CRECT Education

Class 5 Kannada Lesson 15: Udaya Raaga (Morning Melody) | KTBS Second Language Poem

Description

Line‑by‑line recitation of the poem “Udaya Raaga” by Panje Mangesharaya, with vocabulary practice and comprehension questions for Class 5 Second Language Kannada (KTBS).

ಪದ್ಯ (poem) · ಪಂಜೆ ಮಂಗೇಶರಾಯ

ಪಠ್ಯFull text

ಮೂಡುವನು ರವಿ ಮೂಡುವನು ಕತ್ತಲೊಡನೆ ಜಗಳಾಡುವನು ಮೂಡಣ ರಂಗಸ್ಥಳದಲಿ ನೆತ್ತರು ಮಾಡುವನು ಕುಣಿದಾಡುವನು. ಬಂಗಾರದ ಚೆಲು ಬಿಸಿಲ ಕಿರೀಟದ ಶೃಂಗಾರದ ತಲೆ ಎತ್ತುವನು, ತೆಂಗಿನ ಕಂಗಿನ ತಾಳೆಯ ಬಾಳೆಯ ಅಂಗಕೆ ರಂಗನು ಮೆತ್ತುವನು. ಮಾಡಿನ ಹುಲ್ಲಿಲಿ ಚಿನ್ನದ ಗೆರೆಯನ್ನು ಎಳೆಯುವನು, ರವಿ ಎಳೆಯುವನು; ಕೂಡಲ ಕೋಣೆಯ ಕತ್ತಲೆ ಕೊಳೆಯನ್ನು ತೊಳೆಯುವನು, ರವಿ ಹೊಳೆಯುವನು. ಏರುವನು ರವಿ ಏರುವನು ಬಾನೊಳು ಸಣ್ಣಗೆ ತೋರುವನು ಏರಿದವನು ಚಿಕ್ಕವನಿರಬೇಕೆಲೆ ಎಂಬಾ ಮಾತನು ಸಾರುವನು.

ಅಭ್ಯಾಸexercises from the textbook

Model answers — a guide, not the only correct wording. Check with your teacher.

I. ಪದಗಳ ಅರ್ಥ :

  1. ಅಂಗ - ದೇಹದ ಭಾಗ.

  2. ಕಂಗು - ಅಡಿಕೆ

  3. ಕೂಡಲ ಕೋಣೆ - ಪಡಸಾಲೆ; ಮೊಗಸಾಲೆ.

  4. ಚಿನ್ನದ - ಬಂಗಾರದ

  5. ಬಾನು - ಆಕಾಶ

  6. ಮೂಡಣ - ಪೂರ್ವ ದಿಕ್ಕು

  7. ರಂಗಸ್ಥಳ - ನಾಟಕ ಪ್ರದರ್ಶನ ಸ್ಥಳ.

  8. ಶೃಂಗಾರ - ನವರಸಗಳಲ್ಲಿ ಒಂದು.

  9. ಎಳೆಯವ - ಚಿಕ್ಕವ; ಸಣ್ಣವ.

  10. ಕಿರೀಟ - ಮುಕುಟ

  11. ಕೊಳೆ - ಹೊಲಸು; ಕಸ.

  12. ನೆತ್ತರು - ರಕ್ತ

  13. ಮಾಡಿನ - ಛಾವಣಿಯ; ಉಪ್ಪರಿಗೆಯ.

  14. ಮೆತ್ತು - ಹಚ್ಚು; ಬಳಿ.

  15. ರಂಗು - ಬಣ್ಣ

  16. ಸಾರು - ಹೇಳು

II. ಪ್ರಶ್ನೆಗಳು :

ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

  1. ೧. ರವಿ ಮೂಡುವಾಗ ಯಾರೊಡನೆ ಜಗಳಾಡುವನು?

    Answer

    ರವಿ ಮೂಡುವಾಗ ಕತ್ತಲೊಡನೆ ಜಗಳಾಡುವನು.

  2. ೨. ರವಿ ಎಲ್ಲಿ ಕುಣಿದಾಡುವನು?

    Answer

    ರವಿ ಮೂಡಣ ರಂಗಸ್ಥಳದಲ್ಲಿ ಕುಣಿದಾಡುವನು.

  3. ೩. ರವಿ ಏನನ್ನು ತೊಟ್ಟು ಶೃಂಗಾರದ ತಲೆ ಎತ್ತುವನು?

    Answer

    ರವಿ ಬಿಸಿಲ ಕಿರೀಟವನ್ನು ತೊಟ್ಟು ಶೃಂಗಾರದ ತಲೆ ಎತ್ತುವನು.

  4. ೪. ರವಿ ಯಾವು ಯಾವುದಕ್ಕೆ ರಂಗನು ಮೆತ್ತುವನು?

    Answer

    ರವಿ ತೆಂಗು, ಅಡಿಕೆ, ತಾಳೆ, ಬಾಳೆ ಮರಗಳಿಗೆ ರಂಗನು ಮೆತ್ತುವನು.

  5. ೫. ಚಿನ್ನದ ಗೆರೆಯನ್ನು ಎಳೆಯುವ ರವಿ ಹೇಗಿರುತ್ತಾನೆ?

    Answer

    ಚಿನ್ನದ ಗೆರೆಯನ್ನು ಎಳೆಯುವ ರವಿ ಹೊಳೆಯುವನು.

  6. ೬. ರವಿ ಬಾನೊಳು ಸಣ್ಣಗೆ ಕಾಣುವುದು ಯಾವಾಗ?

    Answer

    ರವಿ ಮೇಲಕ್ಕೆ ಏರಿದಾಗ ಬಾನಲ್ಲಿ ಸಣ್ಣಗೆ ಕಾಣುವನು.

ಆ) ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.

  1. ೧. ಮೂಡಣ ದಿಕ್ಕಿನಲ್ಲಿ ರವಿ ಉದಯಿಸುವುದನ್ನು ಕವಿ ಹೇಗೆ ವರ್ಣಿಸಿದ್ದಾರೆ?

    Answer

    ಕವಿ ರವಿಯು ಮೂಡುವಾಗ ಕತ್ತಲೆಯೊಡನೆ ಜಗಳಾಡುತ್ತಾ, ಮೂಡಣ ದಿಕ್ಕಿನ ರಂಗಸ್ಥಳದಲ್ಲಿ ಕೆಂಪು ಬಣ್ಣ ಮಾಡುತ್ತಾ ಕುಣಿದಾಡುತ್ತಾನೆ ಎಂದು ವರ್ಣಿಸಿದ್ದಾರೆ.

  2. ೨. ಸೂರ್ಯನ ಕಿರಣಗಳ ರಂಗನ್ನು ಕವಿ ಹೇಗೆ ವರ್ಣಿಸಿದ್ದಾರೆ?

    Answer

    ಸೂರ್ಯನ ಕಿರಣಗಳು ಬಂಗಾರದಂತೆ ಹೊಳೆಯುತ್ತವೆ; ಮರಗಳಿಗೆ ರಂಗು ಮೆತ್ತುತ್ತವೆ ಮತ್ತು ಮಾಡಿನ ಹುಲ್ಲಿನ ಮೇಲೆ ಚಿನ್ನದ ಗೆರೆ ಎಳೆಯುತ್ತವೆ ಎಂದು ಕವಿ ವರ್ಣಿಸಿದ್ದಾರೆ.

  3. ೩. ಎಳೆಯ ರವಿ ಕೂಡಲ ಕೋಣೆಯಲ್ಲಿ ಮಾಡುವ ಕೆಲಸವೇನು?

    Answer

    ಎಳೆಯ ರವಿ ಕೂಡಲ ಕೋಣೆಯಲ್ಲಿರುವ ಕತ್ತಲೆಯ ಕೊಳೆಯನ್ನು ತೊಳೆದು ಹೊಳೆಯುತ್ತಾನೆ.

  4. ೪. ಮೇಲಕ್ಕೇರಿದ ರವಿ ನೀಡುವ ಸಂದೇಶವೇನು?

    Answer

    ಮೇಲಕ್ಕೇರಿದ ರವಿ, ಏರಿದವನು ಚಿಕ್ಕವನಿರಬೇಕು ಎಂಬ ಸಂದೇಶವನ್ನು ಸಾರುತ್ತಾನೆ.

ಇ) ಬಿಟ್ಟ ಸ್ಥಳಗಳನ್ನು ನೀಡಿರುವ ನಾಲ್ಕು ಆಯ್ಕೆಗಳಲ್ಲಿ ಸರಿಯಾದ ಪದವನ್ನು ಆರಿಸಿ ತುಂಬಿರಿ.

  1. ೧. ರವಿ ಕತ್ತಲೊಡನೆ .....................

    Answer

    ಜಗಳಾಡುವನು

  2. ಅ) ಕುಣಿದಾಡುವನು

  3. ಬ) ನಡೆದಾಡುವನು

  4. ಕ) ಮರೆದಾಡುವನು

  5. ಡ) ಜಗಳಾಡುವನು

  6. ೨. ರವಿ ..................... ರಂಗಸ್ಥಳದಲಿ ನೆತ್ತರು ಮಾಡುವನು.

    Answer

    ಮೂಡಣ

  7. ಅ) ಮೂಡಣ

  8. ಬ) ಪಡುವಣ

  9. ಕ) ತೆಂಕಣ

  10. ಡ) ಬಡಗಣ

  11. ೩. 'ತೆಂಗಿನ ಕಂಗಿನ' ಈ ಪದಗಳ ಅರ್ಥ .....................

    Answer

    ತೆಂಗು-ಅಡಿಕೆ

  12. ಅ) ತೆಂಗು-ಅಡಿಕೆ

  13. ಬ) ತೆಂಗು-ಬಾಳೆ

  14. ಕ) ತೆಂಗು-ಕಾಯಿ

  15. ಡ) ತೆಂಗು-ಮಾವು

  16. ೪. ರವಿ, ಏರಿದವನು ..................... ಇರಬೇಕು ಎಂಬ ಮಾತನು ಸಾರುವನು.

    Answer

    ಚಿಕ್ಕವ

  17. ಅ) ದೊಡ್ಡವ

  18. ಬ) ಗಟ್ಟಿಗ

  19. ಕ) ಮೆತ್ತಗೆ

  20. ಡ) ಚಿಕ್ಕವ

  21. ೫. ಬಾನೊಳು ಏರಿದ ರವಿ ..................... ತೋರುವನು.

    Answer

    ಸಣ್ಣಗೆ

  22. ಅ) ಸಣ್ಣಗೆ

  23. ಬ) ಬೆಳ್ಳಗೆ

  24. ಕ) ನುಣ್ಣಗೆ

  25. ಡ) ತಣ್ಣಗೆ

ಈ) 'ಅ' ಪಟ್ಟಿಗೆ 'ಬ' ಪಟ್ಟಿಯನ್ನು ಹೊಂದಿಸಿ ಬರೆಯಿರಿ.

  1. 'ಅ' ಪಟ್ಟಿ

  2. ಅ) ಕತ್ತಲೊಡನೆ

    Answer

    ಜಗಳಾಡುವನು

  3. ಆ) ಶೃಂಗಾರದ

    Answer

    ತಲೆ ಎತ್ತುವನು

  4. ಇ) ಅಂಗಕೆ

    Answer

    ರಂಗನು ಮೆತ್ತುವನು

  5. ಈ) ಚಿನ್ನದ ಗೆರೆಯನ್ನು

    Answer

    ಎಳೆಯುವನು

  6. ಉ) ಬಾನೊಳು

    Answer

    ಸಣ್ಣಗೆ ತೋರುವನು

  7. 'ಬ' ಪಟ್ಟಿ

  8. ೧) ಸಣ್ಣಗೆ ತೋರುವನು .................................

    Answer

    ಬಾನೊಳು ಸಣ್ಣಗೆ ತೋರುವನು

  9. ೨) ಎಳೆಯುವನು .................................

    Answer

    ಚಿನ್ನದ ಗೆರೆಯನ್ನು ಎಳೆಯುವನು

  10. ೩) ಜಗಳಾಡುವನು .................................

    Answer

    ಕತ್ತಲೊಡನೆ ಜಗಳಾಡುವನು

  11. ೪) ರಂಗನು ಮೆತ್ತುವನು .................................

    Answer

    ಅಂಗಕೆ ರಂಗನು ಮೆತ್ತುವನು

  12. ೫) ತಲೆ ಎತ್ತುವನು .................................

    Answer

    ಶೃಂಗಾರದ ತಲೆ ಎತ್ತುವನು

III. ಭಾಷಾಭ್ಯಾಸ :

ಅ) ಈ ಪದಗಳನ್ನು ನಿಮ್ಮ ಸ್ವಂತ ವಾಕ್ಯದಲ್ಲಿ ಬರೆಯಿರಿ.

  1. ೧. ಮೂಡಣ : ............................................................................................

    Model sentence

    ಮೂಡಣ: ನಮ್ಮ ಶಾಲೆಯ ಮೂಡಣ ದಿಕ್ಕಿನಲ್ಲಿ ಆಟದ ಮೈದಾನವಿದೆ.

  2. ೨. ಕುಣಿದಾಡು : ............................................................................................

    Model sentence

    ಕುಣಿದಾಡು: ನಾನು ಹಬ್ಬದ ದಿನ ಸ್ನೇಹಿತರೊಡನೆ ಕುಣಿದಾಡುತ್ತೇನೆ.

  3. ೩. ಮೆತ್ತು : ............................................................................................

    Model sentence

    ಮೆತ್ತು: ಅಮ್ಮ ಮನೆಗೆ ಸುಣ್ಣ ಮೆತ್ತಿದಳು.

  4. ೪. ಏರು : ............................................................................................

    Model sentence

    ಏರು: ನಾನು ಮರವನ್ನು ಏರಲು ಪ್ರಯತ್ನಿಸಿದೆ.

  5. ೫. ಸಾರು : ............................................................................................

    Model sentence

    ಸಾರು: ಶಿಕ್ಷಕರು ನಮಗೆ ಒಳ್ಳೆಯ ಮಾತನ್ನು ಸಾರಿದರು.

ಆ) ಈ ಪದಗಳಿಗೆ ಶಬ್ದಕೋಶ ನೋಡಿ ಸಮಾನಾರ್ಥಕ ಪದಗಳನ್ನು ಬರೆಯಿರಿ.

  1. ೧. ರವಿ ....................... .......................

  2. ೨. ಮೂಡಣ ....................... .......................

  3. ೩. ಕಿರೀಟ ....................... .......................

  4. ೪. ನೆತ್ತರು ....................... .......................

  5. ೫. ಬಾನು ....................... .......................

ಇ) 'ಉದಯರಾಗ' ಕವಿತೆಯಲ್ಲಿ ಬರುವ ಪ್ರಾಸ ಪದಗಳನ್ನು ಹುಡುಕಿ ಬರೆಯಿರಿ.

  1. ಮಾದರಿ : ರವಿ - ಕವಿ

  2. ....................... - .......................

    Answer

    ಮೂಡುವನು - ಜಗಳಾಡುವನು

  3. ....................... - .......................

    Answer

    ಎತ್ತುವನು - ಮೆತ್ತುವನು

  4. ....................... - .......................

    Answer

    ಎಳೆಯುವನು - ತೊಳೆಯುವನು

  5. ....................... - .......................

    Answer

    ಏರುವನು - ತೋರುವನು

ಈ) ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ.

  1. ಮಾದರಿ : ಕತ್ತಲೊಡನೆ = ಕತ್ತಲು + ಒಡನೆ

  2. ೧. ಜಗಳವಾಡು = .................... + ....................

    Answer

    ಜಗಳವಾಡು = ಜಗಳ + ಆಡು

  3. ೨. ಕುಣಿದಾಡು = .................... + ....................

    Answer

    ಕುಣಿದಾಡು = ಕುಣಿ + ಆಡು

  4. ೩. ಚಿಕ್ಕವನಿರಬೇಕು = .................... + ....................

    Answer

    ಚಿಕ್ಕವನಿರಬೇಕು = ಚಿಕ್ಕವನು + ಇರಬೇಕು

ಉ) ಮಾದರಿಯಂತೆ ಸಂಬಂಧಪಡದ ಪದವನ್ನು ಹೊರತೆಗೆದು ಬರೆಯಿರಿ.

  1. ಮಾದರಿ : ಸಾರು, ಹೇಳು, ಕೇಳು, ನುಡಿ. (ಕೇಳು)

  2. ೧. ಸೂರ್ಯ, ರವಿ, ಚಂದ್ರ, ದಿನಕರ. (...................)

    Answer

    ಸೂರ್ಯ, ರವಿ, ಚಂದ್ರ, ದಿನಕರ. (ಚಂದ್ರ)

  3. ೨. ಕಿರೀಟ, ಹಾರ, ರುಮಾಲು, ಮುಕುಟ. (...................)

    Answer

    ಕಿರೀಟ, ಹಾರ, ರುಮಾಲು, ಮುಕುಟ. (ರುಮಾಲು)

  4. ೩. ಬೆಳ್ಳಿ, ಬಂಗಾರ, ಚಿನ್ನ, ಸ್ವರ್ಣ. (...................)

    Answer

    ಬೆಳ್ಳಿ, ಬಂಗಾರ, ಚಿನ್ನ, ಸ್ವರ್ಣ. (ಬೆಳ್ಳಿ)

  5. ೪. ಆಕಾಶ, ಮೋಡ, ಬಾನು, ನಭ. (...................)

    Answer

    ಆಕಾಶ, ಮೋಡ, ಬಾನು, ನಭ. (ಮೋಡ)

ಊ) ಕೆಳಗಿನ ಪದಗಳಲ್ಲಿನ ಅರ್ಥ ವ್ಯತ್ಯಾಸವನ್ನು ತಿಳಿಯಿರಿ.

  1. ೧. ಮೂಡಣ - ಮೂಡುವ ....................... .......................

    Answer

    ಮೂಡಣ - ಪೂರ್ವ; ಮೂಡುವ - ಉದಯಿಸುವ

  2. ೨. ಎಳೆಯುವ - ಎಳೆಯವ ....................... .......................

    Answer

    ಎಳೆಯುವ - ಎಳೆಯುವ ಕ್ರಿಯೆ; ಎಳೆಯವ - ಚಿಕ್ಕವನು

  3. ೩. ಬಂಗಾರ - ಶೃಂಗಾರ ....................... .......................

    Answer

    ಬಂಗಾರ - ಚಿನ್ನ; ಶೃಂಗಾರ - ಅಲಂಕಾರ

  4. ೪. ತೊಳೆ - ಹೊಳೆ ....................... .......................

    Answer

    ತೊಳೆ - ಸ್ವಚ್ಛಗೊಳಿಸು; ಹೊಳೆ - ಪ್ರಕಾಶಿಸು

ಪೂರಕ ಓದು

  1. ಮುಂಗೋಳಿ ಕೂಗ್ಯಾವು ಮೂಡು ಕೆಂಪೇರ್ಯಾವು

  2. ಸ್ವಾಮಿ ನನ್ನಯ್ಯ ರಥವೇರಿ | ಬರುವಾಗ

  3. ನಾವೆದ್ದು ಕೈಯ ಮುಗಿದೇವು ||

  4. ಸೂರ್ಯೋದಯದ ವರ್ಣ ವೈಭವಕ್ಕೆ ಮಾರುಹೋಗದ ಕವಿಗಳೇ ಇಲ್ಲ. ಕನ್ನಡದ ಎಲ್ಲಾ ಕವಿಗಳು ಒಂದಿಲ್ಲೊಂದು ಸಮಯದಲ್ಲಿ ಸೂರ್ಯೋದಯವನ್ನು ಅನುಭವಿಸಿದವರೇ, ಬರೆದವರೇ! ಅಂತೆಯೇ ಸೂರ್ಯಾಸ್ತವನ್ನು ಬಿಟ್ಟಿಲ್ಲ. ಸೂರ್ಯಾಸ್ತದ ಸಮಯದಲ್ಲಿ ದಿಗಂತ ಕೆಂಪಗಿರುತ್ತದೆ. ಕವಿ ಕಲ್ಪನೆಯಲ್ಲಿ ಅದಕ್ಕೆ ಬೇರೆಯದೇ ಅರ್ಥಗಳಿರುತ್ತವೆ. 'ಎಲವೋ ಮಾನವ, ನಾನು ಕೊಟ್ಟ ಅಮೂಲ್ಯ ದಿನವನ್ನು ಸದುಪಯೋಗ ಮಾಡಿಕೊಳ್ಳದೆ ವ್ಯರ್ಥ ಕಾಲಹರಣ ಮಾಡಿದೆಯಲ್ಲ' ಎಂದು ರವಿ ಕೆಂಪಗೆ ಮುಖಮಾಡಿಕೊಂಡು ಕೋಪದಿಂದ ಪಡುವಣ ದಿಕ್ಕಿನಲ್ಲಿ ಅಸ್ತಂಗತನಾಗುತ್ತಾನೆ. ಆ ಕಾರಣದಿಂದ ಪಶ್ಚಿಮ ದಿಗಂತ ಕೆಂಪಾಗಿದೆ ಎಂದು ಕವಿ ವರ್ಣಿಸುವುದುಂಟು.

Interactive Lab