ಪದ್ಯ (poem) · ಅಮೃತ ಸೋಮೇಶ್ವರ
ಪಠ್ಯFull text
"ಪರಿಶುದ್ಧ ಹೃದಯವು ಬದುಕನ್ನು ರೂಪಿಸುತ್ತದೆ." — A pure heart shapes life.
ಪದಗಳ ಅರ್ಥword meanings
| Kannada | Pronunciation | Meaning |
|---|---|---|
| ತಡವೆ | — | ಬಾರಿ, ಸಲ |
| ಉಪಕರಿಸು | — | ಉಪಕಾರ ಮಾಡು, ನೆರವು ನೀಡು |
| ಜರೆ | — | ನಿಂದಿಸು, ಬಯ್ಯು |
| ಸ್ತುತಿ | — | ಹೊಗಳಿಕೆ |
| ಒಲೈಸು | — | ಮೆಚ್ಚಿಸು |
| ಚಾಳಿ | — | ನಡವಳಿಕೆ, ವರ್ತನೆ |
| ಹುಲ್ಲೆ | — | ಜಿಂಕೆ, ಚಿಗರೆ |
| ಮೊರೆವ | — | ಗರ್ಜಿಸುವ, ಕುಪ್ಪಳಿಸು-ಹಾರು, ಜಿಗಿಯು |
| ಗಜ | — | ಆನೆ |
| ಗುಟುರು | — | ಹೂಂಕರಿಸು, ಜೋರಾಗಿ ಧ್ವನಿ ಮಾಡು |
| ನಂಜು | — | ವಿಷ |
| ನಿರಾಳ | — | ಶಾಂತಿ, ನೆಮ್ಮದಿ |
| ಹದನ | — | ರೀತಿ |
| ಎನಿತು | — | ಎಷ್ಟು |
| ಮಿಡಿತ | — | ಬಡಿತ, ಸ್ಪಂದನ |
| ಬೆಸುಗೆ | — | ಹೊಂದಿಕೆ, ಜೋಡಣೆ |
| ಸಾಧಿತ | — | ಸಾಧಿಸಿದ, ಸಿದ್ಧಿಯನ್ನು ಪಡೆದ |
| ದಾತ | — | ಒಡೆಯ, ಸ್ವಾಮಿ |
| > ಬಹುರೂಪಿ : | — | ಹಲವು ರೂಪಗಳಿಂದ ಕೂಡಿ ಕಾಣಿಸಿಕೊಳ್ಳುವಾತ |
| > ವಚನ : | — | ಹನ್ನೆರಡನೆಯ ಶತಮಾನದ ಶಿವಶರಣರು ರಚಿಸಿದ ಸಾಹಿತ್ಯ ಪ್ರಕಾರ; ಆಧುನಿಕ ಸಂದರ್ಭದಲ್ಲೂ ಅಂತಹ ವಚನಗಳು ರಚನೆಯಾಗುತ್ತಿವೆ |
ಅಭ್ಯಾಸexercises from the textbook
Model answers — a guide, not the only correct wording. Check with your teacher.
ಅ. ಪದಗಳ ಅರ್ಥ ಬರೆಯಿರಿ.
೧. ಉಪಕರಿಸು
೨. ಮೊರೆವ
೩. ನಿರಾಳ
೪. ಸಾಧಿತ
೫. ಬಹುರೂಪಿ
ಆ. ಕೊಟ್ಟಿರುವ ವಚನವನ್ನು ಪೂರ್ಣಗೊಳಿಸಿರಿ:
೧. ಎನಿತು ಭಾಷೆಗಳ __________________________________________________________________
Answerಕಲಿತಡೇನು ಹೃದಯದ ಭಾಷೆ ಕಲಿಯದನ್ನಕ?
__________________________________________________________________ಮಿಡಿತವರಿಯದನ್ನಕ?
Answerಎನಿತು ನುಡಿ ಸಡಗರ ತೋರ್ದಡೇನು ಎದೆಯ
__________________________________________________________________
Answerಎನಿತು ಶೋಧನೆಗೈದಡೇನು ಹೃದಯ ಶೋಧನೆಗೈಯದನ್ನಕ?
__________________________________________________________________
Answerಎನಿತು ಸಾಧನೆಗೈದಡೇನು ಹೃದಯದ ಬೆಸುಗೆ ಸಾಧಿತವಾಗದನ್ನಕ?
__________________________________________________________________ಹೃದಯೇಶ ಸೋಮೇಶಾ.
Answerಇವೆಲ್ಲಕ್ಕೂ ಜೀವಭಾವದಾತ ನೀನೆ ಕಾಣ
ಇ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.
೧. ಯಾವ ಚಾಳಿಯನ್ನು ದೂರವಿಡಿ ಎಂದು ಅಮೃತ ಸೋಮೇಶ್ವರರು ಹೇಳುತ್ತಾರೆ?
Answerಅಮೃತ ಸೋಮೇಶ್ವರರು ಒಳ್ಳೆಕೆಯ ಚಾಳಿಯನ್ನು ದೂರವಿಡಿ ಎಂದು ಹೇಳುತ್ತಾರೆ.
೨. ಹೃದಯದ ಬೆಸುಗೆ ಸಾಧಿತವಾಗುವುದು ಯಾವಾಗ?
೩. ಅಂಕಿತನಾಮವು ವಚನದ ಯಾವ ಭಾಗದಲ್ಲಿ ಬರುತ್ತದೆ?
Answerಅಂಕಿತನಾಮವು ವಚನದ ಕೊನೆಯ ಸಾಲಿನಲ್ಲಿ ಬರುತ್ತದೆ.
೪. ನಾವು ಮೊದಲು ಯಾವ ಭಾಷೆಯನ್ನು ಕಲಿಯಬೇಕು?
Answerನಾವು ಮೊದಲು ಹೃದಯದ ಭಾಷೆಯನ್ನು ಕಲಿಯಬೇಕು.
೫. ಜನ ಕೆರಳಿ ಜರೆಯುವುದು ಯಾವಾಗ?
Answerಹತ್ತು ಬಾರಿ ಮೆಚ್ಚಿ ಒಂದು ಬಾರಿ ಟೀಕಿಸಿದಾಗ ಜನ ಕೆರಳಿ ಜರೆಯುತ್ತಾರೆ.
ಈ. ಈ ವಚನವನ್ನು ಪೂರ್ಣಗೊಳಿಸಿ ಕಂಠಪಾಠ ಮಾಡಿರಿ.
ಒಂಬತ್ತು ತಡವೆ .......................................................................................................
Answerಉಪಕರಿಸಿ ಒಮ್ಮೆ ತಪ್ಪಲು, ಮೊದಲಿನೆಲ್ಲವ ಮರೆವರಯ್ಯ
.................................................................................................................................
Answerಹತ್ತು ಬಾರಿ ಮೆಚ್ಚಿ ಮತ್ತೊಂದು ಬಾರಿ ಟೀಕಿಸಲು, ಕೆರಳಿ ಜರೆವರಯ್ಯ
.................................................................................................................................
Answerಸ್ತುತಿಗೆ ತಲೆಯೋಲೆಯಿಸಿ ನಲಿದೊಲಿವುದಯ್ಯ ಲೋಕ
.....................................................................................ಹೃದಯೇಶ ಸೋಮೇಶಾ॥
Answerಒಳ್ಳೆಕೆಯ ಚಾಳಿಯ ದೂರೀಕರಿಸಯ್ಯ ಸ್ತೋತ್ರಾತೀತ
ಉ. ಕೆಳಗಿನ ಚಿಹ್ನೆಗಳನ್ನು ಗಮನಿಸಿ ಅದರ ಹೆಸರು ಬರೆಯಿರಿ.
೧. ;
೨. ‘......’
೩. (.......)
೪. “.......”
೫. !
ಭಾಷಾ ಆಟ.
ಅ. ಕೆಳಗಿನ ಅಕ್ಷರಬೃಂದದಲ್ಲಿ ಹತ್ತು ಜನ ವಚನಕಾರರು ಅಡಗಿಕೊಂಡಿದ್ದಾರೆ. ನಿಮಗೆ ಸಾಧ್ಯವಾದಷ್ಟು ಹೆಸರನ್ನು ಹುಡುಕಿ ಬರೆಯಿರಿ.
(A letter grid puzzle. The grid contains syllables arranged in rows and columns to find the names of 10 Vachanakaras hidden within. The grid contents are:
Row 1: ಬ ಸಿ ದ್ದ ಯ್ಯ ಮಾ ಕ ಕ್ಯ ಯ್ಯ
Row 2: ಅ ರ ಹಾ ಪು ದ ಚ ನ್ನ ಯ್ಯ
Row 3: ಕ್ಕ ಮ ಣ್ಣಿ ಬಿ ಣೆ ಕ ಸಿ ಬ
Row 4: ಮ ಹಾ ಮ ಡಿ ವಾ ಳ ದ್ಧ ರ
Row 5: ದಾ ದೇ ವಿ ಪ್ರ ಭು ಮಾ ರಾ ಮ
Row 6: ಸಿ ಅ ರ್ತ ಮ ಕ ಚ ಯ್ಯ ಕ
Row 7: ಮ ಯ್ಯ ಚ ನ್ನ ಬ ಸ ವ ಣ್ಣ)