ಗದ್ಯ · ಸಂಪಾದಿತ
ಪಠ್ಯFull text
“ಏಳಿ ಎದ್ದೇಳಿ! ಎಚ್ಚರಗೊಳ್ಳಿರಿ! ಗುರಿ ಮುಟ್ಟುವವರೆಗೆ ನಿಲ್ಲದಿರಿ” — “Arise, awake! Stop not until the goal is reached.” A powerful call to action and perseverance.
ಅಭ್ಯಾಸexercises from the textbook
Model answers — a guide, not the only correct wording. Check with your teacher.
I. ಪದಗಳ ಅರ್ಥ :
ಅರಿ - ತಿಳಿ
ಏಕಾಗ್ರತೆ - ತದೇಕಚಿತ್ತತೆ.
ಕುತೂಹಲ - ತವಕ; ತಿಳಿದುಕೊಳ್ಳುವ ಆಸಕ್ತಿ.
ಗುಂಗು - ತಲ್ಲೀನತೆ; ಮುಳುಗುವಿಕೆ.
ತಂಟೆ - ಗೋಜು; ಉಪದ್ರವ.
ಪರಿವೆ - ಅರಿವು
ಮಾಲಿ - ತೋಟ ಕಾಯುವವನು.
ಉಪಾಯ - ಯುಕ್ತಿ
ಕೆಂಡ - ಉರಿಯುತ್ತಿರುವ ಇದ್ದಿಲು.
ಗಮನಿಸು - ಲಕ್ಷಿಸು
ಚಿಂತನೆ - ಯೋಚನೆ; ಧ್ಯಾನ.
ದೌರ್ಬಲ್ಯ - ಬಲಹೀನವಾದ.
ಬೆರಗು - ಆಶ್ಚರ್ಯಪಡು
ಸಿದ್ಧ - ಸಮರ್ಥ
II. ಪ್ರಶ್ನೆಗಳು :
ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.
೧. ಬಾಲಕ ನರೇಂದ್ರನ ಮೇಲೆ ಏನು ಹರಿದು ಹೋಯಿತು?
Answerಬಾಲಕ ನರೇಂದ್ರನ ಮೇಲೆ ಹಾವೊಂದು ಹರಿದು ಹೋಯಿತು.
೨. ನರೇಂದ್ರ ತೋಟದಲ್ಲಿ ಯಾರಿಗಾಗಿ ಕಾದನು?
Answerನರೇಂದ್ರ ತೋಟದಲ್ಲಿ ಭೂತಕ್ಕಾಗಿ ಕಾದನು.
೩. ರಾಮಕೃಷ್ಣ ಪರಮಹಂಸರು ನರೇಂದ್ರನನ್ನು ಯಾವ ಹೆಸರಿನಿಂದ ಕರೆದರು?
Answerರಾಮಕೃಷ್ಣ ಪರಮಹಂಸರು ನರೇಂದ್ರನನ್ನು ಸ್ವಾಮಿ ವಿವೇಕಾನಂದ ಎಂಬ ಹೆಸರಿನಿಂದ ಕರೆದರು.
೪. ಸ್ವಾಮಿ ವಿವೇಕಾನಂದರು ಜನರಿಗೆ ಕೊಟ್ಟ ಸಂದೇಶವೇನು?
Answerಸ್ವಾಮಿ ವಿವೇಕಾನಂದರು ‘ಏಳಿ ಎದ್ದೇಳಿ! ಎಚ್ಚರಗೊಳ್ಳಿರಿ! ಗುರಿ ಮುಟ್ಟುವವರೆಗೆ ನಿಲ್ಲದಿರಿ’, ‘ಶಕ್ತಿಯೇ ಜೀವನ; ದೌರ್ಬಲ್ಯವೇ ಮರಣ’ ಎಂಬ ಸಂದೇಶವನ್ನು ಜನರಿಗೆ ಕೊಟ್ಟರು.
೫. ಸ್ವಾಮಿ ವಿವೇಕಾನಂದರು ಜನರ ಕಷ್ಟ ಹೇಗೆ ಅರಿತರು?
Answerಸ್ವಾಮಿ ವಿವೇಕಾನಂದರು ಭಾರತದ ತುಂಬ ಸುತ್ತಿ ಜನರ ಕಷ್ಟವನ್ನು ಅರಿತರು.
ಆ) ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.
೧. ಬಾಲಕ ನರೇಂದ್ರನ ಮೇಲೆ ಹಾವು ಹರಿದ ಪ್ರಸಂಗ ಯಾವುದು?
Answerಬಾಲಕ ನರೇಂದ್ರ ಕಣ್ಣುಮುಚ್ಚಿ ಚಿಂತನೆ ಮಾಡುತ್ತಿದ್ದಾಗ ಅವನ ಮೈಮೇಲೆ ಹಾವೊಂದು ಹರಿದು ಹೋಯಿತು. ಅವನ ಗೆಳೆಯರು ಇದನ್ನು ನೋಡಿ ಗಾಬರಿಯಾಗಿ ಓಡಿದರು. ನಂತರ ಅವರು ಬಂದು ನರೇಂದ್ರನಿಗೆ ವಿಷಯ ತಿಳಿಸಿದಾಗ ಅವನು ಭಯಪಡಲಿಲ್ಲ.
೨. ತೋಟದ ಮಾಲಿ ಮಕ್ಕಳಿಗೆ ಏನೆಂದು ಹೇಳಿದನು?
Answerತೋಟದ ಮಾಲಿ ಮಕ್ಕಳಿಗೆ ‘ಆ ಮರದಲ್ಲಿ ಭೂತ ಇದೆ. ನೀವು ಈಗಲೇ ಜಾಗ ಬಿಟ್ಟು ಹೋಗಿ, ಇಲ್ಲದಿದ್ದರೆ ನಿಮ್ಮನ್ನೆಲ್ಲ ನುಂಗಿಬಿಡುತ್ತದೆ’ ಎಂದು ಹೇಳಿದನು.
೩. ಡಾಯರ್ಸನ್ನನು ಏಕೆ ಬೆರಗಾದರು?
Answerಸ್ವಾಮಿ ವಿವೇಕಾನಂದರು ಪುಸ್ತಕದ ನೂರಾರು ಸಾಲುಗಳನ್ನು ಅದರಂತೆ ಉದಾಹರಿಸುತ್ತಿದ್ದುದನ್ನು ಕಂಡು ಡಾಯರ್ಸನ್ ಬೆರಗಾದರು. ಇದು ಹೇಗೆ ಸಾಧ್ಯ ಎಂದು ಅವರು ಕೇಳಿದರು.
೪. ಪ್ರಾಣಿಗಳ ಬಗ್ಗೆ ನರೇಂದ್ರನ ಅಭಿಪ್ರಾಯವೇನು?
Answerಪ್ರಾಣಿಗಳ ತಂಟೆಗೆ ಹೋಗದಿದ್ದರೆ ಅವು ನಮ್ಮನ್ನು ಏನೂ ಮಾಡುವುದಿಲ್ಲ ಎಂಬುದು ಪ್ರಾಣಿಗಳ ಬಗ್ಗೆ ನರೇಂದ್ರನ ಅಭಿಪ್ರಾಯವಾಗಿತ್ತು.
೫. ಭೂತದ ಬಗೆಗೆ ನರೇಂದ್ರನ ವಿಚಾರಗಳೇನು?
Answerಭೂತದ ಬಗ್ಗೆ ನರೇಂದ್ರನಿಗೆ ಭಯದ ಬದಲು ಕುತೂಹಲವಿತ್ತು. ಅವನು ಕೊಂಬೆಯಿಂದ ಕೊಂಬೆಗೆ ತೂಗಾಡುತ್ತಾ ಭೂತವನ್ನು ಎದುರಿಸಲು ಸಿದ್ಧನಾದನು. ಕಾದು ಕಾದು ಭೂತ ಬರಲಿಲ್ಲವಾದ್ದರಿಂದ ಅದು ಹುಡುಗರನ್ನು ಓಡಿಸಲು ಮಾಲಿಯ ಉಪಾಯ ಎಂದು ಅರಿತನು.
ಇ) ಕೆಳಗಿನ ವಾಕ್ಯಗಳನ್ನು ಯಾರು ಯಾರಿಗೆ ಹೇಳಿದರು? ತಿಳಿಸಿರಿ.
೧. “ಪ್ರಾಣಿಗಳ ತಂಟೆಗೆ ಹೋಗದಿದ್ದರೆ ಅವು ನಮ್ಮನ್ನು ಏನೂ ಮಾಡುವುದಿಲ್ಲ.”
Answerಈ ಮಾತನ್ನು ಬಾಲಕ ನರೇಂದ್ರನು ತನ್ನ ಗೆಳೆಯರಿಗೆ ಹೇಳಿದನು.
೨. “ಭಯದ ಮಾತುಗಳನ್ನು ನಂಬಬಾರದು.”
Answerಈ ಮಾತನ್ನು ನರೇಂದ್ರನು ತನ್ನ ಗೆಳೆಯರಿಗೆ ಹೇಳಿದನು.
೩. “ಇದು ಹೇಗೆ ಸಾಧ್ಯ?”
Answerಈ ಮಾತನ್ನು ಡಾಯರ್ಸನ್ ಸ್ವಾಮಿ ವಿವೇಕಾನಂದರಿಗೆ ಹೇಳಿದರು.
೪. “ಶಕ್ತಿಯೇ ಜೀವನ; ದೌರ್ಬಲ್ಯವೇ ಮರಣ.”
Answerಈ ಮಾತನ್ನು ಸ್ವಾಮಿ ವಿವೇಕಾನಂದರು ಜನರಿಗೆ ಹೇಳಿದರು.
III. ಭಾಷಾಭ್ಯಾಸ :
ಅ) ಕೆಳಗಿನ ಪದಗಳನ್ನು ಸ್ವಂತವಾಕ್ಯದಲ್ಲಿ ಬಳಸಿ ಬರೆಯಿರಿ.
೧. ಸಿದ್ಧನಾಗು : ................................................................................
Answerಸಿದ್ಧನಾಗು: ನಾನು ನಾಳಿನ ಪರೀಕ್ಷೆಗೆ ಸಿದ್ಧನಾಗಿದ್ದೇನೆ.
೨. ಏಕಾಗ್ರತೆ : ................................................................................
Answerಏಕಾಗ್ರತೆ: ನಾನು ಪಾಠವನ್ನು ಏಕಾಗ್ರತೆಯಿಂದ ಕೇಳುತ್ತೇನೆ.
೩. ಕಣ್ಣುಚ್ಚಿ : ................................................................................
Answerಕಣ್ಣುಚ್ಚಿ: ನಾವು ಪ್ರಾರ್ಥನಾ ಸಮಯದಲ್ಲಿ ಕಣ್ಣುಚ್ಚಿ ನಿಲ್ಲುತ್ತೇವೆ.
೪. ಕುತೂಹಲ : ................................................................................
Answerಕುತೂಹಲ: ನನಗೆ ಹೊಸ ಕಥೆ ಕೇಳಲು ಕುತೂಹಲವಿದೆ.
೫. ಉಪಾಯ : ................................................................................
Answerಉಪಾಯ: ಇರುವೆಯನ್ನು ಓಡಿಸಲು ಅಣ್ಣ ಒಂದು ಉಪಾಯ ಮಾಡಿದ.
ಆ) ಬಿಟ್ಟ ಸ್ಥಳಗಳನ್ನು ನೀಡಿರುವ ನಾಲ್ಕು ಆಯ್ಕೆಗಳಲ್ಲಿ ಸರಿಯಾದುದನ್ನು ಆರಿಸಿ ಬರೆಯಿರಿ.
೧. ನರೇಂದ್ರನು ........................ ಮಾಡುತ್ತಿದ್ದಾಗ ಮೈಮೇಲೆ ಹಾವು ಹರಿದಾಡಿತು.
Answerನರೇಂದ್ರನು ಧ್ಯಾನ ಮಾಡುತ್ತಿದ್ದಾಗ ಮೈಮೇಲೆ ಹಾವು ಹರಿದಾಡಿತು.
ಅ) ಧ್ಯಾನ
ಕ) ಸ್ನಾನ
ಬ) ಊಟ
ಡ) ನಿದ್ದೆ
೨. ನರೇಂದ್ರನಿಗೆ ಭೂತದ ಬಗೆಗೆ ........................ ಇತ್ತು.
Answerನರೇಂದ್ರನಿಗೆ ಭೂತದ ಬಗೆಗೆ ಕುತೂಹಲ ಇತ್ತು.
ಅ) ಅಂಜಿಕೆ
ಕ) ಗೌರವ
ಬ) ಕುತೂಹಲ
ಡ) ಭಯ
೩. ನರೇಂದ್ರನು ನಾನು ........................ ಉರಿವ ಕೆಂಡವನ್ನು ನನ್ನ ಮೇಲಿಟ್ಟರೂ ಗೊತ್ತಾಗುವುದಿಲ್ಲ ಎಂದನು.
Answerನರೇಂದ್ರನು ನಾನು ಓದುವಾಗ ಉರಿವ ಕೆಂಡವನ್ನು ನನ್ನ ಮೇಲಿಟ್ಟರೂ ಗೊತ್ತಾಗುವುದಿಲ್ಲ ಎಂದನು.
ಅ) ಓದುವಾಗ
ಕ) ಮಾತಾಡುವಾಗ
ಬ) ಬರೆಯುವಾಗ
ಡ) ಕೇಳುವಾಗ
೪. ಶಕ್ತಿಯೇ ಜೀವನ; ದೌರ್ಬಲ್ಯವೇ ........................
Answerಶಕ್ತಿಯೇ ಜೀವನ; ದೌರ್ಬಲ್ಯವೇ ಮರಣ.
ಅ) ಜನನ
ಕ) ಮರಣ
ಬ) ನಿಶಕ್ತಿ
ಡ) ಮುಕ್ತಿ
ಇ) ಈ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ.
ಮಾದರಿ : ಭಯ x ಅಭಯ
೧. ಕಷ್ಟ x ........................
Answerಕಷ್ಟ x ಸುಖ
೨. ಜನನ x ........................
Answerಜನನ x ಮರಣ
೩. ಕೀರ್ತಿ x ........................
Answerಕೀರ್ತಿ x ಅಪಕೀರ್ತಿ
೪. ಆಸೆ x ........................
Answerಆಸೆ x ನಿರಾಸೆ
ಈ) ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ.
ಮಾದರಿ : ಕಣ್ಣುಚ್ಚಿ = ಕಣ್ಣು + ಮುಚ್ಚಿ
೧. ಹಾವೊಂದು = ........................
Answerಹಾವೊಂದು = ಹಾವು + ಒಂದು
೨. ನರೇಂದ್ರ = ........................
Answerನರೇಂದ್ರ = ನರ + ಇಂದ್ರ
೩. ನೂರಾರು = ........................
Answerನೂರಾರು = ನೂರು + ನೂರು
೪. ಹೀಗೆಂದರು = ........................
Answerಹೀಗೆಂದರು = ಹೀಗೆ + ಎಂದರು
ಉ) ಕೆಳಗೆ ನೀಡಿರುವ ಪದಗಳಲ್ಲಿ ವ್ಯಾಕರಣ ಶುದ್ಧ ಪದವನ್ನು ಸರಿ ಚಿಹ್ನೆಯಿಂದ ಗುರುತಿಸಿರಿ.
೧. ಹಾವು - ಆವು
Answerಹಾವು ✔
೨. ಓಡು - ಹೋಡು
Answerಓಡು ✔
೩. ಹುಡುಗ - ಉಡುಗ
Answerಹುಡುಗ ✔
೪. ಬಾರಥ - ಭಾರತ
Answerಭಾರತ ✔
೫. ಅಧಿತಿ - ಅತಿಥಿ
Answerಅತಿಥಿ ✔
ಪೂರಕ ಓದು :
(ಈ ಹಾಡನ್ನು ಎಲ್ಲರೂ ಕೂಡಿ ಹಾಡಿರಿ ಹಾಗೂ ಪ್ರಸ್ತುತ ಗದ್ಯದಲ್ಲಿನ ವಿಚಾರಗಳೊಂದಿಗೆ ಇರುವ ಸಾಮ್ಯತೆಯನ್ನು ಗಮನಿಸಿರಿ.)
ಸ್ವಾಮಿ ವಿವೇಕಾನಂದ
ಭುವನೇಶ್ವರಿ ಕರುಣೆಯ ಕಂದ
ವಿಶ್ವನಾಥದತ್ತರ ಪುತ್ರನು ಅಂದ
ಪರಮಹಂಸರ ಶಿಷ್ಯನು ನರೇಂದ್ರ
ಭಾರತ ಮಾತೆಗೆ ಕೀರುತಿ ತಂದ
ಚಿಕಾಗೋ ಸಭೆಯಲ್ಲಿ ಭಾಗವಹಿಸಿದ
ಸರ್ವಧರ್ಮಗಳ ಸಮನ್ವಯ ಸಾರಿದ
ಮಾನವೀಯ ಪ್ರೀತಿಯ ಎತ್ತಿ ಹಿಡಿದ
ಲೋಕಕ್ಕೆ ಬೆಳಕಾದ ಹೆಮ್ಮೆಯ ಕಂದ
ಏಳಿರಿ, ಎದ್ದೇಳಿರಿ ಎಂದು ಧ್ವನಿಸಿದ
ಯುವ ಜನಾಂಗಕ್ಕೆ ಸ್ಪೂರ್ತಿ ತುಂಬಿದ
ನವಭಾರತ ಕಟ್ಟಲು ಕಹಳೆ ಊದಿದ
ಭಾರತಾಂಬೆಯ ವೀರ ವಿವೇಕಾನಂದ
- ಎಂ.ಜೆ. ದೇಶಪಾಂಡೆ
ಊ. ಈ ಕೆಳಗಿನ ಪ್ರಶ್ನೆಗೆ ನಿಮ್ಮದೇ ಮಾತುಗಳಲ್ಲಿ ಬರೆಯಿರಿ.
ಬಾಲಕ ನರೇಂದ್ರನ ಜೀವನದಿಂದ ಕಲಿಯಬೇಕಾದ ವಿಚಾರಗಳಾವುವು?
Answerಬಾಲಕ ನರೇಂದ್ರನ ಜೀವನದಿಂದ ನಾವು ಧೈರ್ಯವಾಗಿರುವುದನ್ನು ಕಲಿಯಬೇಕು.
................................................................................
Answerಮೂಢನಂಬಿಕೆಗಳನ್ನು ನಂಬಬಾರದು ಎಂಬುದನ್ನು ಕಲಿಯಬೇಕು.
................................................................................
Answerಯಾವುದೇ ಕೆಲಸವನ್ನು ಏಕಾಗ್ರತೆಯಿಂದ ಮಾಡಬೇಕು ಎಂಬುದನ್ನು ಕಲಿಯಬೇಕು.
................................................................................
Answerಪ್ರಾಣಿಗಳ ತಂಟೆಗೆ ಹೋಗಬಾರದು ಎಂಬುದನ್ನು ಕಲಿಯಬೇಕು.
................................................................................
Answerಸತ್ಯವನ್ನು ಅರಿತುಕೊಳ್ಳುವ ಕುತೂಹಲ ನಮ್ಮಲ್ಲಿರಬೇಕು.
................................................................................
Answerಜನರ ಕಷ್ಟಗಳನ್ನು ಅರ್ಥಮಾಡಿಕೊಂಡು ಅವರಿಗೆ ಸಹಾಯ ಮಾಡಬೇಕು.