ ಬಂಧುವಿಲ್ಲ ಏಕೆ?
Answerಏಕೆಂದರೆ ಬಂಧುಗಳು ಬಂದು ಊಟ ಮಾಡಿ ಹೋಗುತ್ತಾರೆ, ಆದರೆ ಬಂಧನವನ್ನು ಕಳೆಯಲು ಅರಿಯರು, ಗುರು ಮಾತ್ರ ಬಂಧನವನ್ನು ಕಳೆಯಬಲ್ಲನು.
೬. ಗುರುಹಿರಿಯರಿಗೆ ಹೇಗೆ ನಮಿಸಬೇಕು?
Answerಗುರುಹಿರಿಯರಿಗೆ ಶಿರಬಾಗಿ ಎರಗಬೇಕು.
೭. ಸರ್ವಜ್ಞ ಕವಿಯ ಜನ್ಮಸ್ಥಳ ಯಾವುದು?
ಆ) ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರ ಬರೆಯಿರಿ:
೧. ತನ್ನ ತಾನು ಅರಿಯುವುದರಿಂದ ಪ್ರಯೋಜನಗಳೇನು?
೨. ಬಂಧುಗಳ ಸ್ವಭಾವ ಯಾವ ರೀತಿಯದು ಎಂದು ಸರ್ವಜ್ಞ ಕವಿ ಹೇಳಿದ್ದಾನೆ?
Answerಸರ್ವಜ್ಞ ಕವಿಯ ಪ್ರಕಾರ, ಬಂಧುಗಳು ಬಂದು ಊಟ ಮಾಡಿ ಹೋಗುವವರಾಗಿದ್ದು, ಬಂಧನವನ್ನು ಕಳೆಯಲು ಅರಿಯರು. ಅವರು ನಿಜವಾದ ಬಂಧುಗಳಲ್ಲ.
೩. ಗುರುವಿನ ಮಹಿಮೆಯನ್ನು ಸರ್ವಜ್ಞ ಕವಿ ಏನೆಂದು ಬಣ್ಣಿಸಿದ್ದಾನೆ?
Answerಗುರುವಿನ ಮಹಿಮೆಯನ್ನು ಸರ್ವಜ್ಞ ಕವಿ ಹೀಗೆ ಬಣ್ಣಿಸಿದ್ದಾನೆ: ಗುರು ನಮ್ಮೊಳಗಿನ ಹರನನ್ನು ತೋರಿಸುತ್ತಾನೆ. ಗುರುವೇ ನಿಜವಾದ ಬಂಧು, ದೈವ, ಪುಣ್ಯ ಮತ್ತು ಮುಕ್ತಿಯನ್ನು ಕೊಡುವವನು. ಗುರುಗಳಿಗೆ ನಮಿಸಿದರೆ ಕೈಲಾಸವು ಕರತಲಾಮಲಕವಾಗುತ್ತದೆ.
೪. ಗುರುಹಿರಿಯರಿಗೆ ನಮಸ್ಕರಿಸುವುದರಿಂದ ಯಾವ ಫಲಗಳು ಸಿಗುತ್ತವೆ?
Answerಗುರುಹಿರಿಯರಿಗೆ ನಮಸ್ಕರಿಸುವುದರಿಂದ ನರಸುರರು ಬಂದು ಸಿರಿಯನ್ನು ಸುರಿಸುತ್ತಾರೆ ಮತ್ತು ಕೈಲಾಸವು ಕರತಲಾಮಲಕವಾಗುತ್ತದೆ.
III. ಭಾಷಾಭ್ಯಾಸ :
ಅ) ಕೆಳಗಿನ ಪದಗಳನ್ನು ನಿಮ್ಮ ಸ್ವಂತ ವಾಕ್ಯಗಳಲ್ಲಿ ಬಳಸಿ ಬರೆಯಿರಿ.
೧. ಬಂಧು : ____________________________________________________
Model sentenceಬಂಧು: ನಮ್ಮ ಮನೆಗೆ ಹಬ್ಬಕ್ಕೆ ಬಂಧುಗಳು ಬಂದಿದ್ದರು.
೨. ಬಂಧನ : ____________________________________________________
Model sentenceಬಂಧನ: ಸರ್ಕಸ್ಸಿನಲ್ಲಿ ಆನೆಯ ಕಾಲಿಗೆ ಬಂಧನ ಹಾಕಿದ್ದರು.
೩. ಪುಣ್ಯ : ____________________________________________________
Model sentenceಪುಣ್ಯ: ದೇವಸ್ಥಾನದಲ್ಲಿ ಸೇವೆ ಮಾಡಿದರೆ ಪುಣ್ಯ ಬರುತ್ತದೆ.
೪. ಮುಕ್ತಿ : ____________________________________________________
Model sentenceಮುಕ್ತಿ: ನಮ್ಮ ಅಜ್ಜಿ ಮುಕ್ತಿ ಪಡೆಯಲು ಪ್ರಾರ್ಥಿಸುತ್ತಿದ್ದರು.
೫. ಸಿರಿ : ____________________________________________________
Model sentenceಸಿರಿ: ದೀಪಾವಳಿ ಹಬ್ಬದಲ್ಲಿ ಲಕ್ಷ್ಮೀ ದೇವಿಯ ಸಿರಿ ನಮ್ಮ ಮನೆಗೆ ಬರಲಿ ಎಂದು ಪೂಜೆ ಮಾಡಿದೆವು.
೬. ತಿಳಿವು : ____________________________________________________
Model sentenceತಿಳಿವು: ಪಾಠವನ್ನು ಚೆನ್ನಾಗಿ ಕೇಳಿದರೆ ತಿಳಿವು ಬರುತ್ತದೆ.
ಆ) ಕೆಳಗಿನವುಗಳಿಗೆ ವಿರುದ್ಧ ಪದಗಳನ್ನು ಬರೆಯಿರಿ.
೧. ಬಂಧನ X ____________________
Answerಮುಕ್ತಿ
೨. ಹಿರಿಯ X ____________________
೩. ಪುಣ್ಯ X ____________________
೪. ಜ್ಞಾನಿ X ____________________
ಇ) ಕೆಳಗೆ ನೀಡಿರುವ ಪದಗಳಿಗೆ ಸಮಾನಾರ್ಥಕ ಪದಗಳನ್ನು ಬರೆಯಿರಿ:
೧. ಅರಿ - ____________________
Answerತಿಳಿ
೨. ಶಿರ - ____________________
೩. ಜಗ - ____________________
೪. ನರ - ____________________
೫. ಕರ - ____________________
೬. ಬಂಧು - ____________________
ಈ) ಕೆಳಗೆ ನೀಡಿರುವ ಪದಗಳನ್ನು ಬಿಡಿಸಿ ಬರೆಯಿರಿ:
೧. ಮರದೊಳಗೆ = ____________________ + ____________________
Answerಮರದ + ಒಳಗೆ
೨. ತಾನರಿಯ = ____________________ + ____________________
Answerತಾನು + ಅರಿಯ
೩. ಬಂದುಂಡು = ____________________ + ____________________
Answerಬಂದು + ಉಂಡು
೪. ಕಳೆಯಲರಿಯರು = ____________________ + ____________________
Answerಕಳೆಯಲು + ಅರಿಯರು
IV. ಸೈದ್ಧಾಂತಿಕ ವ್ಯಾಕರಣ:
**ವಿಭಕ್ತಿ ಪ್ರತ್ಯಯಗಳು :** ನಾಮ ಪ್ರಕೃತಿಗೆ ಸೇರುವ ಪ್ರತ್ಯಯಗಳೇ ವಿಭಕ್ತಿ ಪ್ರತ್ಯಯಗಳು.
| ವಿಭಕ್ತಿ | ಪ್ರತ್ಯಯ | ನಾಮಪ್ರಕೃತಿ | ಪ್ರತ್ಯಯ | ನಾಮಪದ |
|---|---|---|---|---|
| ಪ್ರಥಮಾ | ಉ | ಮರ | ಉ | ಮರವು |
| ದ್ವಿತೀಯಾ | ಅನ್ನು | ಮರ | ಅನ್ನು | ಮರವನ್ನು |
| ತೃತೀಯಾ | ಇಂದ | ಮರ | ಇಂದ | ಮರದಿಂದ |
| ಚತುರ್ಥೀ | ಗೆ, ಕ್ಕೆ, ಇಗೆ | ಮರ | ಗೆ, ಕ್ಕೆ, ಇಗೆ | ಮರಕ್ಕೆ |
| ಪಂಚಮೀ | ದೆಸೆಯಿಂದ | ಮರ | ದೆಸೆಯಿಂದ | ಮರದದೆಸೆಯಿಂದ |
| ಷಷ್ಠೀ | ಅ | ಮರ | ಅ | ಮರದ |
| ಸಪ್ತಮೀ | ಅಲ್ಲಿ | ಮರ | ಅಲ್ಲಿ | ಮರದಲ್ಲಿ |
ಕೆಳಗೆ ನೀಡಿರುವ ನಾಮ ಪ್ರಕೃತಿಗಳಾದ ನದಿ, ರವಿ, ಮನೆ ಇವುಗಳಿಗೆ ವಿಭಕ್ತಿ ಪ್ರತ್ಯಯಗಳನ್ನು ಸೇರಿಸಿ ಖಾಲಿ ಜಾಗದಲ್ಲಿ ಬರೆಯಿರಿ.
ನಾಮಪ್ರಕೃತಿಗಳು
| ವಿಭಕ್ತಿ | ಪ್ರತ್ಯಯ | ನದಿ | ರವಿ | ಮನೆ |
|---|---|---|---|---|
| ಪ್ರಥಮಾ | ಉ | ನದಿಯು | | |
Answer| ಪ್ರಥಮಾ | ಉ | ನದಿಯು | ರವಿಯು | ಮನೆಯು |
| ದ್ವಿತೀಯಾ | ಅನ್ನು | | | |
Answer| ದ್ವಿತೀಯಾ | ಅನ್ನು | ನದಿಯನ್ನು | ರವಿಯನ್ನು | ಮನೆಯನ್ನು |
| ತೃತೀಯಾ | ಇಂದ | | | |
Answer| ತೃತೀಯಾ | ಇಂದ | ನದಿಯಿಂದ | ರವಿಯಿಂದ | ಮನೆಯಿಂದ |
| ಚತುರ್ಥೀ | ಗೆ, ಕ್ಕೆ, ಇಗೆ | | ರವಿಗೆ | |
Answer| ಚತುರ್ಥೀ | ಗೆ, ಕ್ಕೆ, ಇಗೆ | ನದಿಗೆ | ರವಿಗೆ | ಮನೆಗೆ |
| ಪಂಚಮೀ | ದೆಸೆಯಿಂದ | | | |
Answer| ಪಂಚಮೀ | ದೆಸೆಯಿಂದ | ನದಿಯ ದೆಸೆಯಿಂದ | ರವಿಯ ದೆಸೆಯಿಂದ | ಮನೆಯ ದೆಸೆಯಿಂದ |
| ಷಷ್ಠೀ | ಅ | | | |
Answer| ಷಷ್ಠೀ | ಅ | ನದಿಯ | ರವಿಯ | ಮನೆಯ |
| ಸಪ್ತಮೀ | ಅಲ್ಲಿ | | | ಮನೆಯಲ್ಲಿ |
Answer| ಸಪ್ತಮೀ | ಅಲ್ಲಿ | ನದಿಯಲ್ಲಿ | ರವಿಯಲ್ಲಿ | ಮನೆಯಲ್ಲಿ |
V. ಚಟುವಟಿಕೆಗಳು:
೧. ಪ್ರಸ್ತುತ ಸರ್ವಜ್ಞನ ವಚನಗಳಲ್ಲಿನ ಕೊನೆಯ ಎರಡು ತ್ರಿಪದಿಗಳನ್ನು ಕಂಠಪಾಠ ಮಾಡಿರಿ.
೨. ಸರ್ವಜ್ಞನ ಇನ್ನಿತರ ತ್ರಿಪದಿಗಳನ್ನು ಸಂಗ್ರಹಿಸಿ ಓದಿರಿ.