ಪದ್ಯ (poem) · ಮುದೇನೂರು ಸಂಗಣ್ಣ (Mudenuru Sanganna)
ಪಠ್ಯFull text
**ಚಿನ್ನುಡಿ** ‘ಬಂದ ಸುಖವ ಬಿಡಬೇಡ, ಬಾರದುದ ಬೇಕೆಂದು ಬಯಸಬೇಡ’ –ರತ್ನಾಕರವರ್ಣಿ (‘ಭರತೇಶ ವೈಭವ’ ಕೃತಿಯ ಕವಿಯ ಕಾಲ ಸುಮಾರು ೧೫೦೦) ("Do not give up the joy that has come, do not desire what has not come." — A reminder to appreciate the present and let go of unattainable desires.)
ಪದಗಳ ಅರ್ಥword meanings
| Kannada | Pronunciation | Meaning |
|---|---|---|
| ಹಂಗು | — | ಋಣ, ಆಶ್ರಯ; ಪಂಜರ - ಪಕ್ಷಿಗಳ ಬೋನು; ಬಾನಾಡಿ - ಪಕ್ಷಿ; ವಿಹರಿಸು - ಸಂಚರಿಸು; ಹರ್ಷ - ಹಿಗ್ಗು, ಸಂತೋಷ; ಸೊಕ್ಕಿ - ಗರ್ವ, ಜಂಭ; ಕೊಳೆಗೊಂಡು - ಮಾಲಿನ್ಯಗೊಂಡು, ತೃಪ್ತಿಗೊಂಡು; ತಣಿಸು - ತಂಪಾಗಿಸು, ತೃಪ್ತಿಗೊಳಿಸು; ವಸನ - ವಸ್ತ್ರ, ಬಟ್ಟೆ; ಹದ್ದು - ಎಲ್ಲೆ, ಗಡಿ; ಕನಲು - ಕೋಪಗೊಳ್ಳು, ಸಿಟ್ಟಾಗು; ಕೆಂಗಿಡಿ - ಉರಿಬೆಂಕಿ, ಕೆಂಪಾದ ಬೆಂಕಿ; ಸದರೇರು - ಅಂಗಳ ಸೇರು, ಬಂಧಮುಕ್ತವಾಗು; ಸೆರೆ - ಬಂಧನ; ಅಡಗು - ಕಾಣದಂತಾಗು; ಕಾರಿರುಳು - ದಟ್ಟವಾದ ಕತ್ತಲೆ; ಪಣ - ಒತ್ತೆಇಡು; ತೊಲಗು - ಬಿಟ್ಟುಹೋಗು, ಹೊರಟುಹೋಗು; ಗುಡಿ - ಬಾವುಟ, ಕೇತನ; ಒಕ್ಕೊರಲು - ಒಗ್ಗಟ್ಟು, ಒಂದೇ ಧ್ವನಿಯಾಗು |
ಅಭ್ಯಾಸexercises from the textbook
Model answers — a guide, not the only correct wording. Check with your teacher.
ಅ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
೧. ಪಂಜರದ ಹಕ್ಕಿ ಯಾವುದರ ಸಂಕೇತವಾಗಿದೆ?
Answerಪಂಜರದ ಹಕ್ಕಿ ಬಂಧನದಲ್ಲಿ ನರಳುವವರ ಸಂಕೇತವಾಗಿದೆ.
೨. ಹಂಗಿನ ಅರಮನೆಯಲ್ಲಿ ಹಕ್ಕಿ ಹೇಗೆ ನರಳುತ್ತಿದೆ?
Answerಹಂಗಿನ ಅರಮನೆಯ ಪಂಜರದಲ್ಲಿ ಹಕ್ಕಿ ರೆಕ್ಕೆಗಳ ಬಿಗಿ ಹಿಡಿದು ನರಳುತ್ತಿದೆ.
೩. ಮೃಗರಾಜ ಏನೆಂದು ಗೊಣಗುತ್ತಿದೆ?
Answerಮೃಗರಾಜ ಇನ್ನು ಈ ಬಂಧನ ಸಾಕು ಎಂದು ಗೊಣಗುತ್ತಿದೆ.
೪. ಯಾವುದು ರವಿಕಿರಣಗಳನ್ನು ಸೆರೆಯೊಳಗೆ ಅಡಗಿಸಿಟ್ಟುಕೊಂಡಿದೆ?
Answerಕಾರಿರುಳು ರವಿಕಿರಣಗಳನ್ನು ಸೆರೆಯೊಳಗೆ ಅಡಗಿಸಿಟ್ಟುಕೊಂಡಿದೆ.
೫. ನಮ್ಮ ಗುಡಿಯು (ಬಾವುಟ) ಎಷ್ಟು ಬಣ್ಣಗಳನ್ನು ಹೊಂದಿದೆ?
Answerನಮ್ಮ ಗುಡಿಯು ಮೂರು ಬಣ್ಣಗಳನ್ನು ಹೊಂದಿದೆ.
ಆ. ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.
೧. ಪಂಜರದಲ್ಲಿ ನರಳುತ್ತಿರುವ ಹಕ್ಕಿ ಹರ್ಷದಲಿ ವಿಹರಿಸಲು ಏನು ಮಾಡಬೇಕು?
Answerಪಂಜರದ ಕದವನ್ನು ಮುರಿದು ಹೊರಗೆ ಬರಬೇಕು. ಆಗ ಹಕ್ಕಿ ಬಾನಾಡಿಯಾಗಿ ಹರ್ಷದಿಂದ ವಿಹರಿಸಬಹುದು.
೨. ತಿಳಿನೀರ ಮಳೆ ಏಕೆ ಸುರಿಯಬೇಕು?
Answerತಿಳಿನೀರ ಮಳೆಯು ಮೈ ಮತ್ತು ಮನದ ಸಕಲ ಕೊಳಕುಗಳನ್ನು ತೊಳೆಯಲು ಸುರಿಯಬೇಕು. ಒಳ-ಹೊರಗು ಶುದ್ಧವಾಗಲು ಅದು ಅಗತ್ಯ.
೩. ಕಡಲುಗಳ ರಾಣಿಗೆ ಇನ್ನು ಉಳಿಗಾಲವಿಲ್ಲವೇಕೆ?
Answerನಾವು ಪ್ರಾಣ ಪಣಕಿಟ್ಟ ಸಿಡಿಲ ಮರಿಗಳು, ಪ್ರಳಯ ರುದ್ರರು ಎಂಬುದು ಭಾರತಿಯ ಆಣೆ. ಆದ್ದರಿಂದ ಕಡಲುಗಳ ರಾಣಿಗೆ ಇನ್ನು ಉಳಿಗಾಲವಿಲ್ಲ.
೪. ಒಕ್ಕೊರಲ ಹಾಡನ್ನು ನಾವು ಹೇಗೆ ಹಾಡಬೇಕೆಂದು ಕವಿ ಬಯಸುತ್ತಾನೆ?
Answerಕವಿಯು ಜಾತಿ, ಮತ, ಪಂಥಗಳನ್ನು ಹುಟ್ಟುರುಹಿ ಮನುಜಮತವನ್ನು ಮೆರೆಸಬೇಕೆಂದು ಬಯಸುತ್ತಾನೆ. ಸರ್ವರಿಗೂ ಸಮನಾಗಿ, ಮನದುಂಬಿ ದನಿಯೆತ್ತಿ ಬಿಡುಗಡೆಯ ಒಕ್ಕೊರಲ ಹಾಡನ್ನು ಹಾಡಬೇಕೆಂದು ಬಯಸುತ್ತಾನೆ.
ಇ. ಖಾಲಿಬಿಟ್ಟ ಜಾಗವನ್ನು ಸೂಕ್ತ ಪದಗಳಿಂದ ತುಂಬಿರಿ.
೧. ಚಡಪಡಿಸುತಿದೆ _________________ ಹಾದಿ ಹುಡುಕಿ.
Answerಚಡಪಡಿಸುತಿದೆ ಮುನ್ನಡೆವ ಹಾದಿ ಹುಡುಕಿ.
೨. ಸೆರೆಯಿಂದ ನಾ _________________ ಸದರೇರಬೇಕು.
Answerಸೆರೆಯಿಂದ ನಾ ಜಿಗಿದು ಸದರೇರಬೇಕು.
೩. ಇನ್ನೆಲ್ಲ ನೀನೇಳು _________________ ರಾಣಿ.
Answerಇನ್ನೆಲ್ಲ ನೀನೇಳು ಕಡಲುಗಳ ರಾಣಿ.
೪. ಹಾಡುವೆವು ಬಿಡುಗಡೆಯ _________________ ಹಾಡು.
Answerಹಾಡುವೆವು ಬಿಡುಗಡೆಯ ಒಕ್ಕೊರಲ ಹಾಡು.