ಪದ್ಯ · ವಿ.ಜಿ. ಭಟ್ಟ
ಪಠ್ಯFull text
ಕಾಡಿಗೆ ಹೋದೆನು ಕನಸಿನಲಿ
ಒಯ್ದಿತು ನನ್ನನ್ನು ಪಟ್ಟೆಹುಲಿ
ಸೊಂಡಿಲಿನಲಿ ತಣ್ಣೀರನು ತಂದು
ಆನೆಯು ಜಳಕವ ಮಾಡಿಸಿತು
ಮರಗಳು ನೀಡಿದ ಹಣ್ಣುಗಳನ್ನು
ಸಿಂಹವು ಊಡಿಸಿತು
ಹಂಸಗಳೆಲ್ಲಾ ಹಾಸಿಗೆ ಮಾಡಿ
ಹಕ್ಕಿಗಳೆಲ್ಲಾ ಹಾಡನು ಹಾಡಿ
ಮೊಲಗಳು ಕತೆಯನು ಹೇಳಿದವು
ನಿಮ್ಮೂರಿನ ಮಳೆ ಬೆಳೆ ಹೇಗೆಂದು
ನರಿಗಳು ಕೇಳಿದವು
ಗಾಳಿಯ ಹಾಕಿತು ನವಿಲಿನ ಹಿಂಡು
ಇದನೆಲ್ಲಾ ನನ್ನಪ್ಪನು ಕಂಡು
ಕೈಯಲಿ ಭಡಿಯನ್ನು ಹಿಡಿದೆ ಬಂದು
‘ನನ್ನನು ಕೇಳದೆ ಯಾತಕೆ ಬಂದೆ?’
ಎಂದಬ್ಬರಿಸಲು ಹೆದರಿಕೆಯಿಂದ
ಪ್ರಾಣಿಗಳೆಲ್ಲಾ ಓಡಿದವು
ದೂರದಿ ಗವಿಯಲಿ ಸುಮ್ಮನೆ ನಿಂತು
ಅಪ್ಪನ ನೋಡಿದವು
ಬೆನ್ನಿಗೆ ಭಡಿಗಳು ಬೀಳಲು ಅಯ್ಯೋ
ಅಯ್ಯೋ ಎಂದತ್ತೆ
ಎಚ್ಚರವಾಯಿತು–ಅಪ್ಪನು ಇಲ್ಲ!
ಕಾಡಿಗೆ ಹೋಗಲು ಆಗಲೆ ಇಲ್ಲ
ಎಂದೆಂದೂ ಮತ್ತೆ
ಅಭ್ಯಾಸexercises from the textbook
Model answers — a guide, not the only correct wording. Check with your teacher.
ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.
೧. ಕಾಡಿನಲ್ಲಿ ಯಾವ ಪ್ರಾಣಿಯು ಬಾಲಕನನ್ನು ಒಯ್ದಿತು?
Answerಕಾಡಿನಲ್ಲಿ ಪಟ್ಟೆಹುಲಿಯು ಬಾಲಕನನ್ನು ಒಯ್ದಿತು.
೨. ಆನೆ, ಸಿಂಹಗಳು ಬಾಲಕನನ್ನು ಹೇಗೆ ಉಪಚರಿಸಿದವು?
Answerಆನೆಯು ಸೊಂಡಿಲಿನಲ್ಲಿ ತಣ್ಣೀರನ್ನು ತಂದು ಜಳಕ ಮಾಡಿಸಿತು; ಸಿಂಹವು ಮರಗಳು ನೀಡಿದ ಹಣ್ಣುಗಳನ್ನು ಊಡಿಸಿತು.
೩. ನರಿಗಳು ಬಾಲಕನನ್ನು ಏನೆಂದು ಕೇಳಿದವು?
Answerನರಿಗಳು ಬಾಲಕನನ್ನು 'ನಿಮ್ಮೂರಿನ ಮಳೆ ಬೆಳೆ ಹೇಗೆ?' ಎಂದು ಕೇಳಿದವು.
೪. ಪ್ರಾಣಿಗಳೆಲ್ಲವೂ ಹೆದರಿದ್ದೇಕೆ?
Answerಅಪ್ಪನು ಕೈಯಲ್ಲಿ ಭಡಿಯನ್ನು ಹಿಡಿದು 'ನನ್ನನು ಕೇಳದೆ ಯಾತಕೆ ಬಂದೆ?' ಎಂದು ಅಬ್ಬರಿಸಿದ್ದರಿಂದ ಪ್ರಾಣಿಗಳೆಲ್ಲವೂ ಹೆದರಿದವು.